AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಸ್ಪರರ ತಲೆ ಒಡೆದ ಸ್ಪರ್ಧಿಗಳು, ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?

Bigg Boss Kannada: ಬಿಗ್​ಬಾಸ್ ಸ್ಪರ್ಧಿಗಳು ಪರಸ್ಪರರ ತಲೆ ಒಡೆದುಕೊಂಡರು. ಅಂದಹಾಗೆ ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?

ಪರಸ್ಪರರ ತಲೆ ಒಡೆದ ಸ್ಪರ್ಧಿಗಳು, ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?
ವಿನಯ್ ಮಡಿಕೆ
ಮಂಜುನಾಥ ಸಿ.
|

Updated on: Dec 17, 2023 | 11:24 PM

Share

ಬಿಗ್​ಬಾಸ್ (Bigg Boss) ಮನೆಯಲ್ಲಿ ಜಗಳ, ಕೂಗಾಟ, ಅರಚಾಟ, ಚಾಡಿ, ದೂರುಗಳೇ ಹೆಚ್ಚು. ಆದರೆ ಕಳೆದ ವಾರದ ಟಾಸ್ಕ್ ಇದಕ್ಕೆಲ್ಲ ಹೆಚ್ಚು ಅವಕಾಶ ಕೊಟ್ಟಿರಲಿಲ್ಲ. ಶಾಲೆಯ ವಾತಾವರಣ ಮರುಸೃಷ್ಟಿ ಮಾಡುವ ಟಾಸ್ಕ್​ ಆದ್ದರಿಂದ ಸ್ಪರ್ಧಿಗಳೆಲ್ಲ ಮಕ್ಕಳಂತೆ ವರ್ತಿಸಿ, ಅಗ್ರೆಷನ್​ಗೆ ಅವಕಾಶ ಇರಲಿಲ್ಲ. ಇದು ವಿನಯ್ ಹಾಗೂ ಇನ್ನೂ ಕೆಲವರಿಗೆ ಬೇಸರವೂ ಆಯಿತು. ಹಾಗಾಗಿ ವೀಕೆಂಡ್​ನಲ್ಲಿ ಸುದೀಪ್ ಅವರು ಒಂದು ವಿಶೇಷ ಆಟ ಆಡಿಸಿದರು. ಆ ಆಟದಲ್ಲಿ ಮನೆಯ ಸ್ಪರ್ಧಿಗಳು ತಮ್ಮ ಕೋಪವನ್ನು ಪ್ರದರ್ಶಿಸಿದರು, ತಮಗಾಗದವರ ತಲೆ ಒಡೆದರು.

ಒಂದು ಬೆದುರು ಬೊಂಬೆಯನ್ನು ಮನೆಯಲ್ಲಿ ನಿಲ್ಲಿಸಲಾಗಿತ್ತು, ಅದರ ಮುಖದ ಭಾಗಕ್ಕೆ ಮಡಕೆಯೊಂದನ್ನು ಹಾಕಲಾಗಿತ್ತು. ಮನೆಯ ಎಲ್ಲ ಸ್ಪರ್ಧಿಗಳ ಚಿತ್ರಗಳನ್ನು ಅದರ ಪಕ್ಕದಲ್ಲಿಯೇ ಟ್ರೇ ನಲ್ಲಿ ಇಡಲಾಗಿತ್ತು. ಯಾರಿಗೆ ಯಾರ ಬಗ್ಗೆ ಸಿಟ್ಟು ಇದೆಯೋ ಅವರ ಚಿತ್ರವನ್ನು ಬೆದರ ಬೊಂಬೆಯ ಮಡಿಕೆ ಮುಖಕ್ಕೆ ಹಾಕಿ ಅದನ್ನು ಸುತ್ತಿಗೆಯಿಂದ ಒಡೆಯಬೇಕಿತ್ತು. ಒಬ್ಬ ಸ್ಪರ್ಧಿಗಳು ತಲಾ ಇಬ್ಬರು ಸ್ಪರ್ಧಿಗಳ ತಲೆ ಒಡೆಯಬಹುದಾಗಿತ್ತು.

ಇದನ್ನೂ ಓದಿ:ಬಕೆಟ್​ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್​ ಸುತ್ತಿಗೆ ಏಟು; ಬಿಗ್ ಬಾಸ್​ ಸದಸ್ಯರಿಗೆ ದೊಡ್ಡ ಶಾಕ್​

ವಿನಯ್ ಯಥಾವತ್ತು, ಸಂಗೀತಾ ಹಾಗೂ ಡ್ರೋನ್​ ಪ್ರತಾಪ್​ರ ತಲೆ ಒಡೆದರು. ನಮ್ರತಾ ಸಹ ಅದನ್ನೇ ಮಾಡಿದರು. ಸಂಗೀತಾ, ವಿನಯ್ ಹಾಗೂ ತುಕಾಲಿ ಅವರ ಚಿತ್ರಗಳನ್ನು ಅಂಟಿಸಿ ಮಡಿಕೆ ಒಡೆದರು. ಡ್ರೋನ್ ಪ್ರತಾಪ್ ಸಹ ವಿನಯ್ ಹಾಗೂ ಮೈಖಲ್​ರ ಚಿತ್ರ ಅಂಟಿಸಿ ಒಡೆದರು. ತುಕಾಲಿ ಸಂತು, ಡ್ರೋನ್ ಪ್ರತಾಪ್ ಹಾಗೂ ಸಂಗೀತಾರ ಮಡಿಕೆ ಒಡೆದರು. ವರ್ತೂರು ಸಂತು, ಕಾರ್ತಿಕ್ ಹಾಗೂ ವಿನಯ್​ರ ಮಡಿಕೆ ಒಡೆದರು. ಅವಿ ಅವರು ನಮ್ರತಾ ಹಾಗೂ ವಿನಯ್​ರ ಮಡಿಕೆ ಒಡೆದರು. ಕೊನೆಗೆ ಪವಿ, ತುಕಾಲಿ ಒಬ್ಬರದ್ದೇ ಮಡಿಕೆ ಒಡೆದರು. ವಿಶೇಷವಾಗಿ ಕಂಡಿದ್ದೆಂದರೆ ಕಾರ್ತಿಕ್, ತಮ್ಮ ಆತ್ಮೀಯರಾಗಿದ್ದ ಸಂಗೀತಾರ ಚಿತ್ರ ಅಂಟಿಸಿ ಮಡಿಕೆ ಒಡೆದರು. ಮನೆ ಮಂದಿಗೆ ಇದು ಶಾಕಿಂಗ್ ಎನಿಸಿತು.

ಸಂಗೀತಾ ಮತ್ತು ಡ್ರೋನ್ ಪ್ರತಾಪ್​ರಿಗೆ ತಲಾ ಐದು ಬಾರಿ ಏಟು ಬಿದ್ದಿತು. ಮನೆಯಲ್ಲಿ ಅತಿ ಹೆಚ್ಚು ಏಟು ಬಿದ್ದಿದ್ದು ಅವರಿಗೆ. ನಂತರದ ಸ್ಥಾನ ವಿನಯ್ ಹಾಗೂ ಮೈಖಲ್ ಅವರಿಗೆ. ಅವರಿಬ್ಬರಿಗೂ ತಲಾ ನಾಲ್ಕು ಏಟು ಬಿತ್ತು. ತುಕಾಲಿ, ಕಾರ್ತಿಕ್​ಗೆ ಎರಡು ಏಟು ಬಿತ್ತು.ತನಿಷಾಗೆ ಒಂದು ಬಿತ್ತು. ಅವಿ, ಪವಿ, ಸಿರಿ ಅವರಿಗೆ ಯಾವುದೇ ಏಟು ಬೀಳಲಿಲ್ಲ. ಆದರೆ ಈ ಪ್ರಕ್ರಿಯೆಯಿಂದ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಇದ್ದ ಗೆಳೆತನ ಸಂಪೂರ್ಣವಾಗಿ ಮುಗಿದಂತೆ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ