Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ಗೆ ಎದುರಾಯ್ತು ಸಂಕಷ್ಟ; ಮೊದಲ ದಿನವೇ ಶೋ ನೋಡಲ್ಲ ಎಂದ ವೀಕ್ಷಕರು

19 ಸ್ಪರ್ಧಿಗಳು ಮನೆ ಒಳಗೆ ಹೋಗಿದ್ದಾರೆ ಅನ್ನೋದು ನಿಜ. ಆದರೆ, ಇವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಗೊತ್ತಿರುವವರು. ಉಳಿದವರೆಲ್ಲ ಹೊಸ ಮುಖಗಳೇ. ಇದರಿಂದ ವೀಕ್ಷಕರು ಬೇಸರಗೊಂಡಿದ್ದಾರೆ.

ಬಿಗ್​ ಬಾಸ್​ಗೆ ಎದುರಾಯ್ತು ಸಂಕಷ್ಟ; ಮೊದಲ ದಿನವೇ ಶೋ ನೋಡಲ್ಲ ಎಂದ ವೀಕ್ಷಕರು
ಬಿಗ್​ ಬಾಸ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 06, 2021 | 6:01 PM

‘ತೆಲುಗು ಬಿಗ್​ ಬಾಸ್​ ಸೀಸನ್​ 5’ ಭಾನುವಾರದಿಂದ (ಸೆಪ್ಟೆಂಬರ್​ 5) ಆರಂಭಗೊಂಡಿದೆ. ಸ್ಟಾರ್​ ಮಾ ವಾಹಿನಿಯಲ್ಲಿ ಈ ಶೋ ಪ್ರಸಾರ ಆರಂಭಿಸಿದೆ. ಆದರೆ, ಮೊದಲ ದಿನದಿಂದಲೇ ವಾಹಿನಿಯವರಿಗೆ ಸಾಕಷ್ಟು ಅಡೆತಡೆ ಆರಂಭವಾಗಿದೆ. ಅಷ್ಟೇ ಅಲ್ಲ, ವೀಕ್ಷಕರನ್ನು ಹೇಗೆ ಸೆಳೆಯಬೇಕು ಎನ್ನುವ ಚಿಂತೆ ಕಾಡುತ್ತಿದೆ.

ಅಕ್ಕಿನೇನಿ ನಾಗಾರ್ಜುನ ಅವರು ‘ಬಿಗ್​ ಬಾಸ್​ 5’ ನಡೆಸಿಕೊಡುತ್ತಿದ್ದಾರೆ. ಬರೋಬ್ಬರಿ 19 ಸ್ಪರ್ಧಿಗಳು ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರುವ ವ್ಯಕ್ತಿಗಳಿಗೂ ಈ ಬಾರಿ ತೆಲುಗು ಬಿಗ್​ ಬಾಸ್​ ಚಾನ್ಸ್​ ನೀಡಿದೆ. ಆದರೆ, ಸೀಸನ್​ 4ರಲ್ಲಿ ಮಾಡಿದ ತಪ್ಪು ಮತ್ತೆ ಮರುಕಳಿಸಿದೆ. 19 ಸ್ಪರ್ಧಿಗಳು ಮನೆ ಒಳಗೆ ಹೋಗಿದ್ದಾರೆ ಅನ್ನೋದು ನಿಜ. ಆದರೆ, ಇವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಗೊತ್ತಿರುವವರು. ಉಳಿದವರೆಲ್ಲ ಹೊಸ ಮುಖಗಳೇ. ಇದರಿಂದ ವೀಕ್ಷಕರು ಬೇಸರಗೊಂಡಿದ್ದಾರೆ. ಅಲ್ಲದೆ, ನಾವು ಶೋ ನೋಡುವುದಿಲ್ಲ. ಶೋ ಈಗಲೇ ನಿಲ್ಲಿಸಿ ಎಂದು ಮೊದಲ ದಿನವೇ ಸೋಶಿಯಲ್​ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.

ಇಂಡಿಯನ್​ ಐಡಲ್​ ವಿನ್ನರ್​ ಶ್ರೀರಾಮ್​ ಚಂದ್ರ, ಆ್ಯಂಕರ್​ ರವಿ, ಆ್ಯಂಕರ್​ ಲೊಬೊ ಮತ್ತು ಶಣ್ಮುಖ್​ ಜಸ್ವಂತ್​ ಮಾತ್ರ ಪರಿಚಯ ಇರುವ ಮುಖಗಳು. ಉಳಿದಂತೆ ಎಲ್ಲರೂ ಅಷ್ಟಾಗಿ ಪರಿಚಯವಿಲ್ಲ. ಇದು ವೀಕ್ಷಕರಿಗೆ ಬೇಸರತರಿಸಿದೆ.

ಇನ್ನು, ಇಲ್ಲಿ ಮತ್ತೊಂದು ಸಮಸ್ಯೆ ಇದೆ. ಇದೇ ತಿಂಗಳಿನಿಂದ ಐಪಿಎಲ್​, ಅದಾದ ನಂತರದಲ್ಲಿ ಟಿ20 ವರ್ಲ್ಡ್​​​ಕಪ್​ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಬಿಗ್​ ಬಾಸ್​ ನೋಡುವವರ ಸಂಖ್ಯೆ ಕಡಿಮೆ. ಟಿಆರ್​ಪಿ ದೃಷ್ಟಿಯಲ್ಲಿ ಬಿಗ್​ ಬಾಸ್​ಗೆ ಇದು ಕೂಡ ಅಡೆತಡೆಯೇ.

ವಾಹಿನಿಯವರಿಗೆ ಈ ಬಗ್ಗೆ ಅರಿವಾಗಿದೆ. ಆದರೆ, ಅವರಿಗೆ ಬೇರೆ ಆಯ್ಕೆ ಇಲ್ಲ. ಬಿಗ್​ ಬಾಸ್​ ಮನೆಯಲ್ಲಿ ಒಂದಷ್ಟು ವಿವಾದಗಳು ಹುಟ್ಟಿಕೊಂಡರೆ ಖಂಡಿತವಾಗಿಯೂ ಹೆಚ್ಚು ವೀಕ್ಷಕರನ್ನು ಸೆಳೆಯೋಕೆ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ, ಶೋ ಸಂಕಷ್ಟ ಎದುರಿಸೋದು ಪಕ್ಕಾ ಎನ್ನುವ ಮಾತು ಕೇಳಿ ಬಂದಿದೆ.

ಇದನ್ನೂ ಓದಿ: ಹೊಸ ಬಿಗ್​ ಬಾಸ್​​ ಆರಂಭಕ್ಕೂ ಮುನ್ನವೇ ಲೀಕ್​ ಆಯ್ತು 15 ಸ್ಪರ್ಧಿಗಳ ಹೆಸರು; ಈ ಬಾರಿ ಯಾರಿಗೆಲ್ಲ ಚಾನ್ಸ್​?

ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ