Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಕನ್ನಡ: ಈ ಬಾರಿ ಯಾರಿಗೆ ಸಿಕ್ತು ಕಿಚ್ಚನ ಚಪ್ಪಾಳೆ?

Bigg Boss Kannada: ಎರಡು ವಾರದ ಬಳಿಕ ಸುದೀಪ್ ಮತ್ತೆ ಬಿಗ್​ಬಾಸ್ ಕನ್ನಡ ನಿನ್ನೆ ಆಗಮಿಸಿದ್ದರು. ತಮ್ಮ ಹಳೆಯ ಖದರ್ ಅನ್ನು ವೇದಿಕೆ ಮೇಲೆ ತೋರಿಸಿದ ಸುದೀಪ್, ಹನುಮಂತನಿಗೆ ಚಪ್ಪಾಳೆ ನೀಡಿದರು.

ಬಿಗ್​ಬಾಸ್ ಕನ್ನಡ: ಈ ಬಾರಿ ಯಾರಿಗೆ ಸಿಕ್ತು ಕಿಚ್ಚನ ಚಪ್ಪಾಳೆ?
Follow us
ಮಂಜುನಾಥ ಸಿ.
|

Updated on: Nov 03, 2024 | 8:29 AM

ತಾಯಿ ನಿಧನ ಬಳಿಕ ಮೊದಲ ಬಾರಿಗೆ ಕಿಚ್ಚ ಸುದೀಪ್ ಬಿಗ್​ಬಾಸ್ ವೇದಿಕೆಗೆ ಬಂದಿದ್ದರು. ಸುದೀಪ್ ಅಕ್ಟೋಬರ್ 20 ರಂದು ಸುದೀಪ್​ರ ತಾಯಿ ಸರೋಜಮ್ಮ ನಿಧನರಾದ ಬಳಿಕ ಅವರು ಬಿಗ್​ಬಾಸ್ ವೇದಿಕೆಗೆ ಬಂದಿರಲಿಲ್ಲ.ಆದರೆ ಒಂದೇ ವಾರಕ್ಕೆ ದುಃಖವನ್ನೆಲ್ಲ ಬದಿಗೊತ್ತಿ ಬಿಗ್​ಬಾಸ್ ವೇದಿಕೆಗೆ ಮರಳಿದ್ದಾರೆ. ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಸುದೀಪ್ ಇಲ್ಲದ ಸಮಯದಲ್ಲಿ ಬಿಗ್​ಬಾಸ್ ಮನೆಗೆ ಹನುಮಂತು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ಹನುಮಂತುವನ್ನು ಸ್ವಾಗತಿಸಿದ ಸುದೀಪ್, ಹನುಮಂತು ಆಡುತ್ತಿರುವ ರೀತಿಗೆ ಮಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ಎಪಿಸೋಡ್​ನಲ್ಲಿ ಮೊದಲಿಗೆ ಹನುಮಂತನಿಗೆ ಸ್ವಾಗತ ಕೋರಿದ ಕಿಚ್ಚ ಸುದೀಪ್, ಆ ನಂತರ ಅವರು ಎರಡು ಬಾರಿ ಕ್ಯಾಪ್ಟನ್ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಹನುಮಂತು ಬಿಗ್​ಬಾಸ್ ಮನೆಗೆ ಬಂದಾಗಲೇ ಕ್ಯಾಪ್ಟನ್ ಅಧಿಕಾರ ಅವರಿಗೆ ಕೊಡಲಾಗಿತ್ತು, ಅದಾದ ಬಳಿಕ ಟಾಸ್ಕ್​ನಲ್ಲಿ ಗೆದ್ದು ಹನುಮಂತು ಕ್ಯಾಪ್ಟನ್ ಆದರು. ಇದಕ್ಕಾಗಿ ಸುದೀಪ್ ಹನುಮಂತುಗೆ ಭೇಷ್ ಎಂದರು.

ಆದರೆ ಅದಾದ ಬಳಿಕ ‘ಹನುಮಂತು ಸ್ವಯಂ ಪ್ರಯತ್ನದಿಂದ ಗೆದ್ದರೇ?’ ಅಥವಾ ಬೇರೆಯವರ ತಂತ್ರದಿಂದ ಗೆದ್ದರೆ?’ ಎಂಬ ಪ್ರಶ್ನೆಯನ್ನು ಸುದೀಪ್ ಕೇಳಿದರು. ಇದು ಎಲ್ಲರಿಗೂ ಕುತೂಹಲ ಮೂಡಿಸಿತು, ಹನುಮಂತು ನಿಯತ್ತಿನಿಂದ ಆಡಿ ಗೆಲ್ಲಲಿಲ್ಲವೇ ಎಂಬ ಅನುಮಾನವನ್ನೂ ಸಹ ಮೂಡಿಸಿತು. ಆದರೆ ಆ ಬಳಿಕ ಸ್ವತಃ ಸುದೀಪ್ ಅವರೇ ಹೇಳಿದಂತೆ ಕೆಲವರು ಬಾಕ್ಸ್, ಪಿಲ್ಲರ್ ಟಾಸ್ಕ್ ಗೆಲ್ಲಲು ಸಾಕಷ್ಟು ಬೇರೆ ಬೇರೆ ರೀತಿಯ ಪ್ರಯತ್ನ ಮಾಡಿದರು ಆದರೆ ಅವರ ಕುತಂತ್ರಗಳೆಲ್ಲ ವಿಫಲವಾಗಿ ಕೊನೆಗೆ ಹನುಮಂತು ಗೆದ್ದರು.

ಇದನ್ನೂ ಓದಿ:ನನ್ನ ಬದಲು ಬಿಗ್​ಬಾಸ್ ನಿರೂಪಣೆಗೆ 2-3 ಹೆಸರು ಕೇಳಿಬರುತ್ತಿದೆ: ಸುದೀಪ್

ಮಂಜು, ಗೌಥಮಿ, ಚೈತ್ರಾ, ಸುರೇಶ್ ಇನ್ನೂ ಕೆಲವರು ಈ ಕುತಂತ್ರದಲ್ಲಿ ಭಾಗಿ ಆಗಿದ್ದರು. ಅವರಿಗೆಲ್ಲ ಮಾತಿನ ಮೂಲಕ ಚಾಟಿ ಬೀಸಿದ ಸುದೀಪ್ ಸ್ವಂತ ಬದಲ ಮೇಲೆ ಆಡಿ ಗೆದ್ದು ಕ್ಯಾಪ್ಟನ್ ಆದ ಹನುಮಂತುಗೆ ಕಿಚ್ಚನ ಚಪ್ಪಾಳೆ ನೀಡಿದರು. ಹನುಮಂತು ಬಂದ ಮೇಲೆ ಮನೆಯ ವಾತಾವರಣ ನಿಜಕ್ಕೂ ಬದಲಾಗಿದೆ. ಈ ಮೊದಲು ಬರೀ ಜಗಳದಲ್ಲೇ ನಿರತವಾಗಿದ್ದ ಮನೆಯಲ್ಲಿ ಈಗ ತಮಾಷೆ ಆಟ, ಹಾಡುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ