AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಂತು-ಧನರಾಜ್ ಒಟ್ಟಿಗೆ ಸ್ನಾನ, ಸಲಹೆ ಕೊಟ್ಟ ಸುದೀಪ್

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ನ ಶನಿವಾರದ ಎಪಿಸೋಡ್​ನಲ್ಲಿ ಹನುಮಂತು ಹಾಗೂ ಧನರಾಜ್ ಕುರಿತು ಸುದೀಪ್ ಮಾತನಾಡಿದರು. ಇಬ್ಬರೂ ಒಟ್ಟಿಗೆ ಸ್ನಾನ ಮಾಡಿದ ವಿಚಾರ ಮನೆ ಮಂದಿಯನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಹನುಮಂತು-ಧನರಾಜ್ ಒಟ್ಟಿಗೆ ಸ್ನಾನ, ಸಲಹೆ ಕೊಟ್ಟ ಸುದೀಪ್
Follow us
ಮಂಜುನಾಥ ಸಿ.
|

Updated on:Nov 24, 2024 | 7:50 AM

ಬಿಗ್​ಬಾಸ್ ಕನ್ನಡದ ಪ್ರತಿ ಸೀಸನ್​ನಲ್ಲೂ ಕೆಲವು ಸ್ಪರ್ಧಿಗಳು ಒಳ್ಳೆಯ ಗೆಳೆಯರಾಗುತ್ತಾರೆ. ಲವ್​ ಸ್ಟೋರಿ ನಡೆಯಬಹುದು ನಡೆಯದೇ ಇರಬಹುದು ಆದರೆ ಗೆಳೆತನವಂತೂ ಪಕ್ಕಾ. ಕಳೆದ ಬಾರಿ ವರ್ತೂರು ಸಂತೋಷ್-ತುಕಾಲಿ ಸಂತೋಶ್, ವಿನಯ್-ಮೈಖಲ್, ಅದಕ್ಕೆ ಹಿಂದೆ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಹೀಗೆ ಪ್ರತಿ ಸೀಸನ್​ನಲ್ಲೂ ಒಂದು ಜೋಡಿ ಇರುತ್ತದೆ. ಈ ಸೀಸನ್​ನಲ್ಲಿ ಧನರಾಜ್ ಮತ್ತು ಹನುಮಂತು ಬಲು ಆತ್ಮೀಯ ಗೆಳೆಯರಾಗಿದ್ದಾರೆ. ಅದೆಷ್ಟು ಆತ್ಮೀಯರಾಗಿದ್ದಾರೆಂದರೆ ಇಬ್ಬರೂ ಒಟ್ಟಿಗೆ ಸ್ನಾನ ಮಾಡುವಷ್ಟು!

ಹನುಮಂತುಗೆ ಕಿಚ್ಚ ಸುದೀಪ್ ಅವರು ಬಟ್ಟೆಗಳನ್ನು ಕಳಿಸಿಕೊಟ್ಟಿದ್ದರು. ಬಟ್ಟೆಯ ಜೊತೆ ಕಳಿಸಿದ್ದ ನೋಟ್​ನಲ್ಲಿ ದಿನವೂ ಸ್ನಾನ ಮಾಡುವಂತೆ ಹೇಳಿದ್ದರು. ಶನಿವಾರದ ಎಪಿಸೋಡ್​ನಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್, ‘ದಿನವೂ ಒಬ್ಬರೇ ಸ್ನಾನ ಮಾಡಿ’ ಎಂದು ಹೇಳಬೇಕಿತ್ತು ಎಂದು ತಮಾಷೆ ಮಾಡಿದರು ಸುದೀಪ್. ಅಸಲಿಗೆ ನಡೆದ ವಿಷಯವೆಂದರೆ ಗೆಳೆಯರಾದ ಹನುಮಂತು ಹಾಗೂ ಧನರಾಜ್ ಒಟ್ಟಿಗೆ ಬಾತ್​ರೂಂ ನಲ್ಲಿ ಸ್ನಾನ ಮಾಡಿದ್ದಾರೆ.

ಸುದೀಪ್ ಕಾಲೆಳೆದಾಗ ಈ ಬಗ್ಗೆ ಮಾತನಾಡಿದ ಹನುಮಂತು, ‘ಒಟ್ಟಿಗೆ ಜಳಕ ಮಾಡಿದರೆ ನೀರು ಉಳಿತೈತಿ ಅಂತ ಹಾಗೆ ಮಾಡಿದ್ವಿ’ ಎಂದರು. ‘ಈಜುಕೊಳದಲ್ಲಿ ಹುಡುಗ ಹುಡುಗಿ ಎಲ್ಲರೂ ಒಟ್ಟಿಗೆ ಸ್ನಾನ ಮಾಡ್ತಾರಲ್ಲ, ಹಾಗೆ ನಾವು ಬಾತ್​ರೂಂನಲ್ಲಿ ಒಟ್ಟಿಗೆ ಸ್ನಾನ ಮಾಡಿದೆವು’ ಎಂದರು. ಹನುಮಂತನ ಉತ್ತರ ಕೇಳಿ ಮನೆ ಮಂದಿ ಇನ್ನಷ್ಟು ನಕ್ಕರು. ಒಂದೊಮ್ಮೆ ನಿಮ್ಮಿಬ್ಬರಲ್ಲಿ ಒಬ್ಬರು ಇಲ್ಲ ಎಂದರೆ ಏನು ಮಾಡುತ್ತೀರಿ ಎಂಬ ಸುದೀಪ್ ಪ್ರಶ್ನೆಗೆ, ‘ಯಾರಿಗೆ ನಮ್ಮೊಂದಿಗೆ ಸ್ನಾನ ಮಾಡಲು ಇಷ್ಟವಿರುತ್ತೊ ಅವರೊಟ್ಟಿಗೆ ಸ್ನಾನ ಮಾಡುತ್ತೀವಿ’ ಎಂದರು.

ಇದನ್ನೂ ಓದಿ:ವೈಲ್ಡ್​ ಕಾರ್ಡ್ ಮೂಲಕ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಗ್ಲಾಮರ್ ಗೊಂಬೆ

ಆ ಬಳಿಕ ತುಸು ಗಂಭೀರವಾದ ಸುದೀಪ್, ‘ನೀವು ತಮಾಷೆಯಿಂದ, ಮುಗ್ಧತೆಯಿಂದ ಹೀಗೆ ಮಾಡಿರಬಹುದು ಆದರೆ ಒಂದೇ ಸಮಯದಲ್ಲಿ ಇಬ್ಬರು ಬಾತ್​ರೂಂನಲ್ಲಿ ಇರುವಂತಿಲ್ಲ ಎಂಬುದು ಬಿಗ್​ಬಾಸ್​ನ ನಿಯಮಗಳಲ್ಲಿ ಒಂದು. ನಿಮ್ಮ ಕ್ಯಾಪ್ಟನ್ ಆದರೂ ಅದನ್ನು ತಡೆಯಬೇಕಿತ್ತು. ಆದರೆ ಅವರು ತಡೆಯಲಿಲ್ಲ. ನಿಮಗೆ ಬೇಡ ಎಂದು ಹೇಳಿದರು ಆದರೆ ನಗುತ್ತಾ ನಿಮ್ಮನ್ನು ಒಟ್ಟಿಗೆ ಸ್ನಾನ ಮಾಡಲು ಬಿಟ್ಟರು. ನಿಮ್ಮ ಮುಗ್ಧತೆ ನಮಗೆ ಇಷ್ಟ ಆಗುತ್ತದೆ ಆದರೆ ನಿಯಮಗಳನ್ನು ಮುರಿಯುವುದು ಬೇಡ’ ಎಂದರು ಸುದೀಪ್.

ನಿನ್ನೆಯ ಎಪಿಸೋಡ್​ನಲ್ಲಿ ಹನುಮಂತು ಹಾಗೂ ಧನರಾಜ್ ಅವರ ವಿಡಿಯೋ ಒಂದನ್ನು ಸಹ ಪ್ಲೇ ಮಾಡಲಾಯ್ತು. ಶೋಭಾ ಶೆಟ್ಟಿ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಬಂದಾಗ ಹನುಮಂತು ಹಾಗೂ ಧನರಾಜ್ ಶೋಭಾ ಬಗ್ಗೆ ಮಾತನಾಡಿದ ವಿಡಿಯೋ ಅದಾಗಿತ್ತು. ಆಕೆಯ ಮಾತು ಕೇಳಿ ಭಯಕ್ಕೆ ಮೂತ್ರವೇ ಬಂತು ಎಂದು ಹನುಮಂತು ಹೇಳಿದರೆ, ಧನರಾಜ್ ನಾನು ಮೂತ್ರ ಮಾಡಿಕೊಂಡು ಬಿಟ್ಟೆ ಎಂದು ಹೇಳಿರುವ ವಿಡಿಯೋ ಅದಾಗಿತ್ತು. ಇಬ್ಬರ ಮಾತು ಕೇಳಿ ಮನೆಯ ಸದಸ್ಯರು ನಕ್ಕು ಸುಸ್ತಾದರು. ಶೋಭಾ ಶೆಟ್ಟಿ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:48 am, Sun, 24 November 24

ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ