AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಮಿನೇಷನ್​ನಿಂದ ಪಾರಾದ ವಿನಯ್: ಮತ್ತೆ ಟಾರ್ಗೆಟ್ ಆದ್ರಾ ಡ್ರೋನ್ ಪ್ರತಾಪ್

Bigg Boss 10: ಅಂದುಕೊಂಡದ್ದನ್ನು ಸ್ಪಷ್ಟವಾಗಿ ಹೇಳಲಾರದ, ದೊಡ್ಡ ದನಿಯಲ್ಲಿ ಮಾತನಾಡಲಾರದ, ಆತ್ಮವಿಶ್ವಾಸದ ಕೊರತೆಯುಳ್ಳ ವ್ಯಕ್ತಿತ್ವದ ಡ್ರೋನ್ ಪ್ರತಾಪ್ ಅವರನ್ನು ಮನೆಯ ಮಂದಿ ಈಸಿ ಟಾರ್ಗೆಟ್ ಮಾಡಿಕೊಂಡಿದ್ದಾರೆಯೇ?

ನಾಮಿನೇಷನ್​ನಿಂದ ಪಾರಾದ ವಿನಯ್: ಮತ್ತೆ ಟಾರ್ಗೆಟ್ ಆದ್ರಾ ಡ್ರೋನ್ ಪ್ರತಾಪ್
ಮಂಜುನಾಥ ಸಿ.
|

Updated on:Oct 24, 2023 | 11:30 PM

Share

ಬಿಗ್​ಬಾಸ್ ಕನ್ನಡ ಸೀಸನ್ 10 (Bigg Boss) ಪ್ರಾರಂಭವಾದಾಗ ಮೊದಲೆರಡು ವಾರ ಡ್ರೋನ್ ಪ್ರತಾಪ್ ಎಲ್ಲರಿಗೂ ಟಾರ್ಗೆಟ್ ಆಗಿದ್ದರು. ಹೀಗಳಿಕೆ, ವ್ಯಂಗ್ಯಕ್ಕೆಲ್ಲ ಅವರೇ ವಸ್ತುವಾಗಿದ್ದರು. ಮಾತ್ರವಲ್ಲ ಮೊದಲ ವಾರ ಅಸಮರ್ಥರ ಗುಂಪಿನಲ್ಲಿದ್ದ ಅವರನ್ನು ಸೇವೆಗೂ ಬಳಸಿಕೊಳ್ಳಲಾಗಿತ್ತು. ಆದರೆ ಸುದೀಪ್ ಅವರು ಸಣ್ಣದಾಗಿ ಬಿಸಿ ಮುಟ್ಟಿಸಿದ ಬಳಿಕ ಡ್ರೋನ್ ಬಗೆಗಿನ ವ್ಯಂಗ್ಯ ಕಡಿಮೆ ಆಗಿದೆ. ಆದರೂ ಸಹ, ಸ್ಪಷ್ಟವಾಗಿ ಅಂದುಕೊಂಡದ್ದನ್ನು ಹೇಳಲಾರದ, ದೊಡ್ಡ ದನಿಯಲ್ಲಿ ಮಾತನಾಡಲಾರದ, ಆತ್ಮವಿಶ್ವಾಸದ ಕೊರತೆಯುಳ್ಳ ವ್ಯಕ್ತಿತ್ವದ ಡ್ರೋನ್ ಪ್ರತಾಪ್ ಅವರನ್ನು ಮನೆಯ ಮಂದಿ ಈಸಿ ಟಾರ್ಗೆಟ್ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಮತ್ತೆ ಮೂಡುವಂಥಹಾ ಘಟನೆ ನಡೆದಿದೆ.

ಭಾಗ್ಯಶ್ರೀ, ಡ್ರೋನ್ ಪ್ರತಾಪ್, ಕಾರ್ತಿಕ್, ತನಿಷಾ, ಮೈಖಲ್, ಸ್ನೆಹಿತ್, ವಿನಯ್ ಅವರುಗಳೂ ಎಲಿಮಿನೇಶನ್​ಗೆ ನಾಮಿನೇಟ್ ಆಗಿದ್ದಾರೆ. ನೀತು ಹಾಗೂ ಇಶಾನಿ ಅವರುಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ನೇರವಾಗಿ ನಾಮಿನೇಟ್ ಆಗಿರುವ ನೀತು ಹಾಗೂ ಇಶಾನಿಯನ್ನು ಹೊರತುಪಡಿಸಿ ಉಳಿದವರಲ್ಲಿ ಒಬ್ಬ ಅದೃಷ್ಟಶಾಲಿಯನ್ನು ನಾಮಿನೇಷನ್​ನಿಂದ ಪಾರು ಮಾಡುವ ಟಾಸ್ಕ್ ಒಂದನ್ನು ಬಿಗ್​ಬಾಸ್ ಆಡಿಸಿದರು. ಟಾಸ್ಕ್​ನಂತೆ ನಾಮಿನೇಟ್ ಆಗಿರುವ ಸದಸ್ಯರು, ತಮ್ಮನ್ನು ನಾಮಿನೇಟ್ ಮಾಡಿರಬಹುದಾದ ಸದಸ್ಯರ ಹೆಸರುಗಳನ್ನು ಸರಿಯಾಗಿ ಅಂದಾಜು ಮಾಡಿ ಹೇಳಿದರೆ ಅವರಿಗೆ ನಾಮಿನೇಷನ್​ನಿಂದ ಮುಕ್ತಿ. ಈ ಟಾಸ್ಕ್​ನಲ್ಲಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ಅವರುಗಳು ತಮ್ಮನ್ನು ನಾಮಿನೇಟ್ ಮಾಡಿದವರ ಹೆಸರನ್ನು ಬಹುತೇಕ ಸರಿಯಾಗಿ ಹೇಳಿದರು. ಹಾಗಾಗಿ ಇಬ್ಬರಿಗೂ ಮನೆ ಮಂದಿಯೊಟ್ಟಿಗೆ ಸಂವಾದ ಏರ್ಪಡಿಸಿ ಮನೆ ಮಂದಿಯೇ ವಿನ್ನರ್ ಅನ್ನು ತೀರ್ಮಾನಿಸುವಂತೆ ಹೇಳಲಾಯ್ತು.

ಇದನ್ನೂ ಓದಿ:ಬಿಗ್​ಬಾಸ್ ಮನೆ ಮಂದಿಗೆ ತರಾಟೆ: ಹಿಂದೆಂದೂ ಬಳಸದ ಅಧಿಕಾರ ಬಳಸಿದ ಸುದೀಪ್

ಸಂವಾದದ ಆರಂಭದಲ್ಲಿ ವಿನಯ್ ಕೆಲವು ಆರೋಪಗಳನ್ನು ಡ್ರೋನ್ ಪ್ರತಾಪ್ ಮೇಲೆ ಮಾಡಿದರು. ಸದಾ ಗೊಂದಲದಲ್ಲಿರುತ್ತಾನೆ, ದ್ವಿ-ವ್ಯಕ್ತಿತ್ವವುಳ್ಳ ವ್ಯಕ್ತಿ, ಡ್ಯಾನ್ಸ್ ಮಾಡುತ್ತಾ ಹೀರೋ ಆಗಲು ನೋಡುತ್ತಾನೆ ಎಂಬ ಕೆಲವು ಆರೋಪಗಳನ್ನು ಮಾಡಿದರು. ಪ್ರತಾಪ್ ಸಹ, ನಾನು ಸಿಟ್ಟು ಮಾಡಿಕೊಳ್ಳಲ್ಲ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂದು ತಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆಯಷ್ಟೆ ಮಾತನಾಡಿದರು. ವಿರೋಧಿಯ ಅವಗುಣಗಳ ಪಟ್ಟಿ ಮಾಡಲಿಲ್ಲ. ಆ ನಂತರ ಮನೆಯ ಸದಸ್ಯರು ಇಬ್ಬರಿಗೂ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವಂತೆ ಸೂಚಿಸಲಾಯ್ತು. ಆ ಸಮಯದಲ್ಲಿ ಹಲವರು ಡ್ರೋನ್ ಪ್ರತಾಪ್​ಗೆ ಮಾತ್ರವೇ ಪ್ರಶ್ನೆ ಕೇಳಿದರು. ನಮ್ರತಾ, ತುಕಾಲಿ ಸಂತು ಅವರುಗಳಂತೂ ಪೂರ್ವನಿರ್ಧಾರಿತವಾಗಿ ಸಿಟ್ಟಿನಿಂದಲೇ ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಗಳ ಸತತ ದಾಳಿಯಿಂದ ಕಂಗಾಲಾದ ಪ್ರತಾಪ್ ಕೆಲವಕ್ಕೆ ಉತ್ತರಿಸಿದರು. ಪ್ರತಾಪ್​ರ ಉತ್ತರವನ್ನು ಸ್ವೀಕರಿಸದೆ ಮತ್ತೆ ಪ್ರಶ್ನೆಗಳೇ ಎದುರಿನಿಂದ ತೂರಿಬಂದವು. ವಿನಯ್​ಗೆ ಯಾರೂ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಿಲ್ಲ.

ಅಂತಿಮವಾಗಿ ಮನೆಯ ಸದಸ್ಯರೆಲ್ಲ ಸೇರಿ ಏಕಪಕ್ಷೀಯವಾಗಿ ವಿನಯ್ ಅನ್ನು ನಾಮಿನೇಷನ್​ನಿಂದ ಪಾರು ಮಾಡಿದರು. ಡ್ರೋನ್ ಪ್ರತಾಪ್ ಅನ್ನು ನಾಮಿನೇಷನ್​ನಲ್ಲಿಯೇ ಉಳಿಸಿದರು. ಸಂವಾದದ ಬಳಿಕ, ನೀವು ನನಗೆ ಮತಹಾಕಲಿಲ್ಲ ಎಂಬ ಬೇಸರ ನನಗಿಲ್ಲ ಎಂದರು ಡ್ರೋನ್. ಭಾಗ್ಯಶ್ರೀ, ಪ್ರತಾಪ್, ಕಾರ್ತಿಕ್, ತನಿಷಾ, ಮೈಖಲ್, ಸ್ನೆಹಿತ್, ನೀತು, ಇಶಾನಿ ಅವರುಗಳು ನಾಮಿನೇಷನ್​ನಲ್ಲಿದ್ದು ಇವರಲ್ಲಿ ಒಬ್ಬರು ಈ ವಾರ ಹೊರಗೆ ಹೋಗಲಿದ್ದಾರೆ. ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:28 pm, Tue, 24 October 23

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು