AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu Serial: ಕ್ಲಾಸ್‌ಗೆ ತಡವಾಗಿ ಬಂದ ವಸುಗೆ ಶಿಕ್ಷೆ ಕೊಟ್ಟ ರಿಷಿ

Honganasu Serial Update: ಕೋಪದಲ್ಲಿದ್ದ ರಿಷಿ ವಸುಗೆ ಶಿಕ್ಷೆ ನೀಡಿದ. ಕಠಿಣವಾದ ಲೆಕ್ಕವನ್ನು ಬಿಡಿಸುವಂತೆ ಹೇಳಿದ. ಆದರೆ ಬುದ್ಧಿವಂತೆ ವಸು ಸುಲಭವಾಗಿ ಲೆಕ್ಕ ಮಾಡಿ ತೋರಿಸಿದಳು.

Honganasu Serial: ಕ್ಲಾಸ್‌ಗೆ ತಡವಾಗಿ ಬಂದ ವಸುಗೆ ಶಿಕ್ಷೆ ಕೊಟ್ಟ ರಿಷಿ
ಹೊಂಗನಸು ಸೀರಿಯಲ್
TV9 Web
| Edited By: |

Updated on: Nov 18, 2022 | 9:57 AM

Share

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್​ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ವಸುಧರಾನ ಹುಡುಕಿ ಹೊರಟಿದ್ದ ರಿಷಿಗೆ ಕೊನೆಗೂ ವಸು ಇರುವ ಮನೆ ಗೊತ್ತಾಯಿತು. ಒಂಟಿಯಾಗಿರುವ ವಸುಧರಾ ಜೊತೆ ಕೆಲ ಸಮಯ ಮಾತನಾಡಿದ ರಿಷಿ. ರೊಮ್ಯಾಂಟಿಕ್ ನೈಟ್‌ನಲ್ಲಿ ಇಬ್ಬರೂ ಸಂತಸದಿಂದ ಸಮಯ ಕಳೆದರು. ವಸು ಜೊತೆ ಮಾತನಾಡಿ ರಿಷಿ ಕೂಡ ಸಮಾಧಾನ ಆದ. ವಸುಗೆ ಧೈರ್ಯವಾಗಿ ಇರುವಂತೆ ಹೇಳಿ ರಿಷಿ ಹೊರಡಲು ಸಜ್ಜಾದ.

ತನ್ನ ಕನಸನ್ನು ಮಹೇಂದ್ರನ ಬಳಿ ವಿವರಿಸಿದ ಗೌತಮ್. ತಾನೊಂದು ಹುಡುಗಿಗೆ ಪ್ರಪೋಸ್ ಮಾಡುತ್ತಿದ್ದೆ ಆಗ ವಿಲನ್ ಎಂಟ್ರಿ ಕೊಟ್ಟು ಎಲ್ಲಾ ಹಾಳು ಮಾಡಿದ. ಆ ವಿಲನ್ ನೋಡೋಕೆ ರಿಷಿಯ ಹಾಗೆ ಇದ್ದಾನೆ ಎಂದ ಗೌತಮ್. ‘ರಿಷಿ ಹಾಗೆ ಇರುವ ವಿಲನ್‌‌ ಕಡೆ ನಿನ್ನ ಹುಡುಗಿ ವಾಲಿದರೆ ಏನ್ ಮಾಡುತ್ತೀಯಾ ಎಂದು’ ಮಹೇಂದ್ರ ಗೌತಮ್​ಗೆ ಕೇಳಿದ. ಹಾಗೆಲ್ಲ ಆಗಲ್ಲ ಅಂಕಲ್ ಎಂದ ಗೌತಮ್. ಇಬ್ಬರ ಮಾತುಕತೆಯನ್ನು ಕೇಳಿಸಿಕೊಳ್ಳುತ್ತಿದ್ದ ರಿಷಿ ತಂದೆಗೆ ಸುಮ್ಮನಿರಿ ಅವನ ಮಾತನ್ನು ಏನ್ ಕೇಳಿಸಿಕೊಳ್ಳುತ್ತೀರಾ ಅಂತ ಹೇಳಿದ. ಇಲ್ಲಿಂದ ಎದ್ದು ಹೋಗು ಎಂದು ಗೌತಮ್‌ಗೆ ಗದರಿದ. ಮನಸ್ಸಿನಲ್ಲೇ ರಿಷಿಗೆ ಬೈದುಕೊಳ್ಳುತ್ತಾ ಎದ್ದು ನಡೆದ ಗೌತಮ್.

ಸ್ಕಾಲರ್‌ಶಿಪ್ ಎಕ್ಸಾಮ್ ಬರೆಯಲು ತನ್ನ ಕಾಲೇಜಿನಿಂದ ವಸುಧರಾ ಹೆಸರನ್ನು ನೀಡಿದ ರಿಷಿ. ವಸು ಬೇಡ ಎಂದರೂ ಎಕ್ಸಾಮ್ ಬರೆಯುವಂತೆ ರಿಷಿ ಒತ್ತಾಯ ಮಾಡಿದ. ‘ಕಾಲೇಜ್ ಟಾಪರ್ ನೀನು ಈ ಎಕ್ಸಾಮ್ ಬರಿ’ ಎಂದು ಧೈರ್ಯ ತುಂಬಿದ ರಿಷಿ. ಕಾಲೇಜು ಮುಗಿಸಿ ರಿಷಿ ನೇರವಾಗಿ ವಸು ರೂಮಿನ ಬಳಿ ಬಂದ. ಆದರೆ ವಸು ಇನ್ನೂ ಬಂದಿರಲಿಲ್ಲ. ಫೋನ್ ಮಾಡಿದ ರಿಷಿ ವಸು ಜೊತೆ ಮಾತಿಗಿಳಿದ. ವಸು ಕಾಫಿ ಮಾಡುತ್ತೀನಿ ಎಂದು ಹೇಳಿದರೂ ರಿಷಿ ಬೇಡ ಎಂದು ಹೊರಟು ಹೋದ. ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ರಿಷಿ ವಸುಗೆ ಮೆಸೇಜ್ ಕಳುಹಿಸಿ ಈಗ ನೋಡಬೇಡ ಮನೆಗೆ ಹೋಗಿ ನೋಡು ಎಂದು ಹೇಳಿದ.

ಕೆಲಸ ಮುಗಿಸಿ ಮನೆಗೆ ಹೋದ ವಸುಧರಾ ಫೋನ್ ತೆಗೆದು ನೋಡಿದಳು. ಎಕ್ಸಾಮ್‌ಗೆ ಬೇಕಾದ ಎಲ್ಲಾ ಪ್ರಶ್ನೆಗಳನ್ನು ಕಳುಹಿಸಿದ್ದ ರಿಷಿ. ಏನೋ ಮೆಸೇಜ್ ಮಾಡಿದ್ದಾರೆ ಅಂತ ಅಂದುಕೊಂಡರೆ ಇದನ್ನು ಕಳುಹಿಸಿದ್ದಾರಾ, ಏನು ಅರ್ಥನೇ ಆಗುತ್ತಿಲ್ಲ ಎಂದು ಜಗತಿ ಮೇಡಮ್‌ಗೆ ಸೆಂಡ್ ಮಾಡಿ ಸಹಾಯ ಮಾಡುವಂತೆ ಕೇಳಿಕೊಂಡಳು. ಫೋನ್‌ನಲ್ಲಿಯೇ ಜಗತಿ ಮೇಡಮ್‌ನಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದಳು ವಸು. ಇತ್ತ ರಿಷಿ ವಸುಗೆ ಫೋನ್ ಮಾಡುತ್ತಲೇ ಇದ್ದ. ಆದರೆ ವಸು ಫೋನ್ ಬ್ಯುಸಿ ಬರುತ್ತಿತ್ತು. ಇಷ್ಟೊತ್ತಿಗೆ ವಸು ಯಾರ ಜೊತೆ ಮಾತನಾಡುತ್ತಿದ್ದಾಳೆ ಎಂದು ರಿಷಿಗೆ ಚಿಂತೆಯಾಯಿತು. ಆಗ ಪೋನ್​ನಲ್ಲಿ ಮಾತನಾಡುತ್ತಾ ಗೌತಮ್ ರೂಮಿಗೆ ಎಂಟ್ರಿ ಕೊಟ್ಟ. ಗೌತಮ್ ಜೊತೆಯೇ ಮಾತನಾಡುತ್ತಿದ್ದಾಳೆ ಎಂದು ಕೊಂಡ ರಿಷಿ ಗೌತಮ್ ಫೋನ್ ಕಿತ್ತುಕೊಂಡು ನೋಡಿದ. ಆದರೆ ಗೌತಮ್ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದ.

ಬೆಳಗ್ಗೆ ವಸು ಕ್ಲಾಸ‌್‌ಗೆ ತಡವಾಗಿ ಎಂಟ್ರಿ ಕೊಟ್ಟಳು. ಕೋಪದಲ್ಲಿದ್ದ ರಿಷಿ ವಸುಗೆ ರಿಷಿ ಶಿಕ್ಷೆ ನೀಡಿದ. ಕಠಿಣವಾದ ಲೆಕ್ಕವನ್ನು ಬಿಡಿಸುವಂತೆ ಹೇಳಿದ. ಆದರೆ ಬುದ್ಧಿವಂತೆ ವಸು ಸುಲಭವಾಗಿ ಲೆಕ್ಕ ಮಾಡಿ ತೊರಿಸಿದಳು. ಖುಷಿಯಾದ ರಿಷಿ ವಸುಧರಾಳನ್ನು ಹೊಗಳಿದ. ಕ್ಲಾಸ್ ಮುಗಿದ ಮೇಲೆ ರಾತ್ರಿಯೆಲ್ಲ ಫೋನ್ ಬ್ಯುಸಿ ಬರ್ತಿತ್ತು ಯಾರ ಜೊತೆ ಮಾತನಾಡುತ್ತಿದ್ದೆ ಎಂದು ವಸುನಾ ಪ್ರಶ್ನೆ ಮಾಡಿದ ರಿಷಿ. ಏನು ಹೇಳಬೇಕೆಂದು ಗೊತ್ತಾಗದೆ ಸೈಲೆಂಟ್ ಆದಳು ವಸು. ಜಗತಿ ಮೇಡಮ್‌ಗೆ ಫೋನ್ ಮಾಡಿ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದೆ ಎಂದು ಸತ್ಯ ಹೇಳುತ್ತಾಳಾ ವಸು? ಸ್ಕಾಲರ್‌ಶಿಪ್ ಎಕ್ಸಾಮ್‌ನಲ್ಲಿ ಪಾಸ್ ಆಗ್ತಾಳಾ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್