AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drone Prathap: ‘ಡ್ರೋನ್​ ಪ್ರತಾಪ್​ ಅವರದ್ದು ಕ್ರಿಮಿನಲ್​ ಬುದ್ಧಿ ಅಲ್ಲ’: ಕಡೆಗೂ ಆ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸುದೀಪ್​

Bigg Boss Kannada: ಡ್ರೋನ್​ ಪ್ರತಾಪ್ ಈ ರೀತಿ ಮಾಡಿದ್ದು ಉತ್ತಮ ತಂತ್ರಗಾರಿಕೆಯೇ ಹೊರತು ಕ್ರಿಮಿನಲ್​ ಬುದ್ಧಿ ಅಲ್ಲ ಎಂದು ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್​ ಸ್ಪಷ್ಟವಾಗಿ ಹೇಳಿದರು. ಆ ಮೂಲಕ ಪ್ರತಾಪ್​ ಅವರಿಗೆ ಮೆಚ್ಚುಗೆ ಸಿಕ್ಕಿತು. ದಿನದಿಂದ ದಿನಕ್ಕೆ ಪ್ರತಾಪ್​ ಅವರು ವೀಕ್ಷಕರ ಮೆಚ್ಚುಗೆ ಪಡೆಯುತ್ತಿದ್ದಾರೆ. ಅವರ ಬಗ್ಗೆ ಈ ಮೊದಲು ಇದ್ದ ಅಭಿಪ್ರಾಯ ಬದಲಾಗುತ್ತಿದೆ.

Drone Prathap: ‘ಡ್ರೋನ್​ ಪ್ರತಾಪ್​ ಅವರದ್ದು ಕ್ರಿಮಿನಲ್​ ಬುದ್ಧಿ ಅಲ್ಲ’: ಕಡೆಗೂ ಆ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸುದೀಪ್​
ಡ್ರೋನ್​ ಪ್ರತಾಪ್, ಕಿಚ್ಚ ಸುದೀಪ್​
Follow us
ಮದನ್​ ಕುಮಾರ್​
|

Updated on: Nov 05, 2023 | 8:13 AM

ಡ್ರೋನ್​ ವಿಚಾರದಲ್ಲಿ ಪ್ರತಾಪ್​ (Drone Prathap) ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಅವರಿಗೆ ಹೊಸ ಅವಕಾಶ ಸಿಗಲಿ ಎಂಬ ಕಾರಣದಿಂದಲೇ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (BBK 10) ಶೋನಲ್ಲಿ ವೇದಿಕೆ ಕಲ್ಪಿಸಿಕೊಡಲಾಗಿದೆ. ಈ ಶೋ ಆರಂಭ ಆದಾಗ ಡ್ರೋನ್​ ಪ್ರತಾಪ್​ ಅವರನ್ನು ಎಲ್ಲರೂ ಟಾರ್ಗೆಟ್​ ಮಾಡಿದ್ದರು. ಆಗ ಪ್ರತಾಪ್ ಅವರು ಅಸಹಾಯಕತೆಯಿಂದ ಕಣ್ಣೀರು ಹಾಕಿದ್ದರು. 2ನೇ ವಾರದಲ್ಲಿ ಕಿಚ್ಚ ಸುದೀಪ್​ ತುಂಬಿದ ಧೈರ್ಯದಿಂದ ಪ್ರತಾಪ್​ ಅವರ ಆಟ ಬದಲಾಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸುದೀಪ್​ ಅವರಿಂದ ಹೊಗಳಿಕೆ ಪಡೆಯುವ ಮಟ್ಟಕ್ಕೆ ಪ್ರತಾಪ್ ಅವರು ಬದಲಾಗಿದ್ದಾರೆ. 4ನೇ ವಾರದಲ್ಲಿ ಬೇರೆ ಸ್ಪರ್ಧಿಗಳು ಪ್ರತಾಪ್​ ಅವರನ್ನು ಕ್ರಿಮಿನಲ್​ ಎಂದು ಕರೆದಿದ್ದರು. ಆದರೆ ಅವರು ಕ್ರಿಮಿನಲ್​ ಅಲ್ಲ ಎಂದು ಸುದೀಪ್​ (Kichcha Sudeep) ಹೇಳಿದ್ದಾರೆ.

4ನೇ ವಾರದಲ್ಲಿ ಬಿಗ್​ ಬಾಸ್​ ಒಂದು ವಿಶೇಷ ಟಾಸ್ಕ್​ ನೀಡಿದ್ದರು. ಮನೆಯ ಒಳಗೆ ನೂರಾರು ಬಲೂನ್​ಗಳನ್ನು ಇರಿಸಲಾಗಿತ್ತು. ಆ ಪೈಕಿ ಕೆಲವು ಬಲೂನ್​ಗಳ ಒಳಗೆ ನಾಮಿನೇಷೇನ್​ ಪಾಸ್​ಗಳು ಇದ್ದವು. ಯಾರಿಗೆ ಹೆಚ್ಚು ಪಾಸ್​ಗಳು ಸಿಗುತ್ತವೆಯೋ ಅವರಿಗೆ ಹೆಚ್ಚು ಜನರನ್ನು ಬಚಾವ್​ ಮಾಡುವ ಅಧಿಕಾರ ಬರುತ್ತದೆ. ಆದರೆ ತಮಗೆ ಸಿಕ್ಕ ಪಾಸ್​ ಅನ್ನು ಇನ್ನೊಬ್ಬರು ಕಿತ್ತುಕೊಳ್ಳದಂತೆ ನೋಡಿಕೊಳ್ಳಬೇಕಿತ್ತು. ಈ ಆಟದಲ್ಲಿ ಡ್ರೋನ್​ ಪ್ರತಾಪ್​ ಅವರು ತಮ್ಮ ಬುದ್ಧಿವಂತಿಕೆ ಉಪಯೋಗಿಸಿದ್ದರು.

ಇದನ್ನೂ ಓದಿ: ಬಿಗ್​ಬಾಸ್ ಮನೆಯಲ್ಲಿ ಬಳೆ ಚರ್ಚೆ: ಬಳೆಗೆ ವಿಶೇಷ ಗೌರವ ನೀಡಿದ ಕಿಚ್ಚ ಸುದೀಪ್

ಡ್ರೋನ್​ ಪ್ರತಾಪ್​ ಅವರಿಗೆ ಹಲವು ಪಾಸ್​ಗಳು ಸಿಕ್ಕಿದ್ದವು. ಆದರೆ ತಮಗೆ ಸಿಕ್ಕಿದ್ದು ಒಂದೇ ಪಾಸ್ ಎಂಬ ರೀತಿಯಲ್ಲಿ ಅವರು ಬಿಂಬಿಸಿದ್ದರು. ಆ ಒಂದು ಪಾಸ್​ ಅನ್ನು ಕಾರ್ತಿಕ್​ ಮಹೇಶ್​ ಕಿತ್ತುಕೊಂಡರು. ಆಗ ಬೇಸರವಾಗಿದ್ದಂತೆ ಡ್ರೋನ್​ ಪ್ರತಾಪ್​ ನಟಿಸಿದರು. ಬಿಗ್​ ಬಾಸ್​ ಎದುರು ಪಾಸ್​ ತೋರಿಸುವ ಸಂದರ್ಭ ಬಂದಾಗ ತಮ್ಮ ಚಾಲಾಕಿತನ ಏನು ಎಂಬುದನ್ನು ಪ್ರತಾಪ್​ ತೋರಿಸಿದರು. ಮೈಕ್​ ಒಳಗೆ ತಾವು ಮುಚ್ಚಿಟ್ಟುಕೊಂಡಿದ್ದ ಇನ್ನುಳಿದ ಎಲ್ಲ ಪಾಸ್​ಗಳನ್ನು ಡ್ರೋನ್​ ಪ್ರತಾಪ್​ ಹೊರಗೆ ತೆಗೆದರು. ಅದನ್ನು ನೋಡಿ ಎಲ್ಲರಿಗೂ ಅಚ್ಚರಿ ಆಯಿತು.

ಇದನ್ನೂ ಓದಿ: Bigg Boss Kannada: ‘ಡ್ರೋನ್​ ಪ್ರತಾಪ್​ ಹೀರೋ, ವಿನಯ್​ ಗೌಡ ವಿಲನ್​’; ಸ್ಪರ್ಧಿಗಳ ವರ್ತನೆ ಬಗ್ಗೆ ಮುಲಾಜಿಲ್ಲದೇ ಮಾತಾಡಿದ ಸುದೀಪ್​

ಪ್ರತಾಪ್ ಅವರು ಈ ರೀತಿ ಮಾಡಿದ್ದು ಉತ್ತಮ ತಂತ್ರಗಾರಿಕೆಯೇ ಹೊರತು ಕ್ರಿಮಿನಲ್​ ಬುದ್ಧಿ ಅಲ್ಲ ಎಂದು ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್​ ಸ್ಪಷ್ಟವಾಗಿ ಹೇಳಿದರು. ಆ ಮೂಲಕ ಪ್ರತಾಪ್​ ಅವರಿಗೆ ಮೆಚ್ಚುಗೆ ಸಿಕ್ಕಿತು. ದಿನದಿಂದ ದಿನಕ್ಕೆ ಪ್ರತಾಪ್​ ಅವರು ವೀಕ್ಷಕರ ಮೆಚ್ಚುಗೆ ಪಡೆಯುತ್ತಿದ್ದಾರೆ. ಅವರ ಬಗ್ಗೆ ಈ ಮೊದಲು ಇದ್ದ ಅಭಿಪ್ರಾಯ ಬದಲಾಗುತ್ತಿದೆ. ತಮಗೆ ಸಿಕ್ಕ ಎಲ್ಲ ಪಾಸ್​ಗಳನ್ನು ಮಹಿಳೆಯರಿಗೆ ನೀಡುವ ಮೂಲಕವೂ ಪ್ರತಾಪ್​ ಅವರು ಗಮನ ಸೆಳೆದಿದ್ದಾರೆ. 5ನೇ ವಾರದಲ್ಲಿ ಅವರ ಆಟ ಹೇಗಿರಲಿದೆ ಎಂಬುದನ್ನು ನೋಡುವ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಹುಕಾಲದಲ್ಲಿ ಮಾಡುವ ಪೂಜೆಯ ರಹಸ್ಯ ಮತ್ತು ಮಹತ್ವ ತಿಳಿಯಿರಿ
ರಾಹುಕಾಲದಲ್ಲಿ ಮಾಡುವ ಪೂಜೆಯ ರಹಸ್ಯ ಮತ್ತು ಮಹತ್ವ ತಿಳಿಯಿರಿ
Daily Horoscope: ಉದ್ಯೋಗ ಬದಲಾವಣೆ ಸಾಧ್ಯತೆ, ಆದಾಯದಲ್ಲಿ ಏರಿಕೆ
Daily Horoscope: ಉದ್ಯೋಗ ಬದಲಾವಣೆ ಸಾಧ್ಯತೆ, ಆದಾಯದಲ್ಲಿ ಏರಿಕೆ
ಭಾರಿ ಮಳೆಗೆ ಜಮಖಂಡಿ ಬಸ್ ನಿಲ್ದಾಣದೊಳಗೆ ನುಗ್ಗಿದ ನೀರು
ಭಾರಿ ಮಳೆಗೆ ಜಮಖಂಡಿ ಬಸ್ ನಿಲ್ದಾಣದೊಳಗೆ ನುಗ್ಗಿದ ನೀರು
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ