AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿರೋ ಕೆನಡಾ ಹುಡುಗನ ಹಿಂದೆ ಬಿದ್ದ ರಾಶಿಕಾ-ಸ್ಪಂದನಾ; ಫೇಮ್ ಪಡೆಯಲು ಲವ್ ಸ್ಟೋರಿ?

ಬಿಗ್ ಬಾಸ್ ಮನೆಯಲ್ಲಿ ಹೊಸ ಪ್ರೇಮ ಕಹಾನಿ ಶುರುವಾಗುವ ಸೂಚನೆ ಸಿಕ್ಕಿದೆ. ಕೆನಡಾದಿಂದ ಬಂದ ಸೂರಜ್ ಸಿಂಗ್‌ಗೆ ರಾಶಿಕಾ ಹಾಗೂ ಸ್ಪಂದನಾ ಆಕರ್ಷಿತರಾಗಿದ್ದಾರೆ. ಈ ಲವ್ ಟ್ರ್ಯಾಕ್ ಫೇಮ್ ಗಳಿಸಲು ಒಂದು ತಂತ್ರವಾಗಿರಬಹುದೇ ಎಂಬ ಚರ್ಚೆ ಬಿಗ್ ಬಾಸ್ ವಲಯದಲ್ಲಿ ಶುರುವಾಗಿದೆ.

ಬಿಗ್ ಬಾಸ್​ನಲ್ಲಿರೋ ಕೆನಡಾ ಹುಡುಗನ ಹಿಂದೆ ಬಿದ್ದ ರಾಶಿಕಾ-ಸ್ಪಂದನಾ; ಫೇಮ್ ಪಡೆಯಲು ಲವ್ ಸ್ಟೋರಿ?
ಸೂರಜ್, ಸ್ಪಂದನಾ, ರಾಶಿಕಾ
ರಾಜೇಶ್ ದುಗ್ಗುಮನೆ
|

Updated on: Oct 22, 2025 | 11:37 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಲವ್​ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವು ಯಶಸ್ಸು ಕಂಡರೆ, ಇನ್ನೂ ಕೆಲವು ಬಿಗ್ ಬಾಸ್ ಮನೆಯಲ್ಲಿ ಫೇಮ್ ಪಡೆಯಲು ಮಾತ್ರ ಸೀಮಿತವಾಗಿದೆ. ಬಿಗ್ ಬಾಸ್ ಆರಂಭ ಆಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಯಾವುದೇ ಲವ್​ ಸ್ಟೋರಿ ಹುಟ್ಟಿಕೊಂಡಿರಲಿಲ್ಲ. ಈಗ ಆ ರೀತಿಯ ಒಂದು ಕಥೆ ಆರಂಭ ಕಾಣುವ ಸೂಚನೆ ಸಿಕ್ಕಿದೆ.

ಬಿಗ್ ಬಾಸ್ ಮನೆಗೆ ಸೂರಜ್ ಸಿಂಗ್ ಎಂಟ್ರಿ ಆಗಿದೆ. ಅವರು ಕೆನಡಾದಲ್ಲಿ ಇದ್ದು, ಈಗ ಭಾರತಕ್ಕೆ ಮರಳಿದ್ದಾರೆ. ಅವರು ತಮ್ಮ ಹ್ಯಾಂಡ್ಸಮ್ ಲುಕ್​ನಿಂದ ಗಮನ ಸೆಳೆಯುವ ರೀತಿಯಲ್ಲಿ ಇದ್ದಾರೆ. ಈಗ ಅವರನ್ನು ನೋಡಿ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಆಕರ್ಷಿತರಾಗಿದ್ದಾರೆ. ಅವರು ಬೇರಾರೂ ಅಲ್ಲ, ಸ್ಪಂದನ ಹಾಗೂ ರಾಶಿಕಾ. ಈ ವಿಚಾರ ಚರ್ಚೆ ಹುಟ್ಟುಹಾಕಿದೆ.

ಬಿಗ್ ಬಾಸ್​ಗೆ ಬಂದ ದಿನವೇ ಸೂರಜ್ ಅವರು ಗುಲಾಬಿ ಹೂವನ್ನು ರಾಶಿಕಾಗೆ ನೀಡಿ, ‘ಅವರು ಕ್ಯೂಟ್ ಆಗಿ ಕಾಣಿಸುತ್ತಾರೆ’ ಎಂದರು. ಅಂದಿನಿಂದಲೂ ರಾಶಿಕಾ ಸೂರಜ್ ಅವರನ್ನು ಕಂಡಾಕ್ಷಣ ನಾಚುತ್ತಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾನ್ವಿ ಬಳಿ ಈ ವಿಚಾರವನ್ನು ರಾಶಿಕಾ ಮಾತನಾಡಿದ್ದಾರೆ.

ಇದನ್ನೂ ಓದಿ
Image
ದೀಪಾವಳಿಗೆ ಬಂಪರ್ ಲಾಟರಿ; ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದ ‘ಕಾಂತಾರ’
Image
ದೀಪಿಕಾ-ರಣವೀರ್ ಪಡುಕೋಣೆ ಮಗಳ ಮುಖ ರಿವೀಲ್; ಯಾರ ಹಾಗೆ ಕಾಣ್ತಾರೆ ದುವಾ?
Image
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
Image
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

‘ನಾನು ಬಿಗ್ ಬಾಸ್ ಮನೆಗೆ ಬರೋದಕ್ಕೂ ಮೊದಲು ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಬಂದಿತ್ತು. ಹ್ಯಾಂಡ್ಸಮ್ ಆಗಿದ್ದಾನೆ ಅಂತ ಪ್ರಾಫೈಲ್ ಚೆಕ್ ಮಾಡಿದೆ. ಇಲ್ಲಿ ಅವರನ್ನೇ ನೋಡಿದ ಬಳಿಕ ಫ್ಲ್ಯಾಶ್ ಆಯ್ತು’ ಎಂದು ಸೂರಜ್ ಬಗ್ಗೆ ಅಶ್ವಿನಿ ಅವರು ಹೇಳಿದ್ದಾರೆ. ‘ಯಾರಿಗೆ ಅವನು ಇಷ್ಟ’ ಎಂದು ಅಶ್ವಿನಿ ಅವರು ರಾಶಿಕಾ ಹಾಗೂ ಸ್ಪಂದನಾ ಬಳಿ ಪ್ರಶ್ನೆ ಮಾಡಿದರು. ‘ಇಬ್ಬರೂ ಲಿಸ್ಟ್​ನಲ್ಲಿ ಇದ್ದಾರೆ’ ಎಂಬ ಮಾತು ಅಲ್ಲೇ ಕೇಳಿ ಬಂತು. ಆ ಬಳಿಕ ಅಶ್ವಿನಿ ಅವರು ‘ಇಷ್ಟು ದಿನ ಲವ್ ಟ್ರ್ಯಾಕ್ ಮಿಸ್ ಆಗ್ತಾ ಇತ್ತು’ ಎಂದರು.

ಇದನ್ನೂ ಓದಿ: ‘ಬಿಗ್ ಬಾಸ್​ನಲ್ಲಿ ಅವಮಾನ ಆದರೆ ಅದನ್ನು ಮರೆತು ಮುಂದೆ ಹೋಗಲು ಸಾಧ್ಯವಿಲ್ಲ’; ಅಶ್ವಿನಿ ಗೌಡ ಕಣ್ಣೀರು

ಫೇಮ್ ಪಡೆಯಬೇಕು ಎಂದರೆ ಲವ್​ ಸ್ಟೋರಿ ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ರಾಶಿಕಾ ಹಾಗೂ ಸ್ಪಂದನಾ ಈ ರೀತಿ ಆಲೋಚಿಸಿರಬಹುದು ಎಂದು ಊಹಿಸಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!