AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಎಲಿಮಿನೇಷನ್: ವಿಶೇಷ ಅಧಿಕಾರ ಬಳಸಿದ ಸುಧಿ, ಹೊರಬಂದಿದ್ದು ಯಾರು?

Bigg Boss Kannada 12: ಪ್ರತಿ ಭಾನುವಾರ ಬಿಗ್​​ಬಾಸ್ ಮನೆಯಿಂದ ಒಬ್ಬರು ಹೊರ ಹೋಗುತ್ತಾರೆ. ಕಳೆದ ಭಾನುವಾರ ಮಲ್ಲಮ್ಮ ಎಲಿಮಿನೇಟ್ ಆಗಿ ಹೊರಬಂದಿದ್ದರು. ಮಲ್ಲಮ್ಮ ಹೊರಗೆ ಬಂದಿದ್ದು ಹಲವು ವೀಕ್ಷಕರಿಗೆ ಬೇಸರ ತರಿಸಿತ್ತು. ಅದರಿಂದ ಸಾವರಿಸಿಕೊಳ್ಳುವ ಮುಂಚೆಯೇ ಇದೀಗ ಮತ್ತೊಂದು ಎಲಿಮಿನೇಷನ್ ಬಿಗ್​​ಬಾಸ್ ಮನೆಯಲ್ಲಿ ಆಗಿದೆ. ಆದರೆ ಈ ಬಾರಿಯ ಎಲಿಮಿನೇಷನ್​​ಗೆ ಸಖತ್ ಟ್ವಿಸ್ಟ್ ಸಹ ಇತ್ತು ಎಂಬುದು ವಿಶೇಷ.

ಬಿಗ್​​ಬಾಸ್ ಎಲಿಮಿನೇಷನ್: ವಿಶೇಷ ಅಧಿಕಾರ ಬಳಸಿದ ಸುಧಿ, ಹೊರಬಂದಿದ್ದು ಯಾರು?
Bigg Boss Kannada Elimination
ಮಂಜುನಾಥ ಸಿ.
|

Updated on: Nov 09, 2025 | 11:05 PM

Share

ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಕಳೆದ ಭಾನುವಾರದ ಎಪಿಸೋಡ್​​ನಲ್ಲಿ ಮಲ್ಲಮ್ಮ ಎಲಿಮಿನೇಟ್ ಆಗಿ ಹೊರಬಂದಿದ್ದರು. ಮಲ್ಲಮ್ಮ ಹೊರಗೆ ಬಂದಿದ್ದು ಹಲವು ವೀಕ್ಷಕರಿಗೆ ಬೇಸರ ತರಿಸಿತ್ತು. ಅದರಿಂದ ಸಾವರಿಸಿಕೊಳ್ಳುವ ಮುಂಚೆಯೇ ಇದೀಗ ಮತ್ತೊಂದು ಎಲಿಮಿನೇಷನ್ ಬಿಗ್​​ಬಾಸ್ ಮನೆಯಲ್ಲಿ ಆಗಿದೆ. ಆದರೆ ಈ ಬಾರಿಯ ಎಲಿಮಿನೇಷನ್​​ಗೆ ಸಖತ್ ಟ್ವಿಸ್ಟ್ ಸಹ ಇತ್ತು ಎಂಬುದು ವಿಶೇಷ.

ಈ ವಾರ ನಾಮಿನೇಟ್ ಆದವರಲ್ಲಿ ಅಶ್ವಿನಿ, ರಕ್ಷಿತಾ ಇನ್ನೂ ಕೆಲವರು ನಿನ್ನೆಯ ಎಪಿಸೋಡಿನಲ್ಲೇ ಪಾರಾಗಿದ್ದರು. ಭಾನುವಾರದ ಎಪಿಸೋಡ್​​ನಲ್ಲಿ ಸ್ಪಂದನ, ಧನುಶ್, ರಾಶಿಕಾ ಇನ್ನೂ ಕೆಲವರು ಸೇಫ್ ಆದರು. ಕೊನೆಯದಾಗಿ ಕಾಕ್ರೂಚ್ ಸುಧಿ ಮತ್ತು ಚಂದ್ರಪ್ರಭ ಉಳಿದುಕೊಂಡರು. ಆ ಸಮಯದಲ್ಲಿ ಕಾಕ್ರೂಚ್ ಸುಧಿ ತಮ್ಮಲ್ಲಿದ್ದ ವಿಶೇಷ ಅಧಿಕಾರ ಬಳಸಿದರು. ಆ ಅಧಿಕಾರ ಬಳಸುವ ಮೂಲಕ ಬಿಗ್​​ಬಾಸ್ ಮನೆಯಲ್ಲೇ ಉಳಿದುಕೊಂಡರು. ಚಂದ್ರಪ್ರಭಾ ಅವರು ಮತಗಳ ಲೆಕ್ಕಾಚಾರವಿಲ್ಲದೆ ಹೊರಗೆ ಬರಲೇ ಬೇಕಾಯ್ತು.

ಅಸಲಿಗೆ ಚಂದ್ರಪ್ರಭ ಅವರಿಗೂ ಸಹ ಅದೇ ಬೇಕಿತ್ತು. ಚಂದ್ರಪ್ರಭ ಅವರು ಬಿಗ್​​ಬಾಸ್ ಮನೆಯಿಂದ ಹೊರಗೆ ಬರಬೇಕೆಂದು ಮೊದಲೇ ನಿಶ್ಚಯ ಮಾಡಿದ್ದರು. ವಾರದ ಪಂಚಾಯಿತಿ ನಡೆಯುವ ಸಂದರ್ಭದಲ್ಲಿ ಬ್ರೆಕ್ ಬಿಟ್ಟಾಗ ಚಂದ್ರಪ್ರಭಾ ಅವರು ಯಾರಿಗೂ ಹೇಳದೆ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗುವ ಪ್ರಯತ್ನ ಸಹ ಮಾಡಿದ್ದರು. ಬಿಗ್​​ಬಾಸ್ ಬಾಗಿಲು ತೆರೆದು, ಗೇಟು ಡೋರನ್ನು ಬಡಿಯುತ್ತಾ ಬಾಗಿಲು ತೆಗೆಯುವಂತೆ ಕೇಳಿ ಕೊಳ್ಳುತ್ತಿದ್ದರು. ಗಿಲ್ಲಿ ಸೇರಿದಂತೆ ಇನ್ನೂ ಕೆಲವರು ಹೋಗಿ ಅವರನ್ನು ಮತ್ತೆ ಒಳಗೆ ಕರೆದುಕೊಂಡು ಬಂದರು. ಆದರೆ ಅಂತಿಮವಾಗಿ ಅವರು ಬಯಸಿದಂತೆ ಅವರೇ ಹೊರಗೆ ಬಂದರು.

ಇದನ್ನೂ ಓದಿ:ಬಿಗ್​ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಹೊರಗೆ ಬಂದ ಬಳಿಕವೂ ಸಹ ಅವರು ಖುಷಿಯಾಗಿರಲಿಲ್ಲ. ನನಗೆ ಬಿಗ್​​ಬಾಸ್ ಮನೆಯಲ್ಲಿ ಹೇಗಿರಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದರು. ಅಲ್ಲದೆ ಇದೇ ದಿನ ಸುದೀಪ್ ಆಡಿಸಿದ ಒಂದು ಚಟುವಟಿಕೆಯಲ್ಲಿ ಚಂದ್ರಪ್ರಭ ಅವರಿಗೆ ಊಸರವಳ್ಳಿ ಎಂಬ ಬಿರುದನ್ನು ಸ್ಪರ್ಧಿ ಒಬ್ಬರು ನೀಡಿದರು. ಅದು ಸಹ ಅವರಿಗೆ ಬಹಳ ಬೇಸರ ತರಿಸಿತು. ಒಟ್ಟಾರೆಯಾಗಿ ಬೇಸರದಿಂದಲೇ ಬಿಗ್​​ಬಾಸ್ ಮನೆಯಿಂದ ಚಂದ್ರಪ್ರಭ ಅವರು ಹೊರಗೆ ಬಂದರು. ವಿಶೇಷತೆ ಏನೆಂದರೆ ಇದೇ ವಾರ ಅವರು ಮನೆ ಮಂದಿಯಿಂದ ಉತ್ತಮ ಎನಿಸಿಕೊಂಡಿದ್ದರು. ಆದರೆ ಇದೇ ವಾರವೇ ಅವರು ಬಿಗ್​​ಬಾಸ್ ಮನೆಯಿಂದ ಎಲಿಮಿನೇಟ್ ಸಹ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್