AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಂತು-ಧನರಾಜ್ ಒಟ್ಟಿಗೆ ಸ್ನಾನ, ಸಲಹೆ ಕೊಟ್ಟ ಸುದೀಪ್

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ನ ಶನಿವಾರದ ಎಪಿಸೋಡ್​ನಲ್ಲಿ ಹನುಮಂತು ಹಾಗೂ ಧನರಾಜ್ ಕುರಿತು ಸುದೀಪ್ ಮಾತನಾಡಿದರು. ಇಬ್ಬರೂ ಒಟ್ಟಿಗೆ ಸ್ನಾನ ಮಾಡಿದ ವಿಚಾರ ಮನೆ ಮಂದಿಯನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಹನುಮಂತು-ಧನರಾಜ್ ಒಟ್ಟಿಗೆ ಸ್ನಾನ, ಸಲಹೆ ಕೊಟ್ಟ ಸುದೀಪ್
ಮಂಜುನಾಥ ಸಿ.
|

Updated on:Nov 24, 2024 | 7:50 AM

Share

ಬಿಗ್​ಬಾಸ್ ಕನ್ನಡದ ಪ್ರತಿ ಸೀಸನ್​ನಲ್ಲೂ ಕೆಲವು ಸ್ಪರ್ಧಿಗಳು ಒಳ್ಳೆಯ ಗೆಳೆಯರಾಗುತ್ತಾರೆ. ಲವ್​ ಸ್ಟೋರಿ ನಡೆಯಬಹುದು ನಡೆಯದೇ ಇರಬಹುದು ಆದರೆ ಗೆಳೆತನವಂತೂ ಪಕ್ಕಾ. ಕಳೆದ ಬಾರಿ ವರ್ತೂರು ಸಂತೋಷ್-ತುಕಾಲಿ ಸಂತೋಶ್, ವಿನಯ್-ಮೈಖಲ್, ಅದಕ್ಕೆ ಹಿಂದೆ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಹೀಗೆ ಪ್ರತಿ ಸೀಸನ್​ನಲ್ಲೂ ಒಂದು ಜೋಡಿ ಇರುತ್ತದೆ. ಈ ಸೀಸನ್​ನಲ್ಲಿ ಧನರಾಜ್ ಮತ್ತು ಹನುಮಂತು ಬಲು ಆತ್ಮೀಯ ಗೆಳೆಯರಾಗಿದ್ದಾರೆ. ಅದೆಷ್ಟು ಆತ್ಮೀಯರಾಗಿದ್ದಾರೆಂದರೆ ಇಬ್ಬರೂ ಒಟ್ಟಿಗೆ ಸ್ನಾನ ಮಾಡುವಷ್ಟು!

ಹನುಮಂತುಗೆ ಕಿಚ್ಚ ಸುದೀಪ್ ಅವರು ಬಟ್ಟೆಗಳನ್ನು ಕಳಿಸಿಕೊಟ್ಟಿದ್ದರು. ಬಟ್ಟೆಯ ಜೊತೆ ಕಳಿಸಿದ್ದ ನೋಟ್​ನಲ್ಲಿ ದಿನವೂ ಸ್ನಾನ ಮಾಡುವಂತೆ ಹೇಳಿದ್ದರು. ಶನಿವಾರದ ಎಪಿಸೋಡ್​ನಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್, ‘ದಿನವೂ ಒಬ್ಬರೇ ಸ್ನಾನ ಮಾಡಿ’ ಎಂದು ಹೇಳಬೇಕಿತ್ತು ಎಂದು ತಮಾಷೆ ಮಾಡಿದರು ಸುದೀಪ್. ಅಸಲಿಗೆ ನಡೆದ ವಿಷಯವೆಂದರೆ ಗೆಳೆಯರಾದ ಹನುಮಂತು ಹಾಗೂ ಧನರಾಜ್ ಒಟ್ಟಿಗೆ ಬಾತ್​ರೂಂ ನಲ್ಲಿ ಸ್ನಾನ ಮಾಡಿದ್ದಾರೆ.

ಸುದೀಪ್ ಕಾಲೆಳೆದಾಗ ಈ ಬಗ್ಗೆ ಮಾತನಾಡಿದ ಹನುಮಂತು, ‘ಒಟ್ಟಿಗೆ ಜಳಕ ಮಾಡಿದರೆ ನೀರು ಉಳಿತೈತಿ ಅಂತ ಹಾಗೆ ಮಾಡಿದ್ವಿ’ ಎಂದರು. ‘ಈಜುಕೊಳದಲ್ಲಿ ಹುಡುಗ ಹುಡುಗಿ ಎಲ್ಲರೂ ಒಟ್ಟಿಗೆ ಸ್ನಾನ ಮಾಡ್ತಾರಲ್ಲ, ಹಾಗೆ ನಾವು ಬಾತ್​ರೂಂನಲ್ಲಿ ಒಟ್ಟಿಗೆ ಸ್ನಾನ ಮಾಡಿದೆವು’ ಎಂದರು. ಹನುಮಂತನ ಉತ್ತರ ಕೇಳಿ ಮನೆ ಮಂದಿ ಇನ್ನಷ್ಟು ನಕ್ಕರು. ಒಂದೊಮ್ಮೆ ನಿಮ್ಮಿಬ್ಬರಲ್ಲಿ ಒಬ್ಬರು ಇಲ್ಲ ಎಂದರೆ ಏನು ಮಾಡುತ್ತೀರಿ ಎಂಬ ಸುದೀಪ್ ಪ್ರಶ್ನೆಗೆ, ‘ಯಾರಿಗೆ ನಮ್ಮೊಂದಿಗೆ ಸ್ನಾನ ಮಾಡಲು ಇಷ್ಟವಿರುತ್ತೊ ಅವರೊಟ್ಟಿಗೆ ಸ್ನಾನ ಮಾಡುತ್ತೀವಿ’ ಎಂದರು.

ಇದನ್ನೂ ಓದಿ:ವೈಲ್ಡ್​ ಕಾರ್ಡ್ ಮೂಲಕ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಗ್ಲಾಮರ್ ಗೊಂಬೆ

ಆ ಬಳಿಕ ತುಸು ಗಂಭೀರವಾದ ಸುದೀಪ್, ‘ನೀವು ತಮಾಷೆಯಿಂದ, ಮುಗ್ಧತೆಯಿಂದ ಹೀಗೆ ಮಾಡಿರಬಹುದು ಆದರೆ ಒಂದೇ ಸಮಯದಲ್ಲಿ ಇಬ್ಬರು ಬಾತ್​ರೂಂನಲ್ಲಿ ಇರುವಂತಿಲ್ಲ ಎಂಬುದು ಬಿಗ್​ಬಾಸ್​ನ ನಿಯಮಗಳಲ್ಲಿ ಒಂದು. ನಿಮ್ಮ ಕ್ಯಾಪ್ಟನ್ ಆದರೂ ಅದನ್ನು ತಡೆಯಬೇಕಿತ್ತು. ಆದರೆ ಅವರು ತಡೆಯಲಿಲ್ಲ. ನಿಮಗೆ ಬೇಡ ಎಂದು ಹೇಳಿದರು ಆದರೆ ನಗುತ್ತಾ ನಿಮ್ಮನ್ನು ಒಟ್ಟಿಗೆ ಸ್ನಾನ ಮಾಡಲು ಬಿಟ್ಟರು. ನಿಮ್ಮ ಮುಗ್ಧತೆ ನಮಗೆ ಇಷ್ಟ ಆಗುತ್ತದೆ ಆದರೆ ನಿಯಮಗಳನ್ನು ಮುರಿಯುವುದು ಬೇಡ’ ಎಂದರು ಸುದೀಪ್.

ನಿನ್ನೆಯ ಎಪಿಸೋಡ್​ನಲ್ಲಿ ಹನುಮಂತು ಹಾಗೂ ಧನರಾಜ್ ಅವರ ವಿಡಿಯೋ ಒಂದನ್ನು ಸಹ ಪ್ಲೇ ಮಾಡಲಾಯ್ತು. ಶೋಭಾ ಶೆಟ್ಟಿ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಬಂದಾಗ ಹನುಮಂತು ಹಾಗೂ ಧನರಾಜ್ ಶೋಭಾ ಬಗ್ಗೆ ಮಾತನಾಡಿದ ವಿಡಿಯೋ ಅದಾಗಿತ್ತು. ಆಕೆಯ ಮಾತು ಕೇಳಿ ಭಯಕ್ಕೆ ಮೂತ್ರವೇ ಬಂತು ಎಂದು ಹನುಮಂತು ಹೇಳಿದರೆ, ಧನರಾಜ್ ನಾನು ಮೂತ್ರ ಮಾಡಿಕೊಂಡು ಬಿಟ್ಟೆ ಎಂದು ಹೇಳಿರುವ ವಿಡಿಯೋ ಅದಾಗಿತ್ತು. ಇಬ್ಬರ ಮಾತು ಕೇಳಿ ಮನೆಯ ಸದಸ್ಯರು ನಕ್ಕು ಸುಸ್ತಾದರು. ಶೋಭಾ ಶೆಟ್ಟಿ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:48 am, Sun, 24 November 24

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ