AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್ ವಿನ್ ಆಗೋದು ನಾನೇ’ ಎಂದ ವಿನಯ್; ಬೆಂಬಲ ಸೂಚಿಸಿದ ಸ್ನೇಹಿತ್​ಗೆ ವೀಕ್ಷಕರ ಪ್ರಶ್ನೆ

ವಿನಯ್ ತಪ್ಪು ಮಾಡಿದರೂ ಸ್ನೇಹಿತ್ ಅದನ್ನು ಬೆಂಬಲಿಸುತ್ತಾರೆ. ಈ ಬಗ್ಗೆ ಸುದೀಪ್ ಅವರು ಅನೇಕ ಬಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ನಾನೇ ಬಿಗ್ ಬಾಸ್ ವಿನ್ ಆಗೋದು’ ಎಂದು ವಿನಯ್ ಹೇಳಿದಾಗ ಸ್ನೇಹಿತ್​​ಗೆ ಸಖತ್ ಖುಷಿ ಆಗಿದೆ.

‘ಬಿಗ್ ಬಾಸ್ ವಿನ್ ಆಗೋದು ನಾನೇ’ ಎಂದ ವಿನಯ್; ಬೆಂಬಲ ಸೂಚಿಸಿದ ಸ್ನೇಹಿತ್​ಗೆ ವೀಕ್ಷಕರ ಪ್ರಶ್ನೆ
ಬಿಗ್ ಬಾಸ್ ಸ್ಪರ್ಧಿಗಳು
ರಾಜೇಶ್ ದುಗ್ಗುಮನೆ
|

Updated on: Dec 02, 2023 | 8:13 AM

Share

ವಿನಯ್ ಗೌಡ (Vinay Gowda) ಅವರನ್ನು ಸ್ನೇಹಿತ್ ಸದಾ ಬೆಂಬಲಿಸುತ್ತಾ ಬರುತ್ತಿದ್ದಾರೆ. ಹೊರಗಿನಿಂದ ನೋಡುವವರಿಗೆ ಇದು ಬೇರೆಯದೇ ರೀತಿಯಲ್ಲಿ ಕಾಣುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಸುದೀಪ್ ಅವರು ಅನೇಕ ಬಾರಿ ಸ್ನೇಹಿತ್​ಗೆ ಕಿವಿಮಾತು ಹೇಳಿದ್ದಾರೆ. ಆದರೂ ಅವರು ಬದಲಾಗುವ ರೀತಿಯಲ್ಲಿ ಕಾಣುತ್ತಿಲ್ಲ. ‘ಬಿಗ್ ಬಾಸ್​ನ ನಾನು ವಿನ್ ಆಗ್ತೀನಿ’ ಎಂದು ವಿನಯ್ ಹೇಳಿದ್ದಾರೆ. ಇದಕ್ಕೆ ಸ್ನೇಹಿತ್ ಬೆಂಬಲ ಸೂಚಿಸಿದ್ದಾರೆ. ‘ಗೆಲ್ಲೋ ಹಂಬಲ ಇಲ್ಲ ಎಂದಾದರೆ ಮತ್ಯಾಕೆ ಬಿಗ್ ಬಾಸ್​ನಲ್ಲಿ ಇದ್ದೀರಿ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸ್ನೇಹಿತ್​ನ ಪ್ರಶ್ನೆ ಮಾಡಿದ್ದಾರೆ.

‘ಬಿಗ್ ಬಾಸ್’ನಲ್ಲಿ ವಿನಯ್ ಚಮಚಾ ರೀತಿ ಸ್ನೇಹಿತ್ ವರ್ತಿಸುತ್ತಿದ್ದರು. ಇದರ ಬಗ್ಗೆ ಅನೇಕರು ಅಸಮಾಧಾನ ತೋಡಿಕೊಂಡಿದ್ದರು. ಸುದೀಪ್ ಕೂಡ ಈ ನಡೆಯ ಬಗ್ಗೆ ಪ್ರಶ್ನೆ ಮಾಡಿದ್ದರು. ಆದರೂ ಅವರು ಬದಲಾಗುವ ಸೂಚನೆ ಸಿಗುತ್ತಿಲ್ಲ. ಈಗ ವಿನಯ್ ಅವರು ತಾವು ಬಿಗ್ ಬಾಸ್ ವಿನ್ನರ್ ಎಂದು ಘೋಷಿಸಿದ್ದಾರೆ. ಸ್ನೇಹಿತ್ ಅವರು ಈ ಮಾತಿಗೆ ಖುಷಿಯಾಗಿದ್ದಾರೆ.

ಸ್ನೇಹಿತ್, ವಿನಯ್, ನಮ್ರತಾ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಈ ಗ್ಯಾಂಗ್​ನಿಂದ ಹೊರ ಬಂದು ಆಟ ಆಡಿದ್ದಾರೆ ನಮ್ರತಾ. ಸ್ನೇಹಿತ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ‘ನಾವು ಮೂರು ಜನ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿದ್ದೇವೆ’ ಎಂದರು ಸ್ನೇಹಿತ್. ‘ಟಾಪ್​ ಮೂರರಲ್ಲಿ ಇದ್ದಿದ್ದು ನಾವೇ’ ಎಂದು ವಿನಯ್ ಖುಷಿಪಟ್ಟರು. ಅಲ್ಲದೆ ಈ ವಾರ ಯಾರಿಗೂ ಅನ್ಯಾಯ ಮಾಡಿಲ್ಲ ಎಂಬ ಖುಷಿ ಇದೆ.

ಇದನ್ನೂ ಓದಿ: ‘ಬಳೆ ಹಾಕ್ಕೊಂಡಿಲ್ಲ ಎಂದಿದ್ದು ದೊಡ್ಡ ವಿಷಯ ಆಗೋಯ್ತು’; ವಿನಯ್​ಗೆ ಇನ್ನೂ ಅರಿವಾಗಿಲ್ಲ ಗಂಭೀರತೆ?

‘ಫಿನಾಲೆಯಲ್ಲಿ ಟಾಪ್​ 3ಗೆ ನಾವೇ ಹೋಗಬೇಕು’ ಎಂದು ಸ್ನೇಹಿತ್ ಹೇಳಿದರು. ‘ಯೆಸ್ ನಾವು ಮೂರು ಜನ ಹೋಗುತ್ತೇವೆ. ಆದರೆ, ಅಲ್ಲಿ ವಿನ್ ಆಗೋದು ನಾನೇ’ ಎಂದರು ವಿನಯ್. ‘ನೀವು ವಿನ್ ಆದ್ರೆ ನನಗಿಂತ ಹೆಚ್ಚು ಖುಷಿಪಡುವವರು ಮತ್ತೊಬ್ಬರು ಇರಲ್ಲ’ ಎಂದರು. ಈ ಮಾತು ಚರ್ಚೆ ಆಗುತ್ತಿದೆ. ‘ಮತ್ತೊಬ್ಬರಿಗೆ ಗೆಲುವನ್ನು ಬಿಟ್ಟುಕೊಡಲು ಸಿದ್ಧರಿರುವಾಗ ಆಟ ಆಡೋದು ಏಕೆ’ ಎಂದು ಅನೇಕರು ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು