AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್​ ಜೊತೆ ವಾಗ್ವಾದ, ಪ್ರಶ್ನಿಸುವ ಧೈರ್ಯ ಪ್ರದರ್ಶಿಸಿದ ಡ್ರೋನ್ ಪ್ರತಾಪ್

Drone Prathap: ವಿನಯ್​ ಕಾರ್ಯಗಳನ್ನು ಸಂಗೀತಾ ಬಿಟ್ಟರೆ ಇನ್ಯಾರು ಪ್ರಶ್ನಿಸುವುದಿಲ್ಲ ಎಂದಾಗಿತ್ತು, ಈಗ ಡ್ರೋನ್ ಪ್ರತಾಪ್ ಪ್ರಶ್ನೆ ಮಾಡಿದ್ದಾರೆ.

ವಿನಯ್​ ಜೊತೆ ವಾಗ್ವಾದ, ಪ್ರಶ್ನಿಸುವ ಧೈರ್ಯ ಪ್ರದರ್ಶಿಸಿದ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್
Follow us
ಮಂಜುನಾಥ ಸಿ.
|

Updated on: Dec 24, 2023 | 3:50 PM

ಬಿಗ್​ಬಾಸ್ (BiggBoss) ಮನೆಯಲ್ಲಿ ವಿನಯ್ ಒಂದು ರೀತಿ ಪ್ರಶ್ನಾತೀತರಾಗಿಬಿಟ್ಟಿದ್ದಾರೆ. ಅವರು ತಪ್ಪು ಮಾಡಿದಾಗ ಸಂಗೀತಾರನ್ನು ಹೊರತುಪಡಿಸಿ ಇನ್ಯಾರೂ ಪ್ರಶ್ನಿಸುವುದಿಲ್ಲ. ಎದುರಾಳಿ ತಂಡದಲ್ಲಿದ್ದಾಗ ಕಾರ್ತಿಕ್ ಆಗಾಗ್ಗೆ ವಿನಯ್​ ಹೇಳಿದ ಮಾತಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಇಬ್ಬರೂ ಒಂದೇ ತಂಡವಾದ ಬಳಿಕ ವಿನಯ್​ರ ಮಾತುಗಳನ್ನು, ವರ್ತನೆಯನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಆದರೆ ಇದೀಗ ಡ್ರೋನ್ ಪ್ರತಾಪ್ ಸಹ ವಿನಯ್​ರನ್ನು ಪ್ರಶ್ನಿಸಲು ತೊಡಗಿದ್ದಾರೆ.

ಆರಂಭದ ಕೆಲ ವಾರಗಳಲ್ಲಿ ವಿನಯ್, ಡ್ರೋನ್ ಪ್ರತಾಪ್​ ವಿರುದ್ಧ ಕೆಲವು ಬಾರಿ ವಾಗ್ದಾಳಿ ಮಾಡಿದ್ದರು. ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದರು. ನನ್ನ ತಂಟೆಗೆ ಬರಬೇಡ ಎಂದು ಎಚ್ಚರಿಕೆ ಸಹ ನೀಡಿದ್ದರು. ಆಗೆಲ್ಲ ಭಯದಿಂದಾಗಿ ಸುಮ್ಮನಾಗಿದ್ದರು ಡ್ರೋನ್ ಪ್ರತಾಪ್, ಅದಾದ ಬಳಿಕ ವಿನಯ್​ರಿಂದ ಬಹುತೇಕ ದೂರವೇ ಉಳಿದಿದ್ದರು. ವಿನಯ್ ಸಹ ಡ್ರೋನ್ ಪ್ರತಾಪ್​ ತಂಟೆಗೆ ಹೆಚ್ಚಾಗಿ ಹೋಗಿರಲಿಲ್ಲ. ಆದರೆ ಇತ್ತೀಚೆಗೆ ಪ್ರತಾಪ್, ಮನೆಯ ಕೆಲವರ ಮಾತು ಕೇಳಿ ಮುದ್ದೆ ಮಾಡಿದ್ದರು. ಇದರಿಂದ ಇತರರಿಗೆ ಊಟ ಬರಲಿಲ್ಲ. ಆ ಸಮಯದಲ್ಲಿ ವಿನಯ್, ಪದೇ ಪದೆ ಪ್ರತಾಪ್ ವಿರುದ್ಧ ಬೆದರಿಕೆ ಹಾಕುವ ರೀತಿ ಮಾತನಾಡಿದ್ದರು. ಆಗ ಪ್ರತಾಪ್ ಕ್ಷಮೆ ಕೇಳಿದ್ದರು.

ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿಗಳ ಹರಾಜು ಯಾರಿಗೆ ಎಷ್ಟು ಹಣ?

ಶನಿವಾರ ಪ್ರಸಾರವಾದ ಎಪಿಸೋಡ್​ನಲ್ಲಿ ವಿನಯ್​ ಮಾಡಿದ ತಪ್ಪಿನಿಂದಾಗಿ ಮನೆಯ ಸದಸ್ಯರು ಲಕ್ಷುರಿ ಬಜೆಟ್ ಕಳೆದುಕೊಂಡರು. ವಿನಯ್, ಬಜರ್ ಆಗುವ ಮುನ್ನವೇ ಟಿವಿ ಆನ್ ಮಾಡಿದ್ದರಿಂದ ಈ ವಾರವೂ ಲಕ್ಷುರಿ ಬಜೆಟ್ ಹೋಯ್ತು. ಇದರ ಬಗ್ಗೆ ಮನೆಯ ಯಾವ ಸದಸ್ಯರು ವಿನಯ್ ಎದುರು ಪ್ರಶ್ನೆ ಮಾಡಿರಲಿಲ್ಲ. ಆದರೆ ಡ್ರೋನ್ ಪ್ರತಾಪ್ ಮಾಡಿದರು. ನೀವು ಮಾಡಿದ ತಪ್ಪಿನಿಂದಲೇ ಮನೆಯ ಸದಸ್ಯರಿಗೆ ಲಕ್ಷುರಿ ಬಜೆಟ್ ಹೋಯ್ತು ಎಂದರು. ಅದಕ್ಕೆ ಏನೀಗ? ಎಂದು ಬೆದರಿಕೆ ದ್ವನಿಯಲ್ಲಿ ವಿನಯ್ ಪ್ರತಿಕ್ರಿಯೆ ನೀಡಿದರು. ವಿನಯ್ ಯಾವ ಟೋನ್​ನಲ್ಲಿ ಉತ್ತರ ನೀಡಿದರೋ ಅದೇ ಟೋನ್​ನಲ್ಲಿ ಪ್ರತ್ಯುತ್ತರಗಳನ್ನು ಡ್ರೋನ್ ನೀಡಿದರು.

ಇದರಿಂದ ಸಿಟ್ಟಾದ ವಿನಯ್, ಬಳಿಕ ಶ್ರುತಿ ನಡೆಸಿಕೊಟ್ಟ ನ್ಯಾಯಾಲಯದಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ಹಲವು ದೂರುಗಳನ್ನು ಹೇಳಿದರು. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಡ್ರೋನ್ ಪ್ರತಾಪ್, ತಮ್ಮ ಮೇಲೆ ಬಂದ ಆರೋಪಗಳಿಗೆ ಸ್ಪಷ್ಟನೆಗಳನ್ನು ನೀಡಿದರು. ಡ್ರೋನ್ ಪ್ರತಾಪ್ ಬಿಗ್​ಬಾಸ್ ಮನೆಗೆ ಬಂದ ಆರಂಭದಲ್ಲಿ ನಾಚಿಕೆ ಸ್ವಭಾವದ, ಹೆದರಿಕೆ ಸ್ವಭಾವದ ವ್ಯಕ್ತಿಯಾಗಿದ್ದರು. ಆದರೆ ಈಗ ಹಾಗಿಲ್ಲ, ವಿನಯ್, ತುಕಾಲಿ ಸಂತೋಷ್ ಎಲ್ಲರಿಗೂ ಪ್ರತ್ಯುತ್ತರಗಳನ್ನು ಧೈರ್ಯದಿಂದ ನೀಡುತ್ತಿದ್ದಾರೆ. ಡ್ರೋನ್ ಪ್ರತಾಪ್ ಫಿನಾಲೆಗೆ ಬರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ