AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಮುಟ್ತೀನಿ ಏನ್ ಮಾಡ್ತೀಯಾ?’; ಬಿಗ್ ಬಾಸ್​ ಮನೆಯಲ್ಲಿ ನಡೀತು ಕಿತ್ತಾಟದ ಸರಣಿ

ಮೊದಲ ವಾರವೇ ಇಡೀ ಮನೆ ರಣರಂಗ ಆಗುವ ಸೂಚನೆ ಸಿಕ್ಕಿದೆ. ಇದರಿಂದ ಕೆಲವರು ಹೈಲೈಟ್ ಆದರೆ, ಇನ್ನೂ ಕೆಲವರು ವೀಕ್ಷಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.

‘ನಾನು ಮುಟ್ತೀನಿ ಏನ್ ಮಾಡ್ತೀಯಾ?’; ಬಿಗ್ ಬಾಸ್​ ಮನೆಯಲ್ಲಿ ನಡೀತು ಕಿತ್ತಾಟದ ಸರಣಿ
ರೂಪೇಶ್​-ರಾಕೇಶ್​-ಜಯಶ್ರೀ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 09, 2022 | 3:18 PM

Share

‘ಬಿಗ್ ಬಾಸ್ ಒಟಿಟಿ’ (Bigg Boss OTT) ಆರಂಭವಾಗಿ ಕೆಲವೇ ದಿನಗಳು ಕಳೆದಿವೆ. ಆಗಲೇ ಮನೆಯಲ್ಲಿ ಕಿತ್ತಾಟಗಳ ಸರಣಿ ಆರಂಭ ಆಗಿದೆ. ಹೈಲೈಟ್ ಆಗಲು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸ್ಪರ್ಧಿಗಳ ಮಧ್ಯೆ ಜಗಳ ಆರಂಭ ಆಗಿದೆ. ಮೊದಲ ವಾರವೇ ಇಡೀ ಮನೆ ರಣರಂಗ ಆಗುವ ಸೂಚನೆ ಸಿಕ್ಕಿದೆ. ಇದರಿಂದ ಕೆಲವರು ಹೈಲೈಟ್ ಆದರೆ, ಇನ್ನೂ ಕೆಲವರು ವೀಕ್ಷಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಮನೆಯವರನ್ನು ಬಕ್ರಾ ಮಾಡುವ ಉದ್ದೇಶದಿಂದಲೂ ಕೆಲವರು ಕಿತ್ತಾಡಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ

ಸ್ಫೂರ್ತಿ-ಸೋನು

ಇದನ್ನೂ ಓದಿ
Image
‘ವಿಡಿಯೋ ಲೀಕ್​ ಆದಾಗಿನಿಂದ ಅಮ್ಮನ ಮುಖ ನೋಡಿಲ್ಲ, ನಾನು ಇಲ್ಲಿಂದ ಕ್ಷಮೆ ಕೇಳುತ್ತೇನೆ’; ಸೋನು ಗೌಡ
Image
Rakesh Adiga: ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿ, ಕಳ್ಳತನ ಮಾಡಿ, ತಾಯಿ ತಲೆ ತಗ್ಗಿಸುವಂತೆ ಮಾಡಿದ್ದ ರಾಕೇಶ್​ ಅಡಿಗ
Image
Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ
Image
Somanna Machimada: ಬಿಗ್ ಬಾಸ್ ಮನೆಗೆ ಖ್ಯಾತ ಪತ್ರಕರ್ತ: ಸೋಮಣ್ಣ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಫೂರ್ತಿ ಹಾಗೂ ಸೋನು ಗೌಡ ನಡುವೆ ಕಿತ್ತಾಟ ನಡೆದಿದೆ. ಇದಕ್ಕೆ ಕಾರಣವಾಗಿದ್ದು ‘ಡವ್ ರಾಣಿ’ ಎಂಬ ಶಬ್ದ. ಹಾಸ್ಯದಲ್ಲಿ ಆರಂಭವಾದ ಮಾತು ನಂತರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸ್ಫೂರ್ತಿಯನ್ನು ಸೋನು ಅವರು ಡವ್ ರಾಣಿ ಎಂದು ಕರೆದಿದ್ದಾರೆ. ಈ ಕಾರಣಕ್ಕೆ ಜಗಳ ತೀವ್ರ ಸ್ವರೂಪ ಪಡೆದುಕೊಂಡಿತು.

ರಾಕೇಶ್-ರೂಪೇಶ್

ರಾಕೇಶ್ ಹಾಗೂ ರೂಪೇಶ್ ಮನೆಯಲ್ಲಿ ಕಿತ್ತಾಡಿಕೊಂಡಿದ್ದಾರೆ. ಹಾಗಂತ ಇದು ನಿಜವಾಗಿ ನಡೆದ ಜಗಳ ಆಗಿರಲೇ ಇಲ್ಲ. ಮನೆ ಮಂದಿಯನ್ನು ಕುರಿ ಮಾಡುವ ಉದ್ದೇಶದಿಂದ ಆದ ಜಗಳ. ರಾಕೇಶ್ ಹಾಗೂ ರೂಪೇಶ್ ದೊಡ್ಡದಾಗಿ ಕೂಗಾಡಿಕೊಳ್ಳಲು ಆರಂಭಿಸಿದರು. ಇದನ್ನು ನೋಡಿ ಮನೆಮಂದಿ ಎಲ್ಲ ಒಂದೆಡೆ ಸೇರಿದರು. ಈ ವೇಳೆ ರಾಕೇಶ್ ಅವರು ರೂಪೇಶ್ ಮೈಯನ್ನು ಮುಟ್ಟಿದರು. ‘ನನ್ನ ಮೈ ಮುಟ್ಟಬೇಡ ಸರಿ ಇರಲ್ಲ’ ಎಂದರು ರೂಪೇಶ್. ‘ನಾನು ಮುಟ್ತೀನಿ ಏನ್ ಮಾಡ್ತೀಯಾ?’ ಎಂದು ರಾಕೇಶ್ ರಾಂಗ್​ ಆದರು. ಇವರ ಜಗಳ ನೋಡಿ ಮನೆ ಮಂದಿ ಸ್ವಲ್ಪ ಭಯಗೊಂಡರು. ನಂತರ ಇದು ಜೋಕ್ ಅನ್ನೋದು ಗೊತ್ತಾಗಿದೆ.

ಮೊಟ್ಟೆ ವಿಚಾರಕ್ಕೆ ಅಸಮಾಧಾನ

ಸೋನು ಗೌಡ ಅವರು ಮೊಟ್ಟೆ ವಿಚಾರಕ್ಕೆ ಕೆಲವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ನಾನು ಒಂದು ಮೊಟ್ಟೆ ತೆಗೆದುಕೊಳ್ಳುತ್ತೇನೆ ಎಂದರೂ ನೀವು ಬಿಡಲಿಲ್ಲ’ ಎಂದು ಗುರೂಜಿ ವಿರುದ್ಧ ಅವರು ದೂರಿದ್ದಾರೆ.

ಜಯಶ್ರೀ-ಉದಯ್​

ಜಯಶ್ರೀ ಆರಾಧ್ಯ ಹಾಗೂ ಉದಯ್ ಸೂರ್ಯ ಅವರು ಸಣ್ಣ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಜಯಶ್ರೀ ಬಗ್ಗೆ ಉದಯ್ ತುಂಬಾನೇ ಸಿಟ್ಟಾಗಿದ್ದಾರೆ. ಈ ಪ್ರೋಮೋ ಸಖತ್ ವೈರಲ್ ಆಗಿದೆ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ