Bigg Boss Kannada: ‘ಡ್ರೋನ್​ ಪ್ರತಾಪ್​ ಹೀರೋ, ವಿನಯ್​ ಗೌಡ ವಿಲನ್​’; ಸ್ಪರ್ಧಿಗಳ ವರ್ತನೆ ಬಗ್ಗೆ ಮುಲಾಜಿಲ್ಲದೇ ಮಾತಾಡಿದ ಸುದೀಪ್​

Vinay Gowda: ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಹಲವು ಪ್ರಮುಖ ಘಟನೆಗಳಿಗೆ 4ನೇ ವಾರ ಸಾಕ್ಷಿ ಆಯಿತು. ವಿನಯ್​ ಗೌಡ ಅವರ ವರ್ತನೆ ಬಗ್ಗೆ ವೀಕೆಂಡ್​ ಸಂಚಿಕೆಯಲ್ಲಿ ಟೀಕೆ ಎದುರಾಯಿತು. ಹಾಗೆಯೇ, ಡ್ರೋನ್​ ಪ್ರತಾಪ್​ ಅವರ ನಡೆಯ ಬಗ್ಗೆ ಕಿಚ್ಚ ಸುದೀಪ್​ ಕಡೆಯಿಂದ ಮೆಚ್ಚುಗೆ ಸಿಕ್ಕಿತು. ಈ ಎಲ್ಲ ಘಟನೆಗಳ ಬಗ್ಗೆ ಇಲ್ಲಿದೆ ವಿವರ..

Bigg Boss Kannada: ‘ಡ್ರೋನ್​ ಪ್ರತಾಪ್​ ಹೀರೋ, ವಿನಯ್​ ಗೌಡ ವಿಲನ್​’; ಸ್ಪರ್ಧಿಗಳ ವರ್ತನೆ ಬಗ್ಗೆ ಮುಲಾಜಿಲ್ಲದೇ ಮಾತಾಡಿದ ಸುದೀಪ್​
ವಿನಯ್​ ಗೌಡ, ಡ್ರೋನ್​ ಪ್ರತಾಪ್​
Follow us
|

Updated on: Nov 05, 2023 | 7:33 AM

‘ಬಿಗ್​ ಬಾಸ್ ಕನ್ನಡ ಸೀಸನ್​ 10’ ಶೋ ಈಗ ನಾಲ್ಕು ವಾರಗಳನ್ನು ಪೂರೈಸಿದೆ. ನಾಲ್ಕನೇ ವಾರದಲ್ಲಿ ಎಲ್ಲ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿತ್ತು. ಆಟಕ್ಕಿಂತಲೂ ತಂತ್ರಗಾರಿಕೆಯೇ ಹೆಚ್ಚಾಗಿತ್ತು. ಟಾಸ್ಕ್​ಗಿಂತಲೂ ಮಾತಿನ ಭರಾಟೆಯೇ ಜಾಸ್ತಿ ಆಗಿತ್ತು. ವಿನಯ್​ ಗೌಡ (Vinay Gowda), ತುಕಾಲಿ ಸಂತೋಷ್​ ಮುಂತಾದವರು ಆಡಿದ ಮಾತುಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದವು. ಆ ಎಲ್ಲ ವಿಚಾರಗಳ ಬಗ್ಗೆ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್​ ಅವರು ಕ್ಲಾಸ್​ ತೆಗೆದುಕೊಂಡಿದ್ದಾರೆ. 4ನೇ ವಾರದಲ್ಲಿ ಡ್ರೋನ್​ ಪ್ರತಾಪ್ (Drone Prathap)​ ನಡೆದುಕೊಂಡ ರೀತಿಗೆ ಸುದೀಪ್​ ಮೆಚ್ಚುಗೆ ಸೂಚಿಸಿದ್ದಾರೆ. ವಿನಯ್​ ಗೌಡ ಅವರ ವರ್ತನೆಯನ್ನು ಸುದೀಪ್​ (Kichcha Sudeep) ಖಂಡಿಸಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ನಾಲ್ಕನೇ ವಾರ ಎರಡು ಪ್ರಮುಖ ಘಟನೆಗಳು ನಡೆದವು. ನಾಮಿನೇಷನ್​ ವಿಚಾರದಲ್ಲಿ ಡ್ರೋನ್​ ಪ್ರತಾಪ್​ ಅವರು ಹೆಚ್ಚು ಅಧಿಕಾರ ಪಡೆದುಕೊಂಡರು. ಅವರಿಗೆ ಸಿಕ್ಕ ಎಲ್ಲ ನಾಮಿನೇಷನ್​ ಪಾಸ್​ಗಳನ್ನು ಮಹಿಳೆಯರಿಗೆ ನೀಡುವ ಮೂಲಕ ಅವರು ಅನೇಕರ ಮನ ಗೆದ್ದರು. ಮಹಿಳೆಯರು ಮುಂದೆ ಬರಲಿ ಎಂಬುದು ಅವರ ಆಶಯ ಆಗಿತ್ತು. ಪ್ರತಾಪ್​ ಅವರ ಈ ಗುಣವನ್ನು ಸುದೀಪ್​ ಮೆಚ್ಚಿಕೊಂಡಿದ್ದಾರೆ. ಈ ರೀತಿ ಮಾಡಿದ್ದಕ್ಕಾಗಿ ಡ್ರೋನ್​ ಪ್ರತಾಪ್​ ಅವರನ್ನು ಹೀರೋ ಎಂದು ಸುದೀಪ್​ ಕರೆದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಶೋನಲ್ಲಿ ಇಂಟರೆಸ್ಟಿಂಗ್​ ಸ್ಪರ್ಧಿ ಆಗಿರುವ ಡ್ರೋನ್​ ಪ್ರತಾಪ್​

ಇನ್ನೊಂದು ಕಡೆ ವಿಲನ್​ ಆಗಿದ್ದು ವಿನಯ್​ ಗೌಡ. 4ನೇ ವಾರದಲ್ಲಿ ಮಹಿಳೆಯರಿಗೆ ಅಗೌರವ ತೋರುವ ರೀತಿಯಲ್ಲಿ ವಿನಯ್​ ಗೌಡ ನಡೆದುಕೊಂಡರು. ಅವರ ಮಾತು ಮಿತಿ ಮೀರಿತ್ತು. ಬಳೆ ವಿಚಾರ ಇಟ್ಟುಕೊಂಡು ಅವರು ಮಹಿಳೆಯರನ್ನು ಹಂಗಿಸುವ ರೀತಿಯಲ್ಲಿ ಮಾತನಾಡಿದ್ದರು. ಅದರಿಂದಾಗಿ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಒಟ್ಟಾರೆಯಾಗಿ ಮಹಿಳೆಯರಿಗೆ ಅಗೌರವ ತೋರಿಸಿದ್ದಕ್ಕಾಗಿ 4ನೇ ವಾರದಲ್ಲಿ ವಿನಯ್​ ಗೌಡ ವಿಲನ್​ ಆಗಿದ್ದಾರೆ ಎಂದರು ಸುದೀಪ್​. ಈ ಎಲ್ಲ ಸ್ಪರ್ಧಿಗಳ ವರ್ತನೆ ಬಗ್ಗೆ ಸುದೀಪ್​ ಅವರು ಮುಲಾಜಿಲ್ಲದೇ ಮಾತನಾಡಿದ್ದಾರೆ.

ಇದನ್ನೂ ಓದಿ: ಹಾದಿ ತಪ್ಪಿದ ಆನೆ, ಹುಲಿಗಳಿಗೆ ಪಂಚ್ ಕೊಟ್ಟ ಕಿಚ್ಚ; ಸುದೀಪ್​​ಗೆ ವೀಕ್ಷಕರ ಸೆಲ್ಯೂಟ್

ಕಿಚ್ಚ ಸುದೀಪ್​ ಅವರು ಮೊದಲ ಸೀಸನ್​ನಿಂದಲೂ ಬಿಗ್​ ಬಾಸ್​ ಶೋ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ಈ ಕೆಲಸದಲ್ಲಿ ಸಖತ್​ ಅನುಭವ ಇದೆ. ಎಂಥದ್ದೇ ಸ್ಪರ್ಧಿಗಳು ಬಂದರೂ ಅವರನ್ನು ಸುದೀಪ್​ ಮ್ಯಾನೇಜ್​ ಮಾಡುತ್ತಾರೆ. ಸ್ಪರ್ಧಿಗಳು ಹಾದಿ ತಪ್ಪಿದಾಗ ಅವರ ಕಿವಿಹಿಂಡುವ ಕೆಲಸ ಖಂಡಿತಾ ಆಗುತ್ತದೆ. 10ನೇ ಸೀಸನ್​ನಲ್ಲಿ ಅತಿಯಾಗಿ ಆರ್ಭಟಿಸಿದ ವಿನಯ್​ ಗೌಡ ಅವರಿಗೆ ಕಿಚ್ಚ ಕ್ಲಾಸ್​ ತೆಗೆದುಕೊಂಡಿದ್ದಾರೆ. ಧೈರ್ಯವಾಗಿ ಆಟ ಆಡಿದ ಸಂಗೀತಾ ಶೃಂಗೇರಿ ಅವರನ್ನು ಸುದೀಪ್​ ಪ್ರಶಂಸಿಸಿದ್ದಾರೆ. ‘ಕಲರ್ಸ್​ ಕನ್ನಡ’ದಲ್ಲಿ ಬಿಗ್​ ಬಾಸ್​ ಸಂಚಿಕೆ ಪ್ರತಿ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತದೆ. ‘ಜಿಯೋ ಸಿನಿಮಾ’ ಮೂಲಕ ದಿನದ 24 ಗಂಟೆಯೂ ಲೈವ್​ ನೋಡುವ ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.