AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕುಲ್​ ಬಾಲಾಜಿ ಆ್ಯಕ್ಷನ್ ಮೂಲಕ ತೋರಿಸಿದ ಈ ಹಾಡು ಯಾವುದು ಎಂದು ಊಹಿಸ್ತೀರಾ?

ಅಕುಲ್​ ಬಾಲಾಜಿ ನಿರೂಪಣೆ ಮೂಲಕ ಎಲ್ಲರ ಗಮನ ಸೆಳೆದವರು. ಅವರು ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ.

ಅಕುಲ್​ ಬಾಲಾಜಿ ಆ್ಯಕ್ಷನ್ ಮೂಲಕ ತೋರಿಸಿದ ಈ ಹಾಡು ಯಾವುದು ಎಂದು ಊಹಿಸ್ತೀರಾ?
TV9 Web
| Edited By: |

Updated on: Sep 03, 2021 | 9:09 PM

Share

‘ಬಿಗ್​ ಬಾಸ್​ ಮಿನಿ ಸೀಸನ್​’ ಇದೇ ಮೊದಲ ಬಾರಿಗೆ ಪ್ರಸಾರಗೊಂಡು ಉತ್ತಮ ಪ್ರತಿಕ್ರಿಯೆ ಗಳಿಸಿಕೊಳ್ಳುತ್ತಿದೆ. ಕಲರ್ಸ್​ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರು ಒಂದೆಡೆ ಸೇರಿ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ. ಮನೆಯಲ್ಲಿ ನಾನಾ ರೀತಿಯ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಈ ಮಧ್ಯೆ ಅಕುಲ್​ ಬಾಲಾಜಿ ಆ್ಯಕ್ಷನ್​ ಮೂಲಕ ತೋರಿಸಿದ ಜನಪ್ರಿಯ ಹಾಡನ್ನು ಗೆಸ್​ ಮಾಡೋಕೆ ಮನೆಯ ಅನೇಕರು ಸೋತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಸೆಲೆಬ್ರಿಟಿಗಳು ಆರು ದಿನ ಇದ್ದು ಬಂದಿದ್ದಾರೆ. ಅದನ್ನು ಟಿವಿಯಲ್ಲಿ ಕಳೆದ ಕೆಲ ವಾರಗಳಿಂದ ಪ್ರಸಾರ ಮಾಡಲಾಗುತ್ತಿದೆ. ಸುದೀಪ್​ ಜತೆ ಸ್ಪರ್ಧಿಗಳು ಸಂವಾದ ನಡೆಸಿದ ಕಾರ್ಯಕ್ರಮ ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಇದಕ್ಕಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ ಮನೆ ಮಂದಿ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ.

ಅಕುಲ್​ ಬಾಲಾಜಿ ನಿರೂಪಣೆ ಮೂಲಕ ಎಲ್ಲರ ಗಮನ ಸೆಳೆದವರು. ಅವರು ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಹಾಡುಗಳ ಹೆಸರನ್ನು ಆ್ಯಕ್ಟಿಂಗ್​ ಮಾಡಿ ತೋರಿಸಬೇಕಿತ್ತು. ಈ ವೇಳೆ ಅಕುಲ್​ ಹಾಡೊಂದನ್ನು ಆ್ಯಕ್ಟ್​ ಮಾಡಿ ತೋರಿಸಿದ್ದರು. ಮನೆಯ ಅನೇಕರಿಗೆ ಇದು ಯಾವ ಹಾಡು ಎಂದು ಪತ್ತೆ ಹಚ್ಚೋಕೆ ಸಾಧ್ಯವಾಗಿಲ್ಲ. ಕೆಲವರು ಈ ಹಾಡು ಯಾವುದು ಎಂದು ಪತ್ತೆ ಹಚ್ಚೋಕೆ ಒದ್ದಾಡಿದರು.

ಆಗ ವೈಷ್ಣವಿ ಅವರು ಈ ಹಾಡು ಯಾವುದು ಎಂಬುದನ್ನು ಕಂಡು ಹಿಡಿದರು. ‘ಯಮ್ಮೋ ಯಮ್ಮೋ ನೋಡ್ದೆ..’ ಹಾಡು ಇದು ಎಂದರು. ಅಕುಲ್​ ಹೌದು ಎಂದು ಒಪ್ಪಿಕೊಂಡರು.

ಕಿಚ್ಚ ಸುದೀಪ್​ ನಿರೂಪಣೆ ಮಾಡಲಿರುವ ಎಪಿಸೋಡ್​ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಸೀರಿಯಲ್​ ಕಲಾವಿದರ ಜತೆ ಅವರ ಸಂವಾದ ಮಜವಾಗಿತ್ತು ಎಂಬುದು ಈಗಾಗಲೇ ಪ್ರೋಮೋಗಳ ಮೂಲಕ ಸಾಬೀತಾಗಿದೆ. ಶನಿವಾರ (ಸೆಪ್ಟೆಂಬರ್​ 4) ಹಾಗೂ ಭಾನುವಾರ (ಸೆಪ್ಟೆಂಬರ್​ 5) ಮಧ್ಯಾಹ್ನ 3 ಗಂಟೆಗೆ ಈ ಶೋ ಪ್ರಸಾರವಾಗಲಿದೆ.

ಇದನ್ನೂ ಓದಿ: ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್