AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ಸೆಡೆ ಸುಧಿ ಎಂದು ಕರೆಯಲಾ’; ಕಾಕ್ರೋಚ್​ಗೆ ಸುದೀಪ್ ಗಂಭೀರ ಪ್ರಶ್ನೆ

‘ಕನ್ನಡದ ನಿಘಂಟಿನ ಪ್ರಕಾರ ಸೆಡೆ ಎಂಬ ಪದದ ಅರ್ಥ ಚೈಲ್ಡ್’ ಎಂದು ಸುಧಿ ಹೇಳಿದ್ದರು. ‘ಕನ್ನಡದ ನಿಘಂಟಲ್ಲಿ ಈ ರೀತಿಯ ಭಾಷೆ ಇಲ್ಲ. ಅಲ್ಲಿ ಒಳ್ಳೊಳ್ಳೆಯ ಶಬ್ದಗಳು ಇವೆ’ ಎಂದು ಸುದೀಪ್ ಅವರು ಹೇಳಿದರು. ಆ ಬಳಿಕ ತಲೆಬಗ್ಗಿಸಿಕೊಂಡು, ‘ಕ್ಷಮಿಸಿ, ಕ್ಷಮಿಸಿ’ ಎಂದು ಸುಧಿ ಹೇಳಿದ್ದಾರೆ.

‘ನಿಮಗೆ ಸೆಡೆ ಸುಧಿ ಎಂದು ಕರೆಯಲಾ’; ಕಾಕ್ರೋಚ್​ಗೆ ಸುದೀಪ್ ಗಂಭೀರ ಪ್ರಶ್ನೆ
ಸುಧಿ-ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 25, 2025 | 10:51 PM

Share

ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿಗೆ ‘ಸೆಡೆ’ ಪದ ಬಳಕೆ ಮಾಡಿದ್ದರು. ಸೆಡೆ ಎಂದರೆ ಯೂಸ್​​ಲೆಸ್ ಎಂಬ ಅರ್ಥವಿದೆ. ಈ ವಿಚಾರವು ವೀಕೆಂಡ್​ನಲ್ಲಿ ಚರ್ಚೆಗೆ ಬರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಅಂದುಕೊಂಡ ರೀತಿಯೇ ಆಗಿದೆ. ಕಾಕ್ರೋಚ್ ಸುಧಿ ಅವರಿಗೆ ಸುದೀಪ್ ಅವರು ಪಾಠ ಹೇಳಿದ್ದಾರೆ. ಮಾತು ಬಾರದೆ ಸುಧಿ ಅವರು ಮೌನಕ್ಕೆ ಶರಣಾಗಿದ್ದಾರೆ.

‘ಸುಧಿ ಅವರೇ ಸೆಡೆ ಪದದ ಅರ್ಥವೇನು’ ಎಂದು ಸುದೀಪ್ ಅವರು ಕೇಳಿದರು. ‘ವೇಸ್ಟ್, ಯೂಸ್​​​ಲೆಸ್​, ಚೈಲ್ಡ್ ಎಂಬ ಅರ್ಥವಿದೆ’ ಎಂದು ಸುಧಿ ಅವರು ಹೇಳಿದರು. ‘ನೀವು ನಿಜವಾಗಲೂ ಇದನ್ನೇ ಹೇಳಿದ್ರಾ? ಚೈಲ್ಡ್ ಎಂದು ಮಾತ್ರ ಹೇಳಿದ್ರಿ. ನೀವು ಕ್ಷಮೆ ಕೇಳುವಾಗ ತುಂಬಾನೇ ನಾಟಕವಾಗಿ ಆಡಿದಿರಿ’ ಎಂದು ಸುದೀಪ್ ಹೇಳಿದರು. ಈ ವೇಳೆ ಒಂದು ವಿಚಾರವನ್ನು ಅವರು ಸ್ಪಷ್ಟವಾಗಿ ಹೇಳಿದರು.

‘ಕನ್ನಡದ ನಿಘಂಟಿನ ಪ್ರಕಾರ ಸೆಡೆ ಎಂಬ ಪದದ ಅರ್ಥ ಚೈಲ್ಡ್’ ಎಂದು ಸುಧಿ ಹೇಳಿದ್ದರು. ‘ಕನ್ನಡದ ನಿಘಂಟಲ್ಲಿ ಈ ರೀತಿಯ ಭಾಷೆ ಇಲ್ಲ. ಅಲ್ಲಿ ಒಳ್ಳೊಳ್ಳೆಯ ಶಬ್ದಗಳು ಇವೆ’ ಎಂದು ಸುದೀಪ್ ಅವರು ಹೇಳಿದರು. ಆ ಬಳಿಕ ತಲೆಬಗ್ಗಿಸಿಕೊಂಡು, ‘ಕ್ಷಮಿಸಿ, ಕ್ಷಮಿಸಿ’ ಎಂದು ಸುಧಿ ಹೇಳಿದ್ದಾರೆ.

‘ನೀವು ಬಕೆಟ್​ಗೆ ಬ್ರ್ಯಾಂಡ್ ಆಗಿದೀರಾ’

ಜಾನ್ವಿ ಹಾಗೂ ಅಶ್ವಿನಿ ಗೌಡಗೆ ಸುಧಿ ಅವರು ಬಕೆಟ್ ಹಿಡಿಯುತ್ತಾರೆ ಎಂಬ ಮಾತಿದೆ. ಇದು ಎಲ್ಲರಿಗೂ ಅನಿಸಿದೆ. ಸುದೀಪ್ ಅವರು ಕೂಡ ಇದೇ ಅಭಿಪ್ರಾಯವನ್ನು ಹೊರಹಾಕಿದರು. ‘ನೀವು ಬಕೆಟ್​ಗೆ ಬ್ರ್ಯಾಂಡ್ ಆಗಿದೀರಾ’ ಎಂದು ಸುದೀಪ್ ಅವರು ಸುಧಿಗೆ ಹೇಳಿದರು.

ಇದನ್ನೂ ಓದಿ: ‘ನೀವು ಗೌರವ ಕೊಟ್ಟಾಗಲೇ ಅಲ್ಲವೇ ಮರಳಿ ಸಿಗೋದು’; ಅಶ್ವಿನಿಗೆ ಸುದೀಪ್ ಮಾತಿನ ಚಾಟಿ

ಬದಲಾಗ್ತಾರಾ ಸುಧಿ?

ಸುಧಿ ಅವರು ‘ಬಿಗ್ ಬಾಸ್’ನಲ್ಲಿ ಡಲ್ ಆಗಿದ್ದಾರೆ. ಈ ವಿಚಾರಕ್ಕೆ ವೀಕ್ಷಕರಿಗೆ ಬೇಸರ ಇದೆ. ಅವರು ಆಟಂ ಬಾಂಬ್ ಆಗುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅವರು ಟುಸ್ ಪಟಾಕಿ ಆಗಿದ್ದಾರೆ. ಸುದೀಪ್ ಪಾಠದ ಬಳಿಕ ಅವರು ಬದಲಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ