AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್​ ಜೊತೆ ವಾಗ್ವಾದ, ಪ್ರಶ್ನಿಸುವ ಧೈರ್ಯ ಪ್ರದರ್ಶಿಸಿದ ಡ್ರೋನ್ ಪ್ರತಾಪ್

Drone Prathap: ವಿನಯ್​ ಕಾರ್ಯಗಳನ್ನು ಸಂಗೀತಾ ಬಿಟ್ಟರೆ ಇನ್ಯಾರು ಪ್ರಶ್ನಿಸುವುದಿಲ್ಲ ಎಂದಾಗಿತ್ತು, ಈಗ ಡ್ರೋನ್ ಪ್ರತಾಪ್ ಪ್ರಶ್ನೆ ಮಾಡಿದ್ದಾರೆ.

ವಿನಯ್​ ಜೊತೆ ವಾಗ್ವಾದ, ಪ್ರಶ್ನಿಸುವ ಧೈರ್ಯ ಪ್ರದರ್ಶಿಸಿದ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್
ಮಂಜುನಾಥ ಸಿ.
|

Updated on: Dec 24, 2023 | 3:50 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ವಿನಯ್ ಒಂದು ರೀತಿ ಪ್ರಶ್ನಾತೀತರಾಗಿಬಿಟ್ಟಿದ್ದಾರೆ. ಅವರು ತಪ್ಪು ಮಾಡಿದಾಗ ಸಂಗೀತಾರನ್ನು ಹೊರತುಪಡಿಸಿ ಇನ್ಯಾರೂ ಪ್ರಶ್ನಿಸುವುದಿಲ್ಲ. ಎದುರಾಳಿ ತಂಡದಲ್ಲಿದ್ದಾಗ ಕಾರ್ತಿಕ್ ಆಗಾಗ್ಗೆ ವಿನಯ್​ ಹೇಳಿದ ಮಾತಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಇಬ್ಬರೂ ಒಂದೇ ತಂಡವಾದ ಬಳಿಕ ವಿನಯ್​ರ ಮಾತುಗಳನ್ನು, ವರ್ತನೆಯನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಆದರೆ ಇದೀಗ ಡ್ರೋನ್ ಪ್ರತಾಪ್ ಸಹ ವಿನಯ್​ರನ್ನು ಪ್ರಶ್ನಿಸಲು ತೊಡಗಿದ್ದಾರೆ.

ಆರಂಭದ ಕೆಲ ವಾರಗಳಲ್ಲಿ ವಿನಯ್, ಡ್ರೋನ್ ಪ್ರತಾಪ್​ ವಿರುದ್ಧ ಕೆಲವು ಬಾರಿ ವಾಗ್ದಾಳಿ ಮಾಡಿದ್ದರು. ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದರು. ನನ್ನ ತಂಟೆಗೆ ಬರಬೇಡ ಎಂದು ಎಚ್ಚರಿಕೆ ಸಹ ನೀಡಿದ್ದರು. ಆಗೆಲ್ಲ ಭಯದಿಂದಾಗಿ ಸುಮ್ಮನಾಗಿದ್ದರು ಡ್ರೋನ್ ಪ್ರತಾಪ್, ಅದಾದ ಬಳಿಕ ವಿನಯ್​ರಿಂದ ಬಹುತೇಕ ದೂರವೇ ಉಳಿದಿದ್ದರು. ವಿನಯ್ ಸಹ ಡ್ರೋನ್ ಪ್ರತಾಪ್​ ತಂಟೆಗೆ ಹೆಚ್ಚಾಗಿ ಹೋಗಿರಲಿಲ್ಲ. ಆದರೆ ಇತ್ತೀಚೆಗೆ ಪ್ರತಾಪ್, ಮನೆಯ ಕೆಲವರ ಮಾತು ಕೇಳಿ ಮುದ್ದೆ ಮಾಡಿದ್ದರು. ಇದರಿಂದ ಇತರರಿಗೆ ಊಟ ಬರಲಿಲ್ಲ. ಆ ಸಮಯದಲ್ಲಿ ವಿನಯ್, ಪದೇ ಪದೆ ಪ್ರತಾಪ್ ವಿರುದ್ಧ ಬೆದರಿಕೆ ಹಾಕುವ ರೀತಿ ಮಾತನಾಡಿದ್ದರು. ಆಗ ಪ್ರತಾಪ್ ಕ್ಷಮೆ ಕೇಳಿದ್ದರು.

ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿಗಳ ಹರಾಜು ಯಾರಿಗೆ ಎಷ್ಟು ಹಣ?

ಶನಿವಾರ ಪ್ರಸಾರವಾದ ಎಪಿಸೋಡ್​ನಲ್ಲಿ ವಿನಯ್​ ಮಾಡಿದ ತಪ್ಪಿನಿಂದಾಗಿ ಮನೆಯ ಸದಸ್ಯರು ಲಕ್ಷುರಿ ಬಜೆಟ್ ಕಳೆದುಕೊಂಡರು. ವಿನಯ್, ಬಜರ್ ಆಗುವ ಮುನ್ನವೇ ಟಿವಿ ಆನ್ ಮಾಡಿದ್ದರಿಂದ ಈ ವಾರವೂ ಲಕ್ಷುರಿ ಬಜೆಟ್ ಹೋಯ್ತು. ಇದರ ಬಗ್ಗೆ ಮನೆಯ ಯಾವ ಸದಸ್ಯರು ವಿನಯ್ ಎದುರು ಪ್ರಶ್ನೆ ಮಾಡಿರಲಿಲ್ಲ. ಆದರೆ ಡ್ರೋನ್ ಪ್ರತಾಪ್ ಮಾಡಿದರು. ನೀವು ಮಾಡಿದ ತಪ್ಪಿನಿಂದಲೇ ಮನೆಯ ಸದಸ್ಯರಿಗೆ ಲಕ್ಷುರಿ ಬಜೆಟ್ ಹೋಯ್ತು ಎಂದರು. ಅದಕ್ಕೆ ಏನೀಗ? ಎಂದು ಬೆದರಿಕೆ ದ್ವನಿಯಲ್ಲಿ ವಿನಯ್ ಪ್ರತಿಕ್ರಿಯೆ ನೀಡಿದರು. ವಿನಯ್ ಯಾವ ಟೋನ್​ನಲ್ಲಿ ಉತ್ತರ ನೀಡಿದರೋ ಅದೇ ಟೋನ್​ನಲ್ಲಿ ಪ್ರತ್ಯುತ್ತರಗಳನ್ನು ಡ್ರೋನ್ ನೀಡಿದರು.

ಇದರಿಂದ ಸಿಟ್ಟಾದ ವಿನಯ್, ಬಳಿಕ ಶ್ರುತಿ ನಡೆಸಿಕೊಟ್ಟ ನ್ಯಾಯಾಲಯದಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ಹಲವು ದೂರುಗಳನ್ನು ಹೇಳಿದರು. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಡ್ರೋನ್ ಪ್ರತಾಪ್, ತಮ್ಮ ಮೇಲೆ ಬಂದ ಆರೋಪಗಳಿಗೆ ಸ್ಪಷ್ಟನೆಗಳನ್ನು ನೀಡಿದರು. ಡ್ರೋನ್ ಪ್ರತಾಪ್ ಬಿಗ್​ಬಾಸ್ ಮನೆಗೆ ಬಂದ ಆರಂಭದಲ್ಲಿ ನಾಚಿಕೆ ಸ್ವಭಾವದ, ಹೆದರಿಕೆ ಸ್ವಭಾವದ ವ್ಯಕ್ತಿಯಾಗಿದ್ದರು. ಆದರೆ ಈಗ ಹಾಗಿಲ್ಲ, ವಿನಯ್, ತುಕಾಲಿ ಸಂತೋಷ್ ಎಲ್ಲರಿಗೂ ಪ್ರತ್ಯುತ್ತರಗಳನ್ನು ಧೈರ್ಯದಿಂದ ನೀಡುತ್ತಿದ್ದಾರೆ. ಡ್ರೋನ್ ಪ್ರತಾಪ್ ಫಿನಾಲೆಗೆ ಬರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?