Bharjari Bachelors: ಜೀ ಕನ್ನಡದಲ್ಲಿ ಹೊಸ ಶೋ ‘ಭರ್ಜರಿ ಬ್ಯಾಚುಲರ್ಸ್’; ಮದುವೆ ಆಗದ ಹುಡುಗರೇ ಇಲ್ಲಿ ಕೇಳಿ..

Zee Kannada: ಬ್ಯಾಚುಲರ್​ ಹುಡುಗರ ಬಯೋಡಾಟಾ ಶೀಘ್ರದಲ್ಲೇ ಕನ್ನಡಿಗರ ಮುಂದೆ ಬರಲಿದೆ. ಜೂನ್ 24ರ ಶನಿವಾರ ರಾತ್ರಿ 9 ಗಂಟೆಗೆ ‘ಜೀ ಕನ್ನಡ’ ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಆರಂಭ ಆಗಲಿದೆ.

Bharjari Bachelors: ಜೀ ಕನ್ನಡದಲ್ಲಿ ಹೊಸ ಶೋ ‘ಭರ್ಜರಿ ಬ್ಯಾಚುಲರ್ಸ್’; ಮದುವೆ ಆಗದ ಹುಡುಗರೇ ಇಲ್ಲಿ ಕೇಳಿ..
‘ಭರ್ಜರಿ ಬ್ಯಾಚುಲರ್ಸ್’ ಶೋ ಪೋಸ್ಟರ್​
Follow us
|

Updated on: Jun 22, 2023 | 12:53 PM

ಕನ್ನಡ ಕಿರುತೆರೆ ವಾಹಿನಿಗಳ ನಡುವೆ ಸಖತ್​ ಪೈಪೋಟಿ ಇದೆ. ಧಾರಾವಾಹಿ ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲೂ ವಾಹಿನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಭಿನ್ನವಾದ ಕಾನ್ಸೆಪ್ಟ್​ಗಳಲ್ಲಿ ರಿಯಾಲಿಟಿ ಶೋಗಳನ್ನು (Reality Show) ಜನರಿಗೆ ಪರಿಚಯಿಸಲಾಗುತ್ತಿದೆ. ಇಷ್ಟು ದಿನಗಳ ಕಾಲ ಜೀ ಕನ್ನಡದಲ್ಲಿ ‘ವೀಕೆಂಡ್​ ವಿತ್​ ರಮೇಶ್​ ಸೀಸನ್​ 5’ ಪ್ರಸಾರ ಆಯಿತು. ಈಗ ವಾರಾಂತ್ಯದ ಮನರಂಜನೆಗೆ ಹೊಸ ಶೋ ಬರುತ್ತಿದೆ. ‘ಭರ್ಜರಿ ಬ್ಯಾಚುಲರ್ಸ್’ (Bharjari Bachelors) ಎಂಬುದು ಈ ಕಾರ್ಯಕ್ರಮದ ಹೆಸರು. ಇದು ಮದುವೆ ಆಗದೇ ಇರುವ ಹುಡುಗರಿಗೆ ಸಂಬಂಧಿಸಿದ ಕಾರ್ಯಕ್ರಮ ಎಂಬುದು ವಿಶೇಷ. ಈ ಶೋ ಮೂಲಕ ಜೀ ಕನ್ನಡ (Zee Kannada) ವಾಹಿನಿಯು ಈಗ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಮದುವೆಯ ವಯಸ್ಸಿಗೆ ಬಂದ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಏನೆಲ್ಲ ತೊಂದರೆ ಎದುರಾಗುತ್ತಿದೆ ಎಂಬುದನ್ನು ಆಧಾರವಾಗಿ ಇಟ್ಟುಕೊಂಡು ಈ ರಿಯಾಲಿಟಿ ಶೋ ರೂಪಿಸಲಾಗಿದೆ. ಕರ್ನಾಟಕದ ಟಿವಿ ಲೋಕದಲ್ಲಿನ ಆಯ್ದ ಕೆಲವು ಬ್ಯಾಚುಲರ್​ಗಳನ್ನ ಒಂದೆಡೆ ಸೇರಿಸಿ ಅವರನ್ನ ಬ್ಯಾಚುಲರ್ ಬದುಕಿನಿಂದ ಮದುವೆಗೆ ಎಲಿಜಿಬಲ್ ಮಾಡಿಸುವ ಪ್ರಯತ್ನವೇ ಈ ಹೊಸ ರಿಯಾಲಿಟಿ ಶೋನ ಮುಖ್ಯ ಕಾನ್ಸೆಪ್ಟ್​!

ಕನ್ನಡ ಕಿರುತೆರೆಯ 10 ಎಲಿಜಿಬಲ್ ಬ್ಯಾಚುಲರ್​ಗಳ ಕನಸನ್ನ ನನಸು ಮಾಡುತ್ತಾ, ಅವರ ಆಸೆಗಳ ಅಖಾಡದಲ್ಲಿ ಅವರ ಸಾಮರ್ಥ್ಯವನ್ನು ಕರುನಾಡಿನ ಜನತೆಗೆ ತೋರಿಸಲಾಗುತ್ತದೆ. ಬ್ಯಾಚುಲರ್ ಆಗಿದ್ದವನು ಮದುವೆಗೆ ಎಲಿಜಿಬಲ್ ಆಗಲು ಏನೆಲ್ಲ ಮಾಡಬೇಕು ಎಂಬುದನ್ನು ಕರುನಾಡಿಗೆ ಸಾರಿ ಹೇಳುವ ಈ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಅಕುಲ್ ಬಾಲಾಜಿ ಅವರಿಗೆ ನೀಡಲಾಗಿದೆ. ಹಲವು ದಿನಗಳ ನಂತರ ಅವರು ಜೀ ಕನ್ನಡಕ್ಕೆ ಮರಳುತ್ತಿರುವುದು ವಿಶೇಷ.

ಇದನ್ನೂ ಓದಿ: ಜೀ ಕನ್ನಡಕ್ಕೆ ಎಂಟ್ರಿ ಕೊಟ್ಟ ಸಾರಾ ಅಣ್ಣಯ್ಯ

ಕರುನಾಡಿಗೆ ಪ್ರೀತಿ-ಪ್ರೇಮದ ಪಾಠ ಹೇಳಿಕೊಟ್ಟ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರು ಈ ರಿಯಾಲಿಟಿ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನ ತಿದ್ದಿತೀಡುವ ಕೆಲಸ ಮಾಡಲಿದ್ದಾರೆ. ಹಾಗೆಯೇ, ನಟಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರು ಬ್ಯಾಚುಲರ್ಸ್ ಪಾಲಿನ ಕನಸಿನ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ತೀರ್ಪುಗಾರರು ಖುರ್ಚಿಯ ಮೆರುಗನ್ನು ಅವರು ಹೆಚ್ಚು ಮಾಡಲಿದ್ದಾರೆ. ಈ ಶೋನ ಟೈಟಲ್​ ಸಾಂಗ್​ಗೆ ಚಂದನ್​ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಕೇಶ್ ಸಿ.ಎ. ಅವರ ಸಾಹಿತ್ಯದಲ್ಲಿ ಈ ಹಾಡು ಮೂಡಿಬಂದಿದೆ.

ಇದನ್ನೂ ಓದಿ: ಅಕುಲ್​ ಬಾಲಾಜಿ ಆ್ಯಕ್ಷನ್ ಮೂಲಕ ತೋರಿಸಿದ ಈ ಹಾಡು ಯಾವುದು ಎಂದು ಊಹಿಸ್ತೀರಾ?

ಬ್ಯಾಚುಲರ್​ ಹುಡುಗರ ಬಯೋ ಡಾಟಾ ಶೀಘ್ರದಲ್ಲೇ ಕನ್ನಡಿಗರ ಮುಂದೆ ಬರಲಿದೆ. ಜೂನ್ 24ರ ಶನಿವಾರ ರಾತ್ರಿ 9 ಗಂಟೆಗೆ ‘ಜೀ ಕನ್ನಡ’ ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಆರಂಭ ಆಗಲಿದೆ. ‘ವೀಕೆಂಡ್ ವಿತ್ ರಮೇಶ್​’ ಸೀಸನ್ 5ರ ಯಶಸ್ಸಿನ ಬಳಿಕ ಈ ವಾಹಿನಿ ಯಾವ ರಿಯಾಲಿಟಿ ಶೋ ಅನ್ನು ಜನರಿಗೆ ಪರಿಚಯಿಸಲಿದೆ ಎಂಬುದು ವೀಕ್ಷಕರ ಕುತೂಹಲ ಆಗಿತ್ತು. ಅದಕ್ಕೆ ಉತ್ತರವಾಗಿ ‘ಭರ್ಜರಿ ಬ್ಯಾಚುಲರ್ಸ್​’ ಶೋ ಶುರುವಾಗುತ್ತಿದೆ. ಬ್ಯಾಚುಲರ್ಸ್‍ ಹುಡುಗರು ಅನುಭವಿಸುವ ಸಮಸ್ಯೆಗಳನ್ನ ಕೇಂದ್ರವಾಗಿ ಇಟ್ಟುಕೊಂಡು ಅದಕ್ಕೆ ಒಂದಿಷ್ಟು ಮನರಂಜನೆ ಸೇರಿಸಿ ಜನರ ಮುಂದೆ ಇಡುವ ಪ್ರಯತ್ನವೇ ಈ ಶೋನ ಹೈಲೈಟ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.