AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇವತ್ ಒಂದಿನ ಮಾತಾಡ್ತಿ ಅಷ್ಟೇ’: ರಜತ್​ಗೆ ಟಕ್ಕರ್ ಕೊಟ್ಟ ಹನುಮಂತ

ಸಿಂಗರ್ ಹನುಮಂತ ಅವರು ಯಾರಿಗೂ ತಲೆ ಕೆಡಿಸಿಕೊಳ್ಳುವವರಲ್ಲ. ಯಾವ ಸ್ಪರ್ಧಿಯೇ ಎದುರಿಗೆ ಇದ್ದರೂ ಅವರು ತಮ್ಮ ಮಾತನ್ನು ನೇರವಾಗಿ ಹೇಳುತ್ತಾರೆ. ಈ ವಾರ ಬಿಗ್ ಬಾಸ್ ಮನೆಗೆ ರಜತ್ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದಾರೆ. ಭಾರಿ ಉತ್ಸಾಹದಲ್ಲಿ ಮಾತನಾಡುತ್ತಿದ್ದ ರಜತ್ ಅವರಿಗೆ ಹನುಮಂತ ಟಕ್ಕರ್ ನೀಡಿದ್ದಾರೆ.

‘ಇವತ್ ಒಂದಿನ ಮಾತಾಡ್ತಿ ಅಷ್ಟೇ’: ರಜತ್​ಗೆ ಟಕ್ಕರ್ ಕೊಟ್ಟ ಹನುಮಂತ
ರಜತ್, ಹನುಮಂತ
Follow us
ಮದನ್​ ಕುಮಾರ್​
|

Updated on: Nov 18, 2024 | 10:51 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ 50 ದಿನಗಳು ಕಳೆದಿವೆ. ಎಲ್ಲ ಸ್ಪರ್ಧಿಗಳಿಗೂ ದೊಡ್ಮನೆಯ ರೀತಿ-ನೀತಿ ಏನು ಎಂಬುದು ಸಂಪೂರ್ಣ ಅರ್ಥ ಆಗಿದೆ. ಈಗ ಸ್ಪರ್ಧಿಗಳ ಮನದಲ್ಲಿ ಹಲ್​ಚಲ್​ ಎಬ್ಬಿಸಲು ವೈಲ್ಡ್ ಕಾರ್ಡ್​ ಸ್ಪರ್ಧಿಗಳನ್ನು ಕಳಿಸಲಾಗಿದೆ. ಈಗಾಗಲೇ ಒಂದಷ್ಟು ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಅನುಭವ ಪಡೆದಿರುವ ರಜತ್ ಅವರು ಈಗ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರ ಜೊತೆ ಶೋಭಾ ಶೆಟ್ಟಿ ಕೂಡ ಎಂಟ್ರಿ ನೀಡಿದ್ದಾರೆ. ಮೊದಲ ದಿನ ಆದ್ದರಿಂದ ರಜತ್ ಅವರು ಸಿಕ್ಕಾಪಟ್ಟೆ ಮಾತನಾಡುತ್ತಿದ್ದರು. ಅವರಿಗೆ ಹನುಮಂತ ಮೊದಲ ದಿನವೇ ಟಕ್ಕರ್ ನೀಡಿದ್ದಾರೆ.

ರಜತ್ ಅವರು ಬಿಗ್ ಬಾಸ್ ವೇದಿಕೆಯಲ್ಲೇ ಸಿಕ್ಕಾಪಟ್ಟೆ ಮಾತನಾಡಿದ್ದರು. ಒಳಗೆ ಬಂದ ಬಳಿಕವೂ ಅವರು ಎಲ್ಲರ ಬಗ್ಗೆ ಕಮೆಂಟ್ ಮಾಡುತ್ತಿದ್ದರು. ಈ ನಡುವೆ ಅಡುಗೆ ಮನೆಯ ಉಸ್ತುವಾರಿಯಾಗಿ ಅವರಿಗೆ ಅಧಿಕಾರ ಕೂಡ ಸಿಕ್ಕಿತು. ಮೊದಲ ದಿನ ಆದ್ದರಿಂದ ಅವರಲ್ಲಿ ಸಾಕಷ್ಟು ಎನರ್ಜಿ ಇದೆ. ಆ ಉತ್ಸಾಹದಲ್ಲೇ ಹನುಮಂತನ ಎದುರು ಮಾತನಾಡಲು ಕುಳಿತಾಗ ಅವರಿಗೆ ಹನುಮ ಮಾತಿನ ಚಾಟಿ ಬೀಸಿದರು.

ಇದನ್ನೂ ಓದಿ: ‘ಮಂಜು ತಿಕ್ಲ, ಚೈತ್ರಾ ಪುಕ್ಲು’: ಬಿಗ್ ಬಾಸ್ ಮನೆಗೆ ಬರುತ್ತಲೇ ವಿವಾದ ಎಬ್ಬಿಸಿದ ರಜತ್

‘ಇವತ್ ಒಂದಿನ ಮಾತಾಡ್ತಿ ಅಷ್ಟೇ’ ಎಂದು ರಜತ್​ಗೆ ಹನುಮಂತ ಹೇಳಿದ್ದಾರೆ. ಒಂದೆರಡು ದಿನಗಳು ಕಳೆದ ಬಳಿಕ ದೊಡ್ಮನೆಯಲ್ಲಿ ರಜತ್ ಧ್ವನಿ ಸೈಲೆಂಟ್ ಆಗಲಿದೆ ಎಂಬುದು ಹನುಮಂತ ಅಭಿಪ್ರಾಯ. ಪ್ರತಿ ಸೀಸನ್​ನಲ್ಲೂ ವೈಲ್ಡ್ ಕಾರ್ಡ್​ ಮೂಲಕ ಬರುವ ಸ್ಪರ್ಧಿಗಳು ಇನ್ನುಳಿದ ಸ್ಪರ್ಧಿಗಳಿಗಿಂತ ಜಾಸ್ತಿ ಜೋಶ್​ನಲ್ಲಿ ಇರುತ್ತಾರೆ. ಯಾಕೆಂದರೆ ಅವರಿಗೆ ದೊಡ್ಮನೆಯ ಅನುಭವ ಇನ್ನೂ ಆಗಿರುವುದಿಲ್ಲ. ರಜತ್ ಮುಂದಿನ ದಿನಗಳಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ಕಾದು ನೋಡಬೇಕು.

ರಜತ್ ಅವರು ಬರುಬರುತ್ತಿದ್ದಂತೆಯೇ ಚೈತ್ರಾ ಕುಂದಾಪುರ ಅವರನ್ನು ಟಾರ್ಗೆಟ್​​ ಮಾಡಿದ್ದಾರೆ. ‘ನೀವು ಯಾರ ಜೊತೆ ಅಂತರ ಕಾಯ್ದುಕೊಳ್ಳುತ್ತೀರಿ’ ಎಂದು ಬಿಗ್ ಬಾಸ್ ಪ್ರಶ್ನೆ ಕೇಳಿದ್ದಕ್ಕೆ ರಜತ್ ಅವರು ಚೈತ್ರಾ ಹೆಸರನ್ನು ಹೇಳಿದ್ದಾರೆ. ‘ಯಾರು ಮುಖವಾಡ ಹಾಕಿಕೊಂಡಿದ್ದಾರೆ’ ಎಂಬ ಪ್ರಶ್ನೆಗೂ ಚೈತ್ರಾ ಹೆಸರನ್ನು ರಜತ್ ಹೇಳಿದ್ದಾರೆ. ಆಸ್ಪತ್ರೆಗೆ ಹೋಗಿ ಬಂದು ಹೊರಗಡೆಯ ವಿಷಯವನ್ನು ಒಳಗಡೆ ಹೇಳಿದ್ದಕ್ಕಾಗಿ ಚೈತ್ರಾ ಅವರನ್ನು ಮತ್ತೊಮ್ಮೆ ರಜತ್ ಮಾತಿನ ಮೂಲಕ ತಿವಿದಿದ್ದಾರೆ. ಈ ಎಲ್ಲ ಘಟನೆಗಳಿಂದ ಚೈತ್ರಾ ಕುಗ್ಗಿದ್ದಾರೆ. ರಜತ್ ಸದ್ಯಕ್ಕಂತೂ ಸದ್ದು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ