AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ ಮಾತಿಗೂ ಬೆಲೆ ಕೊಡಲಿಲ್ಲ ಬಿಗ್​ ಬಾಸ್​ ಮಂದಿ; ಮಿತಿ ಮೀರಿ ಇಂಗ್ಲಿಷ್​ ಬಳಸಿದ್ದಕ್ಕೆ ಈಗ ಕಠಿಣ ಶಿಕ್ಷೆ

ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಹೆಚ್ಚಾಗಿ ಮಾತಾಡುವಂತಿಲ್ಲ ಎಂದು ಕಿಚ್ಚ ಸುದೀಪ್​ ಅವರು ವೀಕೆಂಡ್​ ಸಂಚಿಕೆಯಲ್ಲಿ ಹೇಳಿದ್ದರು. ಆದರೂ ಕೂಡ ಬಿಗ್​ ಬಾಸ್​ ಮನೆಯ ಸದಸ್ಯರು ಸುದೀಪ್​ ಅವರ ಮಾತಿಗೆ ಬೆಲೆ ನೀಡಿಲ್ಲ. ಮತ್ತೆ ಮತ್ತೆ ಇಂಗ್ಲಿಷ್​ನಲ್ಲಿ ಮಾತನಾಡಿದ್ದಕ್ಕೆ 8ನೇ ವಾರದಲ್ಲಿ ಎಲ್ಲರಿಗೂ ಕಠಿಣವಾದ ಶಿಕ್ಷೆಗಳನ್ನು ನೀಡಲಾಗಿದೆ.

ಸುದೀಪ್​ ಮಾತಿಗೂ ಬೆಲೆ ಕೊಡಲಿಲ್ಲ ಬಿಗ್​ ಬಾಸ್​ ಮಂದಿ; ಮಿತಿ ಮೀರಿ ಇಂಗ್ಲಿಷ್​ ಬಳಸಿದ್ದಕ್ಕೆ ಈಗ ಕಠಿಣ ಶಿಕ್ಷೆ
ಕಿಚ್ಚ ಸುದೀಪ್​
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on:Nov 28, 2023 | 6:10 AM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಸ್ಪರ್ಧಿಗಳು ಹೆಚ್ಚಾಗಿ ಇಂಗ್ಲಿಷ್​ ಬಳಸುತ್ತಿದ್ದಾರೆ. ಅದಕ್ಕೆ ಈಗಾಗಲೇ ಕಿಚ್ಚ ಸುದೀಪ್​ (Kichcha Sudeep) ಅವರು ಕ್ಲಾಸ್​ ತೆಗೆದುಕೊಂಡಿದ್ದರು. ಹಾಗಿದ್ದರೂ ಕೂಡ ಅನೇಕರು ಆ ಮಾತಿಗೆ ಬೆಲೆ ಕೊಟ್ಟಿಲ್ಲ. ಮತ್ತೆ ಮತ್ತೆ ಹೆಚ್ಚಾಗಿ ಇಂಗ್ಲಿಷ್​ನಲ್ಲಿ ಮಾತನಾಡುವುದನ್ನು ಅನೇಕರು ಮುಂದುವರಿಸಿದ್ದಾರೆ. ಅದಕ್ಕಾಗಿ ದೊಡ್ಮನೆಯ ಮಂದಿಗೆ ಬಿಗ್​ ಬಾಸ್​ ಕಡೆಯಿಂದ ಕಠಿಣ ಶಿಕ್ಷೆ ನೀಡಲಾಗಿದೆ. ಸ್ನೇಹಿತ್​ ಗೌಡ, ನಮ್ರತಾ ಗೌಡ, ಸಂಗೀತಾ ಶೃಂಗೇರಿ, ವಿನಯ್​ ಗೌಡ, ಸಿರಿ ಮುಂತಾದವರು ಹೆಚ್ಚಾಗಿ ಇಂಗ್ಲಿಷ್​ನಲ್ಲಿ (English) ಮಾತನಾಡುತ್ತಾರೆ. ಇವರೆಲ್ಲ ಮಾಡಿದ ತಪ್ಪಿಗೆ ಇಡೀ ಮನೆಮಂದಿಗೆ ಶಿಕ್ಷೆ ಆಗಿದೆ.

ಬಿಗ್​ ಬಾಸ್​ ಮನೆಯೊಳಗೆ 7ನೇ ವಾರ ಮೂರು ತಪ್ಪು ನಡೆದಿದ್ದವು. ಜೈಲು ಸೇರಿದ್ದ ವರ್ತೂರು ಸಂತೋಷ್​ ಅವರು ತರಕಾರಿ ಹೆಚ್ಚಬೇಕಿತ್ತು. ಆ ನಿಯಮ ಉಲ್ಲಂಘಿಸಿ ಬೇರೆ ಸ್ಪರ್ಧಿಗಳು ತರಕಾರಿ ಕಟ್​ ಮಾಡಿದ್ದರು. ಬೇರೆ ಕೆಲಸಕ್ಕೆ ತೆರಳಿದ್ದಾಗ ಗ್ಯಾಸ್​ ಆಫ್​ ಮಾಡಬೇಕು ಎಂಬುದು ಸಾಮಾನ್ಯ ಪ್ರಜ್ಞೆ. ಅದನ್ನು ಕೂಡ ಕೆಲವರು ಉಲ್ಲಂಘಿಸಿದ್ದಾರೆ. ಇದರ ಜೊತೆಗೆ ಇಂಗ್ಲಿಷ್​ ಬಳಸುವುದು ಕೂಡ ಜಾಸ್ತಿ ಆಗಿದೆ. ಅದನ್ನು ಬಿಗ್​ ಬಾಸ್​ ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗಾಗಿ ಇನ್ಮುಂದೆ ಪ್ರತಿ ದಿನ ಕೇವಲ 45 ನಿಮಿಷ ಮಾತ್ರ ಅಡುಗೆ ಮಾಡಲು ಗ್ಯಾಸ್​ ಆನ್​ ಮಾಡುವುದಾಗಿ ತಿಳಿಸಿದ್ದಾರೆ. 45 ನಿಮಿಷದ ಒಳಗೆ ಬಿಗ್​ ಬಾಸ್​ ಸ್ಪರ್ಧಿಗಳು ಅಡುಗೆ ಮಾಡಿಕೊಳ್ಳಬೇಕು. ಇದರಿಂದ ಎಲ್ಲರಿಗೂ ತೊಂದರೆ ಆಗಿದೆ. ಅಲ್ಲದೇ, ಈ ವಾರ ಬಿಗ್​ ಬಾಸ್​ ಸ್ಪರ್ಧಿಗಳು ಗಳಿಸಿದ್ದ ದಿನಸಿ ವಸ್ತುಗಳ ಪೈಕಿ ನಾಲ್ಕು ಬಾಸ್ಕೆಟ್​ ಹಿಂದಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: BBK 10: ಸುದೀಪ್​ ಎದುರಲ್ಲೇ ಬಿಗ್​ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ; ಹೆಚ್ಚಾಗಿದೆ ಕಾವು

ಕನ್ನಡವನ್ನು ಬಿಟ್ಟು ಬೇರೆ ಭಾಷೆಯನ್ನು ಹೆಚ್ಚಾಗಿ ಮಾತನಾಡಬಾರದು ಎಂದು ಕಿಚ್ಚ ಸುದೀಪ್​ ಅವರು ಹೇಳಿದ್ದರೂ ಕೂಡ ಬಿಗ್​ ಬಾಸ್​ ಮಂದಿ ಅದಕ್ಕೆ ಬೆಲೆ ನೀಡಿಲ್ಲ. ಪದೇ ಪದೇ ಇಂಗ್ಲಿಷ್​ ಬಳಸಿದ್ದಕ್ಕಾಗಿ ಒಬ್ಬರನ್ನು ನೇರವಾಗಿ ನಾಮಿನೇಟ್​ ಮಾಡಲಾಗಿದೆ. ಎಲ್ಲರಿಗಿಂತ ಹೆಚ್ಚು ಸ್ನೇಹಿತ್ ಅವರು ಇಂಗ್ಲಿಷ್​ನಲ್ಲಿ ಮಾತನಾಡಿದ್ದಾರೆ. ಹಾಗಾಗಿ ಅವರು 8ನೇ ವಾರದ ಎಲಿಮಿನೇಷನ್​ಗೆ ನೇರವಾಗಿ ನಾಮಿನೇಟ್​ ಆಗಿದ್ದಾರೆ. ನಮ್ರತಾ, ಸಂಗೀತಾ, ವಿನಯ್​, ಸಿರಿ ಕೂಡ ಜಾಸ್ತಿ ಇಂಗ್ಲಿಷ್​ ಬಳಸಿದ್ದಾರೆ. ಆದರೆ ಎಲ್ಲರೂ ಸೇರಿ ಸ್ನೇಹಿತ್​ನ ಶಿಕ್ಷೆಗೆ ಗುರಿ ಮಾಡಿದ್ದಾರೆ.

ಇದನ್ನೂ ಓದಿ: BBK 10: ಬಿಗ್​ ಬಾಸ್​ ಮನೆಯಲ್ಲಿ ಅತಿಯಾಗಿ ಇಂಗ್ಲಿಷ್​ ಮಾತಾಡುವ ಮಂದಿಗೆ ಕಿಚ್ಚ ಸುದೀಪ್​ ಕ್ಲಾಸ್​

‘ಇಲ್ಲಿ ಎಲ್ಲರಿಗೂ ಕನ್ನಡ ಬರುತ್ತದೆ. ಬಾರದೇ ಇರುವವರು ಕೂಡ ಕಲಿತು ಮಾತಾಡುತ್ತಿದ್ದಾರೆ. ಇಂಗ್ಲಿಷ್​ ಜಾಸ್ತಿ ಬಳಸಬಾರದು ಎಂಬ ಗಂಭೀರ ಆದೇಶ ಇದ್ದರೂ ಕೂಡ ಮತ್ತೆ ಮತ್ತೆ ಉಲ್ಲಂಘನೆ ಮಾಡಿದ್ದು ಎಷ್ಟು ಸರಿ’ ಎಂದು ಬಿಗ್​ ಬಾಸ್​ ಪ್ರಶ್ನಿಸಿದರು. ‘ಹೌದು, ಇದು ತಪ್ಪು’ ಎಂದು ಎಲ್ಲ ಸ್ಪರ್ಧಿಗಳು ಒಪ್ಪಿಕೊಂಡರು. ಮೈಕೆಲ್​ ಅವರು ಕನ್ನಡ ಕಲಿತು ಮಾತನಾಡಿ ಕಿಚ್ಚ ಸುದೀಪ್​ ಅವರಿಂದ ಚಪ್ಪಾಳೆ ಪಡೆದಿದ್ದರು. ಈಗ ಸ್ನೇಹಿತ್​ಗೆ ಮೈಕೆಲ್​ ಬುದ್ಧಿಮಾತು ಹೇಳಿದ್ದಾರೆ. ‘ನೀನು ಅತಿ ಹೆಚ್ಚು ಪ್ರಯತ್ನ ಮಾಡಬೇಕು’ ಎಂದು ಸ್ನೇಹಿತ್​ಗೆ ಅವರು ಸೂಚನೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:58 pm, Mon, 27 November 23

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್