Tejasswi Prakash: ಬಿಗ್​ ಬಾಸ್​ ಫಿನಾಲೆಗೂ ಮುನ್ನವೇ ಸ್ಪರ್ಧಿ ಜೊತೆ ನಡೆದಿತ್ತು ದೊಡ್ಡ ಡೀಲ್​; ಈಗ ಸತ್ಯ ಬಹಿರಂಗ

Bigg Boss 15 winner Tejasswi Prakash: ಬಿಗ್​ ಬಾಸ್​ ಮನೆಯೊಳಗೆ ಇರುವವರಿಗೆ ಹೊರ ಜಗತ್ತಿನ ಜೊತೆ ಸಂಪರ್ಕ ಇರುವುದಿಲ್ಲ ಎಂಬುದು ಪ್ರೇಕ್ಷಕರ ನಂಬಿಕೆ. ಆದರೆ ತೇಜಸ್ವಿ ಪ್ರಕಾಶ್​ ವಿಚಾರದಲ್ಲಿ ಬೇರೆಯೇ ಆಗಿದೆ.

Tejasswi Prakash: ಬಿಗ್​ ಬಾಸ್​ ಫಿನಾಲೆಗೂ ಮುನ್ನವೇ ಸ್ಪರ್ಧಿ ಜೊತೆ ನಡೆದಿತ್ತು ದೊಡ್ಡ ಡೀಲ್​; ಈಗ ಸತ್ಯ ಬಹಿರಂಗ
ಪೋಷಕರ ಜೊತೆ ಬಿಗ್​ ಬಾಸ್​ ವಿನ್ನರ್​ ತೇಜಸ್ವಿ ಪ್ರಕಾಶ್​, ಸಲ್ಮಾನ್​ ಖಾನ್​
Follow us
| Updated By: ಮದನ್​ ಕುಮಾರ್​

Updated on:Jan 31, 2022 | 8:29 AM

ಬಿಗ್​ ಬಾಸ್​ ಕಾರ್ಯಕ್ರಮದ ಪಾರದರ್ಶಕತೆ ಬಗ್ಗೆ ಕೆಲವರಿಗೆ ಅನುಮಾನ ಇದೆ. ಅದೇನೇ ಇದ್ದರೂ ಈ ಕಾರ್ಯಕ್ರಮದ ಜನಪ್ರಿಯತೆಗೆ ಏನೂ ಧಕ್ಕೆ ಆಗಿಲ್ಲ. ಪ್ರತಿ ಬಾರಿ ಬಿಗ್​ ಬಾಸ್​ ವಿನ್ನರ್​ ಹೆಸರು ಘೋಷಣೆ ಆದಾಗ ಜನರಿಗೆ ಒಂದಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಪ್ರೇಕ್ಷಕರ ವೋಟ್​ ಮಾತ್ರವಲ್ಲದೇ ಇನ್ನೂ ಅನೇಕ ಕಾರಣಗಳಿಂದಾಗಿ ವಿನ್ನರ್​ ಯಾರು ಎಂಬುದು ನಿರ್ಧಾರ ಆಗುತ್ತದೆ ಎಂಬ ಅನುಮಾನ ಪ್ರತಿ ಸೀಸನ್​ನಲ್ಲೂ ವ್ಯಕ್ತವಾಗುತ್ತದೆ. ಈಗ ನಟಿ ತೇಜಸ್ವಿ ಪ್ರಕಾಶ್​ (Tejasswi Prakash) ಅವರು ‘ಹಿಂದಿ ಬಿಗ್​ ಬಾಸ್​ 15’ರ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಭಾನುವಾರ (ಜ.30) ರಾತ್ರಿ ನಡೆದ ಕಲರ್​ಫುಲ್​ ಫಿನಾಲೆಯಲ್ಲಿ ಅವರನ್ನು ವಿನ್ನರ್​ ಎಂದು ಘೋಷಿಸಲಾಯಿತು. ಅಚ್ಚರಿ ಎಂದರೆ, ಅವರು ಬಿಗ್​ ಬಾಸ್​ ವಿನ್​ (Bigg Boss 15 winner) ಆಗುವುದಕ್ಕೂ ಮುನ್ನವೇ ಅವರ ಜೊತೆ ಒಂದು ದೊಡ್ಡ ಡೀಲ್​ ನಡೆದಿತ್ತು! ಆ ಬಗ್ಗೆ ಈಗ ಮಾಹಿತಿ ಜಗಜ್ಜಾಹೀರಾಗಿದೆ. ಬಹುನಿರೀಕ್ಷಿತ ‘ನಾಗಿನ್​ 6’ (Naagin 6) ಧಾರಾವಾಹಿಗೆ ನಾಯಕಿಯಾಗಿ ತೇಜಸ್ವಿ ಪ್ರಕಾಶ್​ ಆಯ್ಕೆ ಆಗಿದ್ದಾರೆ. ಅವರು ಬಿಗ್​ ಬಾಸ್​ ಮನೆಯೊಳಗೆ ಇದ್ದಾಗಲೇ ಈ ಆಯ್ಕೆ ಪ್ರಕ್ರಿಯೆ ನಡೆದಿತ್ತು ಎಂಬುದು ಅಚ್ಚರಿಯ ವಿಚಾರ.

ಬಿಗ್​ ಬಾಸ್​ ಮನೆಯೊಳಗೆ ಇರುವವರಿಗೆ ಹೊರ ಜಗತ್ತಿನ ಜೊತೆ ಸಂಪರ್ಕ ಇರುವುದಿಲ್ಲ ಎಂಬುದು ಪ್ರೇಕ್ಷಕರ ನಂಬಿಕೆ. ಆದರೆ ತೇಜಸ್ವಿ ಪ್ರಕಾಶ್​ ವಿಚಾರದಲ್ಲಿ ಬೇರೆಯೇ ಆಗಿದೆ. ಅವರು ಬಿಗ್​ ಬಾಸ್​ ಮನೆಯೊಳಗೆ ಇರುವಾಗಲೇ ಅವರನ್ನು ‘ನಾಗಿನ್ 6’ ತಂಡ ಸಂಪರ್ಕಿಸಿದೆ. ಕೆಲವು ದಿನಗಳ ಹಿಂದೆಯೇ ಅವರನ್ನು ಈ ಧಾರಾವಾಹಿಗೆ ನಾಯಕಿ ಎಂದು ತೀರ್ಮಾನಿಸಲಾಗಿತ್ತು. ಬಿಗ್​ ಬಾಸ್​ ಮನೆಯ ಒಳಗಡೆಯೇ ‘ನಾಗಿನ್​ 6’ ಪ್ರೋಮೋ ಶೂಟಿಂಗ್​ ಮಾಡಲಾಗಿತ್ತು. ಆ ಪ್ರೋಮೋವನ್ನು ಬಿಗ್​ ಬಾಸ್​ ಫಿನಾಲೆ ಸಮಯದಲ್ಲಿ ಬಿತ್ತರಿಸಲಾಗಿದೆ. ‘ನಾಗಿನ್​ 6’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವುದು ತೇಜಸ್ವಿ ಪ್ರಕಾಶ್​ ಅವರೇ ಎಂಬುದನ್ನು ಈಗ ಬಹಿರಂಗ ಪಡಿಸಲಾಗಿದೆ.

ಈಗಾಗಲೇ ಈ ಜನಪ್ರಿಯ ಧಾರಾವಾಹಿ 5 ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್​ ಅವರು ಈ ಧಾರಾವಾಹಿಗೆ ಬಂಡವಾಳ ಹೂಡುತ್ತಿದ್ದಾರೆ. 6ನೇ ಸೀಸನ್​ಗೆ ಯಾರು ನಾಯಕಿ ಆಗುತ್ತಾರೆ ಎಂಬ ಕೌತುಕ ಅನೇಕ ದಿನಗಳಿಂದ ಮನೆ ಮಾಡಿತ್ತು. ತೇಜಸ್ವಿ ಪ್ರಕಾಶ್​ ಅವರ ಹೆಸರನ್ನು ಬಹಿರಂಗಪಡಿಸುವ ಮೂಲಕ ಆ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. ‘ನಾಗಿನ್​ 6’ ಧಾರಾವಾಹಿಯಲ್ಲಿ ಹೊಸ ನಾಗಿಣಿಯಾಗಿ ನಟಿಸುವ ಅವಕಾಶ ಪಡೆದಿರುವ ತೇಜಸ್ವಿ ಪ್ರಕಾಶ್​ ಅವರಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

View this post on Instagram

A post shared by ColorsTV (@colorstv)

ಬಿಗ್​ ಬಾಸ್​ ಟ್ರೋಫಿ, 40 ಲಕ್ಷ ರೂಪಾಯಿ ಬಹುಮಾನ ಮೊತ್ತದ ಜೊತೆಗೆ ಈ ಬಂಪರ್​ ಚಾನ್ಸ್​ ಕೂಡ ಸಿಕ್ಕಿರುವುದರಿಂದ ಅವರೀಗ ಸಖತ್​ ಖುಷಿಯಲ್ಲಿದ್ದಾರೆ. ಬಿಗ್​ ಬಾಸ್​ ರಿಯಾಲಿಟಿ ಶೋ ಕಾರಣದಿಂದಾಗಿ ತೇಜಸ್ವಿ ಪ್ರಕಾಶ್​ ಜನಪ್ರಿಯತೆ ದೇಶದಾದ್ಯಂತ ಹಬ್ಬಿದೆ.

ಇದನ್ನೂ ಓದಿ:

‘42ರ ಮಹಿಳೆಗೆ 28ರ ಹುಡುಗಿ ಆಂಟಿ ಅಂತ ಕರೆಯೋದು ತಪ್ಪಾ?’: ಶಮಿತಾ ಶೆಟ್ಟಿ-ತೇಜಸ್ವಿ ಪ್ರಕಾಶ್​ ಜಗಳದಲ್ಲಿ ಜನರ ಪ್ರಶ್ನೆ

ಸೀರಿಯಲ್​ ನೋಡಿ ಕಾಲ ಕಳೆಯುತ್ತಿರುವ ಯಡಿಯೂರಪ್ಪ; ಮಾಜಿ ಸಿಎಂ ಮೆಚ್ಚಿನ ಧಾರಾವಾಹಿಗಳು ಇವು

Published On - 8:28 am, Mon, 31 January 22