AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?

ಎಲ್ಲಾ ಸ್ಪರ್ಧಿಗಳ ಜತೆ ಅಕುಲ್​ ಅದ್ಭುತವಾಗಿ ಸಂಭಾಷಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಅಕುಲ್​ ತಮ್ಮ ಸಂಸಾರದಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?
ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?
TV9 Web
| Edited By: |

Updated on: Aug 15, 2021 | 6:05 PM

Share

ಅಕುಲ್​ ಬಾಲಾಜಿ ತಮ್ಮ ನಿರೂಪಣೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರು ಬಿಗ್​ ಬಾಸ್​ ಮಿನಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳ ಜತೆ ಅವರು ಅದ್ಭುತವಾಗಿ ಸಂಭಾಷಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಅಕುಲ್​ ತಮ್ಮ ಸಂಸಾರದಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಳ್ಳುತ್ತಿದ್ದಂತೆ ಬಿಗ್​ ಬಾಸ್​ ಮಿನಿ ಸೀಸನ್​ ಆರಂಭಗೊಂಡಿದೆ. ಕಲರ್ಸ್​ ಕನ್ನಡ ವಾಹಿನಿಯ ಧಾರಾವಾಹಿ ಬಳಗ ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದೆ. ಎಲ್ಲಾ ಸ್ಪರ್ಧಿಗಳು ದೊಡ್ಮನೆಗೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ.  ಈ ಮಧ್ಯೆ ಮನೆಯಲ್ಲಿ ಯಾರೆಲ್ಲ ಗೊರಕೆ ಹೊಡೆಯುತ್ತಾರೆ ಎನ್ನುವ ವಿಚಾರ ಚರ್ಚೆಗೆ ಬಂದಿದೆ. ಈ ವೇಳೆ ಅಕುಲ್​ ಬಾಲಾಜಿ ಅಚ್ಚರಿಯ ವಿಚಾರ ಬಾಯ್ಬಿಟ್ಟಿದ್ದಾರೆ.

‘ನಾನು ಮಲಗಿದ ಮೇಲೆ ಶಬ್ದ ಮಾಡುವುದಿಲ್ಲ. ಆದರೆ, ನಾನು ನಿದ್ರೆಯಲ್ಲಿ ತುಂಬಾ ಮಾತಾಡ್ತೀನಿ. ಇದು ತುಂಬಾನೇ ಸಮಸ್ಯೆ ಆಗಿ ಬಿಟ್ಟಿತ್ತು. ಒಂದು ದಿನ ಸಿನಿಮಾ ಶೂಟಿಂಗ್​ ಮುಗಿಸಿ ಬಂದು ಮಲಗಿದ್ದೆ. ಮುಂಜಾನೆ 4:30 ಹೊತ್ತಿಗೆ ಹೆಂಡತಿ ಅಳುವ ಧ್ವನಿ ಕೇಳಿತು. ಏಕೆ ಅಳುತ್ತಿದ್ದೀಯಾ ಎಂದು ಕೇಳಿದೆ?’ ಎಂದು ಅಂದಿನ ಘಟನೆ ನೆನೆದಿದ್ದಾರೆ ಅಕುಲ್​.

‘ನೀವು ಮಾಧುರಿ ಅಂತ ಹುಡುಗಿ ಹೆಸರು ಹೇಳಿದ್ರಿ. ಯಾರು ಆ ಮಾಧುರಿ? ನನಗೆ ಅವಳು ಯಾರು ಅಂತ ಗೊತ್ತಾಗಬೇಕು ಎಂದು ಪಟ್ಟು ಹಿಡಿದಳು. ಮಾಧುರಿ ಯಾರು ಅಂತಾನೇ ನನಗೆ ಗೊತ್ತಿರಲಿಲ್ಲ. ನಾನು ಹೇಳಿಲ್ಲ ಅಂದೆ. ಆದರೆ, ಹೆಂಡತಿ ಇದನ್ನು ಒಪ್ಪಿಲ್ಲ. ನಂತರ ನಿದ್ದೆಯಲ್ಲಿ ಹೇಳಿದ ಮಾತು ನಿಜವಿರುತ್ತದೆಯೋ ಅಥವಾ ಸುಳ್ಳಾಗಿರುತ್ತದೆಯೋ ಎಂಬುದನ್ನು ನನ್ನ ಹೆಂಡತಿ ಗೂಗಲ್​ನಲ್ಲಿ​ ಸರ್ಚ್​ ಮಾಡಿದಳು. ಆಗ ಸುಳ್ಳು ಎನ್ನುವ ಉತ್ತರ ಗೂಗಲ್​ನಿಂದ ಬಂತು. ಗೂಗಲ್​ ಕಡೆಯಿಂದ ಹೌದು ಎನ್ನುವ ಉತ್ತರ ಬಂದಿದ್ದೆ ನನ್ನ ಸಂಸಾರ ಹಾಳಾಗುತ್ತಿತ್ತು. ಗೂಗಲ್​ ನನ್ನ ಮನೆ ಉಳಿಸಿತು’ ಎಂದಿದ್ದಾರೆ ಅಕುಲ್​ ಬಾಲಾಜಿ. ಈ ವಿಚಾರ ಕೇಳಿ ಮನೆ ಮಂದಿ ನಿಜಕ್ಕೂ ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಪಾಸ್​ ಆದ ಮಂಜು ಕಾಲೇಜಿನಲ್ಲಿ 9 ಬಾರಿ ಪರೀಕ್ಷೆ ಕಟ್ಟಿದರೂ ಪಾಸ್​ ಆಗಲಿಲ್ಲ; ಅವರ ವಿದ್ಯಾರ್ಹತೆ ಏನು?

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!