AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುರುವಾಯ್ತು ತೆಲುಗು ಬಿಗ್​​ಬಾಸ್ 9, ಸ್ಪರ್ಧಿಗಳು ಯಾರ್ಯಾರು? ಇದ್ದಾರೆ ಕನ್ನಡಿಗರು

Bigg Boss Telugu season 9: ಬಿಗ್​​ಬಾಸ್ ತೆಲುಗು ಸೀಸನ್ 09 ಇಂದಿನಿಂದ (ಸೆಪ್ಟೆಂಬರ್ 07) ಪ್ರಾರಂಭವಾಗಿದೆ. ಕನ್ನಡದ ಕೆಲವು ನಟಿಯರು ಸೇರಿದಂತೆ ಭಿನ್ನ ಕ್ಷೇತ್ರಗಳಿಗೆ ಸೇರಿದ ಸ್ಪರ್ಧಿಗಳು ಈ ಬಾರಿ ಬಿಗ್​​ಬಾಸ್ ಮನೆ ಸೇರಿಕೊಂಡಿದ್ದಾರೆ. ಈ ಬಾರಿ ಬಿಗ್​​ಬಾಸ್ ಮನೆ ಸೇರಿದ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ...

ಶುರುವಾಯ್ತು ತೆಲುಗು ಬಿಗ್​​ಬಾಸ್ 9, ಸ್ಪರ್ಧಿಗಳು ಯಾರ್ಯಾರು? ಇದ್ದಾರೆ ಕನ್ನಡಿಗರು
Bigg Boss Telugu 9
ಮಂಜುನಾಥ ಸಿ.
|

Updated on: Sep 07, 2025 | 11:16 PM

Share

ಬಿಗ್​​ಬಾಸ್ ಸೀಸನ್ ಶುರುವಾಗಿದೆ. ಹಿಂದಿ, ಮಲಯಾಳಂ ಬಿಗ್​​ಬಾಸ್ ಹೊಸ ಸೀಸನ್​ಗಳು ಈಗಾಗಲೇ ಪ್ರಾರಂಭ ಆಗಿವೆ. ಹಿಂದಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಪ್ರಜಾಪ್ರಭುತ್ವದ ಬಿಗ್​​ಬಾಸ್ ಮಾಡಲಾಗುತ್ತಿದ್ದು ಮನೆಯ ನಿರ್ಣಯಗಳನ್ನು ಸ್ಪರ್ಧಿಗಳಿಗೇ ಬಿಡಲಾಗಿದೆ. ಇಂದು (ಸೆಪ್ಟೆಂಬರ್ 07) ತೆಲುಗು ಬಿಗ್​​ಬಾಸ್ ಪ್ರಾರಂಭ ಆಗಿದೆ. ಇದು ತೆಲುಗು ಬಿಗ್​​ಬಾಸ್​​ನ ಒಂಬತ್ತನೇ ಸೀಸನ್ ಆಗಿದ್ದು ಹಲವು ವಿಶೇಷತೆಗಳನ್ನು ಈ ಸೀಸನ್ ಒಳಗೊಂಡಿದೆ.

ತೆಲುಗು ಬಿಗ್​​ಬಾಸ್​​​ನಲ್ಲಿ ಶ್ರೀಸಾಮಾನ್ಯರನ್ನು ಪ್ರತಿ ಬಾರಿಯೂ ಮನೆಗೆ ಕಳಿಸಲಾಗುತ್ತದೆ. ಹೀಗೆ ಒಳಗೆ ಹೋಗಿದ್ದ ಸಾಮಾನ್ಯರು ಸಹ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದಿದೆ. ಈ ಬಾರಿಯೂ ಸಹ ಸಾಮಾನ್ಯರನ್ನು ಬಿಗ್​​ಬಾಸ್ ಮನೆಯ ಒಳಗೆ ಕಳಿಸಲಾಗಿದೆ. ಈ ಬಾರಿ ‘ಅಗ್ನಿಪರೀಕ್ಷ’ ಎಂಬ ವಿಶೇಷ ಟಾಸ್ಕ್ ಇಟ್ಟು ಸಾಮಾನ್ಯರನ್ನು ಆಯ್ಕೆ ಮಾಡಿ ಮನೆಗೆ ಕಳಿಸಲಾಗಿದೆ.

ಇದರ ಜೊತೆಗೆ ಈ ಬಾರಿ ಎರಡು ಬಿಗ್​​ಬಾಸ್ ಹೌಸ್​​ಗಳಲ್ಲಿ ಆಟ, ಟಾಸ್ಕ್​​ಗಳು ನಡೆಯಲಿವೆ. ಈ ಬಗ್ಗೆ ನಾಗಾರ್ಜುನ ಅವರು ಆರಂಭದಲ್ಲಿಯೇ ಹೇಳಿದ್ದು, ಎರಡು ಹೌಸ್​​ಗಳನ್ನು ನಿರ್ಮಿಸಿ ಎರಡರಲ್ಲಿಯೂ ಜನರನ್ನು ಇಡಲಾಗಿದ್ದು, ಪರಸ್ಪರರ ಎದುರು ಟಾಸ್ಕ್​​ಗಳು ನಡೆಯಲಿವೆ. ಈ ಸೀಸನ್​​ರ ಆರಂಭದಲ್ಲಿ ಸ್ವತಃ ನಾಗಾರ್ಜುನ ಸಹ ಕೆಲವು ಟಾಸ್ಕ್​​ಗಳು ಮುಗಿಸಿಯೇ ಬಿಗ್​​ಬಾಸ್ ಮನೆಗೆ ಪ್ರವೇಶ ಮಾಡಿದ್ದು ವಿಶೇಷ.

ಈ ಬಾರಿ ತೆಲುಗು ಬಿಗ್​​ಬಾಸ್ ಮನೆ ಸೇರಿದ ಸ್ಪರ್ಧಿಗಳ ಪಟ್ಟಿ

ತನುಜಾ ಗೌಡ: ಕನ್ನಡದ ನಟಿ ಆಗಿರುವ ಇವರು, ತೆಲುಗಿನ ಟಿವಿ ಧಾರಾವಾಹಿಗಳ ಮೂಲಕ ತೆಲುಗು ರಾಜ್ಯದವರ ಮೆಚ್ಚಿನ ನಟಿಯಾಗಿದ್ದಾರೆ.

ಫ್ಲೋರಾ ಸೈನಿ: ಕನ್ನಡ, ತೆಲುಗು, ತಮಿಳು, ಮಲಯಾಳ, ಹಿಂದಿಯ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಸ್ಟಾರ್ ನಟಿ ಫ್ಲೋರಾ ಸೈನಿ ಸಹ ಈ ಬಾರಿ ಸ್ಪರ್ಧಿಯಾಗಿದ್ದಾರೆ.

ಕಲ್ಯಾಣ್ ಪದಲ: ಸಾಮಾನ್ಯ ಸ್ಪರ್ಧಿ

ಜಬರ್ದಸ್ಥ್ ಎಮಾನ್ಯುಯೆಲ್: ಜಬರ್ದಸ್ಥ್ ಶೋ ಹಾಸ್ಯ ನಟ

ಶಾಸ್ತ್ರಿ ವರ್ಮ- ಕೋರಿಯಾಗ್ರಾಫರ್

ಹರಿತ ಹರೀಷ್-ಶ್ರೀಸಾಮಾನ್ಯ

ರಿತು ಚೌಧರಿ- ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್

ಭರಣಿ ಶಂಕರ್- ಸಿನಿಮಾ ಹಾಗೂ ಧಾರಾವಾಹಿ ನಟ

ಡಿಮಾನ್ ಪವನ್- ಮೂರನೇ ಶ್ರೀಸಾಮಾನ್ಯ

ಸಂಜನಾ ಗಲ್ರಾನಿ- ಜನಪ್ರಿಯ ನಟಿ

ರಾಮು ರಾಥೋಡ್- ಜನಪದ ಗಾಯಕ

ಶ್ರೀಜಾ ದಮ್ಮು- ನಾಲ್ಕನೇ ಶ್ರೀಸಾಮಾನ್ಯ

ಸುಮನ್ ಶೆಟ್ಟಿ- ಜನಪ್ರಿಯ ಹಾಸ್ಯ ನಟ

ಪ್ರಿಯಾ ಶೆಟ್ಟಿ- ಐದನೇ ಶ್ರೀಸಾಮಾನ್ಯ

ಮನೀಷ್ ಮರ್ಯಾದ- ಉದ್ಯಮಿ, ಸಾಮಾನ್ಯ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ