AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KBC 13: ₹ 1 ಕೋಟಿ ಮೊತ್ತದ ಚೆಸ್ ಕುರಿತ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಬಾಲಕಿ; ನೀವು ಉತ್ತರಿಸಬಲ್ಲಿರಾ?

Amitabh Bachchan: ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ಕೆಬಿಸಿ 13ರಲ್ಲಿ ಇತ್ತೀಚೆಗೆ ಬಾಲಕಿಯೊಬ್ಬಳು ಸ್ಪರ್ಧಿಸಿದ್ದಾಳೆ. ಆದರೆ ಆಕೆಗೆ 1 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯಲಿಲ್ಲ. ಆ ಪ್ರಶ್ನೆ ಇಲ್ಲಿದೆ.

KBC 13: ₹ 1 ಕೋಟಿ ಮೊತ್ತದ ಚೆಸ್ ಕುರಿತ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಬಾಲಕಿ; ನೀವು ಉತ್ತರಿಸಬಲ್ಲಿರಾ?
ಅಮಿತಾಭ್ ಬಚ್ಚನ್, ರಾಜ್​ನಂದಿನಿ ಕಲಿತಾ
TV9 Web
| Updated By: shivaprasad.hs|

Updated on:Dec 02, 2021 | 10:13 AM

Share

ಅಮಿತಾಭ್ ಬಚ್ಚನ್ (Amitabh Bachcan) ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿಯ 13ನೇ (KBC 13) ಸಂಚಿಕೆ ವೀಕ್ಷಕರಿಗೆ ಪ್ರಿಯವಾಗುವಂತೆ ಮೂಡಿಬರುತ್ತಿದ್ದು, ಈಗಾಗಲೇ ಮೂರು ಜನ ಕೋಟ್ಯಧಿಪತಿಗಳು ಹೊರಹೊಮ್ಮಿದ್ದಾರೆ. ಆದರೆ ಇದುವರೆಗೆ ಯಾರೂ ಕೂಡ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಿಲ್ಲ. ಇತ್ತೀಚಿನ ವಿಶೇಷ ವಿದ್ಯಾರ್ಥಿ ಸಂಚಿಕೆಯಲ್ಲಿ 14 ವರ್ಷದ ಬಾಲಕಿ ರಾಜ್​ನಂದಿನಿ ಕಲಿತಾ (Rajnandini Kalita) ಭಾಗವಹಿಸಿದ್ದು, ₹ 1 ಕೋಟಿ ಮೊತ್ತದ ಪ್ರಶ್ನೆಯ ಹಂತದವರೆಗೆ ತಲುಪಿದ್ದಾಳೆ. ಆದರೆ ಚೆಸ್ (Chess) ಕುರಿತಾದ ಆ ಪ್ರಶ್ನೆಗೆ ಅವರಿಗೆ ಉತ್ತರ ತಿಳಿಯಲಿಲ್ಲ. ಅಂತಿಮವಾಗಿ ಅವರು ಕ್ವಿಟ್ ಮಾಡುವ ನಿರ್ಧಾರ ಕೈಗೊಂಡರು. ನೀವು ಆ ಪ್ರಶ್ನೆಗೆ ಉತ್ತರ ಊಹಿಸಬಲ್ಲಿರಾ? ಪ್ರಶ್ನೆ ಇಲ್ಲಿದೆ.

‘‘ಕೇವಲ 12 ವರ್ಷ, 4 ತಿಂಗಳು, 25 ದಿನ ತುಂಬಿದ ವ್ಯಕ್ತಿ, ಚೆಸ್ ಗ್ರಾಂಡ್ ಮಾಸ್ಟರ್ ಪಟ್ಟ ಅಲಂಕರಿಸುತ್ತಾರೆ. ಆ ಸ್ಥಾನ ಅಲಂಕರಿಸಿದ ವಿಶ್ವದ ಆ ಅತ್ಯಂತ ಕಿರಿಯ ವ್ಯಕ್ತಿಯ ಹೆಸರೇನು?’’. ಈ ಪ್ರಶ್ನೆಗೆ ಆಯ್ಕೆಗಳಾಗಿ ಅಮಿತಾಭ್, ‘‘ ರಮೇಶ್​​ಬಾಬು ಪ್ರಜ್ಞಾನಂದಾ, ಅಭಿಮನ್ಯು ಮಿಶ್ರಾ, ಬೆತ್ ಹಾರ್ಮನ್ ಹಾಗೂ ಗುಕೇಶ್ ದೊಮ್ಮರಾಜು ಹೆಸರನ್ನು ನೀಡಿದ್ದರು. ಆದರೆ ಸ್ಪರ್ಧಿ ರಾಜ್​ನಂದಿನಿ ಅವರಿಗೆ ಇದಕ್ಕೆ ಉತ್ತರ ತಿಳಿಯಲಿಲ್ಲ. ಕೊನೆಗೆ ಅವರು ಸ್ಪರ್ಧೆಯನ್ನು ಕ್ವಿಟ್ ಮಾಡಿದರು. ಸರಿಯಾದ ಉತ್ತರ ಅಭಿಮನ್ಯು ಮಿಶ್ರಾ ಆಗಿತ್ತು. ಅಂತಿಮವಾಗಿ ರಾಜ್​ನಂದಿನಿ ₹ 50 ಲಕ್ಷ ಮೊತ್ತವನ್ನು ಬಹುಮಾನವಾಗಿ ಪಡೆದರು.

ರಾಜ್​ನಂದಿನಿ ಕಲಿತಾ ಗುವಾಹಟಿ ಮೂಲದವರು. ಕೆಬಿಸಿಯಲ್ಲಿ ಪ್ರಸ್ತುತ ವಿದ್ಯಾರ್ಥಿಗಳು ಭಾಗವಹಿಸುವ ವಿಶೇಷ ಸಂಚಿಕೆಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ 14 ವರ್ಷದ ಈ ಬಾಲಕಿ ಭಾಗಿಯಾಗಿ, ಎಲ್ಲರ ಕಣ್ಣರಳಿಸುವಂತೆ ಮಾಡಿದ್ದಾರೆ. ಅಮಿತಾಭ್ ಮುಂದೆ ರಾಜ್​ನಂದಿನಿ ತಾನು ರಾಷ್ಟ್ರಪತಿಯಾದರೆ… ಎಂಬ ವಿಷಯದ ಕುರಿತು ಸಣ್ಣ ಭಾಷಣವನ್ನೂ ಮಾಡಿ ಮನಗೆದ್ದರು. ಅವರ ಭಾಷಣಕ್ಕೆ ಅಮಿತಾಭ್ ತಲೆದೂಗಿ, ಇಷ್ಟು ಚಂದದ ಭಾಷಣವನ್ನು ರಾಜಕೀಯ ನಾಯಕರೂ ಮಾಡುವುದಿಲ್ಲ ಎಂದು ಗುಣಗಾನ ಮಾಡಿದರು. ಅಂತಿಮವಾಗಿ ರಾಜ್​ನಂದಿನಿ ₹ 50 ಲಕ್ಷ ಮೊತ್ತದೊಂದಿಗೆ ಸ್ಪರ್ಧೆ ಮುಗಿಸಿದ್ದಾರೆ.

ಇದನ್ನೂ ಓದಿ:

ಬಹುಕೋಟಿ ವಂಚನೆ ಆರೋಪಿ ಜತೆ ಜಾಕ್ವೆಲಿನ್​ ಲವ್ವಿಡವ್ವಿಗೆ ಸಿಕ್ತು ಇನ್ನಷ್ಟು ಫೋಟೋಗಳ ಸಾಕ್ಷಿ

ಕೊನೆಗೂ ಸುನೀಲ್ ಶೆಟ್ಟಿ ಕುಟುಂಬದೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಹುಲ್; ಆಥಿಯಾ ಜತೆ ಭರ್ಜರಿ ಪೋಸ್

Published On - 10:00 am, Thu, 2 December 21

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!