AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾಕೆ ಹೀಗೆ ಮಾಡ್ತಿದ್ದೀರಿ? ಮಾಜಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10ರ ಫಿನಾಲೆ ನಡೆಸಿಕೊಡುತ್ತಿರುವ ಸುದೀಪ್, ಮಾಜಿ ಸ್ಪರ್ಧಿಗಳಿಗೆ ಸಣ್ಣ ಕ್ಲಾಸ್ ಸಹ ತೆಗೆದುಕೊಂಡರು.

ಯಾಕೆ ಹೀಗೆ ಮಾಡ್ತಿದ್ದೀರಿ? ಮಾಜಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್
ಮಂಜುನಾಥ ಸಿ.
|

Updated on:Jan 28, 2024 | 3:13 PM

Share

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ಫಿನಾಲೆ ನಡೆಸಿಕೊಡುತ್ತಿರುವ ಸುದೀಪ್, ಅತಿ ಹೆಚ್ಚು ಜನಮನ್ನಣೆ ಗಳಿಸಿರುವ ಸೀಸನ್ ಇದು ಎಂದಿದ್ದಾರೆ. ಮಾತ್ರವಲ್ಲದೆ ಅತಿ ಹೆಚ್ಚು ವಿವಾದಕ್ಕೆ ಕಾರಣವಾದ, ಟೀಕೆ, ವಿಮರ್ಶೆಗೆ ಗುರಿಯಾದ ಸೀಸನ್ ಸಹ ಇದೇ ಆಗಿದೆ ಎಂದಿದ್ದಾರೆ. ಮನೆಯ ಸದಸ್ಯರಿಗೆ ಮಾತ್ರವೇ ಅಲ್ಲದೆ ಸುದೀಪ್ ಅವರಿಗೂ ಇದು ಕ್ಲಿಷ್ಟಕರವಾದ ಸೀಸನ್ ಆಗಿತ್ತು. ಈ ಸೀಸನ್​ ಬಗ್ಗೆ ಹಲವು ಕಾರಣಗಳಿಗೆ ಹೆಚ್ಚು ಚರ್ಚೆಯಾಯಿತು. ಈ ಸೀಸನ್​ನಿಂದ ಹೊರಗೆ ಹೋದವರು ಕೆಲವರು ಸಹ ಬಿಗ್​ಬಾಸ್​ ಬಗ್ಗೆ ಋಣಾತ್ಮಕವಾಗಿ ಮಾತನಾಡಿದರು. ಈ ಬಗ್ಗೆ ಫಿನಾಲೆ ವೇದಿಕೆಯಲ್ಲಿ ಸುದೀಪ್ ಮಾತನಾಡಿದರು.

ಡ್ರೋನ್ ಪ್ರತಾಪ್ ಅವರು ಅನಾರೋಗ್ಯದಿಂದ ಹೊರಗೆ ಹೋಗಿ ಬಂದ ಬಗ್ಗೆ ಸುದೀಪ್ ಮಾತನಾಡುತ್ತಿದ್ದರು, ಪ್ರತಾಪ್ ಹೊರಗೆ ಹೋಗಿ ಅಲ್ಲಿ ಯಾರನ್ನೋ ಭೇಟಿ ಆಗಿ ಮನೆಯಲ್ಲಿ ಏನು ನಡೆದಿದೆಯೋ ತಿಳಿದುಕೊಂಡು ಒಳಗೆ ಬಂದ ಆಟ ಬದಲಾಯಿಸಿಕೊಂಡಿದ್ದಾನೆ ಎಂಬ ಮಾತುಗಳನ್ನು ತುಕಾಲಿ ಆಡಿದ್ದರು ಎಂದು ತಮಾಷೆಯಾಗಿಯೇ ಮಾತನಾಡುತ್ತಿದ್ದರು. ಅದಕ್ಕ ಪ್ರತಾಪ್, ಹೊರಗೆ ಹೋಗಿ ಆಸ್ಪತ್ರೆಯನ್ನಷ್ಟೆ ನೋಡಿದೆ ಎಂದು ಹೇಳಿದರು.

ಆ ಮಾತು ಹಾಗೆ ಮನೆಯಿಂದ ಹೊರಗೆ ಹೋಗಿ ಬಿಗ್​ಬಾಸ್ ಬಗ್ಗೆ ಸಂದರ್ಶನ ಕೊಡುತ್ತಿರುವವರ ಬಗ್ಗೆ ತಿರುಗಿತು, ಥಟ್ಟನೆ ಗಂಭೀರವಾದ ಸುದೀಪ್, ‘ನಿಮಗೆಲ್ಲ ಏನಾಗಿದೆ?, ಹೊರಗೆ ಹೋಗಿ ಸಂದರ್ಶನ ಕೊಡುತ್ತೀರಿ, ನಿಮ್ಮ ಸಹ ಸ್ಪರ್ಧಿಗಳ ಬಗ್ಗೆ ನೀವೇ ತುಚ್ಛವಾಗಿ ಮಾತನಾಡುತ್ತೀರಿ. ಶೋ ಬಗ್ಗೆ ಒಳ್ಳೆಯದೇ ಮಾತಬಾಡಬೇಕು ಎಂಬುದು ನಮ್ಮ ನಿಯಮವಲ್ಲ. ವಿಮರ್ಶೆ ಮಾಡುವ ಅಧಿಕಾರ ನಿಮಗೆ ಇದೆ. ಆದರೆ ಇನ್ನೊಬ್ಬರಿಗೆ ನೋವು ಕೊಡುವ ಅಧಿಕಾರ ನಿಮಗೆ ಇಲ್ಲ’ ಎಂದರು.

ಇದನ್ನೂ ಓದಿ:ಗುಟ್ಟು-ರಟ್ಟು ಮಾಡಿದ ಸುದೀಪ್, ವರ್ತೂರು ಭಾವುಕ, ಮನೆಯರಿಗೆ ಶಾಕ್

ಒಂದೊಮ್ಮೆ ಈ ಶೋ ನಿಯಮ ಮೀರುವಂತಿದ್ದರೆ ನಾನು ಹತ್ತು ವರ್ಷ ಇಲ್ಲಿ ಇರುತ್ತಿಲ್ಲ. ಎಥಿಕ್ಸ್-ಪ್ರಿನ್ಸಿಪಲ್ ಇರದ ಕಡೆ ಖಂಡಿತ ನಾನು ಇರುವುದಿಲ್ಲ. ಇಲ್ಲಿ ಇರಬೇಕಾದರೆ ಒಂದು ಮಾತು ಆಡುತ್ತೀರಿ ಹೊರಗೆ ಹೋದಮೇಲೆ ಒಂದು ಮಾತು ಆಡುತ್ತೀರಿ ಇದೆಲ್ಲ ನಿಮಗೆ ಬೇಕ ಎಂದು ಪ್ರಶ್ನೆ ಮಾಡಿದರು. ಬಳಿಕ ರಕ್ಷಕ್ ಕಡೆ ತಿರುಗಿ, ಆವೇಶದಲ್ಲೇ ಮಾತನಾಡುತ್ತೀರಿ, ಮಾತನಾಡಿ, ಆ ಐದು ನಿಮಿಷ ಸಂದರ್ಶನದಲ್ಲಿ ಹೀರೋ ಅಂದುಕೊಳ್ಳುತ್ತೀರಿ. ಯಾವುದೇ ಸ್ಪರ್ಧಿಗಳ ವಿಷಯ ಬಂದಾಗ ನಾನು ಬಹಳ ಆಳವಾಗಿ ಘಟನೆಯನ್ನು ಪರಾಮರ್ಶಿಸಿದ ಬಳಿಕವೇ ಬಂದು ನಿಮ್ಮ ಬಳಿ ಮಾತನಾಡುವುದು. ಯಾವುದೇ ಕಂಟೆಸ್ಟಂಟ್ ಬಗ್ಗೆ ಅವರು ಮಾಡದ ತಪ್ಪಿಗೆ ಅವರ ಚಾರಿತ್ರ್ಯ ಹರಣ ಆಗಬಾರದು. ನೀವು ಕಂಟೆಸ್ಟೆಂಟ್ಸ್ ಆಗಿದ್ದಾಗಲೂ ನನ್ನ ನಿಲುವು ಇದೇ ಆಗಿತ್ತು’ ಎಂದರು.

ಅದಕ್ಕೆ ರಕ್ಷಕ್ ಕ್ಷಮಿಸಿ ಅಣ್ಣ ಎಂದರು. ಅದಕ್ಕೆ ಸುದೀಪ್, ನಾವು ನಿಮ್ಮನ್ನೂ ಪ್ರೀತಿಸುತ್ತೇವೆ ಅದು ನಿಮಗೆ ಗೊತ್ತು ತಾನೆ? ಎಂದು ಪ್ರಶ್ನೆ ಮಾಡಿದರು. ಹೌದು ಅಣ್ಣ ಎಂದರು. ನಿಮ್ಮ ತಂದೆ ಬುಲೆಟ್ ಪ್ರಕಾಶ್ ಅವರು ನಮ್ಮ ಆತ್ಮೀಯರು, ಅವರ ಬಗ್ಗೆ ಇಂದಿಗೂ ಗೌರವ ಇಟ್ಟುಕೊಂಡಿದ್ದೀವಿ. ಇನ್ನು ನಿಮ್ಮನ್ನು ಪ್ರೀತಿಸದೇ ಇರುತ್ತೀವಾ? ಎಂದು ಪ್ರಶ್ನೆ ಮಾಡಿದರು. ‘ಇಲ್ಲ ಗೊತ್ತಿದೆ ಅಣ್ಣ, ಕ್ಷಮಿಸಿ, ನನ್ನ ಉದ್ದೇಶ ಬೇರೆ ಆಗಿತ್ತು’ ಎಂದರು.

ಸುದೀಪ್, ರಕ್ಷಕ್ ಬಗ್ಗೆ ಮಾತ್ರವೇ ಹೇಳಿದ್ದಲ್ಲ, ಬದಲಿಗೆ ಮನೆಯಿಂದ ಹೊರಗೆ ಹೋದ ಮೇಲೆ ಬಿಗ್​ಬಾಸ್ ಬಗ್ಗೆ ಕೆಲವು ಸದಸ್ಯರು ನೆಗೆಟಿವ್ ಆಗಿ ಸಹ ಮಾತನಾಡಿದ್ದಾರೆ. ಸಂಗೀತಾಗೆ ಬಿಗ್​ಬಾಸ್​ನಿಂದಲೇ ಬೂಸ್ಟ್ ದೊರಕಿದೆ ಎಂಬ ಅರ್ಥ ಬರುವಂತೆ ತನಿಷಾ ಮಾತನಾಡಿದ್ದರು. ಇನ್ನೂ ಕೆಲವರು ಬಿಗ್​ಬಾಸ್ ಬಗ್ಗೆ ಅಲ್ಲಲ್ಲಿ ತುಸು ನೆಗೆಟಿವ್ ಆಗಿ ಮಾತನಾಡಿದ್ದರು. ಅವರ ಬಗ್ಗೆಯೂ ಸುದೀಪ್ ಮಾತನಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:36 pm, Sat, 27 January 24

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ