AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?

ಎಲ್ಲಾ ಸ್ಪರ್ಧಿಗಳ ಜತೆ ಅಕುಲ್​ ಅದ್ಭುತವಾಗಿ ಸಂಭಾಷಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಅಕುಲ್​ ತಮ್ಮ ಸಂಸಾರದಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?
ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 15, 2021 | 6:05 PM

Share

ಅಕುಲ್​ ಬಾಲಾಜಿ ತಮ್ಮ ನಿರೂಪಣೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರು ಬಿಗ್​ ಬಾಸ್​ ಮಿನಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳ ಜತೆ ಅವರು ಅದ್ಭುತವಾಗಿ ಸಂಭಾಷಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಅಕುಲ್​ ತಮ್ಮ ಸಂಸಾರದಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಳ್ಳುತ್ತಿದ್ದಂತೆ ಬಿಗ್​ ಬಾಸ್​ ಮಿನಿ ಸೀಸನ್​ ಆರಂಭಗೊಂಡಿದೆ. ಕಲರ್ಸ್​ ಕನ್ನಡ ವಾಹಿನಿಯ ಧಾರಾವಾಹಿ ಬಳಗ ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದೆ. ಎಲ್ಲಾ ಸ್ಪರ್ಧಿಗಳು ದೊಡ್ಮನೆಗೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ.  ಈ ಮಧ್ಯೆ ಮನೆಯಲ್ಲಿ ಯಾರೆಲ್ಲ ಗೊರಕೆ ಹೊಡೆಯುತ್ತಾರೆ ಎನ್ನುವ ವಿಚಾರ ಚರ್ಚೆಗೆ ಬಂದಿದೆ. ಈ ವೇಳೆ ಅಕುಲ್​ ಬಾಲಾಜಿ ಅಚ್ಚರಿಯ ವಿಚಾರ ಬಾಯ್ಬಿಟ್ಟಿದ್ದಾರೆ.

‘ನಾನು ಮಲಗಿದ ಮೇಲೆ ಶಬ್ದ ಮಾಡುವುದಿಲ್ಲ. ಆದರೆ, ನಾನು ನಿದ್ರೆಯಲ್ಲಿ ತುಂಬಾ ಮಾತಾಡ್ತೀನಿ. ಇದು ತುಂಬಾನೇ ಸಮಸ್ಯೆ ಆಗಿ ಬಿಟ್ಟಿತ್ತು. ಒಂದು ದಿನ ಸಿನಿಮಾ ಶೂಟಿಂಗ್​ ಮುಗಿಸಿ ಬಂದು ಮಲಗಿದ್ದೆ. ಮುಂಜಾನೆ 4:30 ಹೊತ್ತಿಗೆ ಹೆಂಡತಿ ಅಳುವ ಧ್ವನಿ ಕೇಳಿತು. ಏಕೆ ಅಳುತ್ತಿದ್ದೀಯಾ ಎಂದು ಕೇಳಿದೆ?’ ಎಂದು ಅಂದಿನ ಘಟನೆ ನೆನೆದಿದ್ದಾರೆ ಅಕುಲ್​.

‘ನೀವು ಮಾಧುರಿ ಅಂತ ಹುಡುಗಿ ಹೆಸರು ಹೇಳಿದ್ರಿ. ಯಾರು ಆ ಮಾಧುರಿ? ನನಗೆ ಅವಳು ಯಾರು ಅಂತ ಗೊತ್ತಾಗಬೇಕು ಎಂದು ಪಟ್ಟು ಹಿಡಿದಳು. ಮಾಧುರಿ ಯಾರು ಅಂತಾನೇ ನನಗೆ ಗೊತ್ತಿರಲಿಲ್ಲ. ನಾನು ಹೇಳಿಲ್ಲ ಅಂದೆ. ಆದರೆ, ಹೆಂಡತಿ ಇದನ್ನು ಒಪ್ಪಿಲ್ಲ. ನಂತರ ನಿದ್ದೆಯಲ್ಲಿ ಹೇಳಿದ ಮಾತು ನಿಜವಿರುತ್ತದೆಯೋ ಅಥವಾ ಸುಳ್ಳಾಗಿರುತ್ತದೆಯೋ ಎಂಬುದನ್ನು ನನ್ನ ಹೆಂಡತಿ ಗೂಗಲ್​ನಲ್ಲಿ​ ಸರ್ಚ್​ ಮಾಡಿದಳು. ಆಗ ಸುಳ್ಳು ಎನ್ನುವ ಉತ್ತರ ಗೂಗಲ್​ನಿಂದ ಬಂತು. ಗೂಗಲ್​ ಕಡೆಯಿಂದ ಹೌದು ಎನ್ನುವ ಉತ್ತರ ಬಂದಿದ್ದೆ ನನ್ನ ಸಂಸಾರ ಹಾಳಾಗುತ್ತಿತ್ತು. ಗೂಗಲ್​ ನನ್ನ ಮನೆ ಉಳಿಸಿತು’ ಎಂದಿದ್ದಾರೆ ಅಕುಲ್​ ಬಾಲಾಜಿ. ಈ ವಿಚಾರ ಕೇಳಿ ಮನೆ ಮಂದಿ ನಿಜಕ್ಕೂ ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಪಾಸ್​ ಆದ ಮಂಜು ಕಾಲೇಜಿನಲ್ಲಿ 9 ಬಾರಿ ಪರೀಕ್ಷೆ ಕಟ್ಟಿದರೂ ಪಾಸ್​ ಆಗಲಿಲ್ಲ; ಅವರ ವಿದ್ಯಾರ್ಹತೆ ಏನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ