ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಸುಳಿವಿಲ್ಲ, ಸ್ಪರ್ಧಿಗಳಿಗೆ ಬಿಗ್​ಬಾಸ್ ಕೊಟ್ಟ ಮಾಹಿತಿ ಏನು?

Bigg Boss Kannada: ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ವದಂತಿ ಹರಿದಾಡಿತ್ತು. ಅವರಿಗೆ ಫುಡ್ ಪಾಯ್ಸನ್ ಆಗಿದೆಯೆಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಆದರೂ ಎರಡು ದಿನದಿಂದ ಡ್ರೋನ್ ಪ್ರತಾಪ್ ಬಿಗ್​ಬಾಸ್​ ಮನೆಯಲ್ಲಿ ಕಾಣಿಸಿಕೊಂಡಿಲ್ಲ.

ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಸುಳಿವಿಲ್ಲ, ಸ್ಪರ್ಧಿಗಳಿಗೆ ಬಿಗ್​ಬಾಸ್ ಕೊಟ್ಟ ಮಾಹಿತಿ ಏನು?
ಡ್ರೋನ್ ಪ್ರತಾಪ್
Follow us
|

Updated on: Jan 05, 2024 | 11:09 PM

ಬಿಗ್​ಬಾಸ್ (BiggBoss) ಸ್ಪರ್ಧಿ ಡ್ರೋನ್ ಪ್ರತಾಪ್ (Drone Prathap) ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹರಡಿತ್ತು, ಬಳಿಕ ಪ್ರತಾಪ್​ಗೆ ಚಿಕಿತ್ಸೆ ನೀಡಿದ ವೈದ್ಯರು, ಪ್ರತಾಪ್​ಗೆ ಫುಡ್ ಪಾಯ್ಸನ್ ಆಗಿದೆಯೆಂದು ಸ್ಪಷ್ಟನೆ ನೀಡಿದರು. ಪ್ರತಾಪ್​ಗೆ ಮಾಡಲಾಗಿರುವ ವಿವಿಧ ರೀತಿಯ ಪರೀಕ್ಷೆಗಳ ವರದಿಗಳು ಸಹ ಬಹಿರಂಗಗೊಂಡವು. ಕೆಲವು ಸುದ್ದಿಗಳ ಪ್ರಕಾರ ಚಿಕಿತ್ಸೆಯ ಬಳಿಕ ಪ್ರತಾಪ್ ಅವರನ್ನು ಮತ್ತೆ ಬಿಗ್​ಬಾಸ್ ಮನೆಗೆ ಕಳಿಸಲಾಗಿದೆ ಎನ್ನಲಾಗಿತ್ತು. ಆದರೆ ಪ್ರತಾಪ್ ಬಿಗ್​ಬಾಸ್ ಮನೆಗೆ ಬಂದಿಲ್ಲ.

ಗುರುವಾರದ ಎಪಿಸೋಡ್​ನಲ್ಲಿ ಕೆಲ ಹೊತ್ತು ಮಾತ್ರವೇ ಪ್ರತಾಪ್ ಕಾಣಿಸಿಕೊಂಡರು (ಬುಧವಾರ ರಾತ್ರಿ) ಸ್ಪರ್ಧಿಗಳು ಗುರುವಾರ ಎದ್ದಾಗ ಡ್ರೋನ್ ಪ್ರತಾಪ್ ಮನೆಯಲ್ಲಿರಲಿಲ್ಲ. ಮನೆಯ ಸದಸ್ಯರು ಸಹ ಪ್ರತಾಪ್ ಬಗ್ಗೆ ಚರ್ಚೆ ಮಾಡಿದ್ದಾಗಿ ಎಪಿಸೋಡ್​ನಲ್ಲಿ ತೋರಿಸಲಿಲ್ಲ. ಇಂದಿನ (ಶುಕ್ರವಾರ)ದ ಎಪಿಸೋಡ್​ನಲ್ಲಿ ಸಹ ಪ್ರತಾಪ್ ಮನೆಯಲ್ಲಿ ಕಂಡು ಬರಲಿಲ್ಲ.

ಶುಕ್ರವಾರದ ಎಪಿಸೋಡ್​ನಲ್ಲಿ ಸಂಗೀತಾ ಮನೆಯ ಹೊಸ ಕ್ಯಾಪ್ಟನ್ ಆದ ಬಳಿಕ ಉತ್ತಮ-ಕಳಪೆ ಪ್ರಕ್ರಿಯೆ ನಡೆಸಲಾಯ್ತು. ಆ ವೇಳೆ ಬಿಗ್​ಬಾಸ್ ಕಡೆಯಿಂದ ಸ್ಪರ್ಧಿಗಳಿಗೆ ಪತ್ರವೊಂದು ಬಂತು. ಅದರಲ್ಲಿ ಡ್ರೋನ್ ಪ್ರತಾಪ್​ ಬಗ್ಗೆ ಮಾಹಿತಿ ಇತ್ತು. ಡ್ರೋನ್ ಪ್ರತಾಪ್ ಎರಡು ಮೂರು ದಿನದಿಂದ ಸರಿಯಾಗಿ ಊಟ ಮಾಡದೆ ದುರ್ಬಲರಾಗಿದ್ದಾರೆ. ಪ್ರತಾಪ್ ಅವರಿಗೆ ಫುಡ್ ಪಾಯ್ಸನ್ ಆಗಿದೆ ಎಂದು ವೈದ್ಯರು ಸ್ಪಷ್ಟೀಕರಣ ನೀಡಿದ್ದಾರೆ. ಹಾಗಾಗಿ ಮನೆಯ ಸ್ಪರ್ಧಿಗಳು ಪ್ರತಾಪ್ ಅನ್ನು ಹೊರತುಪಡಿಸಿ ಉತ್ತಮ ಮತ್ತು ಕಳಪೆ ಪ್ರಕ್ರಿಯೆ ನಡೆಸಬೇಕು ಎಂದು ಪತ್ರದಲ್ಲಿ ಬರೆದಿದ್ದನ್ನು ನಮ್ರತಾ ಓದಿದರು.

ಇದನ್ನೂ ಓದಿ:ಮಧ್ಯರಾತ್ರಿ ಆಸ್ಪತ್ರೆಗೆ ಬಂದಾಗ ಹೇಗಿತ್ತು ಡ್ರೋನ್ ಪ್ರತಾಪ್ ಸ್ಥಿತಿ: ವೈದ್ಯರು ಕೊಟ್ಟ ಮಾಹಿತಿ

ಅದಾದ ಬಳಿಕ ಮೈಖಲ್ ಕಳಪೆ ಎಂದಾಗಿ ಅವರನ್ನು ಜೈಲಿಗೆ ಕಳಿಸಲಾಯ್ತು. ಮೈಖಲ್ ಜೊತೆ ಮಾತನಾಡುತ್ತಿದ್ದ ವಿನಯ್, ಪ್ರತಾಪ್​ಗೆ ಬಹಳ ಫುಡ್ ಪಾಯ್ಸನ್ ಆದಂತಿದೆ. ಅವನು ಸರಿಯಾಗಿ ಊಟವೇ ಮಾಡುತ್ತಿರಲಿಲ್ಲ, ಈಗ ಮಾಡುತ್ತೇನೆ ಆಗ ಮಾಡುತ್ತೇನೆ ಎನ್ನುತ್ತಲೇ ಇದ್ದ. ಊಟ ಮಾಡುವಾಗ ಸಹ ಹಲವು ಬಾರಿ ಊಟವನ್ನು ವೇಸ್ಟ್ ಮಾಡಿ ಬಿಸಾಡುತ್ತಿದ್ದ. ಮೊನ್ನೆ ಕೊಟ್ಟಿದ್ದ ಕ್ಯಾಬೇಜ್, ಗೀ ರೈಸ್ ಎಲ್ಲವನ್ನೂ ಪೂರ್ತಿಯಾಗಿ ತಿನ್ನದೆ ಬುಟ್ಟಿಗೆ ಎಸೆದಿದ್ದ ಎಂದರು.

ಪ್ರತಾಪ್ ಗೆ ಫುಡ್ ಪಾಯ್ಸನ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಈಗ ಪ್ರತಾಪ್ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಪ್ರತಾಪ್ ಮತ್ತೆ ಬಿಗ್​ಬಾಸ್ ಮನೆಗೆ ಬರುತ್ತಾರೆಯೇ ಇಲ್ಲವೋ ಎಂಬ ಅನುಮಾನವೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ