AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ‘ತಪ್ಪು ಮಾಡಿಬಿಟ್ಟೆ’ ಗಳ-ಗಳನೆ ಅತ್ತ ಜಾನ್ವಿ

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12 ರ ಗಟ್ಟಿ ಸ್ಪರ್ಧಿಯೆಂದು ಜಾನ್ವಿ ತಮ್ಮನ್ನು ತಾವು ತೋರ್ಪಡಿಸಿಕೊಂಡಿದ್ದರು. ಮನೆಯ ಇತರೆ ಸ್ಪರ್ಧಿಗಳ ಮೇಲೆ ಪರೋಕ್ಷ ಪ್ರಭಾವವನ್ನು ಅವರು ಬೀರಿದ್ದರು. ಆದರೆ ಅವರು ಮಾಡಿದ ಒಂದು ತಪ್ಪಿನಿಂದ ಮನೆ ಮಂದಿಗೆ ಅವರ ಬಗೆಗಿನ ಅಭಿಪ್ರಾಯ ಬದಲಾಗಿದೆ. ಇದೀಗ ತಾವು ಮಾಡಿದ ತಪ್ಪನ್ನು ನೆನದು ಕಣ್ಣೀರು ಹಾಕಿದ್ದಾರೆ ಜಾನ್ವಿ.

Bigg Boss Kannada: ‘ತಪ್ಪು ಮಾಡಿಬಿಟ್ಟೆ’ ಗಳ-ಗಳನೆ ಅತ್ತ ಜಾನ್ವಿ
Bigg Boss Janvi
ಮಂಜುನಾಥ ಸಿ.
|

Updated on: Oct 21, 2025 | 11:24 PM

Share

ಬಿಗ್​​ಬಾಸ್ (Bigg Boss Kannada) ಮನೆಯಲ್ಲಿ ಅಶ್ವಿನಿ ಮತ್ತು ಜಾನ್ವಿ ಅವರುಗಳು ಗಟ್ಟಿ ಸ್ಪರ್ಧಿಗಳಾಗಿ ತಮ್ಮನ್ನು ತಾವು ಪ್ರೊಜೆಕ್ಟ್ ಮಾಡಿಕೊಂಡಿದ್ದಾರೆ. ಅಶ್ವಿನಿ ಹಾಗೂ ಜಾನ್ವಿ ಅವರುಗಳು ಮನೆಯ ಇತರೆ ಸದಸ್ಯರ ಮೇಲೆ ಪ್ರಭಾವ ಬೀರಿದ್ದರು. ಆದರೆ ಮೂರನೇ ವಾರದಲ್ಲಿ ನಡೆದ ಒಂದು ಘಟನೆಯಿಂದ ಮನೆಯವರಿಗೆ ಈ ಇಬ್ಬರ ಮೇಲಿದ್ದ ಅಭಿಪ್ರಾಯ ಸಂಪೂರ್ಣವಾಗಿ ಬದಲಾಗಿದೆ. ಅದರಲ್ಲೂ ಜಾನ್ವಿಯ ಮೇಲಿ ಇದ್ದ ಗೌರವವೆಲ್ಲ ಕರಗಿ ಹೋಗಿದೆ. ಆದರೆ ಆ ವಿಷಯ ಈಗ ಜಾನ್ವಿಗೆ ಅರ್ಥವಾದಂತಿದೆ. ನಾಮಿನೇಟ್ ಆದ ಬಳಿಕ ಪಶ್ಚಾತ್ತಾಪವಾಗಿ ಗಳ-ಗಳನೇ ಅತ್ತಿದ್ದಾರೆ.

ಅಶ್ವಿನಿ ಮತ್ತು ಜಾನ್ವಿ ಅವರು ಮನೆಯ ಕಿರಿಯ ಸದಸ್ಯೆ ರಕ್ಷಿತಾ ಮೇಲೆ ಇಲ್ಲದ ಆರೋಪ ಮಾಡಿದ್ದಲ್ಲದೆ, ಇಡೀ ಮನೆಯವರು ರಕ್ಷಿತಾರನ್ನು ಅನುಮಾನದಿಂದ ನೋಡುವಂತೆ ಮಾಡಿದ್ದರು. ಅದು ಮಾತ್ರವೇ ಅಲ್ಲದೆ, ರಕ್ಷಿತಾಗೆ ಇದರಿಂದ ಹಾನಿ ಆಗುತ್ತಿದೆ, ಆಕೆಗೆ ನೋವಾಗುತ್ತಿದೆ ಎಂದು ಗೊತ್ತಾದ ಬಳಿಕವೂ ಸಹ ಅಶ್ವಿನಿ ಆಗಲಿ ಜಾನ್ವಿ ಆಗಲಿ ತಮ್ಮ ಮೋಸದಾಟವನ್ನು ನಿಲ್ಲಿಸಲಿಲ್ಲ. ಕೊನೆಗೆ ಶನಿವಾರದ ಎಪಿಸೋಡ್​​ನಲ್ಲಿ ಬಂದ ಸುದೀಪ್ ಅವರು ಇಬ್ಬರಿಗೂ ಚಾಟಿ ಬೀಸಬೇಕಾಗಿ ಬಂತು.

ಇಂದಿನ ನಾಮಿನೇಷನ್​​​ನಲ್ಲಿ ಇದೇ ವಿಷಯವನ್ನು ಮುಖ್ಯವಾಗಿ ಇರಿಸಿಕೊಂಡು ಮನೆಯ ಹಲವು ಸದಸ್ಯರು ಜಾನ್ವಿ ಮತ್ತು ಅಶ್ವಿನಿ ಅವರನ್ನು ನಾಮಿನೇಟ್ ಮಾಡಿದರು. ಆಗ ಜಾನ್ವಿಗೆ ತಾವು ಮಾಡಿದ ತಪ್ಪಿನ ಅರಿವಾಯ್ತು ಎನಿಸುತ್ತದೆ. ಕಾವ್ಯಾ ಜೊತೆಗೆ ಮಾತನಾಡುತ್ತಾ ಇದ್ದಕ್ಕಿದ್ದಂತೆ ಅಳಲು ಆರಂಭಿಸಿದರು. ನಾನು ಹಾಗೆ ಮಾಡಬಾರದಿತ್ತು. ನಾನು ರಕ್ಷಿತಾ ಅಳುವುದು ಕಣ್ಣಾರೆ ನೋಡಿದೆ. ಆದರೂ ಸಹ ನಾನು ಸುಮ್ಮನಾಗಲಿಲ್ಲ. ಗೊತ್ತಿದ್ದು-ಗೊತ್ತಿದ್ದು ತಪ್ಪು ಮಾಡಿದೆ. ನಮ್ಮ ಹಳ್ಳ ನಾವೇ ತೋಡಿಕೊಂಡೆವು ಎಂದು ಅತ್ತುಬಿಟ್ಟರು.

ಇದನ್ನೂ ಓದಿ:ಬಿಗ್​ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ನನ್ನ ತಾಯಿ, ಮಗ, ಗೆಳೆಯರು, ಅಣ್ಣಂದಿರು ಎಲ್ಲ ಬಹಳ ಪ್ರೋತ್ಸಾಹ ಕೊಟ್ಟು ನನ್ನನ್ನು ಇಲ್ಲಿಗೆ ಕಳಿಸಿದ್ದಾರೆ. ನಾನು ಹೀಗೆ ತಪ್ಪು ಮಾಡಿ ಹೊರಗೆ ಹೋದರೆ ಅವರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಈಗ ನಾನು ಹೊರಗೆ ಹೋದರೆ ನನ್ನ ಸಹೋದರರೆ ನನ್ನನ್ನು ಬಿಡುವುದಿಲ್ಲ, ಆ ಪುಟ್ಟ ಹುಡುಗಿ ಕಣ್ಣಲ್ಲಿ ನೀರು ಹಾಕಿಸಿದ್ದೀಯ ಎಂದು ನನ್ನನ್ನು ಬೈಯ್ಯುತ್ತಾರೆ, ನಾನು ತಪ್ಪು ಮಾಡಿಬಿಟ್ಟೆ’ ಎಂದು ಕಣ್ಣೀರು ಹಾಕಿದರು ಜಾನ್ವಿ.

ಜಾನ್ವಿಗೆ ಅಶ್ವಿನಿ ಮತ್ತು ಕಾವ್ಯಾ ಅವರುಗಳು ಸಮಾಧಾನ ಮಾಡಿದರು. ಈ ವಾರ ಅಶ್ವಿನಿ, ಜಾನ್ವಿ, ಗಿಲ್ಲಿ, ರಾಶಿಕಾ, ಧ್ರುವಂತ್, ರಕ್ಷಿತಾ ಮತ್ತು ಸ್ಪಂದನಾ ಅವರುಗಳು ನಾಮಿನೇಟ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!