AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಸ್ಕ್ ಗೆದ್ದರೆ: ತುಕಾಲಿ ಸಂತು, ಹಳ್ಳಿಕಾರ್ ಸಂತು ಕೊಟ್ಟರು ಆಫರ್, ನಮ್ರತಾ ಆಫರ್ ಇನ್ನೂ ಜೋರು

Bigg Boss 10: ಸ್ಪರ್ಧೆ ಗೆದ್ದವರಿಗೆ ಭರ್ಜರಿ ಆಫರ್ ಒಂದನ್ನು ತುಕಾಲಿ ಸಂತು ನೀಡಿದ್ದಾರೆ. ಅವರಿಗೇನು ಕಡಿಮೆ ಎಂಬಂತೆ ಹಳ್ಳಿಕಾರ್ ಸಂತೋಶ್ ಸಹ ಆಫರ್ ಘೋಷಿಸಿದ್ದಾರೆ. ಇವರ ನಡುವೆ ನಮ್ರತಾ ಸಹ ಇನ್ನೂ ದೊಡ್ಡ ಆಫರ್ ಘೋಷಣೆ ಮಾಡಿದ್ದಾರೆ.

ಟಾಸ್ಕ್ ಗೆದ್ದರೆ: ತುಕಾಲಿ ಸಂತು, ಹಳ್ಳಿಕಾರ್ ಸಂತು ಕೊಟ್ಟರು ಆಫರ್, ನಮ್ರತಾ ಆಫರ್ ಇನ್ನೂ ಜೋರು
ನಮ್ರತಾ-ತುಕಾಲಿ ಸಂತು
ಮಂಜುನಾಥ ಸಿ.
|

Updated on: Oct 19, 2023 | 11:08 PM

Share

ಬಿಗ್​ಬಾಸ್ 10ರ (Bigg Boss 10) ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ, ವೈಮಸ್ಯ, ಕಿತ್ತಾಟ ಎಲ್ಲವೂ ಜೋರಾಗಿಯೇ ನಡೆದಿದೆ. ಮಾಣಿಜ್ಯ, ರಣಶಕ್ತಿ ತಂಡಗಳ ನಡುವೆ ಟಾಸ್ಕ್​ಗಾಗಿ ಜೋರು ಸ್ಪರ್ಧೆ ಜಾರಿಯಲ್ಲಿದೆ. ಇದರ ನಡುವೆ ಅಲ್ಲಲ್ಲಿ ಸಣ್ಣ-ಪುಟ್ಟ ಹಾಸ್ಯವೂ ನಡೆದಿದೆ. ಮೊದಲ ವಾರ ಮನೆಯ ಸದಸ್ಯರನ್ನು ವ್ಯಂಗ್ಯ , ಅಪಹಾಸ್ಯ ಮಾಡಿ ಟೀಕೆಗೆ ಗುರಿಯಾಗಿದ್ದ ತುಕಾಲಿ ಸಂತು, ಎರಡನೇ ವಾರ ತುಸು ಸುಧಾರಿಸಿಕೊಂಡಿದ್ದು ತಮ್ಮ ಹಾಸ್ಯದ ವರಸೆಯನ್ನು ತುಸು ಬದಲಾಯಿಸಿಕೊಂಡಂತಿದ್ದಾರೆ.

ಟಾಸ್ಕ್​ಗಳ ನಡುವೆ ಸಿಕ್ಕ ಸಮಯದಲ್ಲಿ ತುಕಾಲಿ ಸಂತು ಮನೆಯ ಕೆಲ ಸದಸ್ಯರಿಗೆ ಆಫರ್ ಒಂದನ್ನು ಕೊಟ್ಟಿದ್ದಾರೆ. ನಮೃತಾ, ಡ್ರೋನ್ ಪ್ರತಾಪ್, ತುಕಾಲಿ ಸಂತು, ಹಳ್ಳಿಕಾರ್ ಸಂತು, ನೀತು, ಸ್ನೇಹಿತ್ ಎಲ್ಲರೂ ಕುಳಿತು ಮಾತನಾಡುವಾಗ, ಡ್ರೋನ್ ಪ್ರತಾಪ್ ಹಾಗೂ ನಮ್ರತಾರನ್ನು ಉದ್ದೇಶಿಸಿ, ನೀವು ಏನಾದರೂ ಈ ಸ್ಪರ್ಧೆಯಲ್ಲಿ ಗೆದ್ದರೆ, ನಮ್ಮ ಹಳ್ಳಿಗೆ ಬನ್ನಿ ನಿಮಗೆ ಉಡುಗೊರೆ ಕೊಡುತ್ತೇನೆ ಎಂದಿದ್ದಾರೆ. ಏನದು ಉಡುಗೊರೆ ಎಂದರೆ, ಇಬ್ಬರಿಗೂ ತಲಾ 1001 ರೂಪಾಯಿ ಬಹುಮಾನ ಕೊಡುತ್ತೇನೆ ಎಂದಿದ್ದಾರೆ.

ಆಗ ಅಲ್ಲಿಯೇ ಕೂತಿದ್ದ ಹಳ್ಳಿಕಾರ್ ಸಂತು, ‘ಬಿಗ್​ಬಾಸ್ ಗೆದ್ದು ನಮ್ಮ ಊರಿಗೆ ಕುರಿ ಒಡೆಸಿ ಬಾಡೂಟ ಹಾಕಿಸುತ್ತೇನೆ’ ಎನ್ನುತ್ತಾರೆ. ಆಗ ನಮೃತಾ, ಹೊರಗೆ ಹೋದಮೇಲಲ್ಲ, ಈ ಮನೆಯಲ್ಲಿದ್ದಾಗ ಏನು ಕೊಡುತ್ತೀಯ ಅದನ್ನು ಹೇಳಿ ಎನ್ನುತ್ತಾರೆ. ಆಗ ಸಂತು, ‘ಸರಿ ಹಾಗಿದ್ರೆ, ನಾನು ಬಳಸುತ್ತಿರುವ ಸೋಪು ನಿನಗೆ ಕೊಡುತ್ತೇನೆ’ ಎನ್ನುತ್ತಾರೆ. ಬಳಿಕ ಹಳ್ಳಿಕಾರ್ ಸಂತು, ‘ಮೈಕ್ ಗೆ ಹಾಕಿಕೊಳ್ಳುವ ಬ್ಯಾಟರಿ ಕೊಟ್ಟು ಬಿಡುವ ಬಿಡಿ’ ಎಂದು ತಮ್ಮ ಮಾತು ಸೇರಿಸುತ್ತಾರೆ.

ಇದನ್ನೂ ಓದಿ:ಬೆಳ್ಳಂಬೆಳಿಗ್ಗೆ ಬಿಗ್​ಬಾಸ್ ಶಾಕ್, ಜಗಳಕ್ಕೆ ಕಾರಣವಾದ ನಾಮಿನೇಷನ್

ಬಳಿಕ ನಮ್ರತಾ, ಸ್ನೇಹಿತ್ ಗೆದ್ದರೆ ನಾನು ಅವರೊಟ್ಟಿಗೆ ಬಾಲ್ಕನಿಗೆ ಹೋಗುತ್ತೇನೆ ಎನ್ನುತ್ತಾರೆ. ಬಳಿಕ ರಕ್ಷಕ್ ಗೆದ್ದರೆ ರಕ್ಷಕ್ ಗೆ ಈಜುವುದನ್ನು ಹೇಳಿಕೊಡುತ್ತೇನೆ ಎನ್ನುತ್ತಾರೆ. ಆಗ ತುಕಾಲಿ ಸಂತು, ಇದಲ್ಲವೆ ಅದೃಷ್ಟ, ನೀವು ರಕ್ಷಕ್​ಗೆ ಈಜು ಹೇಳಿಕೊಡುವುದಾದರೆ ನಾವು ದಡದಲ್ಲೇ ಕುಳಿತು ನೋಡುತ್ತಿರುತ್ತೇವೆ ಎನ್ನತ್ತಾರೆ. ಸಂತು ಮಾತಿಗೆ ಎಲ್ಲರೂ ನಗುತ್ತಾರೆ.

ಬಿಗ್​ಬಾಸ್ ಮನೆಯಲ್ಲಿ ಕಂಟೆಸ್ಟ್​ಗಳ ನಡುವೆ ಟಾಸ್ಕ್​ಗಳಲ್ಲಿ ತುರುಸಿನ ಸ್ಪರ್ಧೆ ನಡೆಯುತ್ತಿದೆ. ಅದರಲ್ಲಿಯೂ ವಿನಯ್ ಹಾಗೂ ಸಂಗೀತಾ ನಡುವಿನ ಜಗಳ ತಾರಕ್ಕೇರಿದೆ. ಡ್ರೋನ್ ಪ್ರತಾಪ್ ಮತ್ತೊಮ್ಮೆ ವಿನಯ್​ಗೆ ಟಾರ್ಗೆಟ್ ಆಗಿದ್ದು, ವಿನಯ್ ಪ್ರಚಂಡ ಕೋಪಕ್ಕೆ ಡ್ರೋನ್ ಹಾಗೂ ಸಂಗೀತಾ ಗುರಿಯಾಗಿದ್ದಾರೆ. ಇನ್ನು ಕಾರ್ತಿಕ್ ಸಹ ವಿನಯ್ ವಿರುದ್ಧ ತಂಡ ಕಟ್ಟಿಕೊಂಡು ಟಾಸ್ಕ್​ ಗೆಲ್ಲಲು ಸಾಹಸಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಅವರ ಕ್ಯಾಪ್ಟನ್ಸಿ ಅವಧಿ ಮುಗಿದಿದ್ದು ಹೊಸ ಕ್ಯಾಪ್ಟನ್​ಗಾಗಿ ಟಾಸ್ಕ್ ಆಡಬೇಕಿದೆ. ಅಂದಹಾಗೆ ಮನೆಯ ಗಟ್ಟಿಗ ವಿನಯ್, ಇನ್ನೂ ಎರಡು ವಾರ ಕ್ಯಾಪ್ಟನ್ಸಿ ಟಾಸ್ಕ್ ಆಡುವಂತಿಲ್ಲ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ರಾತ್ರಿ 9:30 ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ನೇರ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ