AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಸ್ಪರರ ತಲೆ ಒಡೆದ ಸ್ಪರ್ಧಿಗಳು, ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?

Bigg Boss Kannada: ಬಿಗ್​ಬಾಸ್ ಸ್ಪರ್ಧಿಗಳು ಪರಸ್ಪರರ ತಲೆ ಒಡೆದುಕೊಂಡರು. ಅಂದಹಾಗೆ ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?

ಪರಸ್ಪರರ ತಲೆ ಒಡೆದ ಸ್ಪರ್ಧಿಗಳು, ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?
ವಿನಯ್ ಮಡಿಕೆ
Follow us
ಮಂಜುನಾಥ ಸಿ.
|

Updated on: Dec 17, 2023 | 11:24 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ಜಗಳ, ಕೂಗಾಟ, ಅರಚಾಟ, ಚಾಡಿ, ದೂರುಗಳೇ ಹೆಚ್ಚು. ಆದರೆ ಕಳೆದ ವಾರದ ಟಾಸ್ಕ್ ಇದಕ್ಕೆಲ್ಲ ಹೆಚ್ಚು ಅವಕಾಶ ಕೊಟ್ಟಿರಲಿಲ್ಲ. ಶಾಲೆಯ ವಾತಾವರಣ ಮರುಸೃಷ್ಟಿ ಮಾಡುವ ಟಾಸ್ಕ್​ ಆದ್ದರಿಂದ ಸ್ಪರ್ಧಿಗಳೆಲ್ಲ ಮಕ್ಕಳಂತೆ ವರ್ತಿಸಿ, ಅಗ್ರೆಷನ್​ಗೆ ಅವಕಾಶ ಇರಲಿಲ್ಲ. ಇದು ವಿನಯ್ ಹಾಗೂ ಇನ್ನೂ ಕೆಲವರಿಗೆ ಬೇಸರವೂ ಆಯಿತು. ಹಾಗಾಗಿ ವೀಕೆಂಡ್​ನಲ್ಲಿ ಸುದೀಪ್ ಅವರು ಒಂದು ವಿಶೇಷ ಆಟ ಆಡಿಸಿದರು. ಆ ಆಟದಲ್ಲಿ ಮನೆಯ ಸ್ಪರ್ಧಿಗಳು ತಮ್ಮ ಕೋಪವನ್ನು ಪ್ರದರ್ಶಿಸಿದರು, ತಮಗಾಗದವರ ತಲೆ ಒಡೆದರು.

ಒಂದು ಬೆದುರು ಬೊಂಬೆಯನ್ನು ಮನೆಯಲ್ಲಿ ನಿಲ್ಲಿಸಲಾಗಿತ್ತು, ಅದರ ಮುಖದ ಭಾಗಕ್ಕೆ ಮಡಕೆಯೊಂದನ್ನು ಹಾಕಲಾಗಿತ್ತು. ಮನೆಯ ಎಲ್ಲ ಸ್ಪರ್ಧಿಗಳ ಚಿತ್ರಗಳನ್ನು ಅದರ ಪಕ್ಕದಲ್ಲಿಯೇ ಟ್ರೇ ನಲ್ಲಿ ಇಡಲಾಗಿತ್ತು. ಯಾರಿಗೆ ಯಾರ ಬಗ್ಗೆ ಸಿಟ್ಟು ಇದೆಯೋ ಅವರ ಚಿತ್ರವನ್ನು ಬೆದರ ಬೊಂಬೆಯ ಮಡಿಕೆ ಮುಖಕ್ಕೆ ಹಾಕಿ ಅದನ್ನು ಸುತ್ತಿಗೆಯಿಂದ ಒಡೆಯಬೇಕಿತ್ತು. ಒಬ್ಬ ಸ್ಪರ್ಧಿಗಳು ತಲಾ ಇಬ್ಬರು ಸ್ಪರ್ಧಿಗಳ ತಲೆ ಒಡೆಯಬಹುದಾಗಿತ್ತು.

ಇದನ್ನೂ ಓದಿ:ಬಕೆಟ್​ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್​ ಸುತ್ತಿಗೆ ಏಟು; ಬಿಗ್ ಬಾಸ್​ ಸದಸ್ಯರಿಗೆ ದೊಡ್ಡ ಶಾಕ್​

ವಿನಯ್ ಯಥಾವತ್ತು, ಸಂಗೀತಾ ಹಾಗೂ ಡ್ರೋನ್​ ಪ್ರತಾಪ್​ರ ತಲೆ ಒಡೆದರು. ನಮ್ರತಾ ಸಹ ಅದನ್ನೇ ಮಾಡಿದರು. ಸಂಗೀತಾ, ವಿನಯ್ ಹಾಗೂ ತುಕಾಲಿ ಅವರ ಚಿತ್ರಗಳನ್ನು ಅಂಟಿಸಿ ಮಡಿಕೆ ಒಡೆದರು. ಡ್ರೋನ್ ಪ್ರತಾಪ್ ಸಹ ವಿನಯ್ ಹಾಗೂ ಮೈಖಲ್​ರ ಚಿತ್ರ ಅಂಟಿಸಿ ಒಡೆದರು. ತುಕಾಲಿ ಸಂತು, ಡ್ರೋನ್ ಪ್ರತಾಪ್ ಹಾಗೂ ಸಂಗೀತಾರ ಮಡಿಕೆ ಒಡೆದರು. ವರ್ತೂರು ಸಂತು, ಕಾರ್ತಿಕ್ ಹಾಗೂ ವಿನಯ್​ರ ಮಡಿಕೆ ಒಡೆದರು. ಅವಿ ಅವರು ನಮ್ರತಾ ಹಾಗೂ ವಿನಯ್​ರ ಮಡಿಕೆ ಒಡೆದರು. ಕೊನೆಗೆ ಪವಿ, ತುಕಾಲಿ ಒಬ್ಬರದ್ದೇ ಮಡಿಕೆ ಒಡೆದರು. ವಿಶೇಷವಾಗಿ ಕಂಡಿದ್ದೆಂದರೆ ಕಾರ್ತಿಕ್, ತಮ್ಮ ಆತ್ಮೀಯರಾಗಿದ್ದ ಸಂಗೀತಾರ ಚಿತ್ರ ಅಂಟಿಸಿ ಮಡಿಕೆ ಒಡೆದರು. ಮನೆ ಮಂದಿಗೆ ಇದು ಶಾಕಿಂಗ್ ಎನಿಸಿತು.

ಸಂಗೀತಾ ಮತ್ತು ಡ್ರೋನ್ ಪ್ರತಾಪ್​ರಿಗೆ ತಲಾ ಐದು ಬಾರಿ ಏಟು ಬಿದ್ದಿತು. ಮನೆಯಲ್ಲಿ ಅತಿ ಹೆಚ್ಚು ಏಟು ಬಿದ್ದಿದ್ದು ಅವರಿಗೆ. ನಂತರದ ಸ್ಥಾನ ವಿನಯ್ ಹಾಗೂ ಮೈಖಲ್ ಅವರಿಗೆ. ಅವರಿಬ್ಬರಿಗೂ ತಲಾ ನಾಲ್ಕು ಏಟು ಬಿತ್ತು. ತುಕಾಲಿ, ಕಾರ್ತಿಕ್​ಗೆ ಎರಡು ಏಟು ಬಿತ್ತು.ತನಿಷಾಗೆ ಒಂದು ಬಿತ್ತು. ಅವಿ, ಪವಿ, ಸಿರಿ ಅವರಿಗೆ ಯಾವುದೇ ಏಟು ಬೀಳಲಿಲ್ಲ. ಆದರೆ ಈ ಪ್ರಕ್ರಿಯೆಯಿಂದ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಇದ್ದ ಗೆಳೆತನ ಸಂಪೂರ್ಣವಾಗಿ ಮುಗಿದಂತೆ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ