AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮನವಿ ಮಾಡಿಕೊಂಡ್ರೂ ಇವರು ಇಂಥ ಕೆಲಸ ಮಾಡಲ್ಲ’; ಜ್ಯೂ. ಎನ್​ಟಿಆರ್​ ಮೇಲೆ ಆಲಿಯಾ ಆರೋಪ

The Kapil Sharma Show: ಎಲ್ಲರಿಗೂ ತಿಳಿದಿರುವಂತೆ ಜ್ಯೂ. ಎನ್​ಟಿಆರ್​ ಅವರ ಹಾಸ್ಯಪ್ರಜ್ಞೆ ಸೂಪರ್​ ಆಗಿದೆ. ಆಲಿಯಾ ಭಟ್​ ಮಾಡಿದ ಆರೋಪಕ್ಕೆ ಅವರು ತಮಾಷೆಯಾಗಿಯೇ ಉತ್ತರ ನೀಡಿದರು.

‘ಮನವಿ ಮಾಡಿಕೊಂಡ್ರೂ ಇವರು ಇಂಥ ಕೆಲಸ ಮಾಡಲ್ಲ’; ಜ್ಯೂ. ಎನ್​ಟಿಆರ್​ ಮೇಲೆ ಆಲಿಯಾ ಆರೋಪ
ಆಲಿಯಾ ಭಟ್​, ಜ್ಯೂ. ಎನ್​ಟಿಆರ್
TV9 Web
| Edited By: |

Updated on: Jan 06, 2022 | 12:01 PM

Share

ನಟಿ ಆಲಿಯಾ ಭಟ್​ (Alia Bhatt) ಅವರು ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿ ಮಿಂಚುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ‘ಆರ್​ಆರ್​ಆರ್​’ (RRR Movie) ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ಒಮಿಕ್ರಾನ್​ ಕಾರಣದಿಂದ ಆ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ‘ಆರ್​ಆರ್​ಆರ್​’ ಪ್ರಚಾರಕ್ಕಾಗಿ ಅನೇಕ ಕಾರ್ಯಕ್ರಮಗಳಲ್ಲಿ ಚಿತ್ರತಂಡ ಭಾಗವಹಿಸಿದೆ. ಅವುಗಳಲ್ಲಿ ‘ದಿ ಕಪಿಲ್​ ಶರ್ಮಾ ಶೋ’ (The Kapil Sharma Show) ಕಾರ್ಯಕ್ರಮ ಹೆಚ್ಚು ಹೈಲೈಟ್​ ಆಗಿದೆ. ಈ ಶೋನಲ್ಲಿ ಆಲಿಯಾ ಭಟ್​ ಜೊತೆ ಜ್ಯೂ. ಎನ್​ಟಿಆರ್​, ರಾಮ್​ ಚರಣ್​ (Ram Charan), ರಾಜಮೌಳಿ ಕೂಡ ಭಾಗಿ ಆಗಿದ್ದರು. ಈ ವೇಳೆ ಆಲಿಯಾ ಮತ್ತು ಜ್ಯೂ. ಎನ್​ಟಿಆರ್​ (Jr NTR) ನಡುವೆ ಒಂದಷ್ಟು ತಮಾಷೆಯ ಮಾತುಕತೆ ನಡೆದಿದೆ.

ಕಪಿಲ್​ ಶರ್ಮಾ ಶೋ ಎಂದರೆ ಅಲ್ಲಿ ತಮಾಷೆಗೆ ಬರವಿಲ್ಲ. ಬಂದ ಅತಿಥಿಗಳನ್ನು ಕಪಿಲ್​ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಅವರ ಹಾಸ್ಯದ ಲಹರಿಗೆ ಅತಿಥಿಗಳು ಕೂಡ ಸಾಥ್​ ನೀಡುತ್ತಾರೆ. ನಟಿ ಆಲಿಯಾ ಭಟ್​ ಅವರು ಜ್ಯೂ. ಎನ್​ಟಿಆರ್​ ಬಗ್ಗೆ ಒಂದು ಆರೋಪ ಮಾಡಿದರು. ‘ಇವರು ತುಂಬ ಚೆನ್ನಾಗಿ ಅಡುಗೆ ಮಾಡುತ್ತಾರೆ. ಆದರೆ ಒಂದು ಬಾರಿ ಕೂಡ ನಮಗೆ ಅಡುಗೆ ಮಾಡಿ ಕೊಟ್ಟಿಲ್ಲ’ ಎಂದು ಆಲಿಯಾ ತಕರಾರು ತೆಗೆದರು. ಅದಕ್ಕೆ ಜ್ಯೂ. ಎನ್​ಟಿಆರ್​ ಕಡೆಯಿಂದ ಬಂದ ಪ್ರತಿಕ್ರಿಯೆ ಕೂಡ ಅಷ್ಟೇ ಫನ್ನಿ ಆಗಿತ್ತು.

ಎಲ್ಲರಿಗೂ ತಿಳಿದಿರುವಂತೆ ಜ್ಯೂ. ಎನ್​ಟಿಆರ್​ ಅವರ ಹಾಸ್ಯಪ್ರಜ್ಞೆ ಸೂಪರ್​ ಆಗಿದೆ. ಆಲಿಯಾ ಮಾಡಿದ ಆರೋಪಕ್ಕೆ ಅವರು ತಮಾಷೆಯಾಗಿಯೇ ಉತ್ತರ ನೀಡಿದರು. ‘ಇವರು ಸೈಜ್​ ಜೀರೋ ಆಗಿದ್ದಾರೆ. ಇವರಿಗೆ ನಾನು ಅಡುಗೆ ಮಾಡಿ ಬಡಿಸಲು ಹೇಗೆ ಸಾಧ್ಯ’ ಎಂದು ಅವರು ಕಾಲೆಳೆದರು. ಆ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕರು. ‘ನಾನು ಕೇಳಿಕೊಂಡ್ರೂ ಸಹ ಇವರು ನನಗೆ ಅಡುಗೆ ಮಾಡಿ ಬಡಿಸುವುದಿಲ್ಲ’ ಎಂದು ಆಲಿಯಾ ಪ್ರತ್ಯಾರೋಪ ಮಾಡಿದರು.

ಇಂಥ ಅನೇಕ ಫನ್ನಿ ಮಾತುಕತೆಗಳು ಈ ಎಪಿಸೋಡ್​ನಲ್ಲಿ ನಡೆದಿವೆ. ಆದರೆ ಎಲ್ಲವನ್ನೂ ಟಿವಿಯಲ್ಲಿ ಪ್ರಸಾರ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಅನ್​-ಸೆನ್ಸಾರ್ಡ್​ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಲಾಗಿದೆ. ಬಿಡುಗಡೆಯಾದ ಎರಡೇ ದಿನಕ್ಕೆ ಆ ವಿಡಿಯೋ 37 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಹಲವು ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಮತ್ತು ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಶೇ.50 ಆಸನ ಮಿತಿ ನಿರ್ಬಂಧ ಹೇರಲಾಗಿದೆ. ಹಾಗಾಗಿ ‘ಆರ್​ಆರ್​ಆರ್​’ ಚಿತ್ರದ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿದ್ದು, ಹೊಸ ರಿಲೀಸ್​ ಡೇಟ್​ ತಿಳಿದುಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ:

‘ಆರ್​ಆರ್​ಆರ್​’ ಚಿತ್ರದಲ್ಲಿ ಆಲಿಯಾ, ಅಜಯ್​ ದೇವಗನ್​ ಅತಿಥಿ ಪಾತ್ರ; ಸತ್ಯ ಬಾಯ್ಬಿಟ್ಟ ರಾಜಮೌಳಿ

ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್​ ಸಹಾಯ; ವಿಡಿಯೋ ವೈರಲ್​

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?