AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಂಟಿ’ ಎಂಬುದನ್ನು ಬೈಗುಳವಾಗಿ ಉಪಯೋಗಿಸಿದೆ; ಬಿಗ್​ ಬಾಸ್​ನಿಂದ ಹೊರಬಂದು ಸತ್ಯ ಬಾಯ್ಬಿಟ್ಟ ನಟಿ

‘ನನ್ನ ಬಗ್ಗೆಯೂ ಹಲವರು ತುಂಬ ಮಾತುಗಳನ್ನು ಆಡಿದ್ದರು. ಆದರೆ ನಾನು ಅದನ್ನೆಲ್ಲ ದೊಡ್ಡದು ಮಾಡಲಿಲ್ಲ’ ಎಂದು ಬಿಗ್​ ಬಾಸ್​ 15ನೇ ಸೀಸನ್​ ವಿನ್ನರ್​ ತೇಜಸ್ವಿ ಪ್ರಕಾಶ್​ ಹೇಳಿದ್ದಾರೆ.

‘ಆಂಟಿ’ ಎಂಬುದನ್ನು ಬೈಗುಳವಾಗಿ ಉಪಯೋಗಿಸಿದೆ; ಬಿಗ್​ ಬಾಸ್​ನಿಂದ ಹೊರಬಂದು ಸತ್ಯ ಬಾಯ್ಬಿಟ್ಟ ನಟಿ
ತೇಜಸ್ವಿ ಪ್ರಕಾಶ್, ಶಮಿತಾ ಶೆಟ್ಟಿ
TV9 Web
| Updated By: ಮದನ್​ ಕುಮಾರ್​|

Updated on: Feb 10, 2022 | 12:00 PM

Share

ರಿಯಾಲಿಟಿ ಶೋಗಳ ಪೈಕಿ ಅತಿ ಹೆಚ್ಚು ವಿವಾದಕ್ಕೆ ಕಾರಣ ಆಗುವಂತಹ ಕಾರ್ಯಕ್ರಮದ ಎಂದರೆ ಅದು ಬಿಗ್​ ಬಾಸ್​. ಪ್ರತಿ ಸೀಸನ್​ನಲ್ಲಿ ಬಿಗ್​ ಬಾಸ್​ ಮನೆಯೊಳಗೆ ಹತ್ತಾರು ಕಿರಿಕ್​ಗಳು ಆಗುತ್ತಲೇ ಇರುತ್ತವೆ. ಹಿಂದಿ ಬಿಗ್​ ಬಾಸ್​ 15ನೇ ಸೀಸನ್​ ಇತ್ತೀಚೆಗೆ ಮುಕ್ತಾಯ ಆಯಿತು. ಕಿರುತೆರೆ ನಟಿ ತೇಜಸ್ವಿ ಪ್ರಕಾಶ್​ ಅವರು ವಿನ್ನರ್​ (Bigg Boss 15 Winner) ಆಗಿ ಹೊರ ಹೊಮ್ಮಿದರು. ದೊಡ್ಮನೆಯೊಳಗೆ ಇದ್ದಷ್ಟು ದಿನವೂ ಅವರು ಹಲವು ವಿವಾದಗಳನ್ನು ಮಾಡಿಕೊಂಡಿದ್ದರು. ಅದರಲ್ಲೂ ನಟಿ ಶಮಿತಾ ಶೆಟ್ಟಿ ಜೊತೆ ತೇಜಸ್ವಿ ಪ್ರಕಾಶ್​ (Tejasswi Prakash) ಆಗಾಗ ಜಗಳ ಮಾಡುತ್ತಿದ್ದರು. ಒಂದು ಟಾಸ್ಕ್​ ಮಾಡುವಾಗ ತೇಜಸ್ವಿ ಸಖತ್​ ಕೋಪಗೊಂಡಿದ್ದರು. ಆಗ ಶಮಿತಾ ಶೆಟ್ಟಿಗೆ ಅವರು ಆಂಟಿ ಎಂದು ಕರೆದಿದ್ದರು. ಆಂಟಿ ಎಂಬ ಪದ ಬಳಸಿದ್ದಕ್ಕೆ ತೇಜಸ್ವಿ ಅವರ ವಿರುದ್ಧ ನೆಟ್ಟಿಗರು ಕೂಡ ಗರಂ ಆಗಿದ್ದರು. ಈಗ ಆ ವಿವಾದಗಳೆಲ್ಲ ತಣ್ಣಗಾಗಿವೆ. ವಿನ್ನರ್​ ಪಟ್ಟ ಪಡೆದಿರುವ ತೇಜಸ್ವಿ ಪ್ರಕಾಶ್​ ಅವರು ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಶಮಿತಾ ಶೆಟ್ಟಿ (Shamita Shetty) ಬಗ್ಗೆ ಮಾತನಾಡಿದ್ದಾರೆ. ‘ನ್ಯೂಸ್​ 18’ ಇಂಗ್ಲಿಷ್​ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ತೆರೆದಿಟ್ಟಿದ್ದಾರೆ.

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಶಮಿತಾ ಶೆಟ್ಟಿ ಅವರಿಗೆ ಈಗ 42ರ ಪ್ರಾಯ. ತೇಜಸ್ವಿ ಪ್ರಕಾಶ್​ ಅವರಿಗೆ ಈಗ 28 ವರ್ಷ ವಯಸ್ಸು. ಶಮಿತಾಗೆ ತಾವು ಆಂಟಿ ಅಂತ ಕರೆದಿದ್ದು ಯಾಕೆ ಎಂಬುದನ್ನು ತೇಜಸ್ವಿ ಪ್ರಕಾಶ್​ ವಿವರಿಸಿದ್ದಾರೆ. ‘ಆ ಕ್ಷಣದಲ್ಲಿ ಆಂಟಿ ಎಂಬ ಪದವನ್ನು ನಾನು ಬೈಗುಳದ ರೀತಿ ಉಪಯೋಗಿಸಿದೆ. ಶಮಿತಾ ಅವರನ್ನು ನೀವು ನೋಡಿದ್ದೀರಾ? ಅವರು ತುಂಬ ಹಾಟ್​ ಆಗಿ ಕಾಣಿಸುವ ಹುಡುಗಿ. ಅಂಥವರಿಗೆ ಯಾರಾದರೂ ಆಂಟಿ ಅಂತ ಕರೆಯೋಕೆ ಸಾಧ್ಯವಾ? ನಾನು ಆ ರೀತಿ ಕರೆದಿದ್ದು ಅವರಿಗೆ ಇಷ್ಟ ಆಗಿಲ್ಲ ಅಂತ ಗೊತ್ತಾದ ತಕ್ಷಣ ನಾನು ಆ ಮಾತನ್ನು ವಾಪಸ್​ ಪಡೆದುಕೊಂಡೆ’ ಎಂದು ತೇಜಸ್ವಿ ಪ್ರಕಾಶ್​ ಹೇಳಿದ್ದಾರೆ.

ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು, ಅದಕ್ಕೆ ಕ್ಷಮೆಯನ್ನೂ ಕೇಳುತ್ತ ಮುಂದುವರಿದವರು ತೇಜಸ್ವಿ ಪ್ರಕಾಶ್​. ಆದರೆ ತೇಜಸ್ವಿಗೆ ಯಾರೂ ಕ್ಷಮೆ ಕೇಳಿಲ್ಲ. ಈ ವಿಚಾರವನ್ನು ಕೂಡ ಅವರು ಒತ್ತಿ ಹೇಳಿದ್ದಾರೆ. ‘ನನ್ನ ಬಗ್ಗೆಯೂ ಹಲವರು ತುಂಬ ಮಾತುಗಳನ್ನು ಆಡಿದ್ದರು. ಆದರೆ ನಾನು ಅದನ್ನೆಲ್ಲ ದೊಡ್ಡದು ಮಾಡಲಿಲ್ಲ. ಯಾವ ಸಂದರ್ಭದಲ್ಲಿ ಆ ಮಾತುಗಳು ಹೊರಬಂದಿವೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಾನು ಹಲವು ಬಾರಿ ಕ್ಷಮೆ ಕೇಳಿದ್ದೇನೆ. ಆದರೆ ಯಾರೂ ಕೂಡ ನನ್ನ ಬಳಿ ಬಂದು ಕ್ಷಮೆ ಕೇಳಿಲ್ಲ’ ಎಂದಿದ್ದಾರೆ ತೇಜಸ್ವಿ ಪ್ರಕಾಶ್​.

‘ಹಿಂದಿ ಬಿಗ್​ ಬಾಸ್​ 15’ ಫಿನಾಲೆಯಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ರಶ್ಮಿ ದೇಸಾಯಿ, ಪ್ರತೀಕ್​ ಸೆಹಜ್ಪಾಲ್​, ತೇಜಸ್ವಿ ಪ್ರಕಾಶ್​, ಶಮಿತಾ ಶೆಟ್ಟಿ, ಕರಣ್​ ಕುಂದ್ರಾ ಮತ್ತು ನಿಶಾಂತ್​ ಭಟ್​ ಅವರು ಫಿನಾಲೆ ತಲುಪಿದ್ದರು. ಎಲ್ಲರೂ ಕೂಡ ಪ್ರಬಲ ಸ್ಪರ್ಧಿಗಳೇ ಆಗಿದ್ದರು. ಅಂತಿಮವಾಗಿ ತೇಜಸ್ವಿ ಪ್ರಕಾಶ್ ಅವರಿಗೆ ಟ್ರೋಫಿ ಸಿಕ್ಕಿತು.

ಇದನ್ನೂ ಓದಿ:

ಕಷ್ಟದ ಸಮಯದಲ್ಲಿ ಅಕ್ಕ-ಭಾವನನ್ನು ಬಿಟ್ಟು ಶಮಿತಾ ಶೆಟ್ಟಿ ಬಿಗ್​ ಬಾಸ್​ಗೆ ಹೋಗಿದ್ದು ಏಕೆ? ಕಾರಣ ತಿಳಿಸಿದ ನಟಿ

‘ಬಿಗ್​ ಬಾಸ್​ 15’ ಗೆದ್ದ ಸುಂದರಿ ತೇಜಸ್ವಿ ಪ್ರಕಾಶ್; ಇಲ್ಲಿವೆ ಖ್ಯಾತ ನಟಿಯ ಮನಮೋಹಕ ಫೋಟೋಗಳು

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ