Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivarajkumar: ‘ಯು ಆರ್​ ಸೋ ಕ್ಯೂಟ್​’; ನವಾಜ್​ ಡೈಲಾಗ್​ಗೆ ಫಿದಾ ಆದ ಶಿವರಾಜ್​ಕುಮಾರ್

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದೆ. ಈಗ ಈ ರಿಯಾಲಿಟಿ ಶೋನ ಏಳನೇ ಸೀಸನ್ ನಡೆಯುತ್ತಿದೆ. ಮಹಾಸಂಗಮದಲ್ಲಿ ನವಾಜ್​ಗೆ ಶಿವಣ್ಣನ ಎದುರು ಮಾತನಾಡುವ ಅವಕಾಶ ಸಿಕ್ಕಿದೆ.

Shivarajkumar: ‘ಯು ಆರ್​ ಸೋ ಕ್ಯೂಟ್​’; ನವಾಜ್​ ಡೈಲಾಗ್​ಗೆ ಫಿದಾ ಆದ ಶಿವರಾಜ್​ಕುಮಾರ್
ನವಾಜ್-ಶಿವರಾಜ್​ಕುಮಾರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 01, 2023 | 8:55 AM

ಸಿನಿಮಾಗಳನ್ನು ಭಿನ್ನವಾಗಿ ವಿಮರ್ಶೆ ಮಾಡುವ ಮೂಲಕ ನವಾಜ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅವರ ಟ್ಯಾಲೆಂಟ್ ನೋಡಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ (BBK 9) ಅವಕಾಶ ನೀಡಲಾಯಿತು. ಅಲ್ಲಿಯೂ ಅವರು ಪ್ರಾಸದ ಡೈಲಾಗ್ ಹೊಡೆದು ಗಮನ ಸೆಳೆದರು. ಆದರೆ, ಹೆಚ್ಚು ದಿನ ದೊಡ್ಮನೆಯಲ್ಲಿ ಇರೋಕೆ ಅವರಿಗೆ ಸಾಧ್ಯವಾಗಿಲ್ಲ. ಈಗ ನವಾಜ್ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ. ‘ಜೀ ಕನ್ನಡ ವಾಹಿನಿ’ಯಲ್ಲಿ ಪ್ರಸಾರ ಕಾಣುತ್ತಿರುವ ‘ಭರ್ಜರಿ ಬ್ಯಾಚುಲರ್ಸ್​’ಗೆ ಅವರು ಆಗಮಿಸಿದ್ದಾರೆ. ಇತ್ತೀಚೆಗೆ  ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7’ ಹಾಗೂ ‘ಭರ್ಜರಿ ಬ್ಯಾಚುಲರ್ಸ್​’ ಮಹಾಸಂಗಮದ ವೇದಿಕೆ ಮೇಲೆ ನವಾಜ್ ಮಸ್ತ್ ಆಗಿ ಡೈಲಾಗ್ ಹೇಳಿದ್ದಾರೆ. ಇದನ್ನು ಕೇಳಿ ಶಿವರಾಜ್​ಕುಮಾರ್ (Shivarajkumar) ಫಿದಾ ಆಗಿದ್ದಾರೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದೆ. ಈಗ ಈ ರಿಯಾಲಿಟಿ ಶೋನ ಏಳನೇ ಸೀಸನ್ ನಡೆಯುತ್ತಿದೆ. ಶಿವಣ್ಣ ಅವರು ಡ್ಯಾನ್ಸ್​ನಲ್ಲಿ ಕಿಂಗ್. ಈ ಕಾರಣಕ್ಕೆ ಅವರನ್ನು ಜಡ್ಜ್ ಸ್ಥಾನದಲ್ಲಿ ಕೂರಿಸಲಾಗಿದೆ. ಅವರು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಿ, ಅವರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಮಹಾಸಂಗಮದಲ್ಲಿ ನವಾಜ್​ಗೆ ಶಿವಣ್ಣನ ಎದುರು ಮಾತನಾಡುವ ಅವಕಾಶ ಸಿಕ್ಕಿದೆ.

‘ಅವರೆಲ್ಲೋದ್ರೆ ಅಲ್ಲಿ ಅಭಿಮಾನಿಗಳು ಹಾಕ್ತಾರೆ ಹಾರ, ಅವರೆಲ್ಲೋದ್ರೆ ಅಲ್ಲಿ ಅಭಿಮಾನಿಗಳು ಹಾಕ್ತಾರೆ ಹಾರ. ಏಕೆಂದ್ರೆ ಅಲ್ಲಿರೋದು ನಮ್ಮ ಕರ್ನಾಟಕ ಚಕ್ರವರ್ತಿ ಶಿವರಾಜ್​ಕುಮಾರ’ ಎಂದಿದ್ದಾರೆ ನವಾಜ್​. ಮುಂದುವರಿದು, ‘ನಮ್ಮ ಗ್ಯಾರೇಜ್​​ನಲ್ಲಿದೆ ಗೇಜು, ನಮ್ಮ ಶಿವಣ್ಣಗೆ ಯಾವಾಗಲೂ ಆಗಲ್ಲ ಏಜು’ ಎಂದರು. ಇದನ್ನು ಕೇಳಿ ಶಿವರಾಜ್​ಕುಮಾರ್ ಖುಷಿಪಟ್ಟರು.

View this post on Instagram

A post shared by Zee Kannada (@zeekannada)

‘ನೀವು ಹೇಳುವ ಡೈಲಾಗ್​​ನೆಲ್ಲ ನಾನು ಕೇಳ್ತಾ ಇರ್ತೀನಿ. ಯೂ ಆರ್​ ಸೋ ಕ್ಯೂಟ್’ ಎಂದು ಮನಸ್ಫೂರ್ತಿಯಾಗಿ ಶಿವರಾಜ್​ಕುಮಾರ್ ಅವರು ನವಾಜ್ ಅವರನ್ನು ಹೊಗಳಿದರು. ವೇದಿಕೆ ಮೇಲೆ ರವಿಚಂದ್ರನ್, ರಕ್ಷಿತಾ, ಚಿನ್ನಿ ಮಾಸ್ಟರ್, ವಿಜಯ್ ರಾಘವೇಂದ್ರ ಕೂಡ ಇದ್ದರು. ಇವರ ಬಗ್ಗೆಯೂ ಪ್ರಾಸದ ಮಾತುಗಳನ್ನು ಹೇಳಿ ಗಮನ ಸೆಳೆದಿದ್ದಾರೆ ನವಾಜ್. ರಕ್ಷಿತಾ, ರವಿಚಂದ್ರನ್ ಕೂಡ ನವಾಜ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಅನುಶ್ರೀ ಅವರು ಆ್ಯಂಕರ್ ಆಗಿ ಹಲವು ವರ್ಷಗಳಿಂದ ಕಿರುತೆರೆ ಲೋಕದಲ್ಲಿದ್ದಾರೆ. ಅವರ ಬಗ್ಗೆಯೂ ನವಾಜ್ ಡೈಲಾಗ್ ಹೊಡೆದಿದ್ದಾರೆ. ಇದನ್ನು ಕೇಳಿ ಅವರು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ಸಿಟಿ ರೌಂಡ್ಸ್​; ಅಭಿಮಾನಿಗಳ ಸೆಲ್ಫಿಗೆ ಪೋಸ್ ಕೊಟ್ಟ ನಟ

ನವಾಜ್ ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಆದರೆ, ಅವರಲ್ಲಿರುವ ಟ್ಯಾಲೆಂಟ್ ಅವರ ಜೀವನವನ್ನೇ ಬದಲಾಯಿಸಿದೆ. ‘ಬಿಗ್ ಬಾಸ್’ ಅವರ ಜನಪ್ರಿಯತೆ ಹೆಚ್ಚಿಸಿತು. ಈಗ ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ