AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೋನ್ ಪ್ರತಾಪ್ ಕಳಪೆ, ನಮ್ರತಾ ಉತ್ತಮ: ಕ್ಯಾಪ್ಟನ್ ಆಗಿದ್ದು ಯಾರು?

Bigg Boss 10: ಈ ಬಾರಿ ಕೆಲವು ಕೆಟ್ಟ ನಿರ್ಣಯಗಳಿಂದ ತಂಡದ ಸೋಲಿಗೆ ಕಾರಣವಾದ ಡ್ರೋನ್ ಪ್ರತಾಪ್​ಗೆ ಕಳಪೆ ಕೊಟ್ಟರೆ, ಉತ್ತಮವಾಗಿ ಆಡಿದ ನಮ್ರತಾ ಉತ್ತಮ ಎನಿಸಿಕೊಂಡರು. ಮನೆಯ ಕ್ಯಾಪ್ಟನ್ ಯಾರಾದರು?

ಡ್ರೋನ್ ಪ್ರತಾಪ್ ಕಳಪೆ, ನಮ್ರತಾ ಉತ್ತಮ: ಕ್ಯಾಪ್ಟನ್ ಆಗಿದ್ದು ಯಾರು?
Follow us
ಮಂಜುನಾಥ ಸಿ.
|

Updated on: Dec 01, 2023 | 11:48 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ಶುಕ್ರವಾರದ ಎಪಿಸೋಡ್ ಆ ವಾರದ ಕಳಪೆ ಹಾಗೂ ಉತ್ತಮ ಯಾರೆಂಬುದನ್ನು ಗುರುತಿಸುವ ಹಾಗೂ ಮನೆಯ ಮುಂದಿನ ವಾರದ ಕ್ಯಾಪ್ಟನ್ ಅನ್ನು ಆಯ್ಕೆ ಮಾಡುವ ಎಪಿಸೋಡ್ ಆಗಿರುತ್ತದೆ. ಬಿಗ್​ಬಾಸ್ ಮನೆಯ ಜನಪ್ರಿಯ ಸ್ಪರ್ಧಿ ಆಗಿರುವ ಡ್ರೋನ್ ಪ್ರತಾಪ್​ಗೆ ಈ ವಾರದ ಕಳಪೆಯನ್ನು ಬಹುತೇಕ ಬಿಗ್​ಬಾಸ್ ಮನೆ ಸದಸ್ಯರು ನೀಡಿದರು. ಮೊದಲಲ್ಲೇ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರದಬ್ಬಿಸಿಕೊಂಡ ನಮ್ರತಾ ಮನೆಯವರಿಂದ ಉತ್ತಮ ಪಡೆದುಕೊಂಡರು.

ಡ್ರೋನ್ ಪ್ರತಾಪ್ ಈ ವಾರ ತಂಡದ ಲೀಡರ್ ಆಗಿ ತೆಗೆದುಕೊಂಡ ನಿರ್ಧಾರಗಳು ಹಲವರಿಗೆ ಇಷ್ಟವಾಗಲಿಲ್ಲ. ಆರಂಭದಲ್ಲಿಯೇ ತಂಡದ ಪ್ರಬಲ ಆಟಗಾರ ಕಾರ್ತಿಕ್ ಅನ್ನು ಕ್ಷುಲ್ಲಕ ಕಾರಣಕ್ಕೆ ತಂಡದಿಂದ ಹೊರಗಿಟ್ಟು ತಮ್ಮ ತಂಡವನ್ನು ತಾವೇ ವೀಕ್ ಮಾಡಿಕೊಂಡರು. ಬಳಿಕ ನಮ್ರತಾರಿಗೆ ಮಾತುಕೊಟ್ಟು ತಮ್ಮ ತಂಡಕ್ಕೆ ಕರೆದುಕೊಂಡು ಬಂದಿದ್ದ ಪ್ರತಾಪ್ ಮೊದಲಲ್ಲೇ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟರು. ಅಲ್ಲದೆ ಇನ್ನೂ ಕೆಲವು ಹಂತಗಳಲ್ಲಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾದರು. ಹಾಗಾಗಿ ಅವರ ತಂಡ ಪ್ರಬಲ ಹೋರಾಟವೇ ಇಲ್ಲದೆ ಎದುರಾಳಿ ತಂಡದ ವಿರುದ್ಧ ಸೋತಿತು.

ಇದನ್ನೋ ಓದಿ:ಕಿವಿ ಹಿಡಿದು ಮಂಡಿ ಬಗ್ಗಿಸಿ ಬಿಗ್​ಬಾಸ್​ಗೆ ಕ್ಷಮೆ ಕೇಳಿದ ಡ್ರೋನ್ ಪ್ರತಾಪ್: ಮಾಡಿದ ತಪ್ಪೇನು?

ಇದೇ ಕಾರಣಕ್ಕೆ, ಕಾರ್ತಿಕ್, ನಮ್ರತಾ, ವಿನಯ್, ಮೈಖಲ್, ಪವಿ, ಡ್ರೋನ್​ರ ಸ್ನೇಹಿತರೇ ಆಗಿರುವ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರುಗಳು ಸಹ ಪ್ರತಾಪ್​ಗೆ ಕಳಪೆ ಪಟ್ಟ ನೀಡಿದರು. ಸಂಗೀತಾ, ತುಕಾಲಿ ಅವರಿಗೆ ಕಳಪೆ ಕೊಟ್ಟರೆ, ಸಿರಿ ಅವರು ಸ್ನೇಹಿತ್​ಗೆ ಕಳಪೆ ನೀಡಿದರು. ಡ್ರೋನ್ ಪ್ರತಾಪ್, ವಿನಯ್​ಗೆ ಕಳಪೆ ಪಟ್ಟ ನೀಡಿದರು. ಉತ್ತಮವನ್ನು ಅವರು ನಮ್ರತಾ ಅವರಿಗೇ ಕೊಟ್ಟರು. ಇನ್ನು ಮನೆಯ ಹಲವು ಸದಸ್ಯರು ಈ ವಾರ ಚೆನ್ನಾಗಿ ಆಡಿದ ನಮ್ರತಾಗೆ ಉತ್ತಮ ನೀಡಿದರು. ಸಿರಿ ಅವರಿಗೂ ಒಂದು ಉತ್ತಮ ಬಂದರೆ, ಪವಿ ಅವರಿಗೆ ಸಂಗೀತಾ ಉತ್ತಮ ನೀಡಿದರು. ಸ್ನೇಹಿತ್​ಗೆ ಮೈಖಲ್ ಉತ್ತಮ ನೀಡಿದರು.

ಇನ್ನು ಕ್ಯಾಪ್ಟೆನ್ಸಿ ಟಾಸ್ಕ್​ನ ಕೊನೆಯ ಟಾಸ್ಕ್​ನಲ್ಲಿ ತನಿಷಾ ಪರವಾಗಿ ನಮ್ರತಾ ಆಡಿದರು. ಎದುರಾಳಿಯಾಗಿ ಇದ್ದಿದ್ದು ಸ್ನೇಹಿತ್. ತುಸು ಸರಳವಾಗಿಯೇ ಇದ್ದ ಆ ಟಾಸ್ಕ್​ನಲ್ಲಿ ಆರಂಭದಲ್ಲಿ ನಮ್ರತಾ ಮುಂದಿದ್ದರು, ಆದರೆ ಮೈಖಲ್​ರ ಸಲಹೆಯಂತೆ ಆಟದಲ್ಲಿ ಬದಲಾವಣೆ ಮಾಡಿಕೊಂಡ ಸ್ನೇಹಿತ್ ಸುಲಭಕ್ಕೆ ಗೆದ್ದು ಮನೆಯ ಕ್ಯಾಪ್ಟನ್ ಆದರು. ಗೆಲುವನ್ನು ವಿನಯ್​ಗೆ ಅರ್ಪಿಸಿದರು. ವಿನಯ್​ ಅನ್ನು ತನ್ನ ಅಣ್ಣ ಎಂದು ಕರೆಯುತ್ತಾ ಭಾವುಕರಾಗಿ ಕಣ್ಣೀರು ಸಹ ಹಾಕಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು