AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚನ ಎದುರೇ ರಜತ್​​ಗೆ ಸವಾಲು ಹಾಕಿದ ಗಿಲ್ಲಿ, ಭೇಷ್ ಎಂದ ಅಶ್ವಿನಿ

Bigg Boss Kannada 12: ರಜತ್ ವಿರುದ್ಧವಂತೂ ಬಿಗ್​​ಬಾಸ್ ಮನೆ ಒಂದಾದಂತಿದೆ. ರಜತ್, ಗಿಲ್ಲಿಯ ಜನಪ್ರಿಯತೆ ಬಗ್ಗೆ ಅರಿವಿದ್ದ ಅವರು, ಗಿಲ್ಲಿ ಜೊತೆಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು, ಆದರೆ ಕಳೆದ ನಾಮಿನೇಷನ್​​ನಲ್ಲಿ ರಜತ್ ಆಡಿದ ಒಂದೇ ಒಂದು ಮಾತಿನಿಂದ ಗಿಲ್ಲಿ, ರಜತ್​​ಗೆ ಎದುರಾಳಿಯೇ ಆಗಿಬಿಟ್ಟಿದ್ದಾರೆ. ಇದೀಗ ಸುದೀಪ್ ಎದುರೇ, ರಜತ್​​ಗೆ ಸವಾಲು ಹಾಕಿದ್ದಾರೆ ಗಿಲ್ಲಿ.

ಕಿಚ್ಚನ ಎದುರೇ ರಜತ್​​ಗೆ ಸವಾಲು ಹಾಕಿದ ಗಿಲ್ಲಿ, ಭೇಷ್ ಎಂದ ಅಶ್ವಿನಿ
Gilli Rajath
ಮಂಜುನಾಥ ಸಿ.
|

Updated on:Dec 14, 2025 | 10:59 PM

Share

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ರಲ್ಲಿ ವೈಲ್ಡ್ ಕಾರ್ಡ್​​ ಮೂಲಕ ಬಂದಿರುವ ರಜತ್ ಮತ್ತು ಚೈತ್ರಾ ಅವರುಗಳ ವಿರುದ್ಧ ಇಡೀ ಮನೆಯೇ ಒಂದಾದಂತಿದೆ. ಅದರಲ್ಲೂ ರಜತ್ ವಿರುದ್ಧವಂತೂ ಇಡೀ ಮನೆ ಒಂದಾಗಿದೆ. ರಜತ್, ಮನೆಯ ಕೆಲ ಸ್ಪರ್ಧಿಗಳ ಮೇಲೆ ತಮ್ಮ ಎಂದಿನ ಆಕ್ರಮಣಕಾರಿ ವರ್ತನೆ ತೋರುತ್ತಾ ಆಟ ಆಡುತ್ತಿದ್ದಾರೆ. ಆದರೆ ಗಿಲ್ಲಿಯ ಜನಪ್ರಿಯತೆ ಬಗ್ಗೆ ಅರಿವಿದ್ದ ಅವರು, ಗಿಲ್ಲಿ ಜೊತೆಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು, ಆದರೆ ಕಳೆದ ನಾಮಿನೇಷನ್​​ನಲ್ಲಿ ರಜತ್ ಆಡಿದ ಒಂದೇ ಒಂದು ಮಾತಿನಿಂದ ಗಿಲ್ಲಿ, ರಜತ್​​ಗೆ ಎದುರಾಳಿಯೇ ಆಗಿಬಿಟ್ಟಿದ್ದಾರೆ.

ರಜತ್ ಅವರು ಈಗಾಗಲೇ ಮನೆಯ ಕೆಲ ಸ್ಪರ್ಧಿಗಳ ವಿರೋಧ ಕಟ್ಟಿಕೊಂಡಿದ್ದಾರೆ. ರಜತ್ ಅವರ ಆಕ್ರಮಣಕಾರಿ ಮಾತಿನ ಶೈಲಿ, ಡಾಮಿನೇಟ್ ಮಾಡುವ ವ್ಯಕ್ತಿತ್ವ ಹಲವರಿಗೆ ಇಷ್ಟ ಆಗುತ್ತಿಲ್ಲ. ವಿರೋಧಿಗಳೇ ಹೆಚ್ಚಾಗಿರುವ ಕಾರಣ ರಜತ್, ಗಿಲ್ಲಿಯನ್ನು ಹತ್ತಿರ ಇರಿಸಿಕೊಂಡಿದ್ದರು. ಆದರೆ ಕಳೆದ ನಾಮಿನೇಷನ್​ ಬಳಿಕ ಗಿಲ್ಲಿಯೇ, ರಜತ್​​ಗೆ ಎದುರಾಳಿ ಆಗಿಬಿಟ್ಟಿದ್ದಾರೆ. ಭಾನುವಾರದ ಎಪಿಸೋಡ್​ನಲ್ಲಂತೂ ಗಿಲ್ಲಿ, ನೇರವಾಗಿ ರಜತ್​​ಗೆ ಸವಾಲನ್ನು ಎಸೆದಿದ್ದಾರೆ.

ಭಾನುವಾಸದ ಎಪಿಸೋಡ್​ನಲ್ಲಿ ಸುದೀಪ್ ಅವರು ಆಟವೊಂದನ್ನು ಆಡಿಸಿದರು. ಮನೆಯಲ್ಲಿ ಯಾರ ಪಾಪದ ಕೊಡ ತುಂಬಿದೆ ಎಂದು ಸುದೀಪ್ ಪ್ರಶ್ನೆ ಮಾಡಿದರು. ಸ್ಪರ್ಧಿಗಳಿಗೆ ಯಾರ ಪಾಪದ ಕೊಡ ತುಂಬಿದೆ ಎನಿಸುತ್ತದೆಯೋ ಅವರ ಮುಂದಿರುವ ಖಾಲಿ ಕೊಳದೊಳಗೆ ಕಪ್ಪು ನೀರು ಸುರಿಯಬೇಕಿತ್ತು. ಅಶ್ವಿನಿ, ಸ್ಪಂದನಾ, ಕಾವ್ಯಾ, ಮಾಳು, ಕೊನೆಗೆ ಗಿಲ್ಲಿ ಅವರುಗಳು ಸಹ ರಜತ್ ಅವರ ಪಾಪದ ಕೊಳ ತುಂಬಿದೆ ಎಂದು ಅವರ ಕೊಳಕ್ಕೆ ನೀರು ಸುರಿದರು.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?

ಈ ಬಗ್ಗೆ ಮಾತನಾಡಿದ ರಜತ್, ‘ಗಿಲ್ಲಿ ನನಗೆ ಹಾಕಿದ್ದು ಬೇಜಾರಾಯ್ತು, ಕೊಟ್ಟ ಕಾರಣವೂ ಬೇಜಾರು ಎನಿಸಿತು’ ಎಂದರು. ಆದರೆ ಗಿಲ್ಲಿ, ‘ನನ್ನ ಎದುರೇ ರಜತ್ ಅವರು ನನ್ನನ್ನು, ಮನೆಯವರನ್ನು ದಡ್ಡರು ಎಂದು ಕರೆದಿದ್ದಾರೆ’ ಎಂದರು. ಬಳಿಕ ರಜತ್, ‘ನನಗೆ ಯಾರು ಈ ಕಪ್ಪು ನೀರು ಹಾಕಿದ್ದಾರೊ ಅವರನ್ನೆಲ್ಲ ಮನೆಗೆ ಕಳಿಸಿಯೇ ನಾನು ಮನೆಯಿಂದ ಹೊರಗೆ ಹೋಗುವುದು ಎಂದು ಸುದೀಪ್ ಅವರ ಎದುರು ಚಾಲೆಂಜ್ ಮಾಡಿದರು ರಜತ್. ಕೂಡಲೇ ಗಿಲ್ಲಿ ಸಹ, ‘ನಾನು ರಜತ್ ಅವರನ್ನು ಮನೆಗೆ ಕಳಿಸಿದ ಮೇಲೆಯೇ ಈ ಮನೆಯಿಂದ ಹೊರಗೆ ಹೋಗುವುದು’ ಎಂದು ಮರು ಸವಾಲು ಹಾಕಿದರು. ಗಿಲ್ಲಿ ಸವಾಲು ಹಾಕಿದ್ದು ನೋಡಿ ಸ್ವತಃ ಅಶ್ವಿನಿ ಚಪ್ಪಾಳೆ ತಟ್ಟಿದರು.

ಆ ನಂತರವೂ ಸಹ ಗಿಲ್ಲಿ ಮತ್ತು ರಜತ್ ಅವರುಗಳ ನಡುವೆ ಚರ್ಚೆ ನಡೆಯುತ್ತಲೇ ಇತ್ತು. ‘ಮನೆಯವರಿಗೆ ಟಾಸ್ಕ್ ಅರ್ಥವಾಗಲ್ಲ ಎಂದು ನಾನು ಹೇಳಿದಾಗ ಗಿಲ್ಲಿಯನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ, ಏಕೆಂದರೆ ಗಿಲ್ಲಿಗೆ ಟಾಸ್ಕ್ ಆಡಲು ಬರುವುದೇ ಇಲ್ಲ’ ಎಂದು ರಜತ್ ಹೇಳಿದರು. ಅದಕ್ಕೆ ಗಿಲ್ಲಿ, ‘ಆಡಿದ ಹತ್ತರಲ್ಲಿ ಎಂಟು ಟಾಸ್ಕ್​​ಗಳಲ್ಲಿ ನಾನು ಗೆದ್ದಿದ್ದೇನೆ, ರಜತ್, ಆಡಿದ ಮೊದಲ ಟಾಸ್ಕ್​​ನಲ್ಲಿಯೇ ಒಂದೂ ಸಹ ಬಾಲನ್ನು ಹಾಕಲು ಆಗದೆ ಹೊರಗೆ ಹೋಗಿ ಕುಳಿತುಕೊಂಡ ಎಂದು ಕಾಲೆಳೆದರು. ಒಟ್ಟಾರೆ, ಸುದೀಪ್ ಎದುರೇ ಗಿಲ್ಲಿ, ರಜತ್​​ಗೆ ಸವಾಲು ಎಸೆದಿದ್ದು ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 pm, Sun, 14 December 25

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ