AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಕಾಲಿ ಸಂತು-ಅವಿನಾಶ್ ಯಾವ ಪ್ರಾಣಿಯ ಚಿತ್ರ ಬರೆದಿದ್ದಾರೆ ಗರುತಿಸಬಲ್ಲಿರಾ?

Bigg Boss Kannada: ತುಕಾಲಿ ಸಂತು ಹಾಗೂ ಅವಿನಾಶ್ ಬಿಗ್​ಬಾಸ್ ಮನೆಯಲ್ಲಿ ಬರೆದ ಚಿತ್ರಗಳಿವು. ಇದು ಒಂದು ಕಾಡು ಪ್ರಾಣಿಯ ಚಿತ್ರ. ಆ ಪ್ರಾಣಿ ಯಾವುದೆಂದು ಊಹಿಸಬಲ್ಲಿರಾ?

ತುಕಾಲಿ ಸಂತು-ಅವಿನಾಶ್ ಯಾವ ಪ್ರಾಣಿಯ ಚಿತ್ರ ಬರೆದಿದ್ದಾರೆ ಗರುತಿಸಬಲ್ಲಿರಾ?
ಮಂಜುನಾಥ ಸಿ.
|

Updated on:Dec 24, 2023 | 11:34 PM

Share

ಬಿಗ್​ಬಾಸ್​ನಲ್ಲಿ (Bigg Boss) ವೀಕೆಂಡ್​ಗಳು ಸಖತ್ ಮಜಾ ಕೊಡುತ್ತವೆ. ಶನಿವಾರ ಮತ್ತು ಭಾನುವಾರ ಬರುವ ಸುದೀಪ್, ಶನಿವಾರ ತುಸು ಗಂಭೀರವಾಗಿರುತ್ತಾರೆ ಆದರೆ ಭಾನುವಾರ ಫನ್ನಿಯಾಗಿ ಕೆಲವು ಆಟಗಳನ್ನು ಆಡಿಸಿ ಸ್ಪರ್ಧಿಗಳನ್ನು ನಗಿಸುತ್ತಾರೆ. ಕೊನೆಗೆ ಒಬ್ಬರನ್ನು ಮನೆಯಿಂದ ಹೊರಗೆ ಕರೆಯುತ್ತಾರೆ. ಈ ವಾರಾಂತ್ಯದಲ್ಲಿ ಸುದೀಪ್ ಮನೆಗೆ ಬಂದಿರಲಿಲ್ಲ. ಅವರ ಬದಲಿಗೆ ಶನಿವಾರ ಶ್ರುತಿ ಬಂದಿದ್ದರು. ಭಾನುವಾರ ಶೈನ್ ಶೆಟ್ಟಿ ಮತ್ತು ಶುಭಾ ಪೂಂಜಾ ಬಂದಿದ್ದರು. ಭಾನುವಾರದ ಎಪಿಸೋಡ್​ನಲ್ಲಿ ಸ್ಪರ್ಧಿಗಳಿಂದ ಫನ್ನಿ ಆದ ಟಾಸ್ಕ್​ಗಳನ್ನು ಆಡಿಸಿ ಮನೊರಂಜನೆ ಒದಗಿಸಿದರು.

ಕೆಲವು ದಿನಗಳ ಹಿಂದೆ ಚಿತ್ ಬರೆಯುವ ಟಾಸ್ಕ್​ ಒಂದನ್ನು ಮನೆಯಲ್ಲಿ ಆಡಿಸಲಾಗಿತ್ತು. ಆ ಟಾಸ್ಕ್​ನಲ್ಲಿ ಸಂಗೀತಾ ತಂಡದಲ್ಲಿದ್ದ ತುಕಾಲಿ ಸಂತು ಬಹಳ ಕೆಟ್ಟದಾಗಿ ಆಡಿದ್ದರು. ಎದುರಾಳಿ ತಂಡದಲ್ಲಿದ್ದ ಅವಿನಾಶ್ ಸಹ ಸರಿಯಾಗಿ ಪ್ರದರ್ಶನ ನೀಡಿರಲಿಲ್ಲ. ಭಾನುವಾರ ಮನೆಗೆ ಬಂದ ಶೈನ್ ಹಾಗೂ ಶುಭಾ, ತುಕಾಲಿ ಸಂತು ಹಾಗೂ ಅವಿನಾಶ್ ಅವರುಗಳಿಂದ ಅದೇ ಟಾಸ್ಕ್​ ಅನ್ನು ಮತ್ತೊಮ್ಮೆ ಆಡಿಸಿದರು. ಸಖತ್ ಮಜಾ ಕೊಟ್ಟಿತು ತುಕಾಲಿ ಹಾಗೂ ಅವಿನಾಶ್ ಅವರ ಚಿತ್ರಗಳು.

ಶೈನ್ ಶೆಟ್ಟಿ ಕನ್ನಡ ಸಿನಿಮಾಗಳ ಹೆಸರನ್ನು ಅವಿನಾಶ್ ಹಾಗೂ ತುಕಾಲಿ ಸಂತುಗೆ ತೋರಿಸುತ್ತಾರೆ. ಅವರಿಬ್ಬರೂ ಆ ಹೆಸರನ್ನು ನೋಡಿ ಅದನ್ನು ನೋಡಿ ಅದಕ್ಕೆ ಸಂಬಂಧಿಸಿದ ಚಿತ್ರವನ್ನು ಬೋರ್ಡ್​ ಮೇಲೆ ಬರೆಯಬೇಕಿತ್ತು. ಯಾರು ಆ ಚಿತ್ರವನ್ನು ನೋಡಿ ಹೆಸರು ಊಹಿಸುತ್ತಾರೆಯೋ ಅವರು ಗೆದ್ದಂತೆ. ‘ಹೆಬ್ಬುಲಿ’, ‘ಮುಂಗಾರು ಮಳೆ’, ‘ಪಾಪ್​ಕಾರ್ನ್ ಮಂಕಿ ಟೈಗರ್’, ‘ಮೊನಾಲಿಸಾ’ ಇನ್ನೂ ಕೆಲವು ಸಿನಿಮಾಗಳ ಹೆಸರನ್ನು ಚಿತ್ರದ ಮೂಲಕ ಮೂಡಿಸುವ ಪ್ರಯತ್ನ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಹಾಡು-ಕುಣಿತ: ಡ್ರೋನ್-ವರ್ತೂರು ಸ್ಟೆಪ್ಪು ನೋಡಿ

ತುಕಾಲಿ ಮತ್ತು ಅವಿನಾಶ್ ಪರಸ್ಪರರ ಮೇಲೆ ಸ್ಪರ್ಧೆಗೆ ಬಿದ್ದಂತೆ ಒಬ್ಬರಿಗಿಂತಲೂ ಒಬ್ಬರು ಕೆಟ್ಟದಾಗಿ ಚಿತ್ರಗಳನ್ನು ಬರೆದರು. ಮನೆಯ ಇತರೆ ಸ್ಪರ್ಧಿಗಳಂತೂ ಸಿನಿಮಾ ಹೆಸರು ಊಹಿಸಲು ತಡಕಾಡಿಬಿಟ್ಟರು. ತುಕಾಲಿ ಸಂತು ಹಾಗೂ ಅವಿನಾಶ್ ಬರೆದಿದ್ದ ‘ಹೆಬ್ಬುಲಿ’ ಚಿತ್ರವಂತೂ ಮನೆಯ ಸದಸ್ಯರು ಉರುಳಾಡಿಕೊಂಡು ನಗುವಂತೆ ಮಾಡಿತು. ‘ಮೋನಾಲಿಸಾ’ ಚಿತ್ರವೂ ಸಹ. ಆದರೆ ಕಟ್ಟ ಕಡೆಯದಾಗಿ ‘ಮುಂಗಾರು ಮಳೆ’ ಸಿನಿಮಾವನ್ನು ಬಹಳ ಕಷ್ಟಪಟ್ಟು ತುಕಾಲಿ ತಂಡದವರು ಊಹಿಬಿಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:16 pm, Sun, 24 December 23

Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ