AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshana Serial: ಇನ್ನೇನು ಸಿಕ್ಕಿ ಹಾಕಿಕೊಳ್ಳಬೇಕು ಅನ್ನುವಷ್ಟರಲ್ಲಿ ತಪ್ಪಿಸಿಕೊಂಡ ಡೆವಿಲ್

ಸಿ.ಎಸ್​​ಗೆ ಲಾಯರ್ ಕಾಲ್ ಮಾಡಿ ಮುಂಬೈನಲ್ಲಿ ನಡೆದ ಹಿಟ್ ಆಂಡ್ ರನ್ ಕೇಸ್‌ನಲ್ಲಿ ಮೌರ್ಯನದ್ದು ಯಾವುದೇ ತಪ್ಪಿಲ್ಲ ಅವನು ನಿರಪರಾಧಿ ಎನ್ನುವ ಸಿಹಿ ಸುದ್ದಿಯನ್ನು ಹೇಳುತ್ತಾರೆ. ಇದನ್ನು ಕೇಳಿದ ಭೂಪತಿ ನಕ್ಷತ್ರಳಿಗೆ ಕೊಂಚ ಸಮಧಾನವಾಗುತ್ತದೆ.

Lakshana Serial: ಇನ್ನೇನು ಸಿಕ್ಕಿ ಹಾಕಿಕೊಳ್ಳಬೇಕು ಅನ್ನುವಷ್ಟರಲ್ಲಿ ತಪ್ಪಿಸಿಕೊಂಡ ಡೆವಿಲ್
Lakshana Serial
TV9 Web
| Edited By: |

Updated on: Dec 10, 2022 | 10:12 AM

Share

ಧಾರಾವಾಹಿ: ಲಕ್ಷಣ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ನಾವು ನೋಡಿದ ಹಾಗೆ ಡೆವಿಲ್‌ಗೆ ಬಲೆ ಬೀಸಲು ದೊಡ್ಡ ಪ್ಲಾನ್ ಒಂದನ್ನೇ ರೂಪಿಸಿದ್ದರು ನಕ್ಷತ್ರ ಭೂಪತಿ. ಇವರು ರೂಪಿಸದ ಟ್ರಾಪ್‌ಗೆ ಬಿದ್ದ ಡೆವಿಲ್ ಅವರಿದ್ದ ಸ್ಥಳಕ್ಕೆ ಬಂದಿಳಿಯುತ್ತಾಳೆ.

ಮೌರ್ಯ ಎಸ್ಕೇಪ್

ಕಾರ್‌ನಲ್ಲಿ ಬಂದಿಳಿದ ಡೆವಿಲ್ ಯಾರೆಂಬುವುದನ್ನು ನೋಡಲು ಕಾತುರದಿಂದ ಭೂಪತಿ, ನಕ್ಷತ್ರ, ಸಿ.ಎಸ್ ಜೊತೆಗೆ ಪೋಲಿಸರು ಕಾಯುತ್ತಿದ್ದರು. ಕಾರ್‌ನಿಂದ ಇಳಿದ ಡೆವಿಲ್ ಇನ್ನೇನು ಎಡಿಟರ್ ಕುಮಾರ್ ಕಡೆಗೆ ಮುಖ ತಿರುಗಿಸಬೇಕನ್ನುವಷ್ಟರಲ್ಲಿ ಆಕೆಗೆ ಒಂದು ಕರೆ ಬರುತ್ತೆ. ಅದು ಯಾರದೆಂದರೆ ಡೆವಿಲ್ ಮೌರ್ಯನನ್ನು ಕೊಲ್ಲಲ್ಲು ಕಳುಸಿದ ಹುಡುಗ. ಆತ ಫೋನ್‌ನಲ್ಲಿ ಮಾತನಾಡುತ್ತ ಮೌರ್ಯ ಸತ್ತಿಲ್ಲ, ಇದೆಲ್ಲ ನಿಮಗೆ ಬಲೆ ಬೀಸಲು ಆ ಸಿ.ಎಸ್ ಮಾಡಿದಂತಹ ಪ್ಲಾನ್ ಆಗಿದೆ. ನೀವು ಆದಷ್ಟು ಬೇಗ ಆ ಜಗದಿಂದ ಹೊರಟು ಹೋಗಿ ಮೇಡಂ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ.

ಈತನ ಮಾತಿಗೆ ಶಾಕ್ ಆದ ಡೆವಿಲ್ ಆ ತಕ್ಷಣನೇ ಕಾರ್ ಹತ್ತಿ ಹೊಟರು ಹೋಗುತ್ತಾಳೆ. ಇದನ್ನೆಲ್ಲಾ ಗಮನಿಸಿದ ಭೂಪತಿ ಪೋಲಿಸರೆಲ್ಲರೂ ಆ ಕಾರ್ ಹಿಂದೆಯೇ ಓಡಿ ಹೋಗುತ್ತಾರೆ. ಆದರೂ ಆಕೆ ಯಾರೆಂಬುವುದು ಅವರಿಗೆ ಗೊತ್ತಾಗಲಿಲ್ಲ. ಡೆವಿಲ್‌ಗೆ ನಮ್ಮವರೇ ಯಾರೋ ಸಹಾಯ ಮಾಡುತ್ತಿದ್ದಾರೆ. ಇಲ್ಲಂದ್ರೆ ಆಕೆಗೆ ಹೇಗೆ ಗೊತ್ತಾಗಲು ಸಾಧ್ಯ ನಾವು ಟ್ರಾಪ್ ಮಾಡುತ್ತಿರುವ ವಿಷಯ ಎಂದು ಅವರವರೇ ಮಾತನಾಡಿಕೊಳ್ಳುತ್ತಾರೆ. ನಂತರ ಎಡಿಟರ್ ಕುಮಾರ್ ಮೇಲೆ ಅನುಮಾನ ಮೂಡುತ್ತೆ.

ಇದನ್ನು ಓದಿ:ಸಕ್ಕತಾಗಿ ವರ್ಕ್ ಆಗ್ತಿದೆ ಭೂಪತಿ ನಕ್ಷತ್ರ ಪ್ಲಾನ್, ಡೆವಿಲ್ ಕಥೆ ಅಷ್ಟೇ.. ಎಲ್ಲರಿಗೂ ಕಾದಿದೆ ಶಾಕ್

ಆಗ ಆತ ನಾನು ಬೆಳಗ್ಗಿನಿಂದಲೂ ನಿಮ್ಮ ಜೊತೆಗೇನೆ ಇದ್ದೇನೆ ಅಲ್ವ ನಾನು ಹೇಗೆ ಹೇಳಲು ಸಾಧ್ಯ ಎಂದು ಹೇಳುತ್ತಾನೆ. ಆಗ ಭೂಪತಿ, ನಕ್ಷತ್ರ, ಸಿ.ಎಸ್‌ಗೆ ಈ ಡೆವಿಲ್‌ಗೆ ಸಹಾಯ ಮಾಡುತ್ತಿರುವವರು ಯಾರಾಗಿರಬಹುದು ಎಂದು ತಲೆಯಲ್ಲಿ ಹುಳ ಬಿಟ್ಟಂತಾಗುತ್ತದೆ. ಇನ್ನೇನು ಸಿಕ್ಕಿ ಹಾಕಿಕೊಳ್ಳಬೇಕಿದ್ದ ಡೆವಿಲ್ ತಪ್ಪಿಸಿಕೊಂಡದ್ದು ಹೋದದ್ದು ಇವರಿಗೆಲ್ಲ ತುಂಬಾನೇ ಬೇಜಾರಾಗುತ್ತದೆ. ಆದರೂ ಹೋಪ್ಸ್ ಕಳೆದುಕೊಳ್ಳದ ಸಿ.ಎಸ್ ಆ ಡೆವಿಲ್ ಲೇಡಿ ಒಂದಲ್ಲ ಒಂದು ದಿನ ನಮ್ಮ ಕೈಗೆ ಸಿಕ್ಕಿ ಹಾಕಿಕೊಳ್ಳಲೇಬೇಕು.

ಇವತ್ತು ಆಕೆಯ ಟೈಮ್ ಚೆನ್ನಾಗಿತ್ತು. ಇನ್ನೊಂದು ದಿನ ಆಕೆ ಟೈಂ ಕೆಟ್ಟು ಆಕೆಯ ಮುಖವಾಡ ಕಳಚಲೇಬೇಕಲ್ವ ಎಂದು ಹೇಳುತ್ತಾ ತಮಗೆ ತಾವೇ ಸಮಧಾನ ಮಾಡಿಕೊಳ್ಳುತ್ತಾರೆ. ಇತ್ತ ಕಡೆ ಸಿ.ಎಸ್ ಬೀಸಿದ ಬಲೆಯಿಂದ ತಪ್ಪಿಸಿಕೊಂಡ ಡೆವಿಲ್ ಭಾರ್ಗವಿ ಕೋಪದಿಂದ ನೀನು ಇಷ್ಟು ಮುಂದುವರೆದು ಬಿಟ್ಟಿಯಾ ಸಿ.ಎಸ್, ನೀನು ಏನೇ ಮಾಡಿದರೂ ನನ್ನ ಮೂಲವನ್ನು ನಿನಗೆ ಕಂಡುಹಿಡಿಯಲು ಸಾಧ್ಯವಿಲ್ಲ. ನೀನು ಇಷ್ಟೆಲ್ಲಾ ಮುಂದುವರೆದಿದ್ದೀಯಾ ಅಂದರೆ ನಿನ್ನನ್ನು ನೆಮ್ಮದಿಯಾಗಿಡಲು ನಾನು ಬಿಡಲ್ಲ.

ನಿನ್ನ ಸಂಸಾರ ಪ್ರವಾಹದಲ್ಲಿ ಕೊಚ್ಚಿ ಹೋಗುವಂತೆ ಭಯಾನಕ ಪ್ಲಾನ್ ಸದ್ಯದಲ್ಲೇ ಮಾಡುತ್ತೇನೆ ಎಂದು ಒಬ್ಬಳೇ ಮಾತನಾಡಿಕೊಳ್ಳುತ್ತಾಳೆ. ಇನ್ನು ಮೌರ್ಯನನ್ನು ಸೇಫ್ ಆಗಿ ಪೋಲಿಸ್ ಕಸ್ಟಡಿಗೆ ಒಪ್ಪಿಸಬೇಕೆಂದು ಪೋಲಿಸರ ಜೊತೆಗೆ ಸಿ.ಎಸ್, ಭೂಪತಿ ನಕ್ಷತ್ರ ಜೋಡಿ ಮೌರ್ಯನನ್ನು ಕೂಡಿ ಹಾಕಿದ್ದ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ಕೂಡಾ ಇವರಿಗೊಂದು ಶಾಕಿಂಗ್ ನ್ಯೂಸ್ ಕಾದಿರುತ್ತೆ. ಅದೇನೆಂದರೆ ಮೌರ್ಯ ಸಿ.ಎಸ್ ನೇಮಿಸಿದ್ದ ಹುಡುಗರನ್ನು ಹೊಡೆದು ಹಾಕಿ ಮೌರ್ಯ ಅಲ್ಲಿಂದ ಪರಾರಿಯಾಗಿದ್ದ.

ತಮ್ಮ ಹೀಗೆ ಏಕೆ ಮಾಡುತ್ತಿದ್ದಾನೆ, ಈತ ಹಿಗೆಲ್ಲ ಮಾಡುವಾಗ, ಇವನು ನನ್ನ ತಮ್ಮನಾಗಿ ಯಾಕೆ ಹುಟ್ಟಿದ್ದಾನೆ ಎಂದು ಅನಿಸುತ್ತೆ ಎಂದು ಭೂಪತಿ ನೋವಿನಿಂದ ಮಾತನಾಡುತ್ತಾನೆ. ನಕ್ಷತ್ರ ಇವರು ಹೀಗೆ ತಪ್ಪು ಮೇಲೆ ತಪ್ಪು ಮಾಡುತ್ತಾ ಹೋದರೆ ಇವರ ಶಿಕ್ಷೆ ಕೂಡಾ ಜಾಸ್ತಿ ಆಗುತ್ತದೆ ಎಂದು ಹೇಳುತ್ತಾಳೆ. ಅಷ್ಟರಲ್ಲಿ ಸಿ.ಎಸ್​​ಗೆ ಲಾಯರ್ ಕಾಲ್ ಮಾಡಿ ಮುಂಬೈನಲ್ಲಿ ನಡೆದ ಹಿಟ್ ಆಂಡ್ ರನ್ ಕೇಸ್‌ನಲ್ಲಿ ಮೌರ್ಯನದ್ದು ಯಾವುದೇ ತಪ್ಪಿಲ್ಲ ಅವನು ನಿರಪರಾಧಿ ಎನ್ನುವ ಸಿಹಿ ಸುದ್ದಿಯನ್ನು ಹೇಳುತ್ತಾರೆ. ಇದನ್ನು ಕೇಳಿದ ಭೂಪತಿ ನಕ್ಷತ್ರಳಿಗೆ ಕೊಂಚ ಸಮಧಾನವಾಗುತ್ತದೆ. ತಪ್ಪಿಸಿಕೊಂಡು ಹೋದ ಮೌರ್ಯ ಹಾಗೂ ಡೆವಿಲ್ ಇನ್ನೇನು ಅವಾಂತರ ಮಾಡುತ್ತಾನೋ ಎಂಬುವುದನ್ನು ಮುಂದೆ ಕಾದು ನೋಡಬೇಕಿದೆ.

ಮಧುಶ್ರೀ ಅಂಚನ್

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?