AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ಸೆಡೆ ಸುಧಿ ಎಂದು ಕರೆಯಲಾ’; ಕಾಕ್ರೋಚ್​ಗೆ ಸುದೀಪ್ ಗಂಭೀರ ಪ್ರಶ್ನೆ

‘ಕನ್ನಡದ ನಿಘಂಟಿನ ಪ್ರಕಾರ ಸೆಡೆ ಎಂಬ ಪದದ ಅರ್ಥ ಚೈಲ್ಡ್’ ಎಂದು ಸುಧಿ ಹೇಳಿದ್ದರು. ‘ಕನ್ನಡದ ನಿಘಂಟಲ್ಲಿ ಈ ರೀತಿಯ ಭಾಷೆ ಇಲ್ಲ. ಅಲ್ಲಿ ಒಳ್ಳೊಳ್ಳೆಯ ಶಬ್ದಗಳು ಇವೆ’ ಎಂದು ಸುದೀಪ್ ಅವರು ಹೇಳಿದರು. ಆ ಬಳಿಕ ತಲೆಬಗ್ಗಿಸಿಕೊಂಡು, ‘ಕ್ಷಮಿಸಿ, ಕ್ಷಮಿಸಿ’ ಎಂದು ಸುಧಿ ಹೇಳಿದ್ದಾರೆ.

‘ನಿಮಗೆ ಸೆಡೆ ಸುಧಿ ಎಂದು ಕರೆಯಲಾ’; ಕಾಕ್ರೋಚ್​ಗೆ ಸುದೀಪ್ ಗಂಭೀರ ಪ್ರಶ್ನೆ
ಸುಧಿ-ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 25, 2025 | 10:51 PM

Share

ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿಗೆ ‘ಸೆಡೆ’ ಪದ ಬಳಕೆ ಮಾಡಿದ್ದರು. ಸೆಡೆ ಎಂದರೆ ಯೂಸ್​​ಲೆಸ್ ಎಂಬ ಅರ್ಥವಿದೆ. ಈ ವಿಚಾರವು ವೀಕೆಂಡ್​ನಲ್ಲಿ ಚರ್ಚೆಗೆ ಬರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಅಂದುಕೊಂಡ ರೀತಿಯೇ ಆಗಿದೆ. ಕಾಕ್ರೋಚ್ ಸುಧಿ ಅವರಿಗೆ ಸುದೀಪ್ ಅವರು ಪಾಠ ಹೇಳಿದ್ದಾರೆ. ಮಾತು ಬಾರದೆ ಸುಧಿ ಅವರು ಮೌನಕ್ಕೆ ಶರಣಾಗಿದ್ದಾರೆ.

‘ಸುಧಿ ಅವರೇ ಸೆಡೆ ಪದದ ಅರ್ಥವೇನು’ ಎಂದು ಸುದೀಪ್ ಅವರು ಕೇಳಿದರು. ‘ವೇಸ್ಟ್, ಯೂಸ್​​​ಲೆಸ್​, ಚೈಲ್ಡ್ ಎಂಬ ಅರ್ಥವಿದೆ’ ಎಂದು ಸುಧಿ ಅವರು ಹೇಳಿದರು. ‘ನೀವು ನಿಜವಾಗಲೂ ಇದನ್ನೇ ಹೇಳಿದ್ರಾ? ಚೈಲ್ಡ್ ಎಂದು ಮಾತ್ರ ಹೇಳಿದ್ರಿ. ನೀವು ಕ್ಷಮೆ ಕೇಳುವಾಗ ತುಂಬಾನೇ ನಾಟಕವಾಗಿ ಆಡಿದಿರಿ’ ಎಂದು ಸುದೀಪ್ ಹೇಳಿದರು. ಈ ವೇಳೆ ಒಂದು ವಿಚಾರವನ್ನು ಅವರು ಸ್ಪಷ್ಟವಾಗಿ ಹೇಳಿದರು.

‘ಕನ್ನಡದ ನಿಘಂಟಿನ ಪ್ರಕಾರ ಸೆಡೆ ಎಂಬ ಪದದ ಅರ್ಥ ಚೈಲ್ಡ್’ ಎಂದು ಸುಧಿ ಹೇಳಿದ್ದರು. ‘ಕನ್ನಡದ ನಿಘಂಟಲ್ಲಿ ಈ ರೀತಿಯ ಭಾಷೆ ಇಲ್ಲ. ಅಲ್ಲಿ ಒಳ್ಳೊಳ್ಳೆಯ ಶಬ್ದಗಳು ಇವೆ’ ಎಂದು ಸುದೀಪ್ ಅವರು ಹೇಳಿದರು. ಆ ಬಳಿಕ ತಲೆಬಗ್ಗಿಸಿಕೊಂಡು, ‘ಕ್ಷಮಿಸಿ, ಕ್ಷಮಿಸಿ’ ಎಂದು ಸುಧಿ ಹೇಳಿದ್ದಾರೆ.

‘ನೀವು ಬಕೆಟ್​ಗೆ ಬ್ರ್ಯಾಂಡ್ ಆಗಿದೀರಾ’

ಜಾನ್ವಿ ಹಾಗೂ ಅಶ್ವಿನಿ ಗೌಡಗೆ ಸುಧಿ ಅವರು ಬಕೆಟ್ ಹಿಡಿಯುತ್ತಾರೆ ಎಂಬ ಮಾತಿದೆ. ಇದು ಎಲ್ಲರಿಗೂ ಅನಿಸಿದೆ. ಸುದೀಪ್ ಅವರು ಕೂಡ ಇದೇ ಅಭಿಪ್ರಾಯವನ್ನು ಹೊರಹಾಕಿದರು. ‘ನೀವು ಬಕೆಟ್​ಗೆ ಬ್ರ್ಯಾಂಡ್ ಆಗಿದೀರಾ’ ಎಂದು ಸುದೀಪ್ ಅವರು ಸುಧಿಗೆ ಹೇಳಿದರು.

ಇದನ್ನೂ ಓದಿ: ‘ನೀವು ಗೌರವ ಕೊಟ್ಟಾಗಲೇ ಅಲ್ಲವೇ ಮರಳಿ ಸಿಗೋದು’; ಅಶ್ವಿನಿಗೆ ಸುದೀಪ್ ಮಾತಿನ ಚಾಟಿ

ಬದಲಾಗ್ತಾರಾ ಸುಧಿ?

ಸುಧಿ ಅವರು ‘ಬಿಗ್ ಬಾಸ್’ನಲ್ಲಿ ಡಲ್ ಆಗಿದ್ದಾರೆ. ಈ ವಿಚಾರಕ್ಕೆ ವೀಕ್ಷಕರಿಗೆ ಬೇಸರ ಇದೆ. ಅವರು ಆಟಂ ಬಾಂಬ್ ಆಗುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅವರು ಟುಸ್ ಪಟಾಕಿ ಆಗಿದ್ದಾರೆ. ಸುದೀಪ್ ಪಾಠದ ಬಳಿಕ ಅವರು ಬದಲಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ