AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನಂಜಯ್ ಪಿಯುಸಿಯಲ್ಲಿ ತೆಗೆದ ಅಂಕ ಎಷ್ಟು? ‘ವೀಕೆಂಡ್ ವಿತ್ ರಮೇಶ್’​ನಲ್ಲಿ ಮಾಹಿತಿ ರಿವೀಲ್

ಧನಂಜಯ್ ಅವರು ಪಿಯುಸಿ ಓದಿದ್ದು ಮೈಸೂರಿನಲ್ಲಿ. ಮರಿ ಮಲ್ಲಪ್ಪ ಕಾಲೇಜಿನಲ್ಲಿ ವಿಜ್ಞಾನ ವಿಷಯ ಓದಿದ್ದರು. ಓದೋಕೆ ಒಳ್ಳೆಯ ವಾತಾವರಣ ಇದೆ ಎಂದು ಅವರನ್ನು ಈ ಕಾಲೇಜಿಗೆ ತಂದೆ ಸೇರಿಸಿದ್ದರು.

ಧನಂಜಯ್ ಪಿಯುಸಿಯಲ್ಲಿ ತೆಗೆದ ಅಂಕ ಎಷ್ಟು? ‘ವೀಕೆಂಡ್ ವಿತ್ ರಮೇಶ್’​ನಲ್ಲಿ ಮಾಹಿತಿ ರಿವೀಲ್
ಧನಂಜಯ್
Follow us
ರಾಜೇಶ್ ದುಗ್ಗುಮನೆ
|

Updated on:Apr 17, 2023 | 9:28 AM

‘ವೀಕೆಂಡ್ ವಿತ್ ರಮೇಶ್ ಸೀಸನ್​ 5’ ಆರಂಭ ಆಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಶೋ ಪ್ರಸಾರ ಕಾಣುತ್ತಿದೆ. ಕಳೆದ ನಾಲ್ಕು ಸೀಸನ್​ನಲ್ಲಿ ಸಾಕಷ್ಟು ಸಾಧಕರು ಈ ಶೋಗೆ ಬಂದು ಹೋಗಿದ್ದಾರೆ. ಈ ಸೀಸನ್​ನಲ್ಲೂ ಅನೇಕ ಸಾಧಕರು ವೇದಿಕೆ ಏರಿದ್ದಾರೆ. ಧನಂಜಯ್ (Dhananjay) ಕೂಡ ವೀಕೆಂಡ್ ವಿತ್ ರಮೇಶ್ ಎಪಿಸೋಡ್​’ಗೆ ಬಂದಿದ್ದಾರೆ. ಅವರು ತುಂಬಾನೇ ಬ್ರಿಲಿಯಂಟ್ ಸ್ಟೂಡೆಂಟ್ ಆಗಿದ್ದರು. ಈ ವಿಚಾರ ವೀಕೆಂಡ್ ವಿತ್ ರಮೇಶ್ (Weekend With Ramesh) ಎಪಿಸೋಡ್​ನಲ್ಲಿ ರಿವೀಲ್ ಆಗಿದೆ.

ಧನಂಜಯ್ ಅವರು ಪಿಯುಸಿ ಓದಿದ್ದು ಮೈಸೂರಿನಲ್ಲಿ. ಮರಿ ಮಲ್ಲಪ್ಪ ಕಾಲೇಜಿನಲ್ಲಿ ವಿಜ್ಞಾನ ವಿಷಯ ಓದಿದ್ದರು. ಓದೋಕೆ ಒಳ್ಳೆಯ ವಾತಾವರಣ ಇದೆ ಎಂದು ಧನಂಜಯ್ ಅವರನ್ನು ಈ ಕಾಲೇಜಿಗೆ ತಂದೆ ಸೇರಿಸಿದ್ದರು. ‘ಓಡೋ ಕುದುರೆ ಜೊತೆ ನಮ್ಮದೊಂದು ಕುಂಟು ಕುದುರೆ. ಎಲ್ಲರ ಜೊತೆ ಸೇರಿ ಈ ಕುದುರೆ ಓಡಲಿ’ ಎಂದು ಡಾಲಿ ಧನಂಜಯ್ ತಂದೆ ಹೇಳಿದ್ದರಂತೆ. ‘ನಾನು ತುಂಬಾನೇ ಬ್ರಿಲಿಯಂಟ್ ಸ್ಟೂಡೆಂಟ್. ಹಾಗಿದ್ದರೂ, ನನ್ನನ್ನು ಅವರು ಕುಂಟು ಕುದುರೆ ಎಂದು ಹೇಳ್ತಿರೋದು ಏಕೆ ಎನ್ನುವ ಪ್ರಶ್ನೆ ಮೂಡಿತ್ತು. ಆ ಕಾಲೇಜಿಗೆ ಸೇರಿದ ಮೇಲೆ ನಾನು ನಿಜಕ್ಕೂ ಕುಂಟು ಕುದುರೆ ಎನಿಸಿತ್ತು’ ಎಂದಿದ್ದಾರೆ ಧನಂಜಯ್.

ಇದನ್ನೂ ಓದಿ: ಧನಂಜಯ್​ಗೆ ಇತ್ತೀಚೆಗೆ ಬೀಳುತ್ತಿದೆ ಕೆಟ್ಟ ಕನಸು; ಕಾರಣ ತಿಳಿಸಿದ ಡಾಲಿ

ಧನಂಜಯ್ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 520 ಅಂಕ ಗಳಿಸಿದ್ದರು. ಫಿಸಿಕ್ಸ್​ಗೆ 99 ಅಂಕ ಬಂದಿತ್ತು. ಧನಂಜಯ್ ಬ್ರಿಲಿಯಂಟ್ ಸ್ಟೂಡೆಂಟ್ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಪಿಯುಸಿ ಮುಗಿದ ಬಳಿಕ ಅವರು ಇಂಜಿನಿಯರಿಂಗ್ ಸೇರಿದರು. ಆಗಲೇ ಅವರು ರಂಗಾಯಣಕ್ಕೆ ಹೋಗುತ್ತಿದ್ದರು. ಬಳಿಕ ಕೆಲಸಕ್ಕೂ ಸೇರಿದರು. ಆದರೆ, ಅವರನ್ನು ಬಣ್ಣದ ಲೋಕ ಕೈ ಬೀಸಿ ಕರೆಯಿತು.

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್​ಗೆ ಡಾಲಿ ಧನಂಜಯ್, ಹಲವು ಅಚ್ಚರಿಯ ಅತಿಥಿಗಳು!

‘ಧನಂಜಯ್ ಅವರಿಗೆ ಸಾಕಷ್ಟು ಅವಮಾನ ಆಗಿದೆ. ಆದರೆ, ಅವರು ತಲೆ ತಗ್ಗಿಸಿಲ್ಲ. ಬದಲಿಗೆ ಎಲ್ಲರನ್ನೂ ಕ್ಷಮಿಸಬೇಕು ಎಂದು ಹೇಳುತ್ತಿದ್ದರು’ ಎಂದಿದ್ದಾರೆ ಧನಂಜಯ್ ಗೆಳೆಯರು. ಸದ್ಯ ಧನಂಜಯ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಕನ್ನಡದ ಬೇಡಿಕೆಯ ಹೀರೋ ಆಗಿ ಧನಂಜಯ್ ಹೊರಹೊಮ್ಮಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:33 am, Mon, 17 April 23

ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ