AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಮನೆಯಿಂದ ಹೊರಬಂದಿದ್ದು ಯಾರು? ಸುದೀಪ್ ಕೊಟ್ಟರು ಟ್ವಿಸ್ಟ್

Bigg Boss: ಬಿಗ್​ಬಾಸ್ ಮನೆಯಿಂದ ಪ್ರತಿ ವಾರವೂ ಒಬ್ಬರು ಸದಸ್ಯರು ಹೊರಗೆ ಬರುವುದು ಸಾಮಾನ್ಯ. ಈ ವಾರಾಂತ್ಯವೂ ಒಬ್ಬರು ಹೊರಗೆ ಬರಬೇಕಿತ್ತು, ಆದರೆ ನಿರೂಪಕ ಸುದೀಪ್ ಟ್ವಿಸ್ಟ್ ಒಂದನ್ನು ನೀಡಿದ್ದಾರೆ. ಏನದು?

ಈ ವಾರ ಮನೆಯಿಂದ ಹೊರಬಂದಿದ್ದು ಯಾರು? ಸುದೀಪ್ ಕೊಟ್ಟರು ಟ್ವಿಸ್ಟ್
ಸುದೀಪ್
ಮಂಜುನಾಥ ಸಿ.
|

Updated on: Oct 29, 2023 | 11:27 PM

Share

ಸಾಮಾನ್ಯ ಜನರಿಗೆ ವಾರಾಂತ್ಯ ಎಂಬುದು ರಜೆಯ ಸಮಯ ಮೋಜಿನ ಸಮಯ ಆದರೆ ಬಿಗ್​ಬಾಸ್ (Bigg Boss) ಮನೆ ಸ್ಪರ್ಧಿಗಳಿಗೆ ಮೋಜಿನ ಜೊತೆ-ಜೊತೆಗೆ ಭಯದ ದಿನಗಳೂ ಹೌದು. ಏಕೆಂದರೆ ಪ್ರತಿ ವಾರಾಂತ್ಯಕ್ಕೆ ಬಿಗ್​ಬಾಸ್ ಸದಸ್ಯರ ಎದುರು ಹಾಜರಾಗುವ ನಟ ಸುದೀಪ್, ಸ್ಪರ್ಧಿಗಳನ್ನು ನಗಿಸಿ, ಅವರ ತಪ್ಪುಗಳನ್ನು ತಿದ್ದಿ, ಸ್ಪೂರ್ತಿ ತುಂಬಿ ಮುಂದಿನ ವಾರದ ಆಟಕ್ಕೆ ತಯಾರು ಮಾಡುತ್ತಾರೆ. ಆದರೆ ಇದರ ಜೊತೆಗೆ ಪ್ರತಿ ವಾರವೂ ಒಬ್ಬೊಬ್ಬರನ್ನು ತಮ್ಮೊಟ್ಟಿಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಅಂತೆಯೇ ಬಿಗ್​ಬಾಸ್ ಮನೆಯಿಂದ ಈವರೆಗೆ ಇಬ್ಬರನ್ನು ಹೊರಗೆ ಕರೆದುಕೊಂಡು ಹೋಗಿರುವ ಸುದೀಪ್​, ಈ ವಾರಾಂತ್ಯವೂ ಎಲಿಮಿನೇಷನ್ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಶನಿವಾರದ ಎಪಿಸೋಡ್​ನಲ್ಲಿ ಕಾರ್ತಿಕ್ ಸೇರಿದಂತೆ ಕೆಲವರು ನಾಮಿನೇಷನ್​ನಿಂದ ಸೇಫ್ ಆಗಿರುವ ವಿಷಯ ಘೋಷಿಸಿದ್ದ ಸುದೀಪ್, ಭಾನುವಾರದ ಎಪಿಸೋಡ್​ ಅನ್ನು ತಮಾಷೆಯಾಗಿ ಪ್ರಾರಂಭಿಸಿದರು. ತುಕಾಲಿ ಸಂತುವನ್ನು ಮತ್ತೊಮ್ಮೆ ಗೋಳು ಹೊಯ್ದುಕೊಂಡರು. ಆ ಬಳಿಕ ಹೋದ ವಾರ ಆಡಿಸಿದ್ದ ಗಾದೆ ಆಟವನ್ನು ಮುಂದುವರೆಸಿದ ಸುದೀಪ್, ಕಳೆದ ವಾರ ಸದಸ್ಯರಿಗೆ ನೀಡಲಾಗಿದ್ದ ಗಾದೆಯ ಬೋರ್ಡ್​ಗಳನ್ನು ಬೇರೆಯವರಿಗೆ ನೀಡುವಂತೆ ಹೇಳಿದರು ಸುದೀಪ್. ಅಂತೆಯೇ ಮನೆಯ ಸದಸ್ಯರು ತಮಗೆ ನೀಡಿದ ಬೋರ್ಡ್​ಗಳನ್ನು ಬೇರೆ-ಬೇರೆಯವರಿಗೆ ನೀಡಿದರು. ಅದಕ್ಕೆ ತಕ್ಕ ಕಾರಣಗಳನ್ನೂ ಸಹ ನೀಡಿದರು.

ಇದನ್ನೂ ಓದಿ:ಆನೆ ಹೊಡೆಯಲು ಹುರುಪು ತುಂಬಿದ ಸುದೀಪ್: ಬದಲಾಗ್ತಾರಾ ಬಿಗ್​ಬಾಸ್ ಮನೆ ಮಂದಿ

ಸುದೀಪ್​ ಮನೆಯ ಇತರೆ ವಿಷಯಗಳನ್ನು ಮಾತನಾಡಿ ಮತ್ತೆ ಎಲಿಮಿನೇಷನ್​ ಕಡೆಗೆ ಬಂದರು. ಮೊದಲಿಗೆ ಮೈಖಲ್​ರನ್ನು ಎಲಿಮಿನೇಷನ್​ನಿಂದ ಪಾರು ಮಾಡಿದರು. ಬಳಿಕ ಸ್ನೇಹಿತ್​ರನ್ನು ಪಾರು ಮಾಡಿದರು. ಹೀಗೆ ಮಾಡುತ್ತಾ ಕೊನೆಗೆ ಉಳಿದಿದ್ದು ಭಾಗ್ಯಶ್ರೀ ಹಾಗೂ ಇಶಾನಿ. ಭಾಗ್ಯಶ್ರೀ ಅವರಿಗೆ ಬ್ಯಾಡ್​ಲಕ್ ಹೇಳಿದ ಸುದೀಪ್, ನೀವು ಬಿಗ್​ಬಾಸ್​ ಮನೆಯಿಂದ ಈ ವಾರ ಎಲಿಮಿನೇಟ್ ಆಗಿದ್ದೀರಿ ಎಂದರು ಸುದೀಪ್. ಭಾಗ್ಯಶ್ರೀ ಸಹ ಇದನ್ನು ನಿರೀಕ್ಷಿಸಿದ್ದರೇನೋ ಎಂಬಂತೆ ಸಾಮಾನ್ಯವಾಗಿಯೇ ಇದ್ದರು. ಆದರೆ ಕೊನೆಯಲ್ಲಿ ಸುದೀಪ್ ಒಂದು ಟ್ವಿಸ್ಟ್ ಕೊಟ್ಟರು.

ಭಾಗ್ಯಶ್ರೀ ಅವರು ಎಲ್ಲರಿಗೂ ಧನ್ಯವಾದ ಹೇಳಿ ಹೊರ ಹೋದರು. ಆದರೆ ಬಿಗ್​ಬಾಸ್ ಬಾಗಿಲು ತೆಗೆಯಲಿಲ್ಲ. ಆಮೇಲೆ ಸುದೀಪ್ ಧ್ವನಿ ಕೇಳಿ ಬಂತು. ಕೊನೆಯದಾಗಿ ಮೂವರನ್ನು ನೇರವಾಗಿ ನಾಮಿನೇಟ್ ಮಾಡಿ ಹೊರ ಹೋಗಿ ಎಂದರು. ಭಾಗ್ಯಶ್ರೀ ಅವರು ಇಶಾನಿ, ಮೈಖಲ್ ಹಾಗೂ ಡ್ರೋನ್ ಪ್ರತಾಪ್ ಅವರನ್ನು ನಾಮಿನೇಟ್ ಮಾಡಿದರು. ಆದರೆ ಭಾಗ್ಯಶ್ರೀ ಅವರನ್ನು ಮನೆಯ ಹೊರಗೆ ಕಳಿಸಲಿಲ್ಲ ಬಿಗ್​ಬಾಸ್.

‘ಭಾಗ್ಯಶ್ರೀ ಅವರೇ ಈ ವಾರ ನೀವು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುತ್ತಿಲ್ಲ. ದಸರಾ ಸಮಯದಲ್ಲಿ ಪ್ರೇಕ್ಷಕ ಪ್ರಭುಗಳು ಈ ಬೇಡಿಕೆ ಇಟ್ಟಿದ್ದರು ಹಾಗಾಗಿ ನಾವದನ್ನು ಈಡೇರಿಸುತ್ತಿದ್ದೀವಿ. ನೀವು ಈ ವಾರ ಹೊರಗೆ ಹೋಗುತ್ತಿಲ್ಲ” ಎಂದರು. ಶೋನ ಕೊನೆಯಲ್ಲಿ ಈ ವಾರ ಹಾಕಿರುವ ಮತಗಳು ವ್ಯರ್ಥವಾಗುವುದಿಲ್ಲ, ಈ ವಾರದ ಮತಗಳು ಮುಂದಿನ ವಾರಕ್ಕೆ ಕಾಯ್ದಿರಿಸಲಾಗುತ್ತದೆ ಎಂದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ