AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರ ಮನ ಗೆದ್ದ ಹನುಮಂತನ ಪ್ಲಸ್ ಏನು, ಮೈನಸ್ ಏನು? ಟ್ರೋಫಿ ಮೇಲೆ ಕಣ್ಣು

ಹನುಮಂತ ಅವರ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಟ್ರೋಫಿ ಮೇಲೆ ಅವರು ಕಣ್ಣಿಟ್ಟಿದ್ದಾರೆ. ‘ಈ ಸಲ ಕಪ್ ನಮ್ದೇ’ ಅಂತ ಅವರು ಬಹಳ ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಹನುಮಂತ ಅವರ ವ್ಯಕ್ತಿತ್ವದಲ್ಲಿ ಕೆಲವು ಪ್ಲಸ್ ಇದೆ. ಇನ್ನೂ ಕೆಲವು ಮೈಸನ್ ಕೂಡ ಇದೆ. ವೀಕ್ಷಕರಿಂದ ಅವರಿಗೆ ಸಿಕ್ಕಾಪಟ್ಟೆ ಪ್ರೀತಿ ಸಿಕ್ಕಿದೆ.

ಎಲ್ಲರ ಮನ ಗೆದ್ದ ಹನುಮಂತನ ಪ್ಲಸ್ ಏನು, ಮೈನಸ್ ಏನು? ಟ್ರೋಫಿ ಮೇಲೆ ಕಣ್ಣು
Hanumantha
ಮದನ್​ ಕುಮಾರ್​
|

Updated on: Jan 22, 2025 | 10:36 PM

Share

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಫಿನಾಲೆಗೆ ದಿನಗಣನೆ ಆರಂಭ ಆಗಿದೆ. ಝಗಮಗಿಸುವ ವೇದಿಕೆಯಲ್ಲಿ ಅದ್ದೂರಿ ಫಿನಾಲೆ ನಡೆಯಲಿದೆ. ಕಿಚ್ಚ ಸುದೀಪ್ ಅವರು ಎಂದಿನ ಉತ್ಸಾಹದಲ್ಲಿ ಫಿನಾಲೆ ಸಂಚಿಕೆ ನಡೆಸಿಕೊಡಲಿದ್ದಾರೆ. ಭವ್ಯಾ ಗೌಡ, ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್, ಉಗ್ರಂ ಮಂಜು ಅವರ ಪೈಕಿ ಯಾರಿಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂಬುದನ್ನು ತಿಳಿಯಲು ಎಲ್ಲರೂ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಹನುಮಂತ ಅವರು ಟ್ರೋಫಿ ಹಿಡಿಯುವ ಸಾಧ್ಯತೆ ಹೆಚ್ಚಿದೆ.

ಹನುಮಂತ ಅವರು ಮೊದಲ ಪ್ಲಸ್ ಪಾಯಿಂಟ್ ಏನೆಂದರೆ, ಅದು ಮುಗ್ಧತೆ. ಹಳ್ಳಿಯಿಂದ ಬಂದಿರುವ ಅವರು ಕಪಟಿ ಅಲ್ಲವೇ ಅಲ್ಲ. ಹೆಚ್ಚೇನೂ ಲೆಕ್ಕಾಚಾರ ಹಾಕದೇ ಅವರು ಆಟ ಆಡುತ್ತಾರೆ. ಯಾರ ಬಗ್ಗೆಯೂ ಕೆಟ್ಟ ಮಾತುಗಳನ್ನು ಆಡುವುದಿಲ್ಲ. ವೈಯಕ್ತಿಕ ದ್ವೇಷ ಎಂಬುದು ಅವರಲ್ಲಿ ಇಲ್ಲ. ಪಕ್ಷಪಾತ ಕೂಡ ಮಾಡುವುದಿಲ್ಲ. ಈ ಗುಣವನ್ನು ಮನೆ ಮಂದಿ ಮತ್ತು ವೀಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.

ಮನರಂಜನೆ ನೀಡುವುದು ಹನುಮಂತ ಅವರ ಇನ್ನೊಂದು ಪ್ಲಸ್ ಪಾಯಿಂಟ್. ಬಿಗ್ ಬಾಸ್ ಮನೆಗೆ ಹನುಮಂತ ಬಂದ ಬಳಿಕ ಇಡೀ ಮನೆಯ ವಾತಾವರಣ ಬದಲಾಯಿತು. ಯಾವಾಗಲೂ ಹಾಸ್ಯದ ಮಾತುಗಳನ್ನು ಆಡುತ್ತಾ ಅವರು ಮನರಂಜನೆ ನೀಡಿದರು. ಆಗಾಗ ಹಾಡಿನ ಮೂಲಕ ಕೂಡ ರಂಜಿಸಿದರು. ಆ ಕಾರಣಗಳಿಂದಲೂ ಅವರಿಗೆ ವೀಕ್ಷಕರಿಂದ ಪ್ರೀತಿ ಸಿಕ್ಕಿದೆ. ಟಾಸ್ಕ್​ಗಳಲ್ಲಿ ಹನುಮಂತ ಹಿಂದೆ ಬಿದ್ದಿಲ್ಲ. ಘಟಾನುಘಟಿಗಳಿಗೂ ಪೈಪೋಟಿ ನೀಡಿ ಅವರು ಫಿನಾಲೆಗೆ ಬಂದರು. ಅವರು ಈಗ ಸ್ಪರ್ಧಾ ಗುಣವನ್ನು ಮೆಚ್ಚಿಕೊಳ್ಳದವರೇ ಇಲ್ಲ.

ಇದನ್ನೂ ಓದಿ: ಹನುಮಂತ, ಭವ್ಯಾ ಗೌಡ, ತ್ರಿವಿಕ್ರಮ್​ಗೆ ಬಿಗ್ ಬಾಸ್ ಟ್ರೋಫಿ ಯಾಕೆ ಮುಖ್ಯ?

ಇಷ್ಟೆಲ್ಲ ಪ್ಲಸ್​ಗಳ ನಡುವೆ ಹನುಮಂತ ಅವರ ಪಾಲಿಗೆ ಕೆಲವು ಮೈನಸ್ ಕೂಡ ಇವೆ. ಅವರು ವೈಲ್ಡ್ ಕಾರ್ಡ್ ಸ್ಪರ್ಧಿ. ಬೇರೆಯವರಿಗೆ ಹೋಲಿಸಿದರೆ ಬಿಗ್ ಬಾಸ್ ಮನೆಯಲ್ಲಿ ಅವರು ಕಳೆದ ದಿನಗಳ ಸಂಖ್ಯೆ ಕಡಿಮೆ. ವೈಲ್ಡ್​ ಕಾರ್ಡ್​ ಸ್ಪರ್ಧಿಗೆ ಟ್ರೋಫಿ ನೀಡುವ ಸಾಧ್ಯತೆ ಕಮ್ಮಿ. ಇದು ಹನುಮಂತ ಅವರಿಗೆ ಮೈನಸ್ ಆಗಬಹುದು. ಇನ್ನು, ಹನುಮಂತ ಅವರ ವ್ಯಕ್ತಿತ್ವದ ಬಗ್ಗೆ ಕೆಲವರಿಗೆ ಅನುಮಾನ ಇದೆ. ಅವರು ಮುಗ್ಧನಂತೆ ನಟಿಸುತ್ತಾರೆ ಎಂಬ ಕಮೆಂಟ್​ಗಳು ಕೆಲವರಿಂದ ಬಂದಿವೆ. ಈ ಕಾರಣದಿಂದ ಕಡಿಮೆ ವೋಟ್ ಬಂದರೆ ಟ್ರೋಫಿ ಕೈ ತಪ್ಪಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ