AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಬಿಗ್​ಬಾಸ್ ಫೈನಲಿಸ್ಟ್​ಗಳಿವರು: ರೈತನ ಮಗ ಚಾಂಪಿಯನ್

Bigg Boss Telugu: ಬಿಗ್​ಬಾಸ್ ತೆಲುಗು ಸೀಸನ್ 7ರ ಫೈನಲಿಸ್ಟ್​ಗಳು ಯಾರ್ಯಾರು? ಅಂತಿಮವಾಗಿ ಗೆದ್ದಿದ್ದು ಯಾರು?

ತೆಲುಗು ಬಿಗ್​ಬಾಸ್ ಫೈನಲಿಸ್ಟ್​ಗಳಿವರು: ರೈತನ ಮಗ ಚಾಂಪಿಯನ್
ಬಿಗ್​ಬಾಸ್ ತೆಲುಗು
ಮಂಜುನಾಥ ಸಿ.
|

Updated on: Dec 17, 2023 | 7:17 PM

Share

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಪ್ರಾರಂಭವಾಗಿ 60 ದಿನಗಳಿಗೂ ಹೆಚ್ಚು ಸಮಯವಾಗಿದೆ. ಕನ್ನಡ ಬಿಗ್​ಬಾಸ್ ಸೀಸನ್ 10 ಪ್ರಾರಂಭವಾಗುವುದಕ್ಕೂ ಮುನ್ನ, ತೆಲುಗು ಬಿಗ್​ಬಾಸ್ ಆರಂಭವಾಗಿತ್ತು. ಇದೀಗ ತೆಲುಗು ಬಿಗ್​ಬಾಸ್ ಕ್ಲೈಮ್ಯಾಕ್ಸ್​ಗೆ ಬಂದಿದೆ. ತೆಲುಗು ಬಿಗ್​ಬಾಸ್ ತೆಲುಗು ಸೀಸನ್ 7ರಲ್ಲಿ ಬರೋಬ್ಬರಿ 19 ಸ್ಪರ್ಧಿಗಳು ಭಾಗಿಯಾಗಿದ್ದರು. ಆದರೆ ಅಂತಿಮವಾಗಿ ಆರು ಮಂದಿ ಸ್ಪರ್ಧಿಗಳು ಫೈನಲಿಸ್ಟ್​ಗಳಾಗಿ ಉಳಿದಿದ್ದಾರೆ.

ಸೆಪ್ಟೆಂಬರ್ 3 ರಂದು ತೆಲುಗು ಬಿಗ್​ಬಾಸ್ ಸೀಸನ್ 7 ಆರಂಭವಾಗಿತ್ತು. ಬರೋಬ್ಬರಿ 19 ಮಂದಿ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಿದ್ದರು. ಅವರಲ್ಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದಿದ್ದರು. ಅಲ್ಲಿಗೆ ಒಟ್ಟು 21 ಸ್ಪರ್ಧಿಗಳು ಈ ಬಾರಿಯ ಬಿಗ್​ಬಾಸ್ ತೆಲುಗು ಸೀಸನ್ 7ರಲ್ಲಿ ಆಡಿದರು. ಇಂದು (ಡಿಸೆಂಬರ್ 17) ಕ್ಕೆ ಫಿನಾನೆ ಎಪಿಸೋಡ್ ಪ್ರಸಾರವಾಗಲಿದ್ದು, ಆರು ಮಂದಿ ಫೈನಲಿಸ್ಟ್​ಗಳು ಗೆಲುವಿಗೆ ಹತ್ತಿರದಲ್ಲಿದ್ದಾರೆ.

ಅಮರ್​ದೀಪ್, ಪ್ರಶಾಂತ್, ಅರ್ಜುನ್, ಶಿವಾಜಿ, ಯವರ್, ಪ್ರಿಯಾಂಕಾ ಅವರುಗಳು ಫೈನಲ್​ಗೆ ಬಂದಿದ್ದಾರೆ. ಇವರಲ್ಲಿ ಒಬ್ಬರು ಆರಂಭದಲ್ಲಿಯೇ ಎಲಿಮಿನೇಟ್ ಆಗಲಿದ್ದಾರೆ. ಇನ್ನುಳಿದ ಐವರಲ್ಲಿ ಮತ್ತಿಬ್ಬರು ಎಲಿಮಿನೇಟ್ ಆಗಿ ಅಂತಿಮವಾಗಿ ಮೂವರು ಉಳಿಯಲಿದ್ದಾರೆ. ಅದರಲ್ಲಿ ಇಬ್ಬರು ಮಾತ್ರವೇ ಮನೆಯಿಂದ ಹೊರಗೆ ವೇದಿಕೆ ಮೇಲೆ ಬರಲಿದ್ದಾರೆ. ಆ ಇಬ್ಬರಲ್ಲಿ ಒಬ್ಬರನ್ನು ವಿನ್ನರ್ ಆಗಿ ನಟ ನಾಗಾರ್ಜುನ ಘೋಷಿಸಲಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಪಾಸ್ ಯಾರು? ಫೇಲ್ ಯಾರು? ಜಸ್ಟ್ ಪಾಸ್ ಆದವರ್ಯಾರು?

ಭಾನುವಾರದ ಎಪಿಸೋಡ್​ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಹರಿದಾಡುತ್ತಿರುವ ಕೆಲವು ಸುದ್ದಿಗಳ ಪ್ರಕಾರ, ಬಿಗ್​ಬಾಸ್ ಮನೆಯಲ್ಲಿದ್ದ ರೈತ ಯುವಕ ಪ್ರಶಾಂತ್ ಈ ಬಾರಿಯ ಬಿಗ್​ಬಾಸ್ ತೆಲುಗು ವಿನ್ನರ್ ಆಗಿದ್ದಾನೆ ಎನ್ನಲಾಗುತ್ತಿದೆ. ಪ್ರಶಾಂತ್ ಬಹಳ ಅಮಾಯಕ, ಪಕ್ಕಾ ಹಳ್ಳಿ ಯುವಕ, ಆದರೆ ಟಾಸ್ಕ್​ಗೆ ಇಳಿದರೆ ರಾಕ್ಷಸನಂತೆ ಆಡುತ್ತಿದ್ದ. ಆತನ ಅಮಾಯಕತೆ, ಟಾಸ್ಕ್​ ಗೆಲ್ಲಲು ಜೀವವನ್ನೇ ಒತ್ತೆ ಇಡುವ ನಿಷ್ಠೆ, ಯಾರಿಗೂ ಕೇಡು ಬಯಸದೇ ಆಡುತ್ತಿದ್ದ ರೀತಿಗೆ ಮನಸೋತು, ತೆಲುಗು ಬಿಗ್​ಬಾಸ್ ವೀಕ್ಷಕರು ಪ್ರಶಾಂತ್​ನನ್ನು ಗೆಲ್ಲಿಸಿದ್ದಾರೆ.

ಹಿರಿಯ ನಟ ಶಿವಾಜಿ ಸಹ ಈ ಬಾರಿ ಗೆಲ್ಲುವ ಸ್ಪರ್ಧಿ ಎನ್ನಲಾಗಿತ್ತು. ಬಹಳ ಚೆನ್ನಾಗಿಯೇ ಶಿವಾಜಿ ಆಡಿಕೊಂಡು ಬಂದಿದ್ದರು. ಶಿವಾಜಿ, ಮನೆಯ ಸದಸ್ಯರನ್ನು ಹಿರಿಯಣ್ಣನಂತೆ ಬೆಂಬಲಿಸಿ, ಎಲ್ಲರೊಟ್ಟಿಗೂ ಚೆನ್ನಾಗಿದ್ದರು. ಬಿಗ್​ಬಾಸ್​ನ ಅತ್ಯುತ್ತಮ ಕ್ಯಾಪ್ಟನ್ ಎನ್ನಿಸಕೊಂಡಿದ್ದರು ಸಹ. ಆದರೆ ಅಂತಿಮವಾಗಿ ಪ್ರಶಾಂತ್ ಗೆದ್ದಿದ್ದಾರೆ ಎನ್ನಲಾಗುತ್ತಿದೆ. ಗೆದ್ದವರಿಗೆ ಎಷ್ಟು ಹಣ ಸಿಕ್ಕಿತು, ರನ್ನರ್​ ಅಪ್​ಗೆ ಯಾವ ಉಡುಗೊರೆಗಳು ಸಿಕ್ಕವು ಎಂಬುದು ಇಂದಿನ ಎಪಿಸೋಡ್​ ಮುಗಿದ ಬಳಿಕ ತಿಳಿದು ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್