Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಮನೆಗೆ ಬಂದ ಡ್ರೋನ್ ಪ್ರತಾಪ್, ಮನೆಯವರ ಮುಂದೆ ಹೇಳಿದ್ದೇನು?

Drone Prathap: ಅನಾರೋಗ್ಯದಿಂದ ಬಿಗ್​ಬಾಸ್ ಮನೆಯಿಂದ ಹೊರ ಹೋಗಿದ್ದ ಡ್ರೋನ್ ಪ್ರತಾಪ್ ಶನಿವಾರದ ಎಪಿಸೋಡ್​ನಲ್ಲಿ ಮನೆಯಲ್ಲಿ ಕಾಣಿಸಿಕೊಂಡರು. ತಮ್ಮ ಅನಾರೋಗ್ಯದ ಬಗ್ಗೆ ಮನೆಯ ಸದಸ್ಯರ ಮುಂದೆ ವರದಿ ಒಪ್ಪಿಸಿದರು.

ಕೊನೆಗೂ ಮನೆಗೆ ಬಂದ ಡ್ರೋನ್ ಪ್ರತಾಪ್, ಮನೆಯವರ ಮುಂದೆ ಹೇಳಿದ್ದೇನು?
ಡ್ರೋನ್ ಪ್ರತಾಪ್
Follow us
ಮಂಜುನಾಥ ಸಿ.
|

Updated on: Jan 06, 2024 | 11:25 PM

ಡ್ರೋನ್ ಪ್ರತಾಪ್ (Drone Prathap)​ ಬಗ್ಗೆ ಕಳೆದ ಎರಡು-ಮೂರು ದಿನಗಳಿಂದ ಥರಹೇವಾರಿ ಸುದ್ದಿಗಳು ಹರಿದಾಡುತ್ತಿವೆ. ಬಿಗ್​ಬಾಸ್ ಮನೆಯಲ್ಲಿ ಡ್ರೊನ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಎರಡು ದಿನದ ಹಿಂದೆ ತುಸು ಜೋರಾಗಿ ಹಬ್ಬಿತ್ತು. ಪ್ರತಾಪ್​ಗೆ ಚಿಕಿತ್ಸೆ ನೀಡಿದ ವೈದ್ಯರು, ಪ್ರತಾಪ್​ಗೆ ಫುಡ್ ಪಾಯ್ಸನ್ ಆಗಿತ್ತೆಂದು ಸ್ಪಷ್ಟಪಡಿಸಿದರು. ಮೂರು ದಿನಗಳ ಕಾಲ ಮನೆಯಿಂದ ಹೊರಗೆ ಇದ್ದ ಡ್ರೋನ್ ಪ್ರತಾಪ್ ಶನಿವಾರದ ಎಪಿಸೋಡ್​ನಲ್ಲಿ ಮನೆಗೆ ಬಂದಿದ್ದಾರೆ.

ಶನಿವಾರದ ಎಪಿಸೋಡ್​ನಲ್ಲಿ ಡ್ರೋನ್ ಪ್ರತಾಪ್ ಬಿಗ್​ಬಾಸ್ ಮನೆಗೆ ಬಂದರು. ತಮ್ಮ ಮೆಲು ನಗೆ ಬೀರುತ್ತಾ ಬಿಗ್​ಬಾಸ್ ಮನೆಗೆ ಡ್ರೋನ್ ಪ್ರತಾಪ್ ಆಗಮಿಸಿದರು. ಕೂಡಲೇ ಓಡಿ ಹೋಗಿ ನಮ್ರತಾ, ಪ್ರತಾಪ್​ರನ್ನು ತಬ್ಬಿಕೊಂಡರು, ಸಂಗೀತಾ ಸಹ ಅಲ್ಲಿಯೇ ಇದ್ದರು. ಪ್ರತಾಪ್ ಅನ್ನು ಕರೆದುಕೊಂಡು ಹೋಗಿ ಪೂಜೆ ಮಾಡಿಸಲಾಯ್ತು. ಆ ಬಳಿಕ ನಿನ್ನನ್ನು ಬಹಳ ಮಿಸ್ ಮಾಡಿಕೊಂಡಿದ್ದಾಗಿ ಸಂಗೀತಾ, ಪ್ರತಾಪ್ ಬಳಿ ಹೇಳಿಕೊಂಡು ಭಾವುಕರಾದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಸುಳಿವಿಲ್ಲ, ಸ್ಪರ್ಧಿಗಳಿಗೆ ಬಿಗ್​ಬಾಸ್ ಕೊಟ್ಟ ಮಾಹಿತಿ ಏನು?

ಅದಾದ ಬಳಿಕ ಡ್ರೋನ್ ಪ್ರತಾಪ್ ತಮಗೆ ಆಗಿದ್ದ ಆರೋಗ್ಯ ಸಮಸ್ಯೆ ಬಗ್ಗೆ ಮನೆಯವರ ಬಳಿ ಮಾಹಿತಿ ಹಂಚಿಕೊಂಡರು. ‘‘ಹೊಸ ವರ್ಷ ಆದಾಗಿನಿಂದಲೂ ನಾನು ಸರಿಯಾಗಿ ಊಟ ಸೇವಿಸಿರಲಿಲ್ಲ. ಯಾರು ಕೇಳಿದರು ಊಟ ಆಗಿದೆ ಎನ್ನುತ್ತಿದ್ದೆ. ಚಪಾತಿ ರೋಲ್ ಮಾಡುವಾಗ ಸಹ ನನ್ನ ಪಾಲಿನ ಚಪಾತಿ ಹಿಟ್ಟನ್ನು ಎತ್ತಿಟ್ಟುಬಿಡುತ್ತಿದ್ದೆ. ಕೊನೆಯ ಎರಡು ದಿನವಂತೂ ಊಟವನ್ನೇ ಮಾಡಲಿಲ್ಲ. ಇದರಿಂದ ಹೊಟ್ಟೆಯಲ್ಲಿ ಬರ್ನಿಂಗ್ ಇಶ್ಯೂ ಆಗಿ ಫುಡ್ ಪಾಯ್ಸನ್ ಆಗಿತ್ತು. ಚಿಕಿತ್ಸೆ ನೀಡಿದರು. ಈಗ ಆರೋಗ್ಯ ಸರಿಯಾಗಿದೆ. ಯಾರೂ ಏನೇನೋ ಊಹಿಸಬೇಡಿ’ ಎಂದು ಮನೆಯ ಸದಸ್ಯರ ಮುಂದೆ ಹೇಳಿದರು.

ಆ ಬಳಿಕ ಸುದೀಪ್ ಅವರು ವಾರದ ಪಂಚಾಯಿತಿಗೆ ಬಂದಾಗ ಡ್ರೋನ್ ಪ್ರತಾಪ್​ರ ಆರೋಗ್ಯ ವಿಚಾರಿಸಿದರು. ಆರಾಮವಾಗಿದ್ದೇನೆ ಎಂದು ಪ್ರತಾಪ್ ಹೇಳಿದರು. ಕಳೆದ ಕೆಲ ವಾರಗಳಿಂದ ಪ್ರತಾಪ್ ಮನೆಯಲ್ಲಿ ಡಲ್ ಆಗಿದ್ದರು. ಆದರೆ ಇಂದು ಸುದೀಪ್​ರ ಎಪಿಸೋಡ್​ನಲ್ಲಿ ಪ್ರತಾಪ್ ತುಸು ಗಟ್ಟಿಯಾಗಿ ಮಾತನಾಡಿದರು. ವಿನಯ್ ಅವರಿಗೆ, ವರ್ತೂರು ಸಂತೋಶ್ ಅವರ ವಿರುದ್ಧ ಮಾತನಾಡಿದರು. ಸಂಗೀತಾ ಸಹ, ಪ್ರತಾಪ್ ಅನ್ನುದ್ದೇಶಿಸಿ, ‘ನೀನು ಬಹಳ ಲೌಡ್ ಆಗಿ ಮಾತನಾಡುತ್ತಿದ್ದೀಯ, ಎದುರುತ್ತರ ಕೊಡುತ್ತಿದ್ದೀಯ, ಮುಂಚಿನಂತೆ ಇದ್ದುಬಿಡು ಸಾಕು’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ