AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಂಟಿ’ ಎಂಬುದನ್ನು ಬೈಗುಳವಾಗಿ ಉಪಯೋಗಿಸಿದೆ; ಬಿಗ್​ ಬಾಸ್​ನಿಂದ ಹೊರಬಂದು ಸತ್ಯ ಬಾಯ್ಬಿಟ್ಟ ನಟಿ

‘ನನ್ನ ಬಗ್ಗೆಯೂ ಹಲವರು ತುಂಬ ಮಾತುಗಳನ್ನು ಆಡಿದ್ದರು. ಆದರೆ ನಾನು ಅದನ್ನೆಲ್ಲ ದೊಡ್ಡದು ಮಾಡಲಿಲ್ಲ’ ಎಂದು ಬಿಗ್​ ಬಾಸ್​ 15ನೇ ಸೀಸನ್​ ವಿನ್ನರ್​ ತೇಜಸ್ವಿ ಪ್ರಕಾಶ್​ ಹೇಳಿದ್ದಾರೆ.

‘ಆಂಟಿ’ ಎಂಬುದನ್ನು ಬೈಗುಳವಾಗಿ ಉಪಯೋಗಿಸಿದೆ; ಬಿಗ್​ ಬಾಸ್​ನಿಂದ ಹೊರಬಂದು ಸತ್ಯ ಬಾಯ್ಬಿಟ್ಟ ನಟಿ
ತೇಜಸ್ವಿ ಪ್ರಕಾಶ್, ಶಮಿತಾ ಶೆಟ್ಟಿ
TV9 Web
| Edited By: |

Updated on: Feb 10, 2022 | 12:00 PM

Share

ರಿಯಾಲಿಟಿ ಶೋಗಳ ಪೈಕಿ ಅತಿ ಹೆಚ್ಚು ವಿವಾದಕ್ಕೆ ಕಾರಣ ಆಗುವಂತಹ ಕಾರ್ಯಕ್ರಮದ ಎಂದರೆ ಅದು ಬಿಗ್​ ಬಾಸ್​. ಪ್ರತಿ ಸೀಸನ್​ನಲ್ಲಿ ಬಿಗ್​ ಬಾಸ್​ ಮನೆಯೊಳಗೆ ಹತ್ತಾರು ಕಿರಿಕ್​ಗಳು ಆಗುತ್ತಲೇ ಇರುತ್ತವೆ. ಹಿಂದಿ ಬಿಗ್​ ಬಾಸ್​ 15ನೇ ಸೀಸನ್​ ಇತ್ತೀಚೆಗೆ ಮುಕ್ತಾಯ ಆಯಿತು. ಕಿರುತೆರೆ ನಟಿ ತೇಜಸ್ವಿ ಪ್ರಕಾಶ್​ ಅವರು ವಿನ್ನರ್​ (Bigg Boss 15 Winner) ಆಗಿ ಹೊರ ಹೊಮ್ಮಿದರು. ದೊಡ್ಮನೆಯೊಳಗೆ ಇದ್ದಷ್ಟು ದಿನವೂ ಅವರು ಹಲವು ವಿವಾದಗಳನ್ನು ಮಾಡಿಕೊಂಡಿದ್ದರು. ಅದರಲ್ಲೂ ನಟಿ ಶಮಿತಾ ಶೆಟ್ಟಿ ಜೊತೆ ತೇಜಸ್ವಿ ಪ್ರಕಾಶ್​ (Tejasswi Prakash) ಆಗಾಗ ಜಗಳ ಮಾಡುತ್ತಿದ್ದರು. ಒಂದು ಟಾಸ್ಕ್​ ಮಾಡುವಾಗ ತೇಜಸ್ವಿ ಸಖತ್​ ಕೋಪಗೊಂಡಿದ್ದರು. ಆಗ ಶಮಿತಾ ಶೆಟ್ಟಿಗೆ ಅವರು ಆಂಟಿ ಎಂದು ಕರೆದಿದ್ದರು. ಆಂಟಿ ಎಂಬ ಪದ ಬಳಸಿದ್ದಕ್ಕೆ ತೇಜಸ್ವಿ ಅವರ ವಿರುದ್ಧ ನೆಟ್ಟಿಗರು ಕೂಡ ಗರಂ ಆಗಿದ್ದರು. ಈಗ ಆ ವಿವಾದಗಳೆಲ್ಲ ತಣ್ಣಗಾಗಿವೆ. ವಿನ್ನರ್​ ಪಟ್ಟ ಪಡೆದಿರುವ ತೇಜಸ್ವಿ ಪ್ರಕಾಶ್​ ಅವರು ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಶಮಿತಾ ಶೆಟ್ಟಿ (Shamita Shetty) ಬಗ್ಗೆ ಮಾತನಾಡಿದ್ದಾರೆ. ‘ನ್ಯೂಸ್​ 18’ ಇಂಗ್ಲಿಷ್​ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ತೆರೆದಿಟ್ಟಿದ್ದಾರೆ.

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಶಮಿತಾ ಶೆಟ್ಟಿ ಅವರಿಗೆ ಈಗ 42ರ ಪ್ರಾಯ. ತೇಜಸ್ವಿ ಪ್ರಕಾಶ್​ ಅವರಿಗೆ ಈಗ 28 ವರ್ಷ ವಯಸ್ಸು. ಶಮಿತಾಗೆ ತಾವು ಆಂಟಿ ಅಂತ ಕರೆದಿದ್ದು ಯಾಕೆ ಎಂಬುದನ್ನು ತೇಜಸ್ವಿ ಪ್ರಕಾಶ್​ ವಿವರಿಸಿದ್ದಾರೆ. ‘ಆ ಕ್ಷಣದಲ್ಲಿ ಆಂಟಿ ಎಂಬ ಪದವನ್ನು ನಾನು ಬೈಗುಳದ ರೀತಿ ಉಪಯೋಗಿಸಿದೆ. ಶಮಿತಾ ಅವರನ್ನು ನೀವು ನೋಡಿದ್ದೀರಾ? ಅವರು ತುಂಬ ಹಾಟ್​ ಆಗಿ ಕಾಣಿಸುವ ಹುಡುಗಿ. ಅಂಥವರಿಗೆ ಯಾರಾದರೂ ಆಂಟಿ ಅಂತ ಕರೆಯೋಕೆ ಸಾಧ್ಯವಾ? ನಾನು ಆ ರೀತಿ ಕರೆದಿದ್ದು ಅವರಿಗೆ ಇಷ್ಟ ಆಗಿಲ್ಲ ಅಂತ ಗೊತ್ತಾದ ತಕ್ಷಣ ನಾನು ಆ ಮಾತನ್ನು ವಾಪಸ್​ ಪಡೆದುಕೊಂಡೆ’ ಎಂದು ತೇಜಸ್ವಿ ಪ್ರಕಾಶ್​ ಹೇಳಿದ್ದಾರೆ.

ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು, ಅದಕ್ಕೆ ಕ್ಷಮೆಯನ್ನೂ ಕೇಳುತ್ತ ಮುಂದುವರಿದವರು ತೇಜಸ್ವಿ ಪ್ರಕಾಶ್​. ಆದರೆ ತೇಜಸ್ವಿಗೆ ಯಾರೂ ಕ್ಷಮೆ ಕೇಳಿಲ್ಲ. ಈ ವಿಚಾರವನ್ನು ಕೂಡ ಅವರು ಒತ್ತಿ ಹೇಳಿದ್ದಾರೆ. ‘ನನ್ನ ಬಗ್ಗೆಯೂ ಹಲವರು ತುಂಬ ಮಾತುಗಳನ್ನು ಆಡಿದ್ದರು. ಆದರೆ ನಾನು ಅದನ್ನೆಲ್ಲ ದೊಡ್ಡದು ಮಾಡಲಿಲ್ಲ. ಯಾವ ಸಂದರ್ಭದಲ್ಲಿ ಆ ಮಾತುಗಳು ಹೊರಬಂದಿವೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಾನು ಹಲವು ಬಾರಿ ಕ್ಷಮೆ ಕೇಳಿದ್ದೇನೆ. ಆದರೆ ಯಾರೂ ಕೂಡ ನನ್ನ ಬಳಿ ಬಂದು ಕ್ಷಮೆ ಕೇಳಿಲ್ಲ’ ಎಂದಿದ್ದಾರೆ ತೇಜಸ್ವಿ ಪ್ರಕಾಶ್​.

‘ಹಿಂದಿ ಬಿಗ್​ ಬಾಸ್​ 15’ ಫಿನಾಲೆಯಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ರಶ್ಮಿ ದೇಸಾಯಿ, ಪ್ರತೀಕ್​ ಸೆಹಜ್ಪಾಲ್​, ತೇಜಸ್ವಿ ಪ್ರಕಾಶ್​, ಶಮಿತಾ ಶೆಟ್ಟಿ, ಕರಣ್​ ಕುಂದ್ರಾ ಮತ್ತು ನಿಶಾಂತ್​ ಭಟ್​ ಅವರು ಫಿನಾಲೆ ತಲುಪಿದ್ದರು. ಎಲ್ಲರೂ ಕೂಡ ಪ್ರಬಲ ಸ್ಪರ್ಧಿಗಳೇ ಆಗಿದ್ದರು. ಅಂತಿಮವಾಗಿ ತೇಜಸ್ವಿ ಪ್ರಕಾಶ್ ಅವರಿಗೆ ಟ್ರೋಫಿ ಸಿಕ್ಕಿತು.

ಇದನ್ನೂ ಓದಿ:

ಕಷ್ಟದ ಸಮಯದಲ್ಲಿ ಅಕ್ಕ-ಭಾವನನ್ನು ಬಿಟ್ಟು ಶಮಿತಾ ಶೆಟ್ಟಿ ಬಿಗ್​ ಬಾಸ್​ಗೆ ಹೋಗಿದ್ದು ಏಕೆ? ಕಾರಣ ತಿಳಿಸಿದ ನಟಿ

‘ಬಿಗ್​ ಬಾಸ್​ 15’ ಗೆದ್ದ ಸುಂದರಿ ತೇಜಸ್ವಿ ಪ್ರಕಾಶ್; ಇಲ್ಲಿವೆ ಖ್ಯಾತ ನಟಿಯ ಮನಮೋಹಕ ಫೋಟೋಗಳು

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ