AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್​ನಲ್ಲಿ ಇತಿಹಾಸ ಸೃಷ್ಟಿಸಿದ ಹನುಮಂತು, ರಜತ್, ಭೇಷ್ ಎಂದ ಕಿಚ್ಚ

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆಯಲ್ಲಿ ರಜತ್, ಹನುಮಂತು, ಮೋಕ್ಷಿತಾ, ಉಗ್ರಂ ಮಂಜು, ತ್ರಿವಿಕ್ರಮ್ ಉಳಿದುಕೊಂಡಿದ್ದಾರೆ. ಆದರೆ ಹನುಮಂತು ಮತ್ತು ರಜತ್ ಮಾತ್ರ ಬಿಗ್​ಬಾಸ್ ಕನ್ನಡ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಕಿಚ್ಚ ಸುದೀಪ್ ಇಂದ ಭೇಷ್ ಎನಿಸಿಕೊಂಡಿದ್ದಾರೆ.

ಬಿಗ್​ಬಾಸ್​ನಲ್ಲಿ ಇತಿಹಾಸ ಸೃಷ್ಟಿಸಿದ ಹನುಮಂತು, ರಜತ್, ಭೇಷ್ ಎಂದ ಕಿಚ್ಚ
Hanumantha Rajath
ಮಂಜುನಾಥ ಸಿ.
|

Updated on: Jan 26, 2025 | 7:28 PM

Share

ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆ ನಡೆಯುತ್ತಿದೆ. ಆರು ಮಂದಿ ಫೈನಲಿಸ್ಟ್​ಗಳಲ್ಲಿ ಶನಿವಾರದ ದಿನ ಭವ್ಯಾ ಗೌಡ ಎಲಿಮಿನೇಟ್ ಆಗಿದ್ದಾರೆ. ಈಗ ಮನೆಯಲ್ಲಿ ಉಳಿದಿರುವುದು ಐದು ಮಂದಿ ಮಾತ್ರ. ಮೋಕ್ಷಿತಾ, ಉಗ್ರಂ ಮಂಜು, ಹನುಮಂತು, ರಜತ್ ಮತ್ತು ತ್ರಿವಿಕ್ರಮ್ ಅವರುಗಳು ಬಿಗ್​ಬಾಸ್ ಟ್ರೋಫಿಗಾಗಿ ಸೆಣಸುತ್ತಿದ್ದು, ಇಂದು ರಾತ್ರಿಯೇ ವಿಜೇತರ ಘೋಷಣೆ ಆಗಲಿದೆ. ಐವರು ಫೈನಲಿಸ್ಟ್​ಗಳಲ್ಲಿ ರಜತ್ ಮತ್ತು ಹನುಮಂತು ಮಾತ್ರ ತುಸು ಭಿನ್ನ ಅದಕ್ಕೆ ಕಾರಣವೂ ಇದೆ.

ಹನುಮಂತು ಮತ್ತು ರಜತ್ ಅವರುಗಳು ಬಿಗ್​ಬಾಸ್ ಸೀಸನ್ ಪ್ರಾರಂಭವಾದಾಗ ಮನೆ ಸೇರಿದವರಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು. ಬಿಗ್​ಬಾಸ್ ಆರಂಭವಾದ ಮೂರು ವಾರಗಳ ಬಳಿಕ ಹನುಮಂತು ಮನೆಗೆ ಎಂಟ್ರಿ ಕೊಟ್ಟರು. ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಹನುಮಂತನನ್ನು ಶೋಗೆ ಕರೆತರಲಾಯ್ತು. ಜಗದೀಶ್ ಮತ್ತು ರಂಜಿತ್ ಪರಸ್ಪರ ಹೊಡೆದಾಡಿಕೊಂಡ ಕಾರಣ ಅವರನ್ನು ಮನೆಯಿಂದ ಹೊರಗೆ ಹಾಕಲಾಯ್ತು. ಬರೀ ಜಗಳವೇ ತುಂಬಿದ್ದ ಮನೆಗೆ ಹನುಮಂತನ ಎಂಟ್ರಿ ಆಯ್ತು. ಆ ನಂತರ ಮನೆಯ ವಾತಾವರಣವೇ ಬದಲಾಯ್ತು.

ಬಿಗ್​ಬಾಸ್ ಪ್ರಾರಂಭವಾಗಿ 50 ದಿನದ ಬಳಿಕ ರಜತ್ ಎಂಟ್ರಿ ಆಯ್ತು. ಉಗ್ರಂ ಮಂಜು, ತ್ರಿವಿಕ್ರಮ್ ಅವರನ್ನು ಹೊರತುಪಡಿಸಿದರೆ ಬೇರೆ ಸ್ಪರ್ಧಿಯೇ ಮನೆಯಲ್ಲಿಲ್ಲ ಎಂದುಕೊಳ್ಳುವ ಸಮಯದಲ್ಲಿ ಬಂದ ರಜತ್, ತಮ್ಮ ನೇರಾ-ನೇರಾ ಆಟದ ವೈಖರಿಯಿಂದ ಹಲವರನ್ನು ಮನೆಯಿಂದ ಹೊರಗೆ ಹಾಕಿದರು. ಇದೀಗ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಇಬ್ಬರು ಆಟಗಾರರು ಫೈನಲಿಸ್ಟ್​ಗಳಾಗಿದ್ದಾರೆ. ಇದು ಬಿಗ್​ಬಾಸ್ ಕನ್ನಡ ಇತಿಹಾಸದಲ್ಲೇ ಮೊದಲು.

ಇದನ್ನೂ ಓದಿ:ಕೊನೆಯ ಮೆಟ್ಟಿಲಲ್ಲಿ ಎಡವಿದ ಭವ್ಯಾ, ಬಿಗ್​ಬಾಸ್ ಮನೆಯಿಂದ ಹೊರಕ್ಕೆ

ಫಿನಾಲೆ ವೇದಿಕೆಯಲ್ಲಿ ಈ ವಿಷಯ ಮಾತನಾಡಿದ ಸುದೀಪ್, ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರಿಗೆ ಒಂದು ಅಡ್ವಾಂಟೇಜ್ ಜೊತೆಗೆ ಹಲವು ಡಿಸ್ ಅಟ್ವಾಂಟೇಜ್​ಗಳು ಸಹ ಇರುತ್ತವೆ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರು ಶೋ ಅನ್ನು ನೋಡಿ, ಸ್ಪರ್ಧಿಗಳ ಮನಸ್ಥಿತಿ, ವ್ಯಕ್ತಿತ್ವ ಇನ್ನಿತರೆಗಳನ್ನು ಅರ್ಥ ಮಾಡಿಕೊಂಡು ಒಳಗೆ ಹೋಗಿರುತ್ತಾರೆ. ಅವರಿಗೆ ಗೇಮ್ ಪ್ಲ್ಯಾನ್ ಮಾಡುವುದು ಸುಲಭ ಹಾಗಿದ್ದರೂ ಸಹ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು ಎರಡು ಮೂರು ವಾರಕ್ಕೂ ಹೆಚ್ಚು ಉಳಿದಿದ್ದೇ ಇಲ್ಲ ಎಂದಿದ್ದಾರೆ ಸುದೀಪ್.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರಿಗೆ ಸದಾ ಎದುರಾಗುವ ಒಂದು ಸಮಸ್ಯೆ ಎಂದರೆ ಮನೆಯ ಒಳಗಿರುವವರು ಅವರನ್ನು ಸದಾ ಹೊರಗಿನವರಂತೆ ನೋಡುತ್ತಾರೆ. ನಮ್ಮಷ್ಟು ಕಷ್ಟ ನೀನು ಪಟ್ಟಿಲ್ಲ, ಅರ್ಧಕ್ಕೆ ಬಂದವನು ಎಂದು ಛೇಡಿಸುತ್ತಾರೆ. ಇಷ್ಟೆಲ್ಲ ಇದ್ದರೂ ಸಹ ನೀವು ಎಲ್ಲವನ್ನೂ ಎದುರಿಸಿಕೊಂಡು ಫಿನಾಲೆ ವರೆಗೆ ಬಂದಿದ್ದೀರಿ. ಇದು ಸಾಮಾನ್ಯ ಸಾಧನೆಯಲ್ಲ. ಬಿಗ್​ಬಾಸ್ ಇತಿಹಾಸದಲ್ಲೇ ಫಿನಾಲೆ ತಲುಪಿದ ವೈಲ್ಡ್ ಕಾರ್ಡ್ ಸ್ಪರ್ಧಿಗಳು ನೀವು ಎಂದು ಭೇಷ್ ಎಂದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?