AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಮನೆಯಿಂದ ಹೊರಬಂದಿದ್ದು ಯಾರು? ಸುದೀಪ್ ಕೊಟ್ಟರು ಟ್ವಿಸ್ಟ್

Bigg Boss: ಬಿಗ್​ಬಾಸ್ ಮನೆಯಿಂದ ಪ್ರತಿ ವಾರವೂ ಒಬ್ಬರು ಸದಸ್ಯರು ಹೊರಗೆ ಬರುವುದು ಸಾಮಾನ್ಯ. ಈ ವಾರಾಂತ್ಯವೂ ಒಬ್ಬರು ಹೊರಗೆ ಬರಬೇಕಿತ್ತು, ಆದರೆ ನಿರೂಪಕ ಸುದೀಪ್ ಟ್ವಿಸ್ಟ್ ಒಂದನ್ನು ನೀಡಿದ್ದಾರೆ. ಏನದು?

ಈ ವಾರ ಮನೆಯಿಂದ ಹೊರಬಂದಿದ್ದು ಯಾರು? ಸುದೀಪ್ ಕೊಟ್ಟರು ಟ್ವಿಸ್ಟ್
ಸುದೀಪ್
ಮಂಜುನಾಥ ಸಿ.
|

Updated on: Oct 29, 2023 | 11:27 PM

Share

ಸಾಮಾನ್ಯ ಜನರಿಗೆ ವಾರಾಂತ್ಯ ಎಂಬುದು ರಜೆಯ ಸಮಯ ಮೋಜಿನ ಸಮಯ ಆದರೆ ಬಿಗ್​ಬಾಸ್ (Bigg Boss) ಮನೆ ಸ್ಪರ್ಧಿಗಳಿಗೆ ಮೋಜಿನ ಜೊತೆ-ಜೊತೆಗೆ ಭಯದ ದಿನಗಳೂ ಹೌದು. ಏಕೆಂದರೆ ಪ್ರತಿ ವಾರಾಂತ್ಯಕ್ಕೆ ಬಿಗ್​ಬಾಸ್ ಸದಸ್ಯರ ಎದುರು ಹಾಜರಾಗುವ ನಟ ಸುದೀಪ್, ಸ್ಪರ್ಧಿಗಳನ್ನು ನಗಿಸಿ, ಅವರ ತಪ್ಪುಗಳನ್ನು ತಿದ್ದಿ, ಸ್ಪೂರ್ತಿ ತುಂಬಿ ಮುಂದಿನ ವಾರದ ಆಟಕ್ಕೆ ತಯಾರು ಮಾಡುತ್ತಾರೆ. ಆದರೆ ಇದರ ಜೊತೆಗೆ ಪ್ರತಿ ವಾರವೂ ಒಬ್ಬೊಬ್ಬರನ್ನು ತಮ್ಮೊಟ್ಟಿಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಅಂತೆಯೇ ಬಿಗ್​ಬಾಸ್ ಮನೆಯಿಂದ ಈವರೆಗೆ ಇಬ್ಬರನ್ನು ಹೊರಗೆ ಕರೆದುಕೊಂಡು ಹೋಗಿರುವ ಸುದೀಪ್​, ಈ ವಾರಾಂತ್ಯವೂ ಎಲಿಮಿನೇಷನ್ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಶನಿವಾರದ ಎಪಿಸೋಡ್​ನಲ್ಲಿ ಕಾರ್ತಿಕ್ ಸೇರಿದಂತೆ ಕೆಲವರು ನಾಮಿನೇಷನ್​ನಿಂದ ಸೇಫ್ ಆಗಿರುವ ವಿಷಯ ಘೋಷಿಸಿದ್ದ ಸುದೀಪ್, ಭಾನುವಾರದ ಎಪಿಸೋಡ್​ ಅನ್ನು ತಮಾಷೆಯಾಗಿ ಪ್ರಾರಂಭಿಸಿದರು. ತುಕಾಲಿ ಸಂತುವನ್ನು ಮತ್ತೊಮ್ಮೆ ಗೋಳು ಹೊಯ್ದುಕೊಂಡರು. ಆ ಬಳಿಕ ಹೋದ ವಾರ ಆಡಿಸಿದ್ದ ಗಾದೆ ಆಟವನ್ನು ಮುಂದುವರೆಸಿದ ಸುದೀಪ್, ಕಳೆದ ವಾರ ಸದಸ್ಯರಿಗೆ ನೀಡಲಾಗಿದ್ದ ಗಾದೆಯ ಬೋರ್ಡ್​ಗಳನ್ನು ಬೇರೆಯವರಿಗೆ ನೀಡುವಂತೆ ಹೇಳಿದರು ಸುದೀಪ್. ಅಂತೆಯೇ ಮನೆಯ ಸದಸ್ಯರು ತಮಗೆ ನೀಡಿದ ಬೋರ್ಡ್​ಗಳನ್ನು ಬೇರೆ-ಬೇರೆಯವರಿಗೆ ನೀಡಿದರು. ಅದಕ್ಕೆ ತಕ್ಕ ಕಾರಣಗಳನ್ನೂ ಸಹ ನೀಡಿದರು.

ಇದನ್ನೂ ಓದಿ:ಆನೆ ಹೊಡೆಯಲು ಹುರುಪು ತುಂಬಿದ ಸುದೀಪ್: ಬದಲಾಗ್ತಾರಾ ಬಿಗ್​ಬಾಸ್ ಮನೆ ಮಂದಿ

ಸುದೀಪ್​ ಮನೆಯ ಇತರೆ ವಿಷಯಗಳನ್ನು ಮಾತನಾಡಿ ಮತ್ತೆ ಎಲಿಮಿನೇಷನ್​ ಕಡೆಗೆ ಬಂದರು. ಮೊದಲಿಗೆ ಮೈಖಲ್​ರನ್ನು ಎಲಿಮಿನೇಷನ್​ನಿಂದ ಪಾರು ಮಾಡಿದರು. ಬಳಿಕ ಸ್ನೇಹಿತ್​ರನ್ನು ಪಾರು ಮಾಡಿದರು. ಹೀಗೆ ಮಾಡುತ್ತಾ ಕೊನೆಗೆ ಉಳಿದಿದ್ದು ಭಾಗ್ಯಶ್ರೀ ಹಾಗೂ ಇಶಾನಿ. ಭಾಗ್ಯಶ್ರೀ ಅವರಿಗೆ ಬ್ಯಾಡ್​ಲಕ್ ಹೇಳಿದ ಸುದೀಪ್, ನೀವು ಬಿಗ್​ಬಾಸ್​ ಮನೆಯಿಂದ ಈ ವಾರ ಎಲಿಮಿನೇಟ್ ಆಗಿದ್ದೀರಿ ಎಂದರು ಸುದೀಪ್. ಭಾಗ್ಯಶ್ರೀ ಸಹ ಇದನ್ನು ನಿರೀಕ್ಷಿಸಿದ್ದರೇನೋ ಎಂಬಂತೆ ಸಾಮಾನ್ಯವಾಗಿಯೇ ಇದ್ದರು. ಆದರೆ ಕೊನೆಯಲ್ಲಿ ಸುದೀಪ್ ಒಂದು ಟ್ವಿಸ್ಟ್ ಕೊಟ್ಟರು.

ಭಾಗ್ಯಶ್ರೀ ಅವರು ಎಲ್ಲರಿಗೂ ಧನ್ಯವಾದ ಹೇಳಿ ಹೊರ ಹೋದರು. ಆದರೆ ಬಿಗ್​ಬಾಸ್ ಬಾಗಿಲು ತೆಗೆಯಲಿಲ್ಲ. ಆಮೇಲೆ ಸುದೀಪ್ ಧ್ವನಿ ಕೇಳಿ ಬಂತು. ಕೊನೆಯದಾಗಿ ಮೂವರನ್ನು ನೇರವಾಗಿ ನಾಮಿನೇಟ್ ಮಾಡಿ ಹೊರ ಹೋಗಿ ಎಂದರು. ಭಾಗ್ಯಶ್ರೀ ಅವರು ಇಶಾನಿ, ಮೈಖಲ್ ಹಾಗೂ ಡ್ರೋನ್ ಪ್ರತಾಪ್ ಅವರನ್ನು ನಾಮಿನೇಟ್ ಮಾಡಿದರು. ಆದರೆ ಭಾಗ್ಯಶ್ರೀ ಅವರನ್ನು ಮನೆಯ ಹೊರಗೆ ಕಳಿಸಲಿಲ್ಲ ಬಿಗ್​ಬಾಸ್.

‘ಭಾಗ್ಯಶ್ರೀ ಅವರೇ ಈ ವಾರ ನೀವು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುತ್ತಿಲ್ಲ. ದಸರಾ ಸಮಯದಲ್ಲಿ ಪ್ರೇಕ್ಷಕ ಪ್ರಭುಗಳು ಈ ಬೇಡಿಕೆ ಇಟ್ಟಿದ್ದರು ಹಾಗಾಗಿ ನಾವದನ್ನು ಈಡೇರಿಸುತ್ತಿದ್ದೀವಿ. ನೀವು ಈ ವಾರ ಹೊರಗೆ ಹೋಗುತ್ತಿಲ್ಲ” ಎಂದರು. ಶೋನ ಕೊನೆಯಲ್ಲಿ ಈ ವಾರ ಹಾಕಿರುವ ಮತಗಳು ವ್ಯರ್ಥವಾಗುವುದಿಲ್ಲ, ಈ ವಾರದ ಮತಗಳು ಮುಂದಿನ ವಾರಕ್ಕೆ ಕಾಯ್ದಿರಿಸಲಾಗುತ್ತದೆ ಎಂದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ