AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಂತು-ಧನರಾಜ್ ಒಟ್ಟಿಗೆ ಸ್ನಾನ, ಸಲಹೆ ಕೊಟ್ಟ ಸುದೀಪ್

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ನ ಶನಿವಾರದ ಎಪಿಸೋಡ್​ನಲ್ಲಿ ಹನುಮಂತು ಹಾಗೂ ಧನರಾಜ್ ಕುರಿತು ಸುದೀಪ್ ಮಾತನಾಡಿದರು. ಇಬ್ಬರೂ ಒಟ್ಟಿಗೆ ಸ್ನಾನ ಮಾಡಿದ ವಿಚಾರ ಮನೆ ಮಂದಿಯನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಹನುಮಂತು-ಧನರಾಜ್ ಒಟ್ಟಿಗೆ ಸ್ನಾನ, ಸಲಹೆ ಕೊಟ್ಟ ಸುದೀಪ್
ಮಂಜುನಾಥ ಸಿ.
|

Updated on:Nov 24, 2024 | 7:50 AM

Share

ಬಿಗ್​ಬಾಸ್ ಕನ್ನಡದ ಪ್ರತಿ ಸೀಸನ್​ನಲ್ಲೂ ಕೆಲವು ಸ್ಪರ್ಧಿಗಳು ಒಳ್ಳೆಯ ಗೆಳೆಯರಾಗುತ್ತಾರೆ. ಲವ್​ ಸ್ಟೋರಿ ನಡೆಯಬಹುದು ನಡೆಯದೇ ಇರಬಹುದು ಆದರೆ ಗೆಳೆತನವಂತೂ ಪಕ್ಕಾ. ಕಳೆದ ಬಾರಿ ವರ್ತೂರು ಸಂತೋಷ್-ತುಕಾಲಿ ಸಂತೋಶ್, ವಿನಯ್-ಮೈಖಲ್, ಅದಕ್ಕೆ ಹಿಂದೆ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಹೀಗೆ ಪ್ರತಿ ಸೀಸನ್​ನಲ್ಲೂ ಒಂದು ಜೋಡಿ ಇರುತ್ತದೆ. ಈ ಸೀಸನ್​ನಲ್ಲಿ ಧನರಾಜ್ ಮತ್ತು ಹನುಮಂತು ಬಲು ಆತ್ಮೀಯ ಗೆಳೆಯರಾಗಿದ್ದಾರೆ. ಅದೆಷ್ಟು ಆತ್ಮೀಯರಾಗಿದ್ದಾರೆಂದರೆ ಇಬ್ಬರೂ ಒಟ್ಟಿಗೆ ಸ್ನಾನ ಮಾಡುವಷ್ಟು!

ಹನುಮಂತುಗೆ ಕಿಚ್ಚ ಸುದೀಪ್ ಅವರು ಬಟ್ಟೆಗಳನ್ನು ಕಳಿಸಿಕೊಟ್ಟಿದ್ದರು. ಬಟ್ಟೆಯ ಜೊತೆ ಕಳಿಸಿದ್ದ ನೋಟ್​ನಲ್ಲಿ ದಿನವೂ ಸ್ನಾನ ಮಾಡುವಂತೆ ಹೇಳಿದ್ದರು. ಶನಿವಾರದ ಎಪಿಸೋಡ್​ನಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್, ‘ದಿನವೂ ಒಬ್ಬರೇ ಸ್ನಾನ ಮಾಡಿ’ ಎಂದು ಹೇಳಬೇಕಿತ್ತು ಎಂದು ತಮಾಷೆ ಮಾಡಿದರು ಸುದೀಪ್. ಅಸಲಿಗೆ ನಡೆದ ವಿಷಯವೆಂದರೆ ಗೆಳೆಯರಾದ ಹನುಮಂತು ಹಾಗೂ ಧನರಾಜ್ ಒಟ್ಟಿಗೆ ಬಾತ್​ರೂಂ ನಲ್ಲಿ ಸ್ನಾನ ಮಾಡಿದ್ದಾರೆ.

ಸುದೀಪ್ ಕಾಲೆಳೆದಾಗ ಈ ಬಗ್ಗೆ ಮಾತನಾಡಿದ ಹನುಮಂತು, ‘ಒಟ್ಟಿಗೆ ಜಳಕ ಮಾಡಿದರೆ ನೀರು ಉಳಿತೈತಿ ಅಂತ ಹಾಗೆ ಮಾಡಿದ್ವಿ’ ಎಂದರು. ‘ಈಜುಕೊಳದಲ್ಲಿ ಹುಡುಗ ಹುಡುಗಿ ಎಲ್ಲರೂ ಒಟ್ಟಿಗೆ ಸ್ನಾನ ಮಾಡ್ತಾರಲ್ಲ, ಹಾಗೆ ನಾವು ಬಾತ್​ರೂಂನಲ್ಲಿ ಒಟ್ಟಿಗೆ ಸ್ನಾನ ಮಾಡಿದೆವು’ ಎಂದರು. ಹನುಮಂತನ ಉತ್ತರ ಕೇಳಿ ಮನೆ ಮಂದಿ ಇನ್ನಷ್ಟು ನಕ್ಕರು. ಒಂದೊಮ್ಮೆ ನಿಮ್ಮಿಬ್ಬರಲ್ಲಿ ಒಬ್ಬರು ಇಲ್ಲ ಎಂದರೆ ಏನು ಮಾಡುತ್ತೀರಿ ಎಂಬ ಸುದೀಪ್ ಪ್ರಶ್ನೆಗೆ, ‘ಯಾರಿಗೆ ನಮ್ಮೊಂದಿಗೆ ಸ್ನಾನ ಮಾಡಲು ಇಷ್ಟವಿರುತ್ತೊ ಅವರೊಟ್ಟಿಗೆ ಸ್ನಾನ ಮಾಡುತ್ತೀವಿ’ ಎಂದರು.

ಇದನ್ನೂ ಓದಿ:ವೈಲ್ಡ್​ ಕಾರ್ಡ್ ಮೂಲಕ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಗ್ಲಾಮರ್ ಗೊಂಬೆ

ಆ ಬಳಿಕ ತುಸು ಗಂಭೀರವಾದ ಸುದೀಪ್, ‘ನೀವು ತಮಾಷೆಯಿಂದ, ಮುಗ್ಧತೆಯಿಂದ ಹೀಗೆ ಮಾಡಿರಬಹುದು ಆದರೆ ಒಂದೇ ಸಮಯದಲ್ಲಿ ಇಬ್ಬರು ಬಾತ್​ರೂಂನಲ್ಲಿ ಇರುವಂತಿಲ್ಲ ಎಂಬುದು ಬಿಗ್​ಬಾಸ್​ನ ನಿಯಮಗಳಲ್ಲಿ ಒಂದು. ನಿಮ್ಮ ಕ್ಯಾಪ್ಟನ್ ಆದರೂ ಅದನ್ನು ತಡೆಯಬೇಕಿತ್ತು. ಆದರೆ ಅವರು ತಡೆಯಲಿಲ್ಲ. ನಿಮಗೆ ಬೇಡ ಎಂದು ಹೇಳಿದರು ಆದರೆ ನಗುತ್ತಾ ನಿಮ್ಮನ್ನು ಒಟ್ಟಿಗೆ ಸ್ನಾನ ಮಾಡಲು ಬಿಟ್ಟರು. ನಿಮ್ಮ ಮುಗ್ಧತೆ ನಮಗೆ ಇಷ್ಟ ಆಗುತ್ತದೆ ಆದರೆ ನಿಯಮಗಳನ್ನು ಮುರಿಯುವುದು ಬೇಡ’ ಎಂದರು ಸುದೀಪ್.

ನಿನ್ನೆಯ ಎಪಿಸೋಡ್​ನಲ್ಲಿ ಹನುಮಂತು ಹಾಗೂ ಧನರಾಜ್ ಅವರ ವಿಡಿಯೋ ಒಂದನ್ನು ಸಹ ಪ್ಲೇ ಮಾಡಲಾಯ್ತು. ಶೋಭಾ ಶೆಟ್ಟಿ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಬಂದಾಗ ಹನುಮಂತು ಹಾಗೂ ಧನರಾಜ್ ಶೋಭಾ ಬಗ್ಗೆ ಮಾತನಾಡಿದ ವಿಡಿಯೋ ಅದಾಗಿತ್ತು. ಆಕೆಯ ಮಾತು ಕೇಳಿ ಭಯಕ್ಕೆ ಮೂತ್ರವೇ ಬಂತು ಎಂದು ಹನುಮಂತು ಹೇಳಿದರೆ, ಧನರಾಜ್ ನಾನು ಮೂತ್ರ ಮಾಡಿಕೊಂಡು ಬಿಟ್ಟೆ ಎಂದು ಹೇಳಿರುವ ವಿಡಿಯೋ ಅದಾಗಿತ್ತು. ಇಬ್ಬರ ಮಾತು ಕೇಳಿ ಮನೆಯ ಸದಸ್ಯರು ನಕ್ಕು ಸುಸ್ತಾದರು. ಶೋಭಾ ಶೆಟ್ಟಿ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:48 am, Sun, 24 November 24

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ