AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಸ್ಪರರ ತಲೆ ಒಡೆದ ಸ್ಪರ್ಧಿಗಳು, ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?

Bigg Boss Kannada: ಬಿಗ್​ಬಾಸ್ ಸ್ಪರ್ಧಿಗಳು ಪರಸ್ಪರರ ತಲೆ ಒಡೆದುಕೊಂಡರು. ಅಂದಹಾಗೆ ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?

ಪರಸ್ಪರರ ತಲೆ ಒಡೆದ ಸ್ಪರ್ಧಿಗಳು, ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?
ವಿನಯ್ ಮಡಿಕೆ
ಮಂಜುನಾಥ ಸಿ.
|

Updated on: Dec 17, 2023 | 11:24 PM

Share

ಬಿಗ್​ಬಾಸ್ (Bigg Boss) ಮನೆಯಲ್ಲಿ ಜಗಳ, ಕೂಗಾಟ, ಅರಚಾಟ, ಚಾಡಿ, ದೂರುಗಳೇ ಹೆಚ್ಚು. ಆದರೆ ಕಳೆದ ವಾರದ ಟಾಸ್ಕ್ ಇದಕ್ಕೆಲ್ಲ ಹೆಚ್ಚು ಅವಕಾಶ ಕೊಟ್ಟಿರಲಿಲ್ಲ. ಶಾಲೆಯ ವಾತಾವರಣ ಮರುಸೃಷ್ಟಿ ಮಾಡುವ ಟಾಸ್ಕ್​ ಆದ್ದರಿಂದ ಸ್ಪರ್ಧಿಗಳೆಲ್ಲ ಮಕ್ಕಳಂತೆ ವರ್ತಿಸಿ, ಅಗ್ರೆಷನ್​ಗೆ ಅವಕಾಶ ಇರಲಿಲ್ಲ. ಇದು ವಿನಯ್ ಹಾಗೂ ಇನ್ನೂ ಕೆಲವರಿಗೆ ಬೇಸರವೂ ಆಯಿತು. ಹಾಗಾಗಿ ವೀಕೆಂಡ್​ನಲ್ಲಿ ಸುದೀಪ್ ಅವರು ಒಂದು ವಿಶೇಷ ಆಟ ಆಡಿಸಿದರು. ಆ ಆಟದಲ್ಲಿ ಮನೆಯ ಸ್ಪರ್ಧಿಗಳು ತಮ್ಮ ಕೋಪವನ್ನು ಪ್ರದರ್ಶಿಸಿದರು, ತಮಗಾಗದವರ ತಲೆ ಒಡೆದರು.

ಒಂದು ಬೆದುರು ಬೊಂಬೆಯನ್ನು ಮನೆಯಲ್ಲಿ ನಿಲ್ಲಿಸಲಾಗಿತ್ತು, ಅದರ ಮುಖದ ಭಾಗಕ್ಕೆ ಮಡಕೆಯೊಂದನ್ನು ಹಾಕಲಾಗಿತ್ತು. ಮನೆಯ ಎಲ್ಲ ಸ್ಪರ್ಧಿಗಳ ಚಿತ್ರಗಳನ್ನು ಅದರ ಪಕ್ಕದಲ್ಲಿಯೇ ಟ್ರೇ ನಲ್ಲಿ ಇಡಲಾಗಿತ್ತು. ಯಾರಿಗೆ ಯಾರ ಬಗ್ಗೆ ಸಿಟ್ಟು ಇದೆಯೋ ಅವರ ಚಿತ್ರವನ್ನು ಬೆದರ ಬೊಂಬೆಯ ಮಡಿಕೆ ಮುಖಕ್ಕೆ ಹಾಕಿ ಅದನ್ನು ಸುತ್ತಿಗೆಯಿಂದ ಒಡೆಯಬೇಕಿತ್ತು. ಒಬ್ಬ ಸ್ಪರ್ಧಿಗಳು ತಲಾ ಇಬ್ಬರು ಸ್ಪರ್ಧಿಗಳ ತಲೆ ಒಡೆಯಬಹುದಾಗಿತ್ತು.

ಇದನ್ನೂ ಓದಿ:ಬಕೆಟ್​ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್​ ಸುತ್ತಿಗೆ ಏಟು; ಬಿಗ್ ಬಾಸ್​ ಸದಸ್ಯರಿಗೆ ದೊಡ್ಡ ಶಾಕ್​

ವಿನಯ್ ಯಥಾವತ್ತು, ಸಂಗೀತಾ ಹಾಗೂ ಡ್ರೋನ್​ ಪ್ರತಾಪ್​ರ ತಲೆ ಒಡೆದರು. ನಮ್ರತಾ ಸಹ ಅದನ್ನೇ ಮಾಡಿದರು. ಸಂಗೀತಾ, ವಿನಯ್ ಹಾಗೂ ತುಕಾಲಿ ಅವರ ಚಿತ್ರಗಳನ್ನು ಅಂಟಿಸಿ ಮಡಿಕೆ ಒಡೆದರು. ಡ್ರೋನ್ ಪ್ರತಾಪ್ ಸಹ ವಿನಯ್ ಹಾಗೂ ಮೈಖಲ್​ರ ಚಿತ್ರ ಅಂಟಿಸಿ ಒಡೆದರು. ತುಕಾಲಿ ಸಂತು, ಡ್ರೋನ್ ಪ್ರತಾಪ್ ಹಾಗೂ ಸಂಗೀತಾರ ಮಡಿಕೆ ಒಡೆದರು. ವರ್ತೂರು ಸಂತು, ಕಾರ್ತಿಕ್ ಹಾಗೂ ವಿನಯ್​ರ ಮಡಿಕೆ ಒಡೆದರು. ಅವಿ ಅವರು ನಮ್ರತಾ ಹಾಗೂ ವಿನಯ್​ರ ಮಡಿಕೆ ಒಡೆದರು. ಕೊನೆಗೆ ಪವಿ, ತುಕಾಲಿ ಒಬ್ಬರದ್ದೇ ಮಡಿಕೆ ಒಡೆದರು. ವಿಶೇಷವಾಗಿ ಕಂಡಿದ್ದೆಂದರೆ ಕಾರ್ತಿಕ್, ತಮ್ಮ ಆತ್ಮೀಯರಾಗಿದ್ದ ಸಂಗೀತಾರ ಚಿತ್ರ ಅಂಟಿಸಿ ಮಡಿಕೆ ಒಡೆದರು. ಮನೆ ಮಂದಿಗೆ ಇದು ಶಾಕಿಂಗ್ ಎನಿಸಿತು.

ಸಂಗೀತಾ ಮತ್ತು ಡ್ರೋನ್ ಪ್ರತಾಪ್​ರಿಗೆ ತಲಾ ಐದು ಬಾರಿ ಏಟು ಬಿದ್ದಿತು. ಮನೆಯಲ್ಲಿ ಅತಿ ಹೆಚ್ಚು ಏಟು ಬಿದ್ದಿದ್ದು ಅವರಿಗೆ. ನಂತರದ ಸ್ಥಾನ ವಿನಯ್ ಹಾಗೂ ಮೈಖಲ್ ಅವರಿಗೆ. ಅವರಿಬ್ಬರಿಗೂ ತಲಾ ನಾಲ್ಕು ಏಟು ಬಿತ್ತು. ತುಕಾಲಿ, ಕಾರ್ತಿಕ್​ಗೆ ಎರಡು ಏಟು ಬಿತ್ತು.ತನಿಷಾಗೆ ಒಂದು ಬಿತ್ತು. ಅವಿ, ಪವಿ, ಸಿರಿ ಅವರಿಗೆ ಯಾವುದೇ ಏಟು ಬೀಳಲಿಲ್ಲ. ಆದರೆ ಈ ಪ್ರಕ್ರಿಯೆಯಿಂದ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಇದ್ದ ಗೆಳೆತನ ಸಂಪೂರ್ಣವಾಗಿ ಮುಗಿದಂತೆ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ