AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಸ್ಪರರ ತಲೆ ಒಡೆದ ಸ್ಪರ್ಧಿಗಳು, ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?

Bigg Boss Kannada: ಬಿಗ್​ಬಾಸ್ ಸ್ಪರ್ಧಿಗಳು ಪರಸ್ಪರರ ತಲೆ ಒಡೆದುಕೊಂಡರು. ಅಂದಹಾಗೆ ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?

ಪರಸ್ಪರರ ತಲೆ ಒಡೆದ ಸ್ಪರ್ಧಿಗಳು, ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?
ವಿನಯ್ ಮಡಿಕೆ
ಮಂಜುನಾಥ ಸಿ.
|

Updated on: Dec 17, 2023 | 11:24 PM

Share

ಬಿಗ್​ಬಾಸ್ (Bigg Boss) ಮನೆಯಲ್ಲಿ ಜಗಳ, ಕೂಗಾಟ, ಅರಚಾಟ, ಚಾಡಿ, ದೂರುಗಳೇ ಹೆಚ್ಚು. ಆದರೆ ಕಳೆದ ವಾರದ ಟಾಸ್ಕ್ ಇದಕ್ಕೆಲ್ಲ ಹೆಚ್ಚು ಅವಕಾಶ ಕೊಟ್ಟಿರಲಿಲ್ಲ. ಶಾಲೆಯ ವಾತಾವರಣ ಮರುಸೃಷ್ಟಿ ಮಾಡುವ ಟಾಸ್ಕ್​ ಆದ್ದರಿಂದ ಸ್ಪರ್ಧಿಗಳೆಲ್ಲ ಮಕ್ಕಳಂತೆ ವರ್ತಿಸಿ, ಅಗ್ರೆಷನ್​ಗೆ ಅವಕಾಶ ಇರಲಿಲ್ಲ. ಇದು ವಿನಯ್ ಹಾಗೂ ಇನ್ನೂ ಕೆಲವರಿಗೆ ಬೇಸರವೂ ಆಯಿತು. ಹಾಗಾಗಿ ವೀಕೆಂಡ್​ನಲ್ಲಿ ಸುದೀಪ್ ಅವರು ಒಂದು ವಿಶೇಷ ಆಟ ಆಡಿಸಿದರು. ಆ ಆಟದಲ್ಲಿ ಮನೆಯ ಸ್ಪರ್ಧಿಗಳು ತಮ್ಮ ಕೋಪವನ್ನು ಪ್ರದರ್ಶಿಸಿದರು, ತಮಗಾಗದವರ ತಲೆ ಒಡೆದರು.

ಒಂದು ಬೆದುರು ಬೊಂಬೆಯನ್ನು ಮನೆಯಲ್ಲಿ ನಿಲ್ಲಿಸಲಾಗಿತ್ತು, ಅದರ ಮುಖದ ಭಾಗಕ್ಕೆ ಮಡಕೆಯೊಂದನ್ನು ಹಾಕಲಾಗಿತ್ತು. ಮನೆಯ ಎಲ್ಲ ಸ್ಪರ್ಧಿಗಳ ಚಿತ್ರಗಳನ್ನು ಅದರ ಪಕ್ಕದಲ್ಲಿಯೇ ಟ್ರೇ ನಲ್ಲಿ ಇಡಲಾಗಿತ್ತು. ಯಾರಿಗೆ ಯಾರ ಬಗ್ಗೆ ಸಿಟ್ಟು ಇದೆಯೋ ಅವರ ಚಿತ್ರವನ್ನು ಬೆದರ ಬೊಂಬೆಯ ಮಡಿಕೆ ಮುಖಕ್ಕೆ ಹಾಕಿ ಅದನ್ನು ಸುತ್ತಿಗೆಯಿಂದ ಒಡೆಯಬೇಕಿತ್ತು. ಒಬ್ಬ ಸ್ಪರ್ಧಿಗಳು ತಲಾ ಇಬ್ಬರು ಸ್ಪರ್ಧಿಗಳ ತಲೆ ಒಡೆಯಬಹುದಾಗಿತ್ತು.

ಇದನ್ನೂ ಓದಿ:ಬಕೆಟ್​ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್​ ಸುತ್ತಿಗೆ ಏಟು; ಬಿಗ್ ಬಾಸ್​ ಸದಸ್ಯರಿಗೆ ದೊಡ್ಡ ಶಾಕ್​

ವಿನಯ್ ಯಥಾವತ್ತು, ಸಂಗೀತಾ ಹಾಗೂ ಡ್ರೋನ್​ ಪ್ರತಾಪ್​ರ ತಲೆ ಒಡೆದರು. ನಮ್ರತಾ ಸಹ ಅದನ್ನೇ ಮಾಡಿದರು. ಸಂಗೀತಾ, ವಿನಯ್ ಹಾಗೂ ತುಕಾಲಿ ಅವರ ಚಿತ್ರಗಳನ್ನು ಅಂಟಿಸಿ ಮಡಿಕೆ ಒಡೆದರು. ಡ್ರೋನ್ ಪ್ರತಾಪ್ ಸಹ ವಿನಯ್ ಹಾಗೂ ಮೈಖಲ್​ರ ಚಿತ್ರ ಅಂಟಿಸಿ ಒಡೆದರು. ತುಕಾಲಿ ಸಂತು, ಡ್ರೋನ್ ಪ್ರತಾಪ್ ಹಾಗೂ ಸಂಗೀತಾರ ಮಡಿಕೆ ಒಡೆದರು. ವರ್ತೂರು ಸಂತು, ಕಾರ್ತಿಕ್ ಹಾಗೂ ವಿನಯ್​ರ ಮಡಿಕೆ ಒಡೆದರು. ಅವಿ ಅವರು ನಮ್ರತಾ ಹಾಗೂ ವಿನಯ್​ರ ಮಡಿಕೆ ಒಡೆದರು. ಕೊನೆಗೆ ಪವಿ, ತುಕಾಲಿ ಒಬ್ಬರದ್ದೇ ಮಡಿಕೆ ಒಡೆದರು. ವಿಶೇಷವಾಗಿ ಕಂಡಿದ್ದೆಂದರೆ ಕಾರ್ತಿಕ್, ತಮ್ಮ ಆತ್ಮೀಯರಾಗಿದ್ದ ಸಂಗೀತಾರ ಚಿತ್ರ ಅಂಟಿಸಿ ಮಡಿಕೆ ಒಡೆದರು. ಮನೆ ಮಂದಿಗೆ ಇದು ಶಾಕಿಂಗ್ ಎನಿಸಿತು.

ಸಂಗೀತಾ ಮತ್ತು ಡ್ರೋನ್ ಪ್ರತಾಪ್​ರಿಗೆ ತಲಾ ಐದು ಬಾರಿ ಏಟು ಬಿದ್ದಿತು. ಮನೆಯಲ್ಲಿ ಅತಿ ಹೆಚ್ಚು ಏಟು ಬಿದ್ದಿದ್ದು ಅವರಿಗೆ. ನಂತರದ ಸ್ಥಾನ ವಿನಯ್ ಹಾಗೂ ಮೈಖಲ್ ಅವರಿಗೆ. ಅವರಿಬ್ಬರಿಗೂ ತಲಾ ನಾಲ್ಕು ಏಟು ಬಿತ್ತು. ತುಕಾಲಿ, ಕಾರ್ತಿಕ್​ಗೆ ಎರಡು ಏಟು ಬಿತ್ತು.ತನಿಷಾಗೆ ಒಂದು ಬಿತ್ತು. ಅವಿ, ಪವಿ, ಸಿರಿ ಅವರಿಗೆ ಯಾವುದೇ ಏಟು ಬೀಳಲಿಲ್ಲ. ಆದರೆ ಈ ಪ್ರಕ್ರಿಯೆಯಿಂದ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಇದ್ದ ಗೆಳೆತನ ಸಂಪೂರ್ಣವಾಗಿ ಮುಗಿದಂತೆ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ