AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಬಿಗ್​ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್​ಗೆ ಎಷ್ಟನೆ ಸ್ಥಾನ?

Bigg Boss: ಬಿಗ್​ಬಾಸ್​ ನಲ್ಲಿ ಕಳೆದ ವಾರ ಡ್ರೋನ್ ಪ್ರತಾಪ್ ಅತಿ ಹೆಚ್ಚು ಮತ ಗಳಿಸಿದ್ದರು. ಹಾಗಿದ್ದರೆ ಈ ವಾರ ಯಾರಿಗೆ ಅತಿ ಹೆಚ್ಚು ಮತ ಬಂದಿದೆ? ಸುದೀಪ್ ನೀಡಿದರು ಮಾಹಿತಿ.

ಈ ವಾರ ಬಿಗ್​ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್​ಗೆ ಎಷ್ಟನೆ ಸ್ಥಾನ?
ಬಿಗ್​ಬಾಸ್
ಮಂಜುನಾಥ ಸಿ.
|

Updated on: Dec 02, 2023 | 11:49 PM

Share

ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ (Bigg Boss) ಮತ್ತೊಂದು ವಾರಾಂತ್ಯ ಬಂದಿದೆ. ಕಿಚ್ಚನ ವೀಕೆಂಡ್ ಪಂಚಾಯ್ತಿ ಶುರುವಾಗಿದೆ. ಶನಿವಾರದ ಎಪಿಸೋಡ್​ಗೆ ಆಗಮಿಸಿದ್ದ ಕಿಚ್ಚ ಸುದೀಪ್ ಮನೆಯ ಸದಸ್ಯರು ವಾರಪೂರ್ತಿ ಮಾಡಿದ ಆಡಿದ ಆಟ, ಆಡಿದ ರೀತಿ ಇನ್ನಿತರೆ ವಿಚಾರಗಳನ್ನು ಇಟ್ಟುಕೊಂಡು ಚರ್ಚಿಸಿದರು. ಡ್ರೋನ್ ಪ್ರತಾಪ್​ ಕಳೆದ ವಾರ ತಂಡದ ಲೀಡರ್ ಆಗಿದ್ದಾಗ ತೆಗೆದುಕೊಂಡ ನಿರ್ಣಯಗಳನ್ನು ವಿಮರ್ಶಿಸಿದ ಕಿಚ್ಚು ಸುದೀಪ್, ಚೆನ್ನಾಗಿ ಆಡಿದ ನಮ್ರತಾ ಗೌಡ ಅವರಿಗೆ ಚಪ್ಪಾಳೆ ನೀಡಿದರು.

ಪ್ರತಿ ವಾರಾಂತ್ಯದಲ್ಲಿಯೂ ಭಾನುವಾರದಂದು ಎಲಿಮಿನೇಷನ್ ಪ್ರಕ್ರಿಯೆ ಪೂರ್ಣವಾಗುತ್ತದೆಯಾದರೂ ಆ ಪ್ರಕ್ರಿಯೆ ಶನಿವಾರವೇ ಪ್ರಾರಂಭವಾಗುತ್ತದೆ. ಪ್ರತಿಬಾರಿ ನಿರ್ದಿಷ್ಟ ಕ್ರಮಾಂಕವಿಲ್ಲದೆ ಎಲಿಮಿನೇಷನ್​ನಿಂದ ಪಾರಾದವರ ಹೆಸರುಗಳನ್ನು ಸುದೀಪ್ ಹೇಳುತ್ತಿದ್ದರು. ಆದರೆ ಕಳೆದ ವಾರದಿಂದ ಪಡೆದ ಮತಗಳ ಆಧಾರದಲ್ಲಿ ಎಲಿಮಿನೇಷನ್​ನಿಂದ ಪಾರಾದವರ ಹೆಸರುಗಳನ್ನು ಸುದೀಪ್ ಹೇಳುತ್ತಿದ್ದಾರೆ. ಕಳೆದ ವಾರ ಡ್ರೋನ್ ಪ್ರತಾಪ್ ಅತಿ ಹೆಚ್ಚು ಮತ ಪಡೆದು ಮೊದಲು ಸೇವ್ ಆಗಿದ್ದರು. ಆದರೆ ಈ ವಾರ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ.

ಈ ವಾರ ವಿನಯ್, ಡ್ರೋನ್ ಪ್ರತಾಪ್, ನಮ್ರತಾ ಗೌಡ, ಸ್ನೇಹಿತ್, ತನಿಷಾ, ಸಂಗೀತಾ, ವರ್ತೂರು ಸಂತೋಷ್, ಮೈಖಲ್ ಅವರುಗಳು ನಾಮಿನೇಟ್ ಆಗಿದ್ದರು. ಇವರಲ್ಲಿ ಶನಿವಾರದ ಎಪಿಸೋಡ್​ನಲ್ಲಿ ಮೂವರು ಸೇಫ್ ಆದರು. ಆ ಮೂವರ ಹೆಸರನ್ನು ಅವರು ಪಡೆದುಕೊಂಡ ಮತಗಳ ಆಧಾರದಲ್ಲಿ ನೀಡಲಾಯ್ತು. ಯಾರು ಹೆಚ್ಚು ಮತ ಪಡೆದಿದ್ದಾರೆಯೋ ಅವರ ಹೆಸರನ್ನು ಮೊದಲಿಗೆ ಘೋಷಿಸಲಾಯ್ತು. ಅದರಂತೆ ಮೊದಲು ಸುದೀಪ್ ಅವರು ಹೇಳಿದ ಹೆಸರು ವರ್ತೂರು ಸಂತೋಷ್ ಅವರದ್ದು. ಕಳೆದ ಬಾರಿ ಡ್ರೋನ್ ಅವರಿಗೆ ಹೆಚ್ಚು ಬಂದಿತ್ತು ಈ ವಾರ ವರ್ತೂರು ಸಂತೋಷ್​ಗೆ ಹೆಚ್ಚು ಮತಗಳು ಬಂದು ಅವರು ಮೊದಲಿಗೆ ಸೇಫ್ ಆದರು.

ಇದನ್ನೂ ಓದಿ:ಸುದೀಪ್​ ಮಾತಿಗೂ ಬೆಲೆ ಕೊಡಲಿಲ್ಲ ಬಿಗ್​ ಬಾಸ್​ ಮಂದಿ; ಮಿತಿ ಮೀರಿ ಇಂಗ್ಲಿಷ್​ ಬಳಸಿದ್ದಕ್ಕೆ ಈಗ ಕಠಿಣ ಶಿಕ್ಷೆ

ವರ್ತೂರು ಸಂತೋಷ್ ಬಳಿಕ ಹೆಚ್ಚು ಮತ ಪಡೆದು ಎರಡನೇ ಸ್ಥಾನದಲ್ಲಿರುವುದು ನಮ್ರತಾ ಗೌಡ. ಕಳೆದ ವಾರ ಐದರ ಬಳಿಕದ ಸ್ಥಾನದಲ್ಲಿದ್ದ ನಮ್ರತಾ ಈ ವಾರ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಈ ವಾರ ಉತ್ತಮ ಪ್ರಶಸ್ತಿ ಸಹ ಪಡೆದು, ಕಿಚ್ಚನ ಚಪ್ಪಾಳೆಯನ್ನೂ ಪಡೆದಿರುವ ನಮ್ರತಾ ಹೆಚ್ವು ಮತಗಳು ಬಂದಿರುವುದನ್ನು ಸಹ ಸಖತ್ ಎಂಜಾಯ್ ಮಾಡಿದರು. ಎಲ್ಲರಿಗೂ ಧನ್ಯವಾದವನ್ನೂ ಸಹ ಹೇಳಿದರು. ಇನ್ನು ಮತಗಳ ಆಧಾರದಲ್ಲಿ ಮೂರನೇ ಸ್ಥಾನದಲ್ಲಿರುವುದು ಡ್ರೋನ್ ಪ್ರತಾಪ್. ಕಳೆದ ವಾರ ನಂಬರ್ 1 ಸ್ಥಾನದಲ್ಲಿದ್ದ ಡ್ರೋನ್ ಪ್ರತಾಪ್ ಈ ವಾರ ಮೂರನೇ ಸ್ಥಾನಕ್ಕೆ ಬಂದಿದ್ದಾರೆ.

ಇನ್ನು ವಿನಯ್ ಗೌಡ, ಸ್ನೇಹಿತ್ ಗೌಡ, ಸಂಗೀತಾ, ಮೈಖಲ್ ಹಾಗೂ ತನಿಷಾ ಅವರುಗಳು ಎಲಿಮಿನೇಷನ್ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಮನೆಗೆ ಹೋಗಲಿದ್ದಾರೆ. ಎಲ್ಲರೂ ಗಟ್ಟಿ ಕಂಟೆಸ್ಟ್​ಗಳೇ ಆಗಿದ್ದಾರೆ. ಇಷ್ಟರಲ್ಲಿ ಯಾರು ಮನೆಗೆ ಹೋಗಲಿದ್ದಾರೆ ಎಂಬುದು ನಾಳೆ ಅಂದರೆ ಭಾನುವಾರದ ಎಪಿಸೋಡ್​ನಲ್ಲಿ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!