AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ-ಕೈ ಮಿಲಾಯಿಸಿದ ಬಿಗ್​ಬಾಸ್ ಸ್ಪರ್ಧಿಗಳು, ನಟಿಗೆ ಕಪಾಳಮೋಕ್ಷ

Bigg Boss: ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಜಗಳ, ಕಾಲೆಳೆತ ತೀರ ಸಾಮಾನ್ಯ, ಆದರೆ ಯಾರಿಗೂ ಹಲ್ಲೆ ಮಾಡುವಂತಿಲ್ಲ. ಆದರೆ ಈ ನಿಯಮವನ್ನು ಆಗಾಗ್ಗೆ ಮೀರುತ್ತಿರುತ್ತಾರೆ ಸ್ಪರ್ಧಿಗಳು. ಇದೀಗ ನಟಿಯೊಬ್ಬಾಕೆಗೆ ಸಹ ಸ್ಪರ್ಧಿ ಕಪಾಳ ಮೋಕ್ಷ ಮಾಡಿದ್ದಾರೆ.

ಕೈ-ಕೈ ಮಿಲಾಯಿಸಿದ ಬಿಗ್​ಬಾಸ್ ಸ್ಪರ್ಧಿಗಳು, ನಟಿಗೆ ಕಪಾಳಮೋಕ್ಷ
ಮಂಜುನಾಥ ಸಿ.
|

Updated on: Sep 14, 2024 | 3:10 PM

Share

ಬಿಗ್​ಬಾಸ್ ಮನೆಯಲ್ಲಿ ಜಗಳ ಗಲಾಟೆ ತೀರ. ಸಹಜ, ಜಗಳ-ಗಲಾಟೆಗಳಿಗಾಗಿಯೇ ಆ ಶೋ ಜನಪ್ರಿಯ. ಆದರೆ ಬಿಗ್​ಬಾಸ್​ ಮನೆಯಲ್ಲಿ ಒಂದು ಪ್ರಮುಖವಾದ ನಿಯಮವಿದೆ. ಮನೆಯಲ್ಲಿ ಯಾರೂ ಸಹ ಮತ್ತೊಬ್ಬ ಸ್ಪರ್ಧಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ. ಆದರೆ ಈ ನಿಯಮ ಹಲವು ಬಾರಿ ಮುರಿದಿದೆ. ಕೆಲವರು ಇದೇ ಕಾರಣಖ್ಕೆ ಮನೆಯಿಂದ ಹೊರಗೆ ಸಹ ಹೋಗಿದ್ದಾರೆ. ಇದೀಗ ಮತ್ತೆ ಬಿಗ್​ಬಾಸ್​ ಸೀಸನ್ ಗಳು ಪ್ರಾರಂಭವಾಗಿದ್ದು, ಹೊಸ ಬಿಗ್​ಬಾಸ್ ರಿಯಾಲಿಟಿ ಶೋ ಒಂದರಲ್ಲಿ ಜನಪ್ರಿಯ ನಟಿಯ ಮೇಲೆ ಸಹ ಸ್ಪರ್ಧಿ ಒಬ್ಬಾಕೆ ಹಲ್ಲೆ ಮಾಡಿದ್ದಾರೆ.

ಬಿಗ್​ಬಾಸ್ ಮರಾಠಿ ಐದನೇ ಸೀಸನ್ ತಿಂಗಳ ಹಿಂದೆ ಪ್ರಾರಂಭವಾಗಿದೆ. ಶೋ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದೆ. ಖ್ಯಾತ ಬಾಲಿವುಡ್ ನಟ, ಮರಾಠಿ ಸಿನಿಮಾಗಳಲ್ಲಿಯೂ ನಟಿಸಿರುವ ರಿತೇಶ್ ದೇಶ್​ಮುಖ್ ಈ ಬಾರಿಯ ಸೀಸನ್ ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಶೋನಲ್ಲಿ ಮರಾಠಿ ಚಿತ್ರರಂಗ, ಧಾರಾವಾಹಿ ಮಾತ್ರವಲ್ಲೆ ಕೆಲ ಬಾಲಿವುಡ್ ನಟಿಯರನ್ನೂ ಸೇರಿಸಲಾಗಿದೆ. ಅವರಲ್ಲಿ ಒಬ್ಬರು ಗ್ಲಾಮರಸ್ ನಟಿ ನಿಕ್ಕಿ ತಾಂಬೋಲಿ.

ಇದನ್ನೂ ನೋಡಿ:ಬಿಗ್​ಬಾಸ್​: ಸುದೀಪ್ ಬದಲು ಬೇರೆ ನಟರಿಂದ ನಿರೂಪಣೆ, ಯಾರ ಹೆಸರಿದೆ ಮುಂಚೂಣಿಯಲ್ಲಿ?

ನಿಕ್ಕಿ ತಾಂಬೋಲಿ ಬಿಗ್​ಬಾಸ್​ ಮನೆಗೆ ಬಂದಾಗಿನಿಂದಲೂ ಸುದ್ದಿಯಾಗುತ್ತಲೇ ಇದ್ದಾರೆ. ಮಾತ್ರವಲ್ಲದೆ ಬಿಗ್​ಬಾಸ್​ನ ಸಹ ಸ್ಪರ್ಧಿಗಳೊಟ್ಟಿಗೆ ಆಗಾಗ್ಗೆ ಕಿರಿಕ್ ಸಹ ಮಾಡಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಕ್ಯಾಪ್ಟನ್ಸಿ ಟಾಸ್ಕ್​ ನಡೆದಿತ್ತು. ಮ್ಯಾಜಿಕ್ ಡೈಮಂಡ್ ಅನ್ನು ಉಳಿಸಿಕೊಳ್ಳುವ ಟಾಸ್ಕ್ ಅದು. ಟಾಸ್ಕ್​ನಲ್ಲಿ ನಿಕ್ಕಿ ತಾಂಬೋಲಿ, ಜಾನ್ಹವಿ, ವರ್ಷಾ, ಆರ್ಯಾ ಅವರುಗಳು ಭಾಗಿಯಾಗಿದ್ದರು. ಡೈಮಂಡ್ ಅನ್ನು ರಕ್ಷಿಸುವ ಟಾಸ್ಕ್​ನಲ್ಲಿ ಆರ್ಯಾ, ಕೋಣೆಯ ಬಾಗಿಲು ಭದ್ರ ಮಾಡಿಕೊಂಡಿದ್ದರು, ನಿಕ್ಕಿ ಅದನ್ನು ತೆರೆಯುವ ಪ್ರಯತ್ನ ಮಾಡಿದರು. ಆ ವೇಳೆ ನಿಕ್ಕಿಯ ಆತ್ಮೀಯ ಗೆಳೆಯ ಅರ್ಬಾಜ್ ಬಂದು ನಿಕ್ಕಿಗೆ ಸಹಾಯ ಮಾಡುವ ಭರದಲ್ಲಿ ಆರ್ಯಾ ಹಿಡಿದಿದ್ದ ಡೋರ್ ತೆಗೆದಿದ್ದಾನೆ, ನಿಕ್ಕಿ ಕೋಣೆಯ ಒಳಗೆ ಹೋಗುವ ಸಾಹಸ ಮಾಡುವಾಗ ಇನ್ನೇನು ನಿಕ್ಕಿ ಗೆದ್ದಳು ಎಂದುಕೊಳ್ಳುತ್ತಿರುವಾಗ ಆರ್ಯಾ, ನಿಕ್ಕಿಯ ಕಪಾಳಕ್ಕೆ ಭಾರಿಸಿದ್ದಾಳೆ.

ಆರ್ಯಾಳಿಂದ ಏಟು ತಿಂದ ನಿಕ್ಕಿ ತಾಂಬೋಲಿ, ಕೂಡಲೇ ಬಿಗ್​ಬಾಸ್ ಕ್ಯಾಮೆರಾಗಳ ಬಳಿ ಬಂದು ಆಕೆ ನನ್ನು ಹೊಡೆದಿದ್ದಾಳೆ ಎಂದು ಜೋರಾಗಿ ಅತ್ತು ಹೇಳಿದ್ದಾರೆ. ಇದೀಗ ಮರಾಠಿ ಬಿಗ್​ಬಾಸ್​ನ ಹೊಸ ಪ್ರೋಮೋ ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಬಿಗ್​ಬಾಸ್ ಧ್ವನಿ, ಆರ್ಯ ಬಿಗ್​ಬಾಸ್ ನಿಯಮ ಮೀರಿದ್ದು, ಶಿಕ್ಷೆ ಅನುಭವಿಸಲೇ ಬೇಕು ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ