AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ಗೆ ಹೋಗುತ್ತಿರುವ ಆ ಮಾಸ್ಕ್ ಮ್ಯಾನ್ ಯಾರು ಎಂದು ಕೊನೆಗೂ ಕಂಡು ಹಿಡಿದ ಫ್ಯಾನ್ಸ್

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಉಳಿದಿರೋದು ಇನ್ನು ಕೆಲವೇ ಗಂಟೆಗಳು ಮಾತ್ರ. ನಾಳೆ ಅಂದರೆ ಸೆಪ್ಟೆಂಬರ್ 28ರಂದು ಶೋ ಅದ್ದೂರಿಯಾಗಿ ಆರಂಭ ಆಗಲಿದೆ. ಈ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಅದಕ್ಕೂ ಮೊದಲು ಮಾಸ್ಕ್ ಮ್ಯಾನ್ ಯಾರು ಎಂದು ಕಂಡು ಹಿಡಿಯಲಾಗಿದೆ.

ಬಿಗ್ ಬಾಸ್​ಗೆ ಹೋಗುತ್ತಿರುವ ಆ ಮಾಸ್ಕ್ ಮ್ಯಾನ್ ಯಾರು ಎಂದು ಕೊನೆಗೂ ಕಂಡು ಹಿಡಿದ ಫ್ಯಾನ್ಸ್
Bbk
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 27, 2025 | 8:28 AM

Share

ಕಲರ್ಸ್ ಕನ್ನಡ ವಾಹಿನಿಯು ಪ್ರತಿ ವರ್ಷವೂ ಬಿಗ್ ಬಾಸ್​ನ (Bigg Boss) ಹೋಸ್ಟ್ ಮಾಡುತ್ತಾ ಬರುತ್ತಿದೆ. ಈ ವರ್ಷವೂ ಅದು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲಿದೆ. ಪ್ರತಿ ಬಾರಿಯೂ ಶೋಗೆ ನಾನಾ ರೀತಿಯ ತಂತ್ರ ಬಳಕೆ ಮಾಡಲಾಗುತ್ತದೆ. ಅದೇ ರೀತಿ ಈ ಬಾರಿ ವ್ಯಕ್ತಯೋರ್ವನು ಜನರ ಎದುರು ಹೋಗಿ ನಾನು ಬಿಗ್ ಬಾಸ್​ಗೆ ಹೋಗುತ್ತೇನೆ ಎಂದು ಹೇಳಿದ್ದಾನೆ. ಕೊನೆಯ ಪಕ್ಷ ಧ್ವನಿ ಗುರುತು ಸಿಕ್ಕಿದ್ದರೆ ಇವರೇ ಅಂತ ಕಂಡು ಹಿಡಿಯಬಹುದಿತ್ತು. ಆದರೆ, ಧ್ವನಿಯನ್ನು ಬದಲಾಯಿಸಲಾಗಿದೆ. ಹೀಗಾಗಿ, ಯಾರು ಎಂದು ಹೇಳುವುದು ಕಷ್ಟವಾಗಿತ್ತು. ಆದರೆ, ವೀಕ್ಷಕರು, ಬಿಗ್ ಬಾಸ್​ನ ವೀಕ್ಷಕರು ಬುದ್ಧಿವಂತರು ಗೊತ್ತಲ್ಲ.

ಆ ವ್ಯಕ್ತಿ ಯಾರು ಎಂಬುದನ್ನು ಫ್ಯಾನ್ಸ್ ಕಂಡು ಹಿಡಿದೇ ಬಿಟ್ಟಿದ್ದಾರೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ ಕಾಕ್ರೋಚ್ ಸುಧಿ. ಹಲವು ಸಿನಿಮಾಗಳಲ್ಲಿ ನಟಿಸಿದ ಅವರಿಗೆ ‘ಟಗರು’ ಸಿನಿಮಾ ಜನಪ್ರಿಯತೆ ನೀಡಿತು ಎಂದರೂ ತಪ್ಪಾಗಲಾರದು. ಅಲ್ಲಿ ಅವರು ಕಾಕ್ರೋಚ್ ಹೆಸರಿನ ಪಾತ್ರವನ್ನು ಮಾಡಿದ್ದರು. ಆ ಬಳಿಕ ಅವರಿಗೆ ಕಾಕ್ರೋಚ್ ಸುಧಿ ಎಂಬ ಹೆಸರೇ ಪರ್ಮನೆಂಟ್ ಆಯಿತು. ಅದನ್ನು ಅವರು ಕೂಡ ಇಷ್ಟಪಟ್ಟಿದ್ದಾರೆ.

ಅವರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂಬುದು ಮೊದಲಿನಿಂದಲೂ ಚಾಲ್ತಿಯಲ್ಲಿ ಇದ್ದ ಸುದ್ದಿಯಾಗಿತ್ತು ಎನ್ನಬಹುದು. ಆದರೆ, ಇದನ್ನು ಒಪ್ಪಲು ಅವರು ರೆಡಿ ಇರಲೇ ಇಲ್ಲ. ಇದನ್ನು ಅವರು ಫೇಕ್ ಸುದ್ದಿ ಎಂದು ಕರೆದರು. ನನಗೆ ಹೊರಗೆ ಒಪ್ಪಿಕೊಂಡ ಕಮಿಟ್​ಮೆಂಟ್​ಗಳು ಸಾಕಷ್ಟು ಇವೆ. ಹೀಗಾಗಿ, ನಾನು ಬರೋದೇ ಇಲ್ಲ ಎಂದು ಹೇಳಿದ್ದರು. ಆದರೆ, ಅದು ಸುಳ್ಳಾಗಿದೆ. ಅವರು ಆಗಮಿಸಿದ್ದಾರೆ.

ಇದನ್ನೂ ಓದಿ: ನಾನು ಬಿಗ್ ಬಾಸ್​​ಗೆ ಹೋಗ್ತೀನಿ: ಜನರ ಎದುರು ಸೀಕ್ರೇಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್

ನಿಜ ಜೀವನದಲ್ಲಿ ಸುದೀ ಅವರು ಒಂದಷ್ಟು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂಗಳು ವಿಡಿಯೋದಲ್ಲಿ ಕಾಣಿಸಿವೆ ಮತ್ತು ಇವರೇ ಕಾಕ್ರೋಚ್ ಸುಧಿ ಎಂಬುದು ಪ್ರೇಕ್ಷಕರಿಗೂ ಸ್ಪಷ್ಟವಾಗಿದೆ. ಹೀಗಾಗಿ ಇವರೇ ಸುಧಿ ಎಂದು ಕಮೆಂಟ್ ಬಾಕ್ಸ್​ನಲ್ಲಿ ಹೇಳಲಾಗುತ್ತಾ ಇದೆ. ಸೆಪ್ಟೆಂಬರ್ 28ರ ಎಪಿಸೋಡ್​ನಲ್ಲಿ ಈ ವಿಚಾರವು ರಿವೀಲ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್