AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಇದ್ದರೂ ದಿವ್ಯಾಗೆ ಕಾಡುತ್ತಿದೆ ಏಕಾಂಗಿತನ

ದಿವ್ಯಾ ಅತ್ತ ವಿಚಾರ ಮಂಜು ಗಮನಕ್ಕೆ ಬಂದಿದೆ. ನಿನ್ನೆ ಅಳುತ್ತಿದ್ದೆ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ ಮಂಜು. ‘ನೀವೆಲ್ಲ ನಿಮ್ಮ ಫ್ರೆಂಡ್ಸ್​ ಜತೆ ಸಮಯ ಕಳೆಯೋದು ನೋಡಿದ್ರೆ ನನಗೆ ಬೇಜಾರು ಆಗುತ್ತೆ. ನನಗೂ ನನ್​ ಫ್ರೆಂಡ್ ಇದ್ದರೆ ನಾನು ಅವಳ ಜತೆ ಸುದ್ದಿ ಹೇಳಿಕೊಂಡಿರಬಹುದಿತ್ತು ಅನ್ನಿಸಿತು ಅಷ್ಟೇ’ ಎಂದಿದ್ದಾರೆ ದಿವ್ಯಾ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಇದ್ದರೂ ದಿವ್ಯಾಗೆ ಕಾಡುತ್ತಿದೆ ಏಕಾಂಗಿತನ
ದಿವ್ಯಾ ಸುರೇಶ್
TV9 Web
| Edited By: |

Updated on: Jul 21, 2021 | 7:10 AM

Share

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ನಡುವೆ ಮೊದಲಿದ್ದ ಆಪ್ತತೆ ಈಗ ಇಲ್ಲ. ಇಬ್ಬರೂ ಅಷ್ಟಾಗಿ ಕ್ಲೋಸ್​ ಆಗಿ ನಡೆದುಕೊಳ್ಳುತ್ತಿಲ್ಲ. ಈ ವಿಚಾರದ ಬಗ್ಗೆ ದಿವ್ಯಾ ಸುರೇಶ್​ ಸಾಕಷ್ಟು ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ, ಮಂಜು ಎದುರು ಈ ಬಗ್ಗೆ ಹೇಳಿಕೊಂಡಿದ್ದಾರೆ.

ಮಂಜು ಪಾವಗಡ ಅವರು ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಸಾಕಷ್ಟು ಬದಲಾಗಿದ್ದಾರೆ. ಅವರು ಕೇವಲ ದಿವ್ಯಾ ಸುರೇಶ್​ಗೆ ಮಾತ್ರ ಸೀಮಿತವಾಗಿಲ್ಲ. ಬಿಗ್​ ಬಾಸ್​ ಮನೆಯಲ್ಲಿ ಶುಭಾ ಪೂಂಜಾ, ಅರವಿಂದ್, ಚಕ್ರವರ್ತಿ ಸೇರಿ ಎಲ್ಲರ ಜತೆಗೂ ಮಾತುಕತೆ ನಡೆಸುತ್ತಾರೆ. ಉಳಿದವರ ಜತೆ ಬೆರೆತಷ್ಟು ದಿವ್ಯಾ ಜತೆ ಮಂಜು ಬೆರೆಯುತ್ತಿಲ್ಲ. ಇದು ದಿವ್ಯಾ ಗಮನಕ್ಕೆ ಬಂದಿದೆ.

ದಿವ್ಯಾ ಬಿಗ್​ ಬಾಸ್​ ಮನೆಯಲ್ಲಿ ಪ್ರಿಯಾಂಕ ತಿಮ್ಮೇಶ್​ ಜತೆ ತುಂಬಾನೇ ಕ್ಲೋಸ್​ ಆಗಿದ್ದರು. ಆದರೆ, ಕಳೆದವಾರ ಅವರು ಎಲಿಮಿನೇಟ್​ ಆಗಿದ್ದಾರೆ. ಇನ್ನು, ದಿವ್ಯಾ ಅವರು ಶಮಂತ್​ ಬ್ರೋ ಗೌಡ ಜತೆ ಕನೆಕ್ಟ್​ ಆಗೋಕೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಶುಭಾ ಜತೆ ಮಂಜು ಸಮಯ ಕಳೆಯುತ್ತಿರುವುದಕ್ಕೆ ದಿವ್ಯಾ ಏಕಾಂಗಿಯಾಗಿದ್ದಾರೆ.

ದಿವ್ಯಾ ಉರುಡುಗ-ಅರವಿಂದ್ ಒಂದು ಕಡೆ ಇರುತ್ತಾರೆ. ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​, ಹಾಗೂ ಶಮಂತ್​ ಗುಂಪು ಮಾಡಿಕೊಂಡಿದ್ದಾರೆ. ಶುಭಾ-ಮಂಜು ಒಂದೆಡೆ ಇರುತ್ತಾರೆ. ವೈಷ್ಣವಿ ಎಲ್ಲರ ಜತೆಯೂ ಬೆರೆತರೂ ಬೆರೆಯದಂತೆ ಇರುತ್ತಾರೆ.  ಈ ಕಾರಣಕ್ಕೆ ದಿವ್ಯಾಗೆ ಜತೆ ಸಿಗುತ್ತಿಲ್ಲ. ಹೀಗಾಗಿ, ಒಬ್ಬರೇ ಕೂತು ಅವರು ಅತ್ತಿದ್ದಾರೆ.

ದಿವ್ಯಾ ಅತ್ತ ವಿಚಾರ ಮಂಜು ಗಮನಕ್ಕೆ ಬಂದಿದೆ. ನಿನ್ನೆ ಅಳುತ್ತಿದ್ದೆ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ ಮಂಜು. ‘ನೀವೆಲ್ಲ ನಿಮ್ಮ ಫ್ರೆಂಡ್ಸ್​ ಜತೆ ಸಮಯ ಕಳೆಯೋದು ನೋಡಿದ್ರೆ ನನಗೆ ಬೇಜಾರು ಆಗುತ್ತೆ. ನನಗೂ ನನ್​ ಫ್ರೆಂಡ್ ಇದ್ದರೆ ನಾನು ಅವಳ ಜತೆ ಸುದ್ದಿ ಹೇಳಿಕೊಂಡಿರಬಹುದಿತ್ತು ಅನ್ನಿಸಿತು ಅಷ್ಟೇ’ ಎಂದಿದ್ದಾರೆ ದಿವ್ಯಾ.

(Divya Suresh Feels Lonely In Bigg Boss Kannada House)

ಇದನ್ನೂ ಓದಿ: ‘ಮುಂದಿನ ವರ್ಷ ಮದುವೆ, ನನ್ನದು ಅರೇಂಜ್​ ಮ್ಯಾರೇಜ್’​; ವಿವಾಹದ ಬಗ್ಗೆ ಮತ್ತೊಮ್ಮೆ ಮೌನ ಮುರಿದ ವೈಷ್ಣವಿ

ಬಿಗ್ ಬಾಸ್ ಮನೆಯಲ್ಲಿ ಅವಘಡ; ದಿವ್ಯಾ ಉರುಡುಗ ಹೊಡೆದ ಫೋರ್ಸ್​ಗೆ ಗಾಜು ನುಚ್ಚುನೂರು, ಕೈಯಲ್ಲಿ ರಕ್ತ

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ