AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ ವೇದಿಕೆಯಲ್ಲಿ ಸುದೀಪ್ ಕುಡಿಯೋದು ಏನು? ತೆಲುಗಿನಲ್ಲಿ ಉತ್ತರ ಕೊಟ್ಟ ಕಿಚ್ಚ

ನಟ ಕಿಚ್ಚ ಸುದೀಪ್​ ಅವರು ಕಳೆದ 11 ವರ್ಷಗಳಿಂದ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಶೋ ನಿರೂಪಣೆ ಮಾಡುವಾಗ ಅವರು ಆಗಾಗ ಏನೋ ಕುಡಿಯುತ್ತಾರಲ್ಲ ಅದು ಏನು ಎಂಬ ಪ್ರಶ್ನೆ ಹಲವರಿಗೆ ಇದೆ. ತೆಲುಗು ವೀಕ್ಷಕರು ಕೂಡ ಅದೇ ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಸುದೀಪ್ ಉತ್ತರ ನೀಡಿದ್ದಾರೆ.

ಬಿಗ್ ಬಾಸ್​ ವೇದಿಕೆಯಲ್ಲಿ ಸುದೀಪ್ ಕುಡಿಯೋದು ಏನು? ತೆಲುಗಿನಲ್ಲಿ ಉತ್ತರ ಕೊಟ್ಟ ಕಿಚ್ಚ
ಸುದೀಪ್​
ಮದನ್​ ಕುಮಾರ್​
|

Updated on: Nov 04, 2024 | 9:14 AM

Share

ಕಿಚ್ಚ ಸುದೀಪ್ ಅವರಿಗೆ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಫ್ಯಾನ್ಸ್ ಇದ್ದಾರೆ. ತೆಲುಗಿನ ಸಿನಿಮಾಗಳಲ್ಲೂ ನಟಿಸಿ ಸುದೀಪ್ ಸೈ ಎನಿಸಿಕೊಂಡಿದ್ದಾರೆ. ಅವರು ನಡೆಸಿಕೊಡುವ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮವನ್ನು ತೆಲುಗು ಪ್ರೇಕ್ಷಕರು ಕೂಡ ನೋಡುತ್ತಾರೆ. ಅಂಥ ಪ್ರೇಕ್ಷಕರಿಗೆ ಒಂದು ಪ್ರಶ್ನೆ ಮೂಡಿದೆ. ಶೋ ನಿರೂಪಣೆ ಮಾಡುವಾಗ ಸುದೀಪ್​ ಅವರು ಏನು ಕುಡಿಯುತ್ತಾರೆ? ಅದಕ್ಕೆ ಈಗ ಸ್ವತಃ ಸುದೀಪ್ ಅವರು ಉತ್ತರ ಕೊಟ್ಟಿದ್ದಾರೆ. ಇದು ತೆಲುಗು ಫ್ಯಾನ್ಸ್​ಗೆ ಮೂಡಿದ ಪ್ರಶ್ನೆ ಆದ್ದರಿಂದ ತೆಲುಗಿನಲ್ಲಿಯೇ ಸುದೀಪ್ ಅವರು ಉತ್ತರಿಸಿದ್ದಾರೆ.

ಭಾನುವಾರದ (ನವೆಂಬರ್​ 3) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯ ಪ್ರಸ್ತಾಪಿಸಿದರು. ‘ತೆಲುಗು ಬಿಗ್ ಬಾಸ್ ನೋಡುತ್ತಿರುವ ಎಷ್ಟೋ ಜನ ಫ್ಯಾನ್ಸ್ ಒಂದು ಪ್ರಶ್ನೆ ಹಾಕಿ ಹೇಳುತ್ತಾ ಇರುತ್ತಾರೆ. ಸುದೀಪ್ ಅವರು ವೇದಿಕೆಯಲ್ಲಿ ಕುಡಿತಾ ಇರುತ್ತಾರಲ್ಲ ಅದು ಏನು ಅಂತ. ಇದರಲ್ಲಿ ಸ್ವಲ್ಪ ರಮ್, ಸ್ವಲ್ಪ ವಿಸ್ಕಿ..’ ಎಂದು ಕನ್ನಡದಲ್ಲಿ ಮಾತಾಡುತ್ತಿದ್ದ ಸುದೀಪ್​ ಅವರು ನಂತರ ಸ್ಪರ್ಧಿಗಳ ಸಹಾಯದಿಂದ ತೆಲುಗಿನಲ್ಲಿ ಮಾತು ಮುಂದುವರಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲೂ ಸುದೀಪ್​ಗೆ ಕಾಡುತ್ತಿದೆ ತಾಯಿ ನೆನಪು; ಎಮೋಷನಲ್ ಆದ ಕಿಚ್ಚ

‘ಸ್ವಲ್ಪ ಅನ್ನೋದಕ್ಕೆ ತೆಲುಗಿನಲ್ಲಿ ಏನು ಹೇಳ್ತಾರೆ? ಕೊಂಚ ರಮ್ ಉಂದಿ, ಕೊಂಚ ವಿಸ್ಕಿ ಉಂದಿ, ಕೊಂಚ ಟಕೀಲಾ ಉಂದಿ ಅನಿ ಥಿಂಕ್ ಚೈ ವದ್ದು. ಕಾಫಿ ಉಂದಿ. ಕಾನಿ ಈ ಕಂಟೆಸ್ಟೆಂಟ್​ಕೋ ನಾಕು ಸಾರಾಯಿ ಕಾವಾಲಿ. ಇಕ್ಕಡ ಲೇದು’ ಎಂದು ಸುದೀಪ್​ ಹೇಳಿದ್ದು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು. ಭಾನುವಾರದ ಸಂಚಿಕೆಯಲ್ಲಿ ಈ ರೀತಿಯ ಮಾತುಗಳ ಮೂಲಕ ಸುದೀಪ್ ಅವರು ನಗು ತುಂಬಿಸಿದರು.

ಬಿಗ್ ಬಾಸ್​ ಎಲಿಮಿನೇಷನ್​:

5ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಮಾಸನಾ ಅವರು ಎಲಿಮಿನೇಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮಾನಸಾ ಅವರನ್ನು ಟ್ರೋಲ್ ಮಾಡುತ್ತಿದ್ದರು. ಆದರೆ ಅಂಥವರಿಗೆ ಮಾನಸಾ ಪತಿ ತುಕಾಲಿ ಸಂತೋಷ್ ಅವರು ತಿರುಗೇಟು ನೀಡಿದರು. ‘ನೀನೇ ನನಗೆ ಯಾವಾಗಲೂ ಮಿಸ್ ಇಂಡಿಯಾ ಆಗಿರುತ್ತೀಯ. ಈ ಪ್ರಪಂಚ ಏನೇ ಅಂದುಕೊಳ್ಳಬಹುದು. ನನ್ನ ಈ ಸಾಧನೆಗೆ ನೀನೇ ಕಾರಣ. ನಿನ್ನನ್ನು ನಾನು ಬಿಟ್ಟುಕೊಡಲ್ಲ’ ಎಂದು ತುಕಾಲಿ ಸಂತೋಷ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ