AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ಸೆಡೆ ಸುಧಿ ಎಂದು ಕರೆಯಲಾ’; ಕಾಕ್ರೋಚ್​ಗೆ ಸುದೀಪ್ ಗಂಭೀರ ಪ್ರಶ್ನೆ

‘ಕನ್ನಡದ ನಿಘಂಟಿನ ಪ್ರಕಾರ ಸೆಡೆ ಎಂಬ ಪದದ ಅರ್ಥ ಚೈಲ್ಡ್’ ಎಂದು ಸುಧಿ ಹೇಳಿದ್ದರು. ‘ಕನ್ನಡದ ನಿಘಂಟಲ್ಲಿ ಈ ರೀತಿಯ ಭಾಷೆ ಇಲ್ಲ. ಅಲ್ಲಿ ಒಳ್ಳೊಳ್ಳೆಯ ಶಬ್ದಗಳು ಇವೆ’ ಎಂದು ಸುದೀಪ್ ಅವರು ಹೇಳಿದರು. ಆ ಬಳಿಕ ತಲೆಬಗ್ಗಿಸಿಕೊಂಡು, ‘ಕ್ಷಮಿಸಿ, ಕ್ಷಮಿಸಿ’ ಎಂದು ಸುಧಿ ಹೇಳಿದ್ದಾರೆ.

‘ನಿಮಗೆ ಸೆಡೆ ಸುಧಿ ಎಂದು ಕರೆಯಲಾ’; ಕಾಕ್ರೋಚ್​ಗೆ ಸುದೀಪ್ ಗಂಭೀರ ಪ್ರಶ್ನೆ
ಸುಧಿ-ಸುದೀಪ್
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Oct 25, 2025 | 10:51 PM

Share

ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿಗೆ ‘ಸೆಡೆ’ ಪದ ಬಳಕೆ ಮಾಡಿದ್ದರು. ಸೆಡೆ ಎಂದರೆ ಯೂಸ್​​ಲೆಸ್ ಎಂಬ ಅರ್ಥವಿದೆ. ಈ ವಿಚಾರವು ವೀಕೆಂಡ್​ನಲ್ಲಿ ಚರ್ಚೆಗೆ ಬರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಅಂದುಕೊಂಡ ರೀತಿಯೇ ಆಗಿದೆ. ಕಾಕ್ರೋಚ್ ಸುಧಿ ಅವರಿಗೆ ಸುದೀಪ್ ಅವರು ಪಾಠ ಹೇಳಿದ್ದಾರೆ. ಮಾತು ಬಾರದೆ ಸುಧಿ ಅವರು ಮೌನಕ್ಕೆ ಶರಣಾಗಿದ್ದಾರೆ.

‘ಸುಧಿ ಅವರೇ ಸೆಡೆ ಪದದ ಅರ್ಥವೇನು’ ಎಂದು ಸುದೀಪ್ ಅವರು ಕೇಳಿದರು. ‘ವೇಸ್ಟ್, ಯೂಸ್​​​ಲೆಸ್​, ಚೈಲ್ಡ್ ಎಂಬ ಅರ್ಥವಿದೆ’ ಎಂದು ಸುಧಿ ಅವರು ಹೇಳಿದರು. ‘ನೀವು ನಿಜವಾಗಲೂ ಇದನ್ನೇ ಹೇಳಿದ್ರಾ? ಚೈಲ್ಡ್ ಎಂದು ಮಾತ್ರ ಹೇಳಿದ್ರಿ. ನೀವು ಕ್ಷಮೆ ಕೇಳುವಾಗ ತುಂಬಾನೇ ನಾಟಕವಾಗಿ ಆಡಿದಿರಿ’ ಎಂದು ಸುದೀಪ್ ಹೇಳಿದರು. ಈ ವೇಳೆ ಒಂದು ವಿಚಾರವನ್ನು ಅವರು ಸ್ಪಷ್ಟವಾಗಿ ಹೇಳಿದರು.

‘ಕನ್ನಡದ ನಿಘಂಟಿನ ಪ್ರಕಾರ ಸೆಡೆ ಎಂಬ ಪದದ ಅರ್ಥ ಚೈಲ್ಡ್’ ಎಂದು ಸುಧಿ ಹೇಳಿದ್ದರು. ‘ಕನ್ನಡದ ನಿಘಂಟಲ್ಲಿ ಈ ರೀತಿಯ ಭಾಷೆ ಇಲ್ಲ. ಅಲ್ಲಿ ಒಳ್ಳೊಳ್ಳೆಯ ಶಬ್ದಗಳು ಇವೆ’ ಎಂದು ಸುದೀಪ್ ಅವರು ಹೇಳಿದರು. ಆ ಬಳಿಕ ತಲೆಬಗ್ಗಿಸಿಕೊಂಡು, ‘ಕ್ಷಮಿಸಿ, ಕ್ಷಮಿಸಿ’ ಎಂದು ಸುಧಿ ಹೇಳಿದ್ದಾರೆ.

‘ನೀವು ಬಕೆಟ್​ಗೆ ಬ್ರ್ಯಾಂಡ್ ಆಗಿದೀರಾ’

ಜಾನ್ವಿ ಹಾಗೂ ಅಶ್ವಿನಿ ಗೌಡಗೆ ಸುಧಿ ಅವರು ಬಕೆಟ್ ಹಿಡಿಯುತ್ತಾರೆ ಎಂಬ ಮಾತಿದೆ. ಇದು ಎಲ್ಲರಿಗೂ ಅನಿಸಿದೆ. ಸುದೀಪ್ ಅವರು ಕೂಡ ಇದೇ ಅಭಿಪ್ರಾಯವನ್ನು ಹೊರಹಾಕಿದರು. ‘ನೀವು ಬಕೆಟ್​ಗೆ ಬ್ರ್ಯಾಂಡ್ ಆಗಿದೀರಾ’ ಎಂದು ಸುದೀಪ್ ಅವರು ಸುಧಿಗೆ ಹೇಳಿದರು.

ಇದನ್ನೂ ಓದಿ: ‘ನೀವು ಗೌರವ ಕೊಟ್ಟಾಗಲೇ ಅಲ್ಲವೇ ಮರಳಿ ಸಿಗೋದು’; ಅಶ್ವಿನಿಗೆ ಸುದೀಪ್ ಮಾತಿನ ಚಾಟಿ

ಬದಲಾಗ್ತಾರಾ ಸುಧಿ?

ಸುಧಿ ಅವರು ‘ಬಿಗ್ ಬಾಸ್’ನಲ್ಲಿ ಡಲ್ ಆಗಿದ್ದಾರೆ. ಈ ವಿಚಾರಕ್ಕೆ ವೀಕ್ಷಕರಿಗೆ ಬೇಸರ ಇದೆ. ಅವರು ಆಟಂ ಬಾಂಬ್ ಆಗುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅವರು ಟುಸ್ ಪಟಾಕಿ ಆಗಿದ್ದಾರೆ. ಸುದೀಪ್ ಪಾಠದ ಬಳಿಕ ಅವರು ಬದಲಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!