AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jothe Jotheyali: ‘ಜೊತೆ ಜೊತೆಯಲಿ’ ಧಾರಾವಾಹಿ ನೋಡೋ ವೀಕ್ಷಕರಿಗೆ ನಟ ಅನಿರುದ್ಧ ವಿಶೇಷ ಮನವಿ

ಈ ಮೊದಲು ಕೂಡ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​ಗಳು ಬಂದಿದ್ದವು. ಈಗ ಸಿಕ್ಕಿರುವ ತಿರುವನ್ನು ಯಾರೂ ಊಹಿಸಿರಲಿಲ್ಲ. ಆರ್ಯವರ್ಧನ್​ ವಿಲನ್​ ಎಂಬುದನ್ನು ಯಾರಿಂದಲೂ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಈ ಬಗ್ಗೆ ಅನಿರುದ್ಧ ಮಾತನಾಡಿದ್ದಾರೆ.

Jothe Jotheyali: ‘ಜೊತೆ ಜೊತೆಯಲಿ’ ಧಾರಾವಾಹಿ ನೋಡೋ ವೀಕ್ಷಕರಿಗೆ ನಟ ಅನಿರುದ್ಧ ವಿಶೇಷ ಮನವಿ
ನಟ ಅನಿರುದ್ಧ
ರಾಜೇಶ್ ದುಗ್ಗುಮನೆ
|

Updated on:Jan 06, 2022 | 6:12 PM

Share

ತೆರೆ ಮೇಲೆ ಹೀರೋ ಆಗಿ ನೋಡುತ್ತಿದ್ದವರನ್ನು ವಿಲನ್​ ಆಗಿ ನೋಡೋಕೆ ಯಾರೂ ಇಷ್ಟಪಡುವುದಿಲ್ಲ. ಅದಕ್ಕೆ ಬೇಗ ಒಗ್ಗಿಕೊಳ್ಳೋಕೆ ಅಭಿಮಾನಿಗಳಿಗೆ ಸಾಧ್ಯವಾಗುವುದಿಲ್ಲ. ಈಗ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲೂ (Jothe Jotheyali Serial) ಅದೇ ಆಗಿದೆ. ಈ ಧಾರಾವಾಹಿಯಲ್ಲಿ ವಿಷ್ಣುವರ್ಧನ್​ ಅಳಿಯ, ನಟ ಅನಿರುದ್ಧ​ ನಿರ್ವಹಿಸುತ್ತಿರುವ ಆರ್ಯವರ್ಧನ್ (Aryavardhan )​ ಪಾತ್ರ ನಿಧಾನವಾಗಿ ನೆಗೆಟಿವ್​ ಶೇಡ್​ಗೆ ತಿರುಗುತ್ತಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ‘ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಒಂದು ವರ್ಗದವರು ಕಮೆಂಟ್​ ಮಾಡುತ್ತಿದ್ದಾರೆ. ಈ ಬಗ್ಗೆ ಅನಿರುದ್ಧ​​ ಅವರು ‘ಟಿವಿ9 ಕನ್ನಡ ಡಿಜಿಟಲ್​’ ಜತೆ ಮಾತನಾಡಿದ್ದಾರೆ. ‘ಓರ್ವ ಕಲಾವಿದನಾಗಿ ಈ ಪಾತ್ರವನ್ನು ತುಂಬಾನೇ ಎಂಜಾಯ್​ ಮಾಡುತ್ತಿದ್ದೇನೆ’ ಎಂದಿದ್ದಾರೆ ಅವರು.

ಈ ಮೊದಲು ಕೂಡ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​ಗಳು ಬಂದಿದ್ದವು. ಈಗ ಸಿಕ್ಕಿರುವ ತಿರುವನ್ನು ಯಾರೂ ಊಹಿಸಿರಲಿಲ್ಲ. ಆರ್ಯವರ್ಧನ್​ ವಿಲನ್​ ಎಂಬುದನ್ನು ಯಾರಿಂದಲೂ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಈ ಬಗ್ಗೆ ಅನಿರುದ್ಧ ಮಾತನಾಡಿದ್ದಾರೆ. ‘ತಿರುವುಗಳು ಇಲ್ಲದೆ ‘ಜೊತೆ ಜೊತೆಯಲಿ’ ಧಾರಾವಾಹಿ ಇಲ್ಲ. ನಾವು ಮೊದಲಿನಿಂದಲೂ ಟ್ವಿಸ್ಟ್​ಗಳನ್ನು ನೀಡುತ್ತಲೇ ಬಂದಿದ್ದೇವೆ. ಆರ್ಯವರ್ಧನ್​ ಪಾತ್ರಕ್ಕೆ ಸಾಕಷ್ಟು ಆಯಾಮಗಳಿವೆ. ಎಲ್ಲ ತರಹದ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ನನಗೆ ಈ ಪಾತ್ರದ ಮೂಲಕ ಸಿಕ್ಕಿದೆ. ನನ್ನ ಪಾತ್ರ ನೆಗೆಟಿವ್​ ಶೇಡ್​ ಪಡೆದುಕೊಂಡಿದೆ. ಒಂದು ರೀತಿಯಲ್ಲಿ ವಿಲನ್​ ಎಂದೇ ಹೇಳಬಹುದು. ಕಥೆಯಲ್ಲಿ ಮುಂದೆ ಹೋಗುತ್ತಾ ಏನಾಗುತ್ತದೆ ಎಂಬುದು ನನಗೂ ಗೊತ್ತಿಲ್ಲ’ ಎಂದಿದ್ದಾರೆ ಅನಿರುದ್ಧ.

ಧಾರಾವಾಹಿಯಲ್ಲಿ ಈ ಕ್ಷಣ ಏನು ಸಾಗುತ್ತಿದೆಯೋ ಅದನ್ನು ಆನಂದಿಸಬೇಕು ಎಂಬುದು ಅನಿರುದ್ಧ ಮನವಿ. ‘ಗುರಿ ತಲುಪೋದು ಇದ್ದೇ ಇದೆ. ಪ್ರವಾಸದ ಪ್ರತಿ ಹಂತವನ್ನೂ ನಾವು ಆನಂದಿಸಬೇಕು. ಹೀರೋನೆ ವಿಲನ್​ ಆಗಿರೋದು ಕನ್ನಡ ಕಿರುತೆರೆ ಲೋಕದಲ್ಲಿ ಇದೇ ಮೊದಲು. ಈ ಹಂತವನ್ನೂ ಆನಂದಿಸೋಣ. ಈ ರೀತಿ ನಟಿಸೋಕೆ ಕಲಾವಿದನಾಗಿ ನನಗೆ ನಿಜಕ್ಕೂ ಖುಷಿ ಇದೆ. ಸಿನಿಮಾದಲ್ಲಿ ಈ ರೀತಿಯ ಪಾತ್ರ ಸಿಕ್ಕಿಲ್ಲ. ಆದರೆ, ಇಲ್ಲಿ ಸಿಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.

‘ಇದು ಆರಂಭವಾದ್ದರಿಂದ ವೀಕ್ಷಕರಿಗೆ ಇದನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಆದರೆ, ಮುಂದೆ ಹೋಗುತ್ತಾ ಗೊತ್ತಾಗುತ್ತದೆ. ಓರ್ವ ಕಲಾವಿದನಾಗಿ ಈ ಪಾತ್ರವನ್ನು ನಾನು ಹೇಗೆ ಎಂಜಾಯ್​ ಮಾಡುತ್ತಿದ್ದೇನೋ, ಅದೇ ರೀತಿ ವೀಕ್ಷಕರಾಗಿ ಅವರು ಈ ಪಾತ್ರವನ್ನು ನೋಡಿ ಸಂತೋಷ ಪಡಬೇಕು’ ಎಂದು ಅನಿರುದ್ಧ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  ‘ಜೊತೆ ಜೊತೆಯಲಿ’ ನಿರ್ದೇಶಕರ ಹೊಸ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’; ಇದರಲ್ಲಿದೆ ವಿಶೇಷ ಕಥೆ

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಬಿಗ್​ ಟ್ವಿಸ್ಟ್​; ಇದನ್ನು ನಾವು ಒಪ್ಪಲ್ಲ ಎಂದ ವೀಕ್ಷಕರು

Published On - 6:10 pm, Thu, 6 January 22

ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ