AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯಲ್ಲಿ ಪಾಸ್ ಯಾರು? ಫೇಲ್ ಯಾರು? ಜಸ್ಟ್ ಪಾಸ್ ಆದವರ್ಯಾರು?

Bigg Boss: ಬಿಗ್​ಬಾಸ್​ ಮನೆಯ ಪರೀಕ್ಷೆಯಲ್ಲಿ ಪಾಸ್ ಆದವರು ಯಾರು, ಫೇಲ್ ಆದವರು ಯಾರು, ಜಸ್ಟ್ ಪಾಸ್ ಮಾತ್ರ ಆದವರ್ಯಾರು?

ಬಿಗ್​ಬಾಸ್ ಮನೆಯಲ್ಲಿ ಪಾಸ್ ಯಾರು? ಫೇಲ್ ಯಾರು? ಜಸ್ಟ್ ಪಾಸ್ ಆದವರ್ಯಾರು?
Follow us
ಮಂಜುನಾಥ ಸಿ.
|

Updated on: Dec 16, 2023 | 11:50 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರಲ್ಲಿ ವಾರವೆಲ್ಲ ಶಾಲೆಯ ವಾತಾವರಣವನ್ನು ಮರುಸೃಷ್ಠಿಸಲಾಗಿತ್ತು. ಮನೆಯ ಸ್ಪರ್ಧಿಗಳು ವಿದ್ಯಾರ್ಥಿಗಳಾಗಿ, ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. ಶಿಕ್ಷಕರಾದವರು ಗಂಭೀರವಾಗಿದ್ದು ವಿದ್ಯಾರ್ಥಿಗಳು ಮಾಡುವ ತಲೆಹರಟೆಗಳನ್ನು ಸಹಿಸಿಕೊಂಡು ಅವರಿಗೆ ನೀಡಲಾಗಿದ್ದ ವಿಷಯವನ್ನು ಬೋಧಿಸಬೇಕಿತ್ತು, ವಿದ್ಯಾರ್ಥಿಗಳಾಗಿದ್ದವರು ತರಲೆ ಮಾಡುತ್ತಾ, ಕ್ರಿಯಾಶೀಲವಾಗಿ ವರ್ತಿಸಬೇಕಿತ್ತು. ಈ ಟಾಸ್ಕ್​ನಲ್ಲಿ ಮನೆಯ ಎಲ್ಲ ಸ್ಪರ್ಧಿಗಳು ಭಾಗಿಯಾಗಿದ್ದರು, ಆದರೆ ಕೆಲವರು ಮಾತ್ರವೇ ಚೆನ್ನಾಗಿ ಪ್ರದರ್ಶನ ನೀಡಿದರು.

ಶನಿವಾರದಂದು ವಾರದ ಪಂಚಾಯಿತಿಗೆ ಆಗಮಿಸಿದ್ದ ನಟ ಕಿಚ್ಚ ಸುದೀಪ್, ಮನೆಯ ಸದಸ್ಯರು ಈ ಟಾಸ್ಕ್ ಅನ್ನು ಆಡಿದ ರೀತಿಯನ್ನು ಟೀಕಿಸಿದರು. ರಾಕ್ಷಸರು-ಗಂಧರ್ವರು ಟಾಸ್ಕ್​ ಅನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಜಗಳವಾಡಿದ್ದ, ಕಿತ್ತಾಡಿದ್ದ ನೀವುಗಳು, ಇದೊಂದು ಕ್ರಿಯಾಶೀಲವಾದ ಟಾಸ್ಕ್ ಅನ್ನು ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಪ್ರಶ್ನೆ ಕೇಳಿದರು. ಬಹಳ ನಿರ್ಲಕ್ಷ್ಯದಿಂದ ಈ ಟಾಸ್ಕ್​ ಅನ್ನು ಆಡಿದಿರಿ, ಮನೆಯ ಎಷ್ಟೋ ಸದಸ್ಯರಿಗೆ ಟಾಸ್ಕ್​ ಸರಿಯಾಗಿ ಅರ್ಥವೂ ಆಗಲಿಲ್ಲ ಎಂದು ಜರಿದರು. ಅಲ್ಲದೆ, ಇಂಥಹಾ ಒಂದು ಬಹಳ ಒಳ್ಳೆಯ ಅವಕಾಶವನ್ನು ನೀವು ಮಿಸ್ ಮಾಡಿಕೊಂಡಿರಿ ಎಂದರು ಸಹ.

ಅಂತಿಮವಾಗಿ ಬೋರ್ಡ್ ಒಂದನ್ನು ಇಟ್ಟು, ಬಿಗ್​ಬಾಸ್ ಮನೆಯಲ್ಲಿ ಯಾರು ಪಾಸ್, ಯಾರು ಫೇಲ್ ಹಾಗೂ ಯಾರು ಜಸ್ಟ್ ಪಾಸ್ ಎಂದು ಮನೆಯ ಸದಸ್ಯರು ನಿರ್ಣಯಿಸುವಂತೆ ಹೇಳಿದರು. ಮನೆಯ ಸದಸ್ಯರೆಲ್ಲ ಬೋರ್ಡ್​ ಬಳಿ ಬಂದು ಪಾಸ್, ಫೇಲ್ ಹಾಗೂ ಜಸ್ಟ್ ಪಾಸ್ ಕಾಲಂಗಳಲ್ಲಿ ಚಿತ್ರಗಳನ್ನು ಅಂಟಿಸಿದರು. ಅದರ ಪ್ರಕಾರ, ಮನೆಯಲ್ಲಿ ಪಾಸ್ ಆಗಿರುವುದು ತುಕಾಲಿ ಸಂತು, ಜಸ್ಟ್ ಪಾಸ್ ಹಂತದಲ್ಲಿರುವುದು ಡ್ರೋನ್ ಪ್ರತಾಪ್, ಫೇಲ್ ಆಗಿರುವುದು ಅವಿ ಮತ್ತು ಪವಿ.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 10ರ ಟಾಪ್ 5 ಯಾರು?​ ವಿನ್ನರ್ ಯಾರಾಗ್ತಾರೆ? ಸ್ನೇಹಿತ್ ಕೊಟ್ಟರು ಉತ್ತರ

ಫಲಿತಾಂಶದ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ಇದೇ ರೀತಿಯ ಚಟುವಟಿಕೆಯೊಂದನ್ನು ಕೆಲವು ವಾರಗಳ ಹಿಂದೆ ಮಾಡಿದ್ದಾಗ ಅದರಲ್ಲಿ ತುಕಾಲಿಯ ಹೆಸರೇ ಬಂದಿರಲಿಲ್ಲ ಆದರೆ ಈಗ ಅವರು ಟಾಪ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಟಾಪ್​ನಲ್ಲಿದ್ದವರು ಜಸ್ಟ್​ ಪಾಸ್​ ಆಗಲೂ ಕಷ್ಟಪಟ್ಟಿದ್ದಾರೆ. ಕಾರ್ತಿಕ್ ಹಾಗೂ ವಿನಯ್ ಪೂರ್ಣ ಪಾಸ್-ಪೂರ್ಣ ಫೇಲ್ ಅನ್ನಿಸಿಕೊಂಡಿಲ್ಲ. ನಮ್ರತಾ ಹೆಸರು ಪಾಸ್, ಫೇಲ್, ಜಸ್ಟ್ ಪಾಸ್ ಮೂರರಲ್ಲೂ ಇಲ್ಲ ಹಾಗಾಗಿ ಅವರೇ ಈ ಬಗ್ಗೆ ಹೆಚ್ಚಾಗಿ ಯೋಚಿಸಬೇಕಿದೆ ಎಂದರು.

ಈ ವಾರ ನಾಮಿನೇಟ್ ಆದವರಲ್ಲಿ ವಿನಯ್ ಅನ್ನು ಹೊರತುಪಡಿಸಿ ಇನ್ಯಾರನ್ನೂ ಸಹ ಸುದೀಪ್ ಸೇವ್ ಮಾಡಲಿಲ್ಲ. ಸಂಗೀತಾ, ಡ್ರೋನ್ ಪ್ರತಾಪ್, ಅವಿ, ಪವಿ, ಮೈಕಲ್, ಕಾರ್ತಿಕ್ ಅವರುಗಳಲ್ಲಿ ಯಾರು ಹೊರಗೆ ಹೋಗಲಿದ್ದಾರೆ ಎಂಬುದು ನಾಳೆ ಗೊತ್ತಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ