AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ede Tumbi Haaduvenu Winner: ‘ಎದೆ ತುಂಬಿ ಹಾಡುವೆನು’ ವಿನ್ನರ್​ ಆಗಿ ಹೊರ ಹೊಮ್ಮಿದ ಬಳ್ಳಾರಿಯ ಚಿನ್ಮಯ್​

ಬಳ್ಳಾರಿಯ ಚಿನ್ಮಯ್​ ಜೋಶಿ  ಅವರು ‘ಎದೆ ತುಂಬಿ ಹಾಡುವೆನು ಸೀಸನ್ 1’ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ತೀರ್ಪುಗಾರರಾದ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ, ರಘು ದೀಕ್ಷಿತ್ ಚಿನ್ಮಯ್​ಗೆ ಟ್ರೋಫಿ ನೀಡಿದರು.

Ede Tumbi Haaduvenu Winner: ‘ಎದೆ ತುಂಬಿ ಹಾಡುವೆನು’ ವಿನ್ನರ್​ ಆಗಿ ಹೊರ ಹೊಮ್ಮಿದ ಬಳ್ಳಾರಿಯ ಚಿನ್ಮಯ್​
TV9 Web
| Edited By: |

Updated on:Dec 20, 2021 | 7:35 PM

Share

ಎಸ್​.ಪಿ. ಬಾಲಸುಬ್ರಹ್ಮಣ್ಯಂ​ (S. P. Balasubrahmanyam) ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದ  ‘ಎದೆ ತುಂಬಿ ಹಾಡುವೆನು’ (Ede Tumbi Haaduvenu) ಸಂಗೀತ  ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಲೆಂಟ್​ಗಳಿಗೆ ಇದು ವೇದಿಕೆ ಆಗಿತ್ತು. ಇತ್ತೀಚೆಗೆ ಕಲರ್ಸ್​ ಕನ್ನಡ ವಾಹಿನಿ ಈ ಶೋನ ಹೊಸ ಸೀಸನ್​ ಆರಂಭಿಸಿತ್ತು. ಆಗಸ್ಟ್​ 14ರಂದು ಈ ರಿಯಾಲಿಟಿ ಶೋ ಪ್ರಾರಂಭಗೊಂಡಿತ್ತು. ಸತತ ಐದು ತಿಂಗಳ ಕಾಲ ನಡೆದ ಈ ರಿಯಾಲಿಟಿ ಶೋ ಈಗ ಪೂರ್ಣಗೊಂಡಿದೆ. ಭಾನುವಾರ (ಡಿಸೆಂಬರ್​ 19) ನಡೆದ ಫಿನಾಲೆಯಲ್ಲಿ ವಿನ್ನರ್ (Ede Tumbi Haaduvenu Winner)​ ಘೋಷಣೆ  ಆಗಿದೆ. ಹಾಗಾದರೆ, ಇದರ ವಿನ್ನರ್​ ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಳ್ಳಾರಿಯ ಚಿನ್ಮಯ್​ ಜೋಶಿ  ಅವರು ‘ಎದೆ ತುಂಬಿ ಹಾಡುವೆನು ಸೀಸನ್ 1’ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ತೀರ್ಪುಗಾರರಾದ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ, ರಘು ದೀಕ್ಷಿತ್ ಅವರು ಚಿನ್ಮಯ್​ಗೆ ಟ್ರೋಫಿ ನೀಡಿದರು. ಈ ಸಂದರ್ಭದಲ್ಲಿ ಎಸ್​ಪಿಬಿ ಮಗ ಎಸ್.ಪಿ. ಚರಣ್ ಕೂಡ ಇದ್ದರು.

ಸಂದೇಶ್​​, ನಾದಿರಾ ಬಾನು, ಕಿರಣ್​, ಚಿನ್ಮಯ್​ ಫಿನಾಲೆ ರೇಸ್​ನಲ್ಲಿ ಇದ್ದರು. ಈ ನಾಲ್ವರು ತಮ್ಮ ಅದ್ಭುತ ಕಂಠದಿಂದ ಹಾಡನ್ನು ಹಾಡಿದರು. ಚಿನ್ಮಯ್​ ಅವರು ಎಲ್ಲರನ್ನೂ ಹಿಂದಿಕ್ಕಿ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಈ ಕಾರ್ಯಕ್ರಮದಿಂದ ಅವರ ಖ್ಯಾತಿ ಹೆಚ್ಚಿದೆ. ಈ ಮೊದಲು ಎಸ್​​.ಪಿ.ಬಿ. ಹಾಡು ಹಾಡಲು ಬಳಕೆ ಮಾಡುತ್ತಿದ್ದ ಮೈಕ್​ಅನ್ನು ಫಿನಾಲೆಯಲ್ಲಿ ಬಳಕೆ ಮಾಡಲಾಗಿತ್ತು. ಈ ಮೈಕ್​ ಹಿಡಿದು ಸ್ಪರ್ಧಿಗಳು ಹಾಡನ್ನು ಹಾಡಿದ್ದರು ಎಂಬುದು ವಿಶೇಷ.

ಈ ಸೀಸನ್​ ಆರಂಭದಲ್ಲಿ,  ‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ’ ಹಾಡನ್ನು ಎಸ್​ಪಿಬಿ ಮಗ ಚರಣ್ ಹಾಡಿದ್ದರು ಹಾಡು ಮುಗಿದ ನಂತರದಲ್ಲಿ ಮಾತನಾಡಿದ್ದ ಚರಣ್​, ‘ಎಲ್ಲೆಲ್ಲಿ ಸಂಗೀತ ಇರುತ್ತದೆಯೋ ಅಲ್ಲಿ ನಮ್ಮ ತಂದೆ ಇರುತ್ತಾರೆ. ಅವರೆಲ್ಲಿ ಇರುತ್ತಾರೋ ನಾನು ಅಲ್ಲಿರ್ತೀನಿ’ ಎಂದಿದ್ದರು. ಈ ವೇಳೆ ಎಸ್​ಪಿಬಿ ಅವರ ಹಳೆಯ ವಾಯ್ಸ್​ನೋಟ್​ ಹಾಕಲಾಗಿತ್ತು. ‘ಚರಣ್​ ನಿನ್ನೊಂದಿಗೆ ನಾನು ಸದಾ ಇರ್ತೀನಿ. ಅದು ನಿನಗೆ ಗೊತ್ತಿರೋ ವಿಷಯ. ಕಾರ್ಯಕ್ರಮ ಆನಂದಿಸು. ತುಂಬಾ ಸೊಗಸಾಗಿದೆ. ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ’ ಎಂದು ಎಸ್​ಪಿಬಿ ಧ್ವನಿಯಲ್ಲಿ ಕೇಳಿ ಬಂದಿತ್ತು. ಈ ಧ್ವನಿ ಕೇಳುತ್ತಿದ್ದಂತೆ ಚರಣ್​ ಭಾವುಕರಾಗಿದ್ದರು.

ಇದನ್ನೂ ಓದಿ: ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಪುನೀತ್​ಗೆ ಸ್ವರ ನಮನ; ಗುರು ಕಿರಣ್ ಹೇಳಿದ್ದೇನು?

Published On - 6:20 pm, Mon, 20 December 21

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ