AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್: ಹೀರೋಯಿನ್​​ಗೆ ಹೊಡೆದ ಕಮಿಡಿಯನ್, ಮನೆಯಲ್ಲಿ ‘ಬಳೆ’ ಸದ್ದು

Bigg Boss Telugu season 9: ಬಿಗ್​​ಬಾಸ್ ತೆಲುಗು ಸೀಸನ್ 09 ಪ್ರಾರಂಭವಾಗಿ ಎರಡು ವಾರಗಳಾಗುತ್ತಾ ಬಂದಿದೆ. ಮನೆಯಲ್ಲಿ ಬರೀ ಜಗಳಗಳೇ ನಡೆಯುತ್ತಿವೆ. ಸಂಜನಾ ಅಂತೂ ಹಲವರ ಮೇಲೆ ಈಗಾಗಲೇ ಜಗಳ ಮಾಡಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿ ಕಮಿಡಿಯನ್ ಒಬ್ಬರು ನಾಯಕಿ ಮೇಲೆ ಕೈಮಾಡಿದ್ದಾರೆ. ಸಂಜನಾಗೂ ಪೆಟ್ಟು ತಗುಲಿದೆಯಂತೆ.

ಬಿಗ್​​ಬಾಸ್: ಹೀರೋಯಿನ್​​ಗೆ ಹೊಡೆದ ಕಮಿಡಿಯನ್, ಮನೆಯಲ್ಲಿ ‘ಬಳೆ’ ಸದ್ದು
Bigg Boss Telugu 09
ಮಂಜುನಾಥ ಸಿ.
|

Updated on: Sep 20, 2025 | 2:47 PM

Share

ತೆಲುಗು ಬಿಗ್​​ಬಾಸ್ (Telugu Bigg Boss 09) ಶುರುವಾಗಿ ಎರಡು ವಾರ ಆಗುತ್ತಾ ಬಂದಿದೆ. ಮನೆಯಲ್ಲಿ ಜಗಳ, ಬೈದಾಟಗಳು ಬಲು ಜೋರಾಗಿ ನಡೆಯುತ್ತಿವೆ. ಒಬ್ಬರ ಮೇಲೆ ಇನ್ನೊಬ್ಬರು ಕಿತ್ತಾಡುವುದನ್ನೇ ಬಿಗ್​​ಬಾಸ್ ರಿಯಾಲಿಟಿ ಶೋ ಎಂದರ್ಥ ಮಾಡಿಕೊಂಡಂತೆ ಪರಸ್ಪರರು ಕಿತ್ತಾಡುತ್ತಿದ್ದಾರೆ. ಕನ್ನಡತಿ ಸಂಜನಾ ಸಹ ತಾವೇನು ಕಡಿಮೆಯಲ್ಲ ಎಂಬಂತೆ ಆಗಾಗ್ಗೆ ಕೆಲವರ ಮೇಲೆ ಗಂಟಲು ದೊಡ್ಡದು ಮಾಡಿ ಜಗಳ ಮಾಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ವೇಳೆಯಂತೂ ಕಮಿಡಿಯನ್ ಸುಮನ್ ಶೆಟ್ಟಿ ಬಿಗ್​​ಬಾಸ್ ಮನೆಯ ಸಹ ಸ್ಪರ್ಧಿಗೆ ಹೊಡೆದೇ ಬಿಟ್ಟಿದ್ದಾರೆ. ಸಂಜನಾ, ತಮಗೂ ಪೆಟ್ಟಾಗಿದೆ ಎಂದು ದೂರಿದ್ದಾರೆ.

ನಿನ್ನೆ, ಟೆನೆಂಟ್ ಆಗಿದ್ದವರಿಗೆ ಪರ್ಮನೆಂಟ್ ಓನರ್​​ಗಳಾಗುವ ಅವಕಾಶ ನೀಡಲಾಗಿತ್ತು. ಸ್ಪರ್ಧಿಗಳಿಗೆ ಬಾಸ್ಕೆಟ್ ಒಂದನ್ನು ನೀಡಿ, ಅದರಲ್ಲಿರುವ ವಸ್ತುಗಳನ್ನು ಇನ್ನೊಬ್ಬರು ಕದಿಯದಂತೆ ತಡೆಯಬೇಕಿತ್ತು. ಈ ವೇಳೆ ಸಂಜನಾ ಹಾಗೂ ಫ್ಲೋರಾ ಸೂನಿ ಅವರು ಸುಮನ್ ಶೆಟ್ಟಿಯನ್ನು ಟಾರ್ಗೆಟ್ ಮಾಡಿದರು. ಬಾಸ್ಕೆಟ್​​ನಲ್ಲಿರುವ ವಸ್ತುಗಳನ್ನು ಕದಿಯುವ ಯತ್ನವನ್ನು ಫ್ಲೋರಾ ಸೈನಿ ಮಾಡುವ ಅದನ್ನು ತಡೆಯುವ ಯತ್ನದಲ್ಲಿ ಫ್ಲೋರಾಗೆ ಹೊಡೆದಿದ್ದಾರೆ ಸುಮನ್ ಶೆಟ್ಟಿ. ಅದೂ ಒಂದು ಬಾರಿ ಅಲ್ಲ ಬದಲಿಗೆ ಎರಡು ಬಾರಿ ಅವರಿಗೆ ಹೊಡೆದಿದ್ದಾರೆ. ಈ ವೇಳೆ ಸಂಜನಾ ತಮಗೂ ಸಹ ಏಟು ಬಿದ್ದಿದೆ ಎಂದು ದೂರಿದರು. ಕೊನೆಗೆ ಸುಮನ್ ಅವರನ್ನು ಟಾಸ್ಕ್​​​ನಿಂದ ಎಲಿಮಿನೇಟ್ ಮಾಡಲಾಯ್ತು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಖುಷಿಯಾಗಿದ್ದಾರೆ ಸಂಜನಾ ಗಲ್ರಾನಿ, ವಿಡಿಯೋ ನೋಡಿ

ಟಾಸ್ಕ್ ಎಲ್ಲ ಮುಗಿದ ಬಳಿಕ ಸಂಜನಾ ಹಾಗೂ ಸುಮನ್ ಶೆಟ್ಟಿ ನಡುವೆ ಜೋರಾಗಿ ಜಗಳ ನಡೆದಿದೆ. ಸುಮನ್ ಬೇಸರಗೊಂಡು ಆಟವಾಡದೆ ಕೂತಾಗ ಸಂಜನಾ, ‘ನಮ್ಮನ್ನು ಕೆಟ್ಟವರನ್ನಾಗಿ, ನೀವು ಬಳೆ ಹಾಕಿಕೊಂಡು ಕೂತುಕೊಳ್ಳಿ’ ಎಂದು ಖಾರವಾಗಿ ನುಡಿದರು. ಇದರಿಂದ ಸುಮನ್​​ಗೆ ಬಹಳ ಸಿಟ್ಟು ಬಂತು. ಸುಮನ್ ಸಹ ಸಂಜನಾ ವಿರುದ್ಧ ಜೋರು ದನಿಯಲ್ಲಿ ಜಗಳ ಆಡಿದರು.

ಸಂಜನಾ ಕಳೆದ ವಾರ, ಮನೆಯ ಕೆಲವರು ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡುತ್ತಾರೆ ಎಂದು ದೂರಿದ್ದರು. ಆದರೆ ಈ ವಾರ ಅವರೇ, ಬಳೆಗಳ ಬಗ್ಗೆ ಮಾತನಾಡಿದ್ದು, ಬಳೆ ಹಾಕಿದವರು ಬಲಹೀನರು ಎಂಬರ್ಥದ ಮಾತುಗಳನ್ನಾಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಕನ್ನಡ ಬಿಗ್​​​ಬಾಸ್​​​ನಲ್ಲಿ ಸಹ ಒಮ್ಮೆ ಇದೇ ವಿಷಯಕ್ಕೆ ಬಹಳ ದೊಡ್ಡ ಜಗಳ ನಡೆದಿತ್ತು. ಬಳೆಗಳ ಬಗ್ಗೆ ಮಾತನಾಡಿದ್ದ ವಿನಯ್ ಗೌಡ, ಎಲಿಮಿನೇಶನ್ ವರೆಗೆ ಹೋಗಿ ಮರಳಿ ಬಂದಿದ್ದರು. ತೀವ್ರ ಟೀಕೆಯನ್ನು ಅವರು ಎದುರಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ