AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu: ಕೊನೆಗೂ ವಸುಧರಾಳನ್ನು ಎಕ್ಸಾಮ್‌ಗೆ ಕರ್ಕೊಂಡು ಹೋದ ರಿಷಿ; ಸಾಕ್ಷಿ ಕಣ್ಣಿಗೆ ಬೀಳ್ತಾರಾ?

Honganasu Serial Update: ವಸುಧರಾ ಎಕ್ಸಾಮ್ ಬರೆಯುವುದನ್ನು ಹೇಗಾದರೂ ಮಾಡಿ ತಪ್ಪಿಸಬೇಕೆಂದು ಯೋಚಿಸುತ್ತಿದ್ದಳು ದೇವಯಾನಿ. ಸಾಕ್ಷಿಯನ್ನು ಬಳಸಿಕೊಂಡು ತನ್ನ ಪ್ಲಾನ್ ವರ್ಕೌಟ್ ಮಾಡಿಕೊಳ್ಳಲು ಆಕೆ ಮುಂದಾದಳು.

Honganasu: ಕೊನೆಗೂ ವಸುಧರಾಳನ್ನು ಎಕ್ಸಾಮ್‌ಗೆ ಕರ್ಕೊಂಡು ಹೋದ ರಿಷಿ; ಸಾಕ್ಷಿ ಕಣ್ಣಿಗೆ ಬೀಳ್ತಾರಾ?
ಹೊಂಗನಸು ಸೀರಿಯಲ್
TV9 Web
| Edited By: |

Updated on: Dec 04, 2022 | 1:03 PM

Share

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ವಸುಧರಾ ಸ್ಕಾಲರ್‌ಶಿಪ್ ಎಕ್ಸಾಮ್ ಬರೆಯಲು ಹೊರಟಿದ್ದಾಳೆ. ಆದರೆ ‘ನಾನು ನಿನ್ನ ಜೊತೆ ಬರಲ್ಲ’ ಎಂದು ಖಡಕ್ ಆಗಿ ವಸುಗೆ ಹೇಳಿದ ರಿಷಿ. ರಿಷಿ ಸರ್ ಬರಲ್ಲ ಎಂದು ಕಣ್ಣೀರಿಡುತ್ತಿದ್ದ ವಸುಧರಾಳಿಗೆ ಧೈರ್ಯ ತುಂಬಿದಳು ಜಗತಿ. ‘ರಿಷಿ ಬಂದಿಲ್ಲ ಅಂದ್ರೆ ಏನಂತೆ ನೀನು ಎಕ್ಸಾಮ್ ಬರೆದು ರ‍್ಯಾಂಕ್ ಪಡೆಯಬೇಕು’ ಎಂದು ಹೇಳಿದಳು.

ರಿಷಿ ಬರದಿದ್ದರೆ ಎಕ್ಸಾಮ್ ಬರೆಯಲ್ಲ ಎಂದು ಹಠ ಹಿಡಿದಳು ವಸುಧರಾ. ಜಗತಿ ಮತ್ತು ಮಹೇಂದ್ರ ಇಬ್ಬರೂ ವಸುಧರಾಳನ್ನು ಸಮಾಧಾನ ಮಾಡಿ ಎಕ್ಸಾಮ್ ಬರೆಯುವಂತೆ ಒತ್ತಾಯ ಮಾಡಿದರು. ಎಕ್ಸಾಮ್‌ಗೆ ಹೊರಟ ವಸುಧರಾಳಿಗೆ ಆಲ್ ದಿ ಬೆಸ್ಟ್ ಕೂಡ ಹೇಳದೆ ಕಾಲೇಜಿನಿಂದ ಹೊರಟ ರಿಷಿ. ವಸು ಫೋನ್ ಮಾಡಿದರೂ ಫೋನ್ ರಿಸೀವ್ ಮಾಡುವುದಿಲ್ಲ ರಿಷಿ. ಬೇಸರದಲ್ಲೇ ಎಕ್ಸಾಮ್‌ಗೆ ಹೊರಟಳು ವಸು. ಜಗತಿ ಮತ್ತು ಮಹೇಂದ್ರ ಇಬ್ಬರೂ ವಸುಧರಾಳಿಗೆ ಧೈರ್ಯ ತುಂಬಿ ಬಸ್ ಹತ್ತಿಸಿದರು. ದೂರದಲ್ಲೇ ನಿಂತು ವಸುಧರಾ ಹೊರಡುವುದನ್ನು ಕದ್ದು ನೋಡುತ್ತಿದ್ದ ರಿಷಿ. ಅಲ್ಲಿಂದಲೇ ವಸುಗೆ ಆಲ್ ದಿ ಬೆಸ್ಟ್ ಹೇಳಿದ. ವಸುಧರಾ ಹೊರಟ ಬಳಿಕ ಜಗತಿ ಮತ್ತು ಮಹೇಂದ್ರ ಇಬ್ಬರೂ ಅಲ್ಲಿಂದ ಹೊರಡಲು ಸಿದ್ಧರಾದರು. ಅಷ್ಟೊತ್ತಿಗೆ ರಿಷಿ ಕಾರ್ ಪಾಸ್ ಆಗಿದ್ದು ನೋಡಿ ಮಹೇಂದ್ರ ಶಾಕ್ ಆದ.

ಫೋನ್ ಮಾಡಿ ಎಲ್ಲಿದ್ದಿಯಾ ಎಂದು ರಿಷಿನಾ ವಿಚಾರಿಸಿದ ಮಹೇಂದ್ರ. ಮನೆಗೆ ಹೋಗುತ್ತಿದ್ದೀನಿ ಎಂದು ತಂದೆಗೆ ಹೇಳಿ ಫೋನ್ ಕಟ್ ಮಾಡಿದ ರಿಷಿ. ಮಹೇಂದ್ರ ಮತ್ತು ಜಗತಿ ಇಬ್ಬರೂ ಮನೆಗೆ ಹೋದರೂ ರಿಷಿ ಇನ್ನೂ ಬಂದಿರುವುದಿಲ್ಲ. ರಿಷಿ ಮನೆಗೆ ಬರುವ ಬದಲು ಸೀದಾ ವಸುಧರಾ ಬಸ್ ಹಿಂದೆಯೇ ಹೊರಟಿದ್ದ. ಬಸ್ ಸ್ವಲ್ಪ ದೂರ ಹೋಗುವುದರೊಳಗೆ ತನ್ನ ಕಾರನ್ನು ಬಸ್‌ಗೆ ಅಡ್ಡ ಹಾಕಿ ನಿಲ್ಲಿಸಿದ ರಿಷಿ. ಒಳಗೆ ಕುಳಿತಿದ್ದ ವಸುಧರಾಳನ್ನು ಕರ್ಕೊಂಡು ಹೊರ ಬಂದ. ಎಲ್ಲಿಗೆ ಎಂದು ವಸು ಕೇಳಿದರೂ ಹೇಳದೆ ಕಾರಿನಲ್ಲಿ ಕೂರಿಸಿಕೊಂಡ. ರಿಷಿಯ ವರ್ತನೆ ವಸುಗೆ ಅಚ್ಚರಿ ಮೂಡಿಸಿತು. ಎಲ್ಲಿಗೆ ಎಂದು ವಸು ಮತ್ತೆ ಕೇಳಿದಳು. ‘ಹೊಸ ಪಯಣ ಪ್ರಾರಂಭವಾಗಿದೆ’ ಎಂದ ರಿಷಿ. ಅರ್ಥವಾಗದೆ ಸೈಲೆಂಟ್ ಆದಳು ವಸುಧರಾ.

ಇತ್ತ ಹೇಗಾದರೂ ಮಾಡಿ ವಸುಧರಾ ಎಕ್ಸಾಮ್ ಬರೆಯುವುದನ್ನು ತಪ್ಪಿಸಬೇಕೆಂದು ಯೋಚಿಸುತ್ತಿದ್ದಳು ದೇವಯಾನಿ. ಸಾಕ್ಷಿಯನ್ನು ಬಳಸಿಕೊಂಡು ತನ್ನ ಪ್ಲಾನ್ ವರ್ಕೌಟ್ ಮಾಡಿಕೊಳ್ಳಲು ಮುಂದಾದಳು. ಹೇಗಾದರೂ ಮಾಡಿ ವಸುಧರಾಳ ಎಕ್ಸಾಮ್ ಹಾಲ್ ಟಿಕೆಟ್ ಕದಿಯಬೇಕೆಂದು ಸ್ಕೆಚ್ ಹಾಕಿ ವಸು ಎಕ್ಸಾಮ್ ಬರೆಯುತ್ತಿದ್ದ ಜಾಗಕ್ಕೆ ಹೊರಟಳು ಸಾಕ್ಷಿ.

ಮನೆಯಲ್ಲಿ ಯಾರಿಗೂ ಹೇಳದೆ ಬಂದಿದ್ದ ರಿಷಿ ದೊಡ್ಡಮ್ಮನಿಗೆ ಫೋನ್ ಮಾಡಿ ಕಾಲೇಜು ಕೆಲಸದ ಮೇಲೆ ಹೊರ ಹೋಗುತ್ತಿರುವುದಾಗಿ ತಿಳಿಸಿದ. ರಿಷಿ ಎಲ್ಲಿಗೆ ಹೋದ ಎಂದು ಮಹೇಂದ್ರ ಮತ್ತು ಜಗತಿ ಇಬ್ಬರೂ ಯೋಚಿಸುತ್ತಿದ್ದರು. ಆಗ ರಿಷಿ ಎಲ್ಲಿದ್ದಾನೆ ಗೊತ್ತಾ ಎಂದು ವ್ಯಂಗ್ಯವಾಡುತ್ತಾ ಬಂದಳು ದೇವಯಾನಿ. ಗೊತ್ತಿಲ್ಲದ್ದಿದ್ದರೂ ಗೊತ್ತಿದೆ ಎಂದ ಮಹೇಂದ್ರ. ಕಾಲೇಜು ಕೆಲಸದ ಮೇಲೆ ಹೊರಗೆ ಹೋಗಿದ್ದಾನಂತೆ ಎಲ್ಲಿಗೆ ಎಂದು ದೇವಯಾನಿ ಪ್ರಶ್ನೆ ಮಾಡಿದಳು. ಯಾವುದೋ ಸನ್ಮಾನ ಇರಬೇಕು ಅಂತ ಮಹೇಂದ್ರ ಮತ್ತೆ ಸುಳ್ಳು ಹೇಳಿದ. ರಿಷಿ ಎಲ್ಲಿ ಹೋದ, ವಸುಧರಾ ಜೊತೆ ಹೋಗಿರಬಹುದಾ ಎಂದು ಟೆನ್ಶನ್ ಮಾಡಿಕೊಂಡ ಮಹೇಂದ್ರನಿಗೆ ಸಮಾಧಾನ ಮಾಡಿದಳು ಜಗತಿ. ವಸು ಎಕ್ಸಾಮ್ ಬರೆಯದ ಹಾಗೆ ಮಾಡ್ತಾಳಾ ಸಾಕ್ಷಿ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ