AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡಿಯೂರಿ ಕ್ಷಮೆ ಕೇಳಿದ ವಿನಯ್, ದ್ವೇಷ ಕರಗಿ ಮತ್ತೆ ಅರಳಿತು ಸ್ನೇಹ

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಮುರಿದ ಸಂಬಂಧಗಳು ಮರುಸ್ಥಾಪನೆಗೊಂಡಿವೆ. ವಿನಯ್ ಮಂಡಿಯೂರಿ ಕ್ಷಮೆ ಕೇಳಿದ್ದಾರೆ. ಬುಧವಾರದ ಎಪಿಸೋಡ್​ನಲ್ಲಿ ಏನೇನಾಯ್ತು?

ಮಂಡಿಯೂರಿ ಕ್ಷಮೆ ಕೇಳಿದ ವಿನಯ್, ದ್ವೇಷ ಕರಗಿ ಮತ್ತೆ ಅರಳಿತು ಸ್ನೇಹ
ಮಂಜುನಾಥ ಸಿ.
|

Updated on: Jan 24, 2024 | 11:24 PM

Share

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಫಿನಾಲೆ (Finale) ವಾರದಲ್ಲಿದೆ. ಮನೆಯಲ್ಲಿ ಆರು ಮಂದಿ ಉಳಿದಿದ್ದು, ಒಬ್ಬರನ್ನು ಕಂಡರೆ ಒಬ್ಬರಿಗಾಗದ ಕೆಲವರು ಮನೆಯಲ್ಲಿದ್ದಾರೆ. ಆದರೆ ಬುಧವಾರದ ಎಪಿಸೋಡ್​ನಲ್ಲಿ ಮನೆಯ ಸದಸ್ಯರು ಕಹಿಯನ್ನು ಮರೆತು ಪರಸ್ಪರ ಮತ್ತೆ ಸ್ನೇಹಿತರಾದರು. ಮನೆಯಿಂದ ಹೊರ ಹೋಗುವ ಕೆಲವೇ ದಿನಗಳ ಮುಂಚೆ ಎಲ್ಲರೂ ಮತ್ತೆ ಆತ್ಮೀಯವಾಗಿ ಬೆರೆತರು. ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಂಡರು. ಹೈಲೆಟ್ ಎಂದರೆ ಯಾವುದಕ್ಕೂ ಬಗ್ಗದ, ಜಗ್ಗದ ವಿನಯ್ ಮಂಡಿಯೂರಿ ಕ್ಷಮೆ ಕೇಳಿದರು.

ತಮ್ಮ ಪ್ರೀತಿ ಪಾತ್ರರಿಗೆ ಪತ್ರ ಬರೆದು ಅವರಿಗೆ ಉಡುಗೊರೆಯೊಂದನ್ನು ನೀಡುವ ಅವಕಾಶವನ್ನು ಬಿಗ್​ಬಾಸ್ ನೀಡಿದ್ದರು. ಅಂತೆಯೇ ಎಲ್ಲರೂ ಆಸಕ್ತಿಯಿಂದ ಪತ್ರ ಬರೆದರು. ಮೊದಲು ಪತ್ರ ಓದಿದ ಕಾರ್ತಿಕ್, ಸಂಗೀತಾ ಬಳಿ ಕ್ಷಮೆ ಕೇಳಿದರು. ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ ನಗುವೊಂದನ್ನು ಬಿಟ್ಟು ಎಂದು, ಅವರಿಗಾಗಿ ಒಂದು ಟಿ-ಶರ್ಟ್ ಉಡುಗೊರೆ ಕೊಟ್ಟರು.

ಸಂಗೀತಾ, ಸಹ ಕಾರ್ತಿಕ್​ಗಾಗಿಯೇ ಪತ್ರ ಬರೆದಿದ್ದರು. ನಾವು ಇಂದು ಗೆಳೆಯರಲ್ಲದೇ ಇರಬಹುದು ಆದರೆ ಆರಂಭದ ದಿನಗಳಲ್ಲಿ ನಾವಿಬ್ಬರೂ ಆತ್ಮೀಯ ಗೆಳೆಯರು. ನೀವು ಈ ಮನೆಯಲ್ಲಿ ನನಗೆ ಬಹಳಷ್ಟು ಸಹಾಯ ಮಾಡಿದ್ದೀರಿ. ನಾನು ಬೇಸರದಲ್ಲಿರುವಾಗ ನನಗೆ ಬಂದು ಸ್ಪೂರ್ತಿ ತುಂಬಿದ್ದೀರಿ. ನೀವು ನನಗಾಗಿ ಏನೂ ಮಾಡಿಲ್ಲವೆಂದು ನಾನು ಹೇಳಿದರೆ ಅದು ಸುಳ್ಳು ಹೇಳಿದಂತಾಗುತ್ತದೆ. ಜಗಳವಾಡಿದಾಗ ನೀವು ಕೊಟ್ಟಿದ್ದ ಲಿಪ್​ಸ್ಟಿಕ್ ಹಾಗೂ ಒಂದು ಜಾಕೆಟ್ ಅನ್ನು ಇಂದು ಉಡುಗೊರೆಯಾಗಿ ಕೊಡುತ್ತೇನೆ ಎಂದು ಹೇಳಿ ಕಣ್ಣೀರಾದರು ಸಂಗೀತಾ. ಕಾರ್ತಿಕ್ ಸಹ ಕಣ್ಣೀರಾಗಿ ಇಬ್ಬರೂ ಪರಸ್ಪರ ತಬ್ಬಿಕೊಂಡು ಸ್ನೇಹಕ್ಕೆ ಮರುಜೀವ ನೀಡಿದರು.

ಇದನ್ನೂ ಓದಿ:ಮಾಡಿದ ತಪ್ಪಿಗೆ ಬಿಗ್​ಬಾಸ್ ಮನೆಯಿಂದ ಕ್ಷಮೆ ಕೇಳಿದ ಡ್ರೋನ್ ಪ್ರತಾಪ್

ತುಕಾಲಿ ಹಾಗೂ ವರ್ತೂರು ಪರಸ್ಪರರಿಗೆ ಪತ್ರ ಬರೆದುಕೊಂಡರು. ವರ್ತೂರು ಬರೆದ ಪತ್ರಕ್ಕಿಂತಲೂ ತುಕಾಲಿ, ವರ್ತೂರಿಗಾಗಿ ಸುಂದರವಾದ ಪತ್ರ ಬರೆದಿದ್ದರು. ಅಲ್ಲದೆ, ತಮಗೆ ಸಿಕ್ಕ ಒಂದು ಉತ್ತಮ ಮೆಡಲ್ ಅನ್ನು ವರ್ತೂರು ಅವರಿಗೆ ನೀಡಿದರು. ಗೆಳೆತನವನ್ನು ಹೀಗೆಯೇ ಮುಂದುವರೆಸುವುದಾಗಿ ಹೇಳಿದರು. ಡ್ರೋನ್ ಪ್ರತಾಪ್, ಸಂಗೀತಾಗಾಗಿ ಪತ್ರ ಬರೆದು ಅವರಿಗೆ ಧನ್ಯವಾದ ಹೇಳಿದರು.

ಕೊನೆಯದಾಗಿ ಬಂದ ವಿನಯ್, ಕಾರ್ತಿಕ್​ಗೆ ಪತ್ರ ಬರೆದು, ತಮ್ಮ ಹತ್ತು ವರ್ಷಗಳ ಗೆಳೆತನ ನೆನಪಿಸಿಕೊಂಡರು. ಕಾರ್ತಿಕ್ ಸಹ, ತಮ್ಮ ಬಳಿ ಹಣ ಇಲ್ಲದಾಗ ಹೇಗೆ ವಿನಯ್ ತಮಗೆ ಸಹಾಯ ಮಾಡಿದ್ದ ಎಂಬುದನ್ನು ನೆನಪಿಸಿಕೊಂಡು ಭಾವುಕರಾದರು. ಕೊನೆಗೆ ವಿನಯ್, ಈ ಮನೆಯಲ್ಲಿ ನಾವೆಲ್ಲರೂ ಬಹಳ ಜಗಳ ಮಾಡಿದ್ದೇವೆ. ನಾನಂತೂ ಬಹಳ ಜನಕ್ಕೆ ಬೇಸರ ಮಾಡಿದ್ದೇನೆ. ನನ್ನಿಂದ ಸಾಕಷ್ಟು ತಪ್ಪುಗಳಾಗಿವೆ. ಆ ತಪ್ಪುಗಳನ್ನೆಲ್ಲ ಮರೆತುಬಿಡಿ ಎಂದು ಮಂಡಿಯೂರಿ ಕೈಮುಗಿದು ಎಲ್ಲರ ಬಳಿ ಕ್ಷಮೆ ಕೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ